Connect with us

    LATEST NEWS

    ಪ್ರಧಾನಿ ವಿರುದ್ಧ ಮತ್ತೆ ಗುಡುಗಿದ ಸುಬ್ರಮಣಿಯನ್ ಸ್ವಾಮಿ..!

    Published

    on

    ಮಂಗಳೂರು/ನವದೆಹಲಿ : ಸ್ವಪಕ್ಷ ಹಾಗೂ ಮೋದಿ ವಿರುದ್ಧ ಸದಾ ಕಟು ಪದಗಳಿಂದ ಟೀಕೆ ಮಾಡುತ್ತಿದ್ದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಇದೀಗ ಮತ್ತೊಂದು ಬಾಂ*ಬ್ ಸಿಡಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್ ವಿರುದ್ಧ ತನ್ನ ಎಕ್ಸ್‌ ಖಾತೆಯಲ್ಲಿ ಟೀಕಿಸಿದ್ದಾರೆ.


    ಚೀನಾದ ವಿಚಾರವನ್ನು ಪ್ರಸ್ತಾಪಿಸಿರುವ ಸುಬ್ರಮಣಿಯನ್ ಸ್ವಾಮಿ, ಭಯಗೊಂಡಿರುವ ಮೋದಿ ಇಲಿಯಂತಾಗಿದ್ದಾರೆ ಎಂದಿದ್ದಾರೆ. ಪ್ರಧಾನಿ ಮೋದಿ ಹಾಗೂ ಎಸ್ ಜೈಶಂಕರ್ ಅವರು ಎಲ್ಲಿಗೆ ಹೋಗಬೇಕು ಎಂದು ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. ಚೀನಾವನ್ನು ಹೊರ ಹಾಕಲು ಸಾಧ್ಯವಾಗದೇ ಇದ್ರೆ, ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಬರೆದುಕೊಂಡಿದ್ದಾರೆ.

    ಕಲೆದ ನಾಲ್ಕು ವರ್ಷಗಳಿಂದ ಭಾರತ ಭೂಮಿಯನ್ನು ಚೀನ ಕಸಿದುಕೊಳ್ಳುತ್ತಿದೆ. ಆದ್ರೆ ಪ್ರಧಾನಿ ಮಾತ್ರ “ಯಾರೂ ಬಂದಿಲ್ಲ” ಅಂತಿದ್ದಾರೆ ಎಂದು ಎಕ್ಸ್‌ ಖಾತೆಯಲ್ಲಿ ಜುಲೈ 5ರಂದು ಬರೆದುಕೊಂಡಿದ್ದಾರೆ.


    ಜುಲೈ 6 ರಂದು ಮತ್ತೊಂದು ಪೋಸ್ಟ್‌ ಹಾಕಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನರೇಂದ್ರ ಮೋದಿ ಅವರನ್ನು ರಷ್ಯಾಕ್ಕೆ ಆಹ್ವಾನಿಸಿದ್ದಾರೆ. ಯುಎಸ್‌ ಕೂಡಾ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುತ್ತಿದೆ” ಎಂದು ಬರೆದುಕೊಂಡು “ಪ್ರಧಾನಿ ಮೋದಿ ಈಗ ಪಂಚತಂತ್ರದ ಬಾವಲಿಯಾಗಿದ್ದಾರೆ” ಎಂದು ಕೆಟ್ಟದಾಗಿ ಟೀಕಿಸಿದ್ದಾರೆ. “ಪುಟಿನ್ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ ಮತ್ತು ಸಂಸ್ಕೃತದಲ್ಲಿ ಹಿಡಿತ ಇರುವ ರಷ್ಯಾದ ಮಹಿಳೆಯೊಬ್ಬರು ಭಾಷಾಂತರ ಮಾಡುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ಏನಾಶ್ಚರ್ಯ!! ನಾಗರ ಹಾವು ಕಡಿದು ಮಹಿಳೆ ಸಾ*ವು; ಅಂತ್ಯಸಂಸ್ಕಾರದ ವಿಧಿಗೆ ಬಂದು ನೀರು ಕುಡಿದು ಹೋದ ನಾಗರಹಾವು
    ಸುಬ್ರಮಣಿಯನ್ ಸ್ವಾಮಿ ಅವರು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ಪೋಸ್ಟ್‌ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚೀನಾ, ಭಾರತದ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ವಪಕ್ಷೀಯರೇ ಆಗಿರುವ ಸ್ವಾಮಿ ಆರೋಪಿಸಿದ್ದಾರೆ.

    LATEST NEWS

    Viral Video: ಪ್ರೀತಿಯಿಂದ ಮನದರಸಿಯ ದೃಷ್ಠಿ ತೆಗೆದ ಅರಸ; ಪ್ರತಿ ವಧುವಿನ ಕಲರ್‌ಫುಲ್ ಕನಸು.. ಯಾವುದು ಗೊತ್ತಾ ??

    Published

    on

    ಎರಡು ಮನಸ್ಸುಗಳ ಬೆಸೆಯುವ ಪವಿತ್ರ ಬಂಧವೇ ಮದುವೆ. ಹಾಗಾಗಿ ನವ ಜೋಡಿಯು ತಮ್ಮ ಮದುವೆ ಕ್ಷಣಗಳನ್ನು ಸುಂಧುರವಾಗಿಸಲು ಬಯಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಧುವು ಮಂಟಪಕ್ಕೆ ಬರುತ್ತಿದ್ದಂತೆ ದೃಷ್ಟಿ ತೆಗೆದು ಆಕೆಯ ಕೈಹಿಡಿದು ವರನೇ ಕರೆದುಕೊಂಡು ಬಂದಿದ್ದಾನೆ.


    Zoopgo ಹೆಸರಿನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ  ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಧುವು ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟಿದ್ದಾಳೆ. ಆಕೆಯನ್ನು ನೋಡಿದ ವರನು, ಕೈಯಲ್ಲಿ ಹಣವನ್ನು ಹಿಡಿದು ಆಕೆಯ ದೃಷ್ಟಿ ತೆಗೆದಿದ್ದಾನೆ. ಈ ವೇಳೆ ವಧುವು ವರನನ್ನು ನೋಡುತ್ತಾ ನಗುತ್ತಾ ನಿಂತಿದ್ದಾಳೆ. ಆ ಬಳಿಕ ಕೈಹಿಡಿದು ಆಕೆಯನ್ನು ಮಂಟಪಕ್ಕೆ ಕರೆದುಕೊಂಡು ಬಂದಿದ್ದಾನೆ.

    ಈ ವಿಡಿಯೋಗೆ “ಪ್ರತಿಯೊಬ್ಬ ವಧು ತನ್ನ ವರನು ತನ್ನನ್ನು ಹೀಗೆ ಸ್ವಾಗತಿಸಬೇಕೆಂದು ಕನಸು ಕಾಣುತ್ತಾಳೆ.” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. 31 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡು ಕೊಂಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರೂ ಪ್ರತಿಕ್ರಿಯೆ ನೀಡಿದ್ದು, ‘ಆ ಹುಡುಗಿಗೆ ಒಳ್ಳೆಯ ವರ ಸಿಕ್ಕಿದ್ದಾನೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಆ ಹುಡುಗನನ್ನು ಮದುವೆಯಾಗುತ್ತಿರುವ ಆಕೆಯು ನಿಜಕ್ಕೂ ಅದೃಷ್ಟವಂತಳು’ ಎಂದಿದ್ದಾರೆ. ಇನ್ನೊಬ್ಬರು ‘ವರನು ಹಣವನ್ನು ವ್ಯರ್ಥ ಮಾಡಲಿಲ್ಲ, ಅದನ್ನು ಯಾರಿಗೂ ನೀಡಲಿಲ್ಲ‘ ಎಂದಿದ್ದಾರೆ.

     

    ವಿಡಿಯೋ ನೋಡಿ:

    Continue Reading

    LATEST NEWS

    ಇನ್ಮುಂದೆ 7 ದಿನದಲ್ಲೇ ಸಿಗಲಿದೆ ಜನನ ಪ್ರಮಾಣ ಪತ್ರ..!

    Published

    on

    ಬೆಂಗಳೂರು: ಶಾಲಾ ದಾಖಲಾತಿ, ಉದ್ಯೋಗ, ವಿವಾಹ ನೋಂದಣಿ ಸೇರಿದಂತೆ ವಿವಿಧ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕೂಡ ಜನನ ಪ್ರಮಾಣ ಪತ್ರ ಅಗತ್ಯ ದಾಖಲೆಯಾಗಿದೆ. ಆದರೆ ಮಗು ಜನಿಸಿದ ನಂತರದಲ್ಲಿ ಜನನ ಪ್ರಮಾಣ ಪತ್ರ ಪಡೆಯಲು ತಿಂಗಳವರೆಗೂ ಕಾಯಬೇಕಾದ ಪರಿಸ್ಥಿತಿಯಿದ್ದು, ಇದೀಗ ಆರೋಗ್ಯ ಇಲಾಖೆ ಇ-ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15ರಿಂದ 7 ದಿನಕ್ಕೆ ಇಳಿಸಲು ಮುಂದಾಗಿದೆ.

    ಸಾಕಷ್ಟು ಕಡೆಗಳಲ್ಲಿ ಈ ಜನನ ಪ್ರಮಾಣ ಪತ್ರವನ್ನು ಪಡೆಯಲು ಪೋಷಕರು ಅಲೆದಾಡುವ ಪರಿ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಸರಕಾರ 7 ದಿನಗಳಲ್ಲಿ ಜನನ ಪ್ರಮಾಣ ನೀಡಲು ಕ್ರಮವಹಿಸಿದೆ.

    ಇದಕ್ಕಾಗಿ ಇ – ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15ರಿಂದ 7 ದಿನಕ್ಕೆ ಇಳಿಸಿದ್ದು, ಸೇವಾ ಸಿಂಧು ತಂತ್ರಾಂಶದಲ್ಲಿ ಜನನ ಪ್ರಮಾಣ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಜತೆಗೆ ಅರ್ಜಿದಾರರ ದಾಖಲೆಗಳನ್ನು ಸುರಕ್ಷಿತವಾಗಿಡುವಂತೆ ಸೂಚನೆ ನೀಡಿದೆ.

    ಸಕಾಲದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯಲು 7 ದಿನಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಅರ್ಜಿದಾರರು ಒದಗಿಸಿದ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು ಹಾಗೂ ಮತ್ತೆ ದಾಖಲೆಗಳನ್ನು ಕೇಳಬಾರದು. ಈ ಕುರಿತಂತೆ ಎಲ್ಲಾ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಕೆಬಿ ಶಿವಕುಮಾರ್ ಹೇಳಿದ್ದಾರೆ.

    Continue Reading

    LATEST NEWS

    ಪ್ರಿಯಕರನಿಗಾಗಿ ಪತಿಯ ಕಥೆ ಮುಗಿಸಿದ ಪತ್ನಿ! ಸಿಕ್ಕಿಬಿದ್ದಿದ್ದು ಹೇಗೆ?

    Published

    on

    ಮಂಗಳೂರು/ಚಿತ್ರದುರ್ಗ: ಅ*ನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನ ಜತೆ ಸೇರಿ  ಪತ್ನಿಯೇ ಗಂಡನ ಹ*ತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ನಡೆದಿದೆ. ರಾಘವೇಂದ್ರ (35) ಕೊ*ಲೆಯಾದವನು.

    ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ ಹಾಗೂ ಪ್ರಿಯಕರ ರಾಜಣ್ಣ ಜತೆ ಸೇರಿ ಪತಿ ರಾಘವೇಂದ್ರನನ್ನು ಕೊ*ಲೆ ಮಾಡಿದ್ದಾರೆ. ರಾಘವೇಂದ್ರನಿಗೆ ಮೊದಲಿಗೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸಿದ್ದಾರೆ. ಬಳಿಕ ನಿದ್ರೆಗೆ ಜಾರುತ್ತಿದ್ದಂತೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊ*ಲೆ ಮಾಡಿದ್ದಾರೆ. ಪತಿಯನ್ನು ಕೊಂ*ದು ಹೊಟ್ಟೆ ಉರಿಯಿಂದ ಸ*ತ್ತಿದ್ದಾನೆ ಎಂದು ದಿವ್ಯ ಕಥೆ ಕಟ್ಟಿದ್ದಾಳೆ.

    ಇದನ್ನೂ ಓದಿ : ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?

    ಮೊದಲು ಯುಡಿಆರ್‌ ದಾಖಲಿಸಿಕೊಂಡಿದ್ದ ಪೊಲೀಸರಿಗೆ ತನಿಖೆ ವೇಳೆ ಸತ್ಯ ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಇದು ಅಸಹಜ ಸಾ*ವು ಎಂಬುದು ಬಯಲಾಗಿದೆ. ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊ*ಲೆ ರಹಸ್ಯ ಹೊರಬಿದ್ದಿದೆ. ತಕ್ಷಣ ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಕೊ*ಲೆಗಡುಕರು ಕಂಬಿ ಎಣಿಸುತ್ತಿದ್ದಾರೆ.

    Continue Reading

    LATEST NEWS

    Trending