DAKSHINA KANNADA
ಮಂಗಳೂರಿನಲ್ಲಿ ಕನ್ನಡ ಕವಿ ಕಾವ್ಯ ಕಲರವ ರಾಜ್ಯ ಮಟ್ಟದ ಆನ್ಲೈನ್ ವೀಡಿಯೋ ಕವಿ ಸಮ್ಮೇಳನ ..!
ಮಂಗಳೂರು: ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಆನ್ಲೈನ್ ವೀಡಿಯೋ ಕವಿ ಸಮ್ಮೇಳನ ಕನ್ನಡ ಕವಿ ಕಾವ್ಯ ಕಲರವ ಎಪ್ರಿಲ್ 26ರ ಸೋಮವಾರ ಸಂಜೆ 4ಗಂಟೆಗೆ ಡಿಜಿಟಲ್ ವೇದಿಕೆಯಲ್ಲಿ ನಡೆಯಲಿದೆ.
ಸಮ್ಮೇಳನವನ್ನು ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಡಾ। ಎಂ.ಜಿ ಆರ್ ಅರಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಿರಿಯ ಸಾಹಿತಿ ನಾಟಕಕಾರ ವಿದ್ವಾಂಸರಾದ ಪ್ರೊ. ಬಿ ಆರ್ ಪೊಲೀಸ್ ಪಾಟೀಲ್ ಬಾಗಲಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವಿ. ಕೃಷ್ಣದಾಸ್ ಆಶಯ ಭಾಷಣ ಮಾಡಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಹಾಗೂ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಕವಿ ಸಮ್ಮೇಳನದಲ್ಲಿ ಅಮೆರಿಕಾ ಸೇರಿದಂತೆ ದೇಶದ ಆಯ್ಕೆಯಾದ ಒಟ್ಟು ೧೦೦ ಮಂದಿ ಹಿರಿಯ ಕಿರಿಯ ಕವಿಗಳು ಭಾಗವಹಿಸುವರು.
ಕವಿಗಳಾದ ಮುದ್ದು ಮೂಡುಬೆಳ್ಳೆ, ರಮಿತ ಕುತ್ತಾರ್, ಮಂಗಳೂರು, ಸತ್ಯವತಿ ಭಟ್ ಕೊಳಚಪುö್ಪ, ಶಾಂತ ಚೌರಿ ವಿಜಯಪುರ,. ಡಾ.ಅರುಣಾ ನಾಗರಾಜ್, ಮಂಗಳೂರು, ಮಾನಸ ವಿಜಯ್ ಕೈತಂಜೆ, ಶ್ರೀಮತಿ ಅರುಣಾ ಶ್ರೀನಿವಾಸ, ಉಜಿರೆ, ಅರುಂಧತಿ ರಾವ್ ಮಂಗಳೂರು, ಅಚ್ಯುತ ರಾವ್ ಚಿಕ್ಕಮಗಳೂರು, ದಾಕ್ಷಾಯಿಣಿ ಉದಗಟ್ಟಿ, ರಾಣಿಬೆನ್ನೂರು, ಬದ್ರುದ್ದೀನ್ ಕೂಳೂರು, ಮಂಗಳೂರು,
ಸೋಮನಾಥ್ ಸಾಲಿಮಠ್, ಬಳ್ಳಾರಿ, ಡಾ.ಎಸ್.ವಿ.ಪ್ರಭಾವತಿ ಮಂಡ್ಯ, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ಪಾರ್ವತಿ ಜೋರಾಂಪುರ್ ಮಠ್, ವಿಜಯಪುರ, ಸುರೇಶ್ ಎಂ.ಯಾದಗಿರಿ,
ಡಾ.ಸುರೇಶ್ ನೆಗಳಗುಳಿ, ಬಿ.ವೆಂಕಟೇಶ್, ಬಸವನಗುಡಿ, ಬೆಂಗಳೂರು, ಆನಂದ ಹಕ್ಕೆನ್ನವರ ಬೆಳಗಾವಿ, ಸುಪ್ರಿಯಾ, ಮಂಗಳೂರು, ವಿದ್ವಾನ್ ಮಂಜುನಾಥ್ ಪುತ್ತೂರು, ವಿಶ್ವನಾಥ್ ನಾರಾಯಣ ಬೇಂದ್ರೆ,ಗದಗ,ಚಂದ್ರಪ್ರಭಾವತಿ ಮಂಗಳೂರು, ಸರೋಜಿನಿ ಕೆ.ಮಾವಿನ್ಮರ್,ವಿಜಯಪುರ ಜಿಲ್ಲೆ, ಎನ್. ಆರ್.ರೂಪಶ್ರೀ,
ಮೈಸೂರು, ರಶ್ಮಿ ಸನಿಲ್ ಮಂಗಳೂರು, ಸೀತಾಲಕ್ಷ್ಮಿ ವರ್ಮಾ ವಿಟ್ಲ, ಕುಮುದಾ ಡಿ.ಶೆಟ್ಟಿ,ಮುಂಬೈ, ಮೊಹಮ್ಮದ್ ಹುಮಾಯೂನ್ ಎನ್ ಮೈಸೂರು,ಅನ್ನಪೂರ್ಣ ಹಿರೇಮಠ್, ಬೆಳಗಾವಿ ಜಿಲ್ಲೆ ಮಹಾಂತೇಶ ವಿ.ಕೋಳಿವಾಡ,
ಹುಬ್ಬಳ್ಳಿ, ಶಾರದಾ ಅಂಚನ್ ಮುಂಬೈ, ರಶ್ಮಿ ಭಟ್, ಕಾರ್ಘರ್, ಮುಂಬೈ, ಅನುರಾಧ ಎಂ.ಕುಲಕರ್ಣಿ, ಧಾರವಾಡ, ರಾಧಾಶ್ಯಾಮ್ ಧಾರವಾಡ, ಸುಶೀಲ ಕೆ.ಪದ್ಯಾಣ ಕಾಸರಗೋಡು, ವೆಂಕಟೇಶ್ ಗಟ್ಟಿ, ಮಂಗಳೂರು, ಮಶಾಕ್ ಅಬ್ದುಲ್ ತಾಳಿಕೋಟೆ, ಕೋಲಾರ, ಕುಸುಮ ಎಸ್.ಮುದಿಗೌಡರ, ಹಾವೇರಿ,
ಇಂದುಮತಿ ರಾಘವೇಂದ್ರ ಧಾರವಾಡ, ವ.ಉಮೇಶ್ ಕಾರಂತ್, ಮಂಗಳೂರು, ಸಮ್ಯಕ್ತ್ ಜೈನ್ ಕಡಬ, ವಿಶ್ವನಾಥ್ ಎನ್. ನೆರಳಕಟ್ಟೆ, ಸಂಧ್ಯಾ ಗಣಪತಿ ಭಟ್ ಉತ್ತರಕನ್ನಡ, ವಿಜಯ ಕಾನ ಪೆರ್ಲ ಕಾಸರಗೋಡು,ವಿದ್ಯಾಶ್ರೀ ಅಡೂರು, ಬೆಳ್ತಂಗಡಿ,ಶೈಲಾ ಎಸ್.ಭಟ್ ಬೆಳಗಾವಿ,ಫಣಿಶ್ರೀ ನಾರಾಯಣನ್ ಮೇರಿ ಲ್ಯಾಂಡ್ ಅಮೆರಿಕಾ, ವನಜಾಕ್ಷಮ್ಮ ಬಳ್ಳಾರಿ, ಶ್ಯಾಮಲಾ ಪ್ರಸನ್ನ ಕುಮಾರ್ ಕುಂಬಳೆ, ವೆಂಕಟ್ ಭಟ್ ಎಡನೀರು, ಸೌಮ್ಯ ಜಯರಾಮ್ ಬೆಂಗಳೂರು, ಪದ್ಮಾವತಿ ಮುದಿಗೌಡರ್ ಶಿವಮೊಗ್ಗ, ಕುಮಾರಿ ಸ್ಫೂರ್ತಿ ಸಾಗರ, ಅಬ್ದುಲ್ ಸಮದ್ ಬಾವ ಪುತ್ತೂರು, ಎಂ.ರಾಮಚಂದ್ರ ರಾವ್ ರಾಯಚೂರು,
ವಾಣಿ ಲೋಕಯ್ಯ ಮಂಗಳೂರು, ನಾರಾಯಣ ನಾಯ್ಕ್ ಕುದುಕೋಳಿ ಕಾಸರಗೋಡು, ಎನ್. ಸುಬ್ರಾಯ ಭಟ್, ಮಂಗಳೂರು ಸಲೀಂ ಬೋಳಂಗಡಿ, ಬಂಟ್ವಾಳ, ರೇಮಂಡ್ ಡಿಕುನಾ ತಾಕೊಡೆ, ಮಂಗಳೂರು, ಯಮನೂರಪ್ಪ ಶಂ. ಅರಬಿ ವಿಜಯಪುರ, ಶಿವಾಜಿ ಮೊರೆ, ವಿಜಯಪುರ, ಪ್ರಭಾವತಿ ಶೆಟ್ಟಿ ಕಾವಡಿ, ಉಡುಪಿ, ಶೋಭಾ ಜೆ. ಶೆಟ್ಟಿ ಮುಂಬೈ, ಶೇಷಪ್ಪ ಬಿ.ಬಂಬಿಲ ಮಂಗಳೂರು,
ಅಶೋಕ ಎನ್ ಕಡೇಶಿವಾಲಯ, ಹಮೀದ ಬೇಗಂ ದೇಸಾಯಿ ಸಂಕೇಶ್ವರ, ಬೆಳಗಾವಿ, ಪಂಕಜಾ ಕೆ.ಮುಡಿಪು ಬಂಟ್ವಾಳ,ಮAಜುಳಾ ರಾವ್ ವಾಷಿಂಗ್ಟನ್ ಅಮೆರಿಕ, ಗುಣಾಜೆ ರಾಮಚಂದ್ರ ಭಟ್ ಮಂಗಳೂರು, ಸುಧಾ ನಾಗೇಶ್ ಮಂಗಳೂರು,
ಇಂದಿರಾ ಶೆಟ್ಟಿ ಮೈಸೂರು. ವಿಘ್ನೇಶ್ ಭಿಡೆ ಮಂಗಳೂರು, ಅಶ್ವಥ್ ಬರಿಮಾರ್ ಬಂಟ್ವಾಳ, ಹಂಸರಾಗ ಶೆಟ್ಟಿ ಪುತ್ತೂರು, ರೇಖಾ ನಾರಾಯಣ್ ಪಕ್ಷಿಕೆರೆ, ಲಕ್ಷ್ಮಿ ವಿ ಭಟ್ ತಲಂಜೇರಿ ಮಂಜೇಶ್ವರ, ಪ್ರೇಮಲತಾ ಸಿ ಎಸ್ ಚಿಪ್ಪಾರು ಮಂಜೇಶ್ವರ, ಹೇಮಲತಾ ಪೂರ್ಣಪ್ರಕಾಶ್ ಮಡಿಕೇರಿ,
ಲತೀಶ್ ಎಂ.ಸಂಕೊಳಿಗೆ, ಅರ್ಚನಾ ಎಂ ಬಂಗೇರ, ಕುಂಪಲ, ಶ್ರೀಮತಿ ತ್ರಿವೇಣಿ ಭದ್ರಾವತಿ, ಗೀತಾ ಭದ್ರಣ್ಣವರ್ ಧಾರವಾಡ, ಶುಭ ವರ್ಣೇಕರ್ ಬೆಂಗಳೂರು, ಪ್ರಮೋದ ಸುರೇಂದ್ರ ಮಾಡ ಥಾಣೆ ಮಹಾರಾಷ್ಟ ವಾಣಿ ರಾವ್ ಕಿನ್ನಿಗೋಳಿ, ಅನಂತ ಸತ್ಯ ಸಂಜೀವ ಕುಳಾಯಿ, ಮಂಜುಳಾ ಬಿ.ಕೆ. ತುಮಕೂರು, ಸಂಜಯ ಜಿ ಕುರಣೆ, ಕಾಗವಾಡ ಬೆಳಗಾವಿ, ವೇದ ಶೆಟ್ಟಿ ಕಾಳಾವರ ಕುಂದಾಪುರ,
ಜಯಲಕ್ಷ್ಮಿ ಶರತ್ ಶೆಟ್ಟಿ ಮಂಜೇಶ್ವರ, ಅಕ್ಷಯ ಆರ್ ಶೆಟ್ಟಿ ಮಂಗಳೂರು, ವಿಜೇಶ್ ದೇವಾಡಿಗ, ಸುಧಾ ಎನ್ ತೇಲ್ಕರ್ ಅನಂತಪುರ, ಹೈದರಾಬಾದ್, ಬಿಟ್ಟೀರ ಚೋಂದಮ್ಮ ಶಂಭು ಬೆಂಗಳೂರು, ಶೋಭಾ ಶರ್ಮ, ಈರಣ್ಣ ಶೆಟ್ಟರ, ಧಾರವಾಡ, ಶ್ರೀಮತಿ ಸರೋಜಾ ಜಯಂತ್, ಏಳಿಂಜೆ, ಮಂಗಳೂರು, ವಿಜಯಲಕ್ಷ್ಮಿ, ಅಶೋಕ ಬಸವ ತೆಲಂಗಾಣ ಹೈದರಾಬಾದ್ ಅವರುಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸುವರು.
ಸಮ್ಮೇಳನವು ನಮ್ಮ ಕುಡ್ಲ ವಾಹಿನಿ, ಪರಿಷತ್ತಿನ ಫೇಸ್ಬುಕ್ ಪುಟ, ಹಾಗೂ ಯೂ ಟ್ಯೂಬ್ ವಾಹಿನಿಗಳಲ್ಲಿ ನೇರಪ್ರಸಾರ ಆಗಲಿದೆಯೆಂದು ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ತಿಳಿಸಿದ್ದಾರೆ..
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
DAKSHINA KANNADA
ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು
ಮಂಗಳೂರು: ಗುಜರಾತ್ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.
ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ತಂಡ ಹೆಲಿಕಾಪ್ಟರ್ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್ ಗಾರ್ಡ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!
ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.
ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.
ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.
ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.
ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ