Connect with us

DAKSHINA KANNADA

ಮಂಗಳೂರಿನಲ್ಲಿ ಕನ್ನಡ ಕವಿ ಕಾವ್ಯ ಕಲರವ ರಾಜ್ಯ ಮಟ್ಟದ ಆನ್ಲೈನ್ ವೀಡಿಯೋ ಕವಿ ಸಮ್ಮೇಳನ ..!

Published

on

ಮಂಗಳೂರು: ತಾಲೂಕು ಚುಟುಕು  ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಆನ್ಲೈನ್ ವೀಡಿಯೋ ಕವಿ ಸಮ್ಮೇಳನ ಕನ್ನಡ ಕವಿ ಕಾವ್ಯ ಕಲರವ ಎಪ್ರಿಲ್ 26ರ ಸೋಮವಾರ  ಸಂಜೆ 4ಗಂಟೆಗೆ ಡಿಜಿಟಲ್ ವೇದಿಕೆಯಲ್ಲಿ ನಡೆಯಲಿದೆ.

ಸಮ್ಮೇಳನವನ್ನು ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಡಾ। ಎಂ.ಜಿ ಆರ್ ಅರಸ್  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಿರಿಯ ಸಾಹಿತಿ ನಾಟಕಕಾರ ವಿದ್ವಾಂಸರಾದ ಪ್ರೊ. ಬಿ ಆರ್ ಪೊಲೀಸ್ ಪಾಟೀಲ್ ಬಾಗಲಕೋಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವಿ. ಕೃಷ್ಣದಾಸ್ ಆಶಯ ಭಾಷಣ ಮಾಡಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಹಾಗೂ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಕವಿ ಸಮ್ಮೇಳನದಲ್ಲಿ ಅಮೆರಿಕಾ ಸೇರಿದಂತೆ ದೇಶದ ಆಯ್ಕೆಯಾದ ಒಟ್ಟು ೧೦೦ ಮಂದಿ ಹಿರಿಯ ಕಿರಿಯ ಕವಿಗಳು ಭಾಗವಹಿಸುವರು.

ಕವಿಗಳಾದ ಮುದ್ದು ಮೂಡುಬೆಳ್ಳೆ, ರಮಿತ ಕುತ್ತಾರ್, ಮಂಗಳೂರು, ಸತ್ಯವತಿ ಭಟ್ ಕೊಳಚಪುö್ಪ, ಶಾಂತ ಚೌರಿ ವಿಜಯಪುರ,. ಡಾ.ಅರುಣಾ ನಾಗರಾಜ್, ಮಂಗಳೂರು, ಮಾನಸ ವಿಜಯ್ ಕೈತಂಜೆ, ಶ್ರೀಮತಿ ಅರುಣಾ ಶ್ರೀನಿವಾಸ, ಉಜಿರೆ, ಅರುಂಧತಿ ರಾವ್ ಮಂಗಳೂರು, ಅಚ್ಯುತ ರಾವ್ ಚಿಕ್ಕಮಗಳೂರು, ದಾಕ್ಷಾಯಿಣಿ ಉದಗಟ್ಟಿ, ರಾಣಿಬೆನ್ನೂರು, ಬದ್ರುದ್ದೀನ್ ಕೂಳೂರು, ಮಂಗಳೂರು,

ಸೋಮನಾಥ್ ಸಾಲಿಮಠ್, ಬಳ್ಳಾರಿ, ಡಾ.ಎಸ್.ವಿ.ಪ್ರಭಾವತಿ ಮಂಡ್ಯ, ಮಾನಸ ಪ್ರವೀಣ್ ಭಟ್, ಮೂಡಬಿದ್ರೆ, ಪಾರ್ವತಿ ಜೋರಾಂಪುರ್ ಮಠ್, ವಿಜಯಪುರ, ಸುರೇಶ್ ಎಂ.ಯಾದಗಿರಿ,

ಡಾ.ಸುರೇಶ್ ನೆಗಳಗುಳಿ, ಬಿ.ವೆಂಕಟೇಶ್, ಬಸವನಗುಡಿ, ಬೆಂಗಳೂರು, ಆನಂದ ಹಕ್ಕೆನ್ನವರ ಬೆಳಗಾವಿ, ಸುಪ್ರಿಯಾ, ಮಂಗಳೂರು, ವಿದ್ವಾನ್ ಮಂಜುನಾಥ್ ಪುತ್ತೂರು, ವಿಶ್ವನಾಥ್ ನಾರಾಯಣ ಬೇಂದ್ರೆ,ಗದಗ,ಚಂದ್ರಪ್ರಭಾವತಿ ಮಂಗಳೂರು, ಸರೋಜಿನಿ ಕೆ.ಮಾವಿನ್ಮರ್,ವಿಜಯಪುರ ಜಿಲ್ಲೆ, ಎನ್. ಆರ್.ರೂಪಶ್ರೀ,

ಮೈಸೂರು, ರಶ್ಮಿ ಸನಿಲ್ ಮಂಗಳೂರು, ಸೀತಾಲಕ್ಷ್ಮಿ ವರ್ಮಾ ವಿಟ್ಲ, ಕುಮುದಾ ಡಿ.ಶೆಟ್ಟಿ,ಮುಂಬೈ, ಮೊಹಮ್ಮದ್ ಹುಮಾಯೂನ್ ಎನ್ ಮೈಸೂರು,ಅನ್ನಪೂರ್ಣ ಹಿರೇಮಠ್, ಬೆಳಗಾವಿ ಜಿಲ್ಲೆ ಮಹಾಂತೇಶ ವಿ.ಕೋಳಿವಾಡ,

ಹುಬ್ಬಳ್ಳಿ, ಶಾರದಾ ಅಂಚನ್ ಮುಂಬೈ, ರಶ್ಮಿ ಭಟ್, ಕಾರ್ಘರ್, ಮುಂಬೈ, ಅನುರಾಧ ಎಂ.ಕುಲಕರ್ಣಿ, ಧಾರವಾಡ, ರಾಧಾಶ್ಯಾಮ್ ಧಾರವಾಡ, ಸುಶೀಲ ಕೆ.ಪದ್ಯಾಣ ಕಾಸರಗೋಡು, ವೆಂಕಟೇಶ್ ಗಟ್ಟಿ, ಮಂಗಳೂರು, ಮಶಾಕ್ ಅಬ್ದುಲ್ ತಾಳಿಕೋಟೆ, ಕೋಲಾರ, ಕುಸುಮ ಎಸ್.ಮುದಿಗೌಡರ, ಹಾವೇರಿ,

ಇಂದುಮತಿ ರಾಘವೇಂದ್ರ ಧಾರವಾಡ, ವ.ಉಮೇಶ್ ಕಾರಂತ್, ಮಂಗಳೂರು, ಸಮ್ಯಕ್ತ್ ಜೈನ್ ಕಡಬ, ವಿಶ್ವನಾಥ್ ಎನ್. ನೆರಳಕಟ್ಟೆ, ಸಂಧ್ಯಾ ಗಣಪತಿ ಭಟ್ ಉತ್ತರಕನ್ನಡ, ವಿಜಯ ಕಾನ ಪೆರ್ಲ ಕಾಸರಗೋಡು,ವಿದ್ಯಾಶ್ರೀ ಅಡೂರು, ಬೆಳ್ತಂಗಡಿ,ಶೈಲಾ ಎಸ್.ಭಟ್ ಬೆಳಗಾವಿ,ಫಣಿಶ್ರೀ ನಾರಾಯಣನ್ ಮೇರಿ ಲ್ಯಾಂಡ್ ಅಮೆರಿಕಾ, ವನಜಾಕ್ಷಮ್ಮ ಬಳ್ಳಾರಿ, ಶ್ಯಾಮಲಾ ಪ್ರಸನ್ನ ಕುಮಾರ್ ಕುಂಬಳೆ, ವೆಂಕಟ್ ಭಟ್ ಎಡನೀರು, ಸೌಮ್ಯ ಜಯರಾಮ್ ಬೆಂಗಳೂರು, ಪದ್ಮಾವತಿ ಮುದಿಗೌಡರ್ ಶಿವಮೊಗ್ಗ, ಕುಮಾರಿ ಸ್ಫೂರ್ತಿ ಸಾಗರ, ಅಬ್ದುಲ್ ಸಮದ್ ಬಾವ ಪುತ್ತೂರು, ಎಂ.ರಾಮಚಂದ್ರ ರಾವ್ ರಾಯಚೂರು,

ವಾಣಿ ಲೋಕಯ್ಯ ಮಂಗಳೂರು, ನಾರಾಯಣ ನಾಯ್ಕ್ ಕುದುಕೋಳಿ ಕಾಸರಗೋಡು, ಎನ್. ಸುಬ್ರಾಯ ಭಟ್, ಮಂಗಳೂರು ಸಲೀಂ ಬೋಳಂಗಡಿ, ಬಂಟ್ವಾಳ, ರೇಮಂಡ್ ಡಿಕುನಾ ತಾಕೊಡೆ, ಮಂಗಳೂರು, ಯಮನೂರಪ್ಪ ಶಂ. ಅರಬಿ ವಿಜಯಪುರ, ಶಿವಾಜಿ ಮೊರೆ, ವಿಜಯಪುರ, ಪ್ರಭಾವತಿ ಶೆಟ್ಟಿ ಕಾವಡಿ, ಉಡುಪಿ, ಶೋಭಾ ಜೆ. ಶೆಟ್ಟಿ ಮುಂಬೈ, ಶೇಷಪ್ಪ ಬಿ.ಬಂಬಿಲ ಮಂಗಳೂರು,

ಅಶೋಕ ಎನ್ ಕಡೇಶಿವಾಲಯ, ಹಮೀದ ಬೇಗಂ ದೇಸಾಯಿ ಸಂಕೇಶ್ವರ, ಬೆಳಗಾವಿ, ಪಂಕಜಾ ಕೆ.ಮುಡಿಪು ಬಂಟ್ವಾಳ,ಮAಜುಳಾ ರಾವ್ ವಾಷಿಂಗ್ಟನ್ ಅಮೆರಿಕ, ಗುಣಾಜೆ ರಾಮಚಂದ್ರ ಭಟ್ ಮಂಗಳೂರು, ಸುಧಾ ನಾಗೇಶ್ ಮಂಗಳೂರು,

ಇಂದಿರಾ ಶೆಟ್ಟಿ ಮೈಸೂರು. ವಿಘ್ನೇಶ್ ಭಿಡೆ ಮಂಗಳೂರು, ಅಶ್ವಥ್ ಬರಿಮಾರ್ ಬಂಟ್ವಾಳ, ಹಂಸರಾಗ ಶೆಟ್ಟಿ ಪುತ್ತೂರು, ರೇಖಾ ನಾರಾಯಣ್ ಪಕ್ಷಿಕೆರೆ, ಲಕ್ಷ್ಮಿ ವಿ ಭಟ್ ತಲಂಜೇರಿ ಮಂಜೇಶ್ವರ, ಪ್ರೇಮಲತಾ ಸಿ ಎಸ್ ಚಿಪ್ಪಾರು ಮಂಜೇಶ್ವರ, ಹೇಮಲತಾ ಪೂರ್ಣಪ್ರಕಾಶ್ ಮಡಿಕೇರಿ,

ಲತೀಶ್ ಎಂ.ಸಂಕೊಳಿಗೆ, ಅರ್ಚನಾ ಎಂ ಬಂಗೇರ, ಕುಂಪಲ, ಶ್ರೀಮತಿ ತ್ರಿವೇಣಿ ಭದ್ರಾವತಿ, ಗೀತಾ ಭದ್ರಣ್ಣವರ್ ಧಾರವಾಡ, ಶುಭ ವರ್ಣೇಕರ್ ಬೆಂಗಳೂರು, ಪ್ರಮೋದ ಸುರೇಂದ್ರ ಮಾಡ ಥಾಣೆ ಮಹಾರಾಷ್ಟ ವಾಣಿ ರಾವ್ ಕಿನ್ನಿಗೋಳಿ, ಅನಂತ ಸತ್ಯ ಸಂಜೀವ ಕುಳಾಯಿ, ಮಂಜುಳಾ ಬಿ.ಕೆ. ತುಮಕೂರು, ಸಂಜಯ ಜಿ ಕುರಣೆ, ಕಾಗವಾಡ ಬೆಳಗಾವಿ, ವೇದ ಶೆಟ್ಟಿ ಕಾಳಾವರ ಕುಂದಾಪುರ,

ಜಯಲಕ್ಷ್ಮಿ ಶರತ್ ಶೆಟ್ಟಿ ಮಂಜೇಶ್ವರ, ಅಕ್ಷಯ ಆರ್ ಶೆಟ್ಟಿ ಮಂಗಳೂರು, ವಿಜೇಶ್ ದೇವಾಡಿಗ, ಸುಧಾ ಎನ್ ತೇಲ್ಕರ್ ಅನಂತಪುರ, ಹೈದರಾಬಾದ್, ಬಿಟ್ಟೀರ ಚೋಂದಮ್ಮ ಶಂಭು ಬೆಂಗಳೂರು, ಶೋಭಾ ಶರ್ಮ, ಈರಣ್ಣ ಶೆಟ್ಟರ, ಧಾರವಾಡ, ಶ್ರೀಮತಿ ಸರೋಜಾ ಜಯಂತ್, ಏಳಿಂಜೆ, ಮಂಗಳೂರು, ವಿಜಯಲಕ್ಷ್ಮಿ, ಅಶೋಕ ಬಸವ ತೆಲಂಗಾಣ ಹೈದರಾಬಾದ್ ಅವರುಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸುವರು.

ಸಮ್ಮೇಳನವು ನಮ್ಮ ಕುಡ್ಲ ವಾಹಿನಿ, ಪರಿಷತ್ತಿನ ಫೇಸ್ಬುಕ್ ಪುಟ, ಹಾಗೂ ಯೂ ಟ್ಯೂಬ್ ವಾಹಿನಿಗಳಲ್ಲಿ ನೇರಪ್ರಸಾರ ಆಗಲಿದೆಯೆಂದು ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್  ತಿಳಿಸಿದ್ದಾರೆ..

Click to comment

Leave a Reply

Your email address will not be published. Required fields are marked *

DAKSHINA KANNADA

ತ್ರಿಶೂರ್ ಪೂರಂ..! ದೇಶದ ಹೆಮ್ಮೆಯ ಉತ್ಸವ..!

Published

on

ವಿವಿಧತೆಯಲ್ಲಿ ಏಕತೆ ಕಾಣುವ ನಮ್ಮ ದೇಶ ಹಲವು ಸಂಸ್ಕೃತಿ, ಕಲೆ, ಆಚರಣೆ, ಭಾಷೆ, ಜಾತಿ, ಧರ್ಮದ ಮೂಲಕ ವಿಶ್ವದ ಗಮನ ಸೆಳೆದಿದೆ. ದಿಪಾವಳಿ, ಹೋಳಿ, ಈದ್ , ಕ್ರಿಸ್ಮಸ್‌, ಹೀಗೆ ಹಲವು ಹಬ್ಬಗಳು ರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಆದ್ರೆ, ಇನ್ನೂ ಕೆಲವು ಹಬ್ಬಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ. ಅದರಲ್ಲಿ ವಿಶೇಷ ಹಬ್ಬವಾಗಿ ಕೇರಳದಲ್ಲಿ ಆಚರಿಸುವ ತ್ರಿಶೂರ್ ಪೂರಂ ಸದ್ಯ ಏಷ್ಯಾದಲ್ಲೇ ಅತೀ ಹೆಚ್ಚು ಜನರು ಭಾಗವಹಿಸುವ ಉತ್ಸವವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಏನಿದು ತ್ರಿಶೂರ್ ಪೂರಂ ಹಬ್ಬ

ತ್ರಿಶೂರ್ ಪೂರಂ ಅನ್ನೋದು ತ್ರಿಶೂರಿನ ಶಿವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ. ಮಲೆಯಾಳಂ ಕ್ಯಾಲೆಂಡರ್ ಪ್ರಕಾರ ಪೂರಂ ನಕ್ಷತ್ರದಲ್ಲಿ ಚಂದ್ರೋದಯದ ವೇಳೆಯಲ್ಲಿ ನಡೆಯುವ ಉತ್ಸವ ಇದು. ತ್ರಿಶೂರ್ ನಲ್ಲಿರೋ ವಡಕ್ಕುನಾಥನ್‌ ಅರ್ಥಾತ್ ಶಿವ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಇದು. ಆನೆಗಳ ಮೂಲಕ ದೇವರನ್ನು ಹೊತ್ತುಕೊಂಡು ದೇವಸ್ಥಾನದ ಬಾಗಿಲು ಪ್ರವೇಶ ಮಾಡೋದು ಈ ಉತ್ಸವದ ವಿಶೇಷ. ಹೀಗಾಗಿ  ಸಾವಿರಾರು ವಿದೇಶಿಗರು ಉತ್ಸವ ನೋಡಲು ಆಗಮಿಸ್ತಾರೆ ಅನ್ನೋದೇ ವಿಶೇಷ.

ತ್ರಿಶೂರ್ ಪೂರಂ ಹಬ್ಬದ ಹಿನ್ನೆಲೆ

ರಾಮವರ್ಮ ಕುಂಞಿಪಿಳ್ಳೆ ಎಂಬ ಕೊಚ್ಚಿನ್ ಮಹಾರಾಜ 17 ನೇ ಶತಮಾನದಲ್ಲಿ ಅರುಟ್ಟುಪುಳ ಪೂರಂ ಎಂಬ ಉತ್ಸವವನ್ನು ನಡೆಸಿಕೊಂಡು ಬಂದಿದ್ದರು. ಅರುಟ್ಟುಪುಳ ಪೂರಂ ಎಂಬ ಒಂದು ದಿನದ ಉತ್ಸವಕ್ಕೆ ತ್ರಿಶೂರು ಸೇರಿದಂತೆ ಸುತ್ತಮುತ್ತಲಿನ ದೇವಸ್ತಾನಗಳು ಇದರಲ್ಲಿ ಭಾಗಿ ಆಗುತ್ತಿದ್ದವು. 1796 ರಲ್ಲಿ ಮಳೆಯ ಕಾರಣಿದಿಂದ ತ್ರಿಶೂರ್‌ನಿಂದ ಹೊರಟಿದ್ದ ದೇವಾಲಯ ತಂಡಗಳಿಗೆ ಅರುಟ್ಟುಪುಳ ಪೂರಂ ಉತ್ಸವದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡಿದ್ದ ತ್ರಿಶೂರಿನ ರಾಜ ಶಕ್ತನ್ 1796 ರಲ್ಲೇ ತ್ರಿಶೂರಿನಲ್ಲೇ ಈ ಪೂರಂ ಉತ್ಸವ ಆರಂಭಿಸಿದ್ರು ಅನ್ನೋ ಐತಿಹಾಸಿಕ ಕಥೆ ಇದೆ. ಅಂದಿನಿಂದ ತ್ರಿಶೂರಿನ ಹತ್ತು ದೇವಾಲಯಗಳು ಒಟ್ಟಾಗಿ ತ್ರಿಶೂರ್ ಪೂರಂ ಆಚರಿಸಲು ಆರಂಭವಾಯ್ತು ಅನ್ನೋ ದಾಖಲೆಗಳು ಸಿಗುತ್ತದೆ.

ಧರ್ಮಾತೀತವಾಗಿ ನಡೆಯುವ ಪೂರಂ ಉತ್ಸವ

ತ್ರಿಶೂರ್ ಪೂರಂ ಅಂದ ತಕ್ಷಣ ನೆನಪಾಗುವುದು ಅಲ್ಲಿ ಕಾಣಸಿಗುವ ಸರ್ವಧರ್ಮ ಸಮನ್ವಯತೆ. ಇಂತಹ ದೃಶ್ಯ  ಬಹುಶಃ  ದೇಶದ ಬೇರೆಲ್ಲೂ ಕಾಣಲು ಸಿಗಲಾರದು. ತ್ರಿಶೂರ್ ಪೂರಂ ಉತ್ಸವದಲ್ಲಿ ಪ್ರತಿ ವರ್ಷ ಹೊಸ ಕೊಡೆಗಳನ್ನು ತಯಾರಿಸಲಾಗುತ್ತದೆ. ಕುಡವಟ್ಟಂ ಎಂದು ಕರೆಯುವ ಈ ಕೊಡೆಗಳ ವಿಶೇಷ ಆಕರ್ಷಣೆಗೆ ಕ್ರೈಸ್ತ ಸಮೂದಾಯದವರ ಕೊಡುಗೆ ಇದ್ರೆ, ಪೂರಂಗೆ ಬೇಕಾದ ಪೆಂಡಾಲ್ ಹಾಕೋದು ಇಲ್ಲಿನ ಮುಸ್ಲಿಂ ಸಮೂದಾಯದವರು. ಇನ್ನು ಉತ್ಸವ ನೋಡಲು ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಧರ್ಮದವರೂ ಆಗಮಿಸುವುದು ಇಲ್ಲಿನ ವಿಶೇಷ. ಇದೇ ಕಾರಣಕ್ಕೆ ಈ ತ್ರಿಶೂರ್ ಪೂರಂ ಇಂದು ಜಗತ್ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ತ್ರಿಶೂರ್ ಪೂರಂ ಹಬ್ಬ ಹೇಗೆ ನಡೆಯುತ್ತದೆ

ತ್ರಿಶೂರು ಹಾಗೂ ಸುತ್ತಮುತ್ತಲಿನ ಹತ್ತು ದೇವಲಾಯಗಳಿಂದ ಆನೆಯ ಮೂಲಕ ದೇವರನ್ನು ಹೊತ್ತು ಶಿವ ದೇವಾಲಯಕ್ಕೆ ತರಲಾಗುತ್ತದೆ. ಒಂದೊಂದು ದೇವಸ್ಥಾನದಿಂದ ದೇವರನ್ನು ಹೊತ್ತು ಬಾಗಿಲು ದಾಟಿ ಬರುವ ಆನೆಗಳನ್ನು ನೋಡಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುತ್ತಾರೆ. ಈ ವೇಳೆ ಮೊಳಗುವ ಪಂಚ ವಾದ್ಯಗಳನ್ನು ಕೇಳಲೆಂದೇ ಕೆಲವರು ಬರುವುದಿದೆ. ಕಣಿಮಂಗಲಂ ಶಾಸ್ತಾವು ದೇವಾಲಯದಿಂದ ಆರಂಭವಾಗುವ ಈ ಉತ್ಸವ ಬಳಿಕ ಒಂದೊಂದೆ ದೇವಸ್ಥಾನದಿಂದ ಬರಲು ಆರಂಭವಾಗುತ್ತದೆ. ಚಂಡೆ, ಮದ್ದಳೆ, ಕಹಳೆ,ತಾಳ ಹಾಗೂ ಎಡಕ್ಕ ಹೀಗೆ ಪಂಚವಾದ್ಯದ ಮೆರವಣಿಗೆ ನಡೆಯುತ್ತದೆ. ಹತ್ತು ಆನೆಗಳು ದೇವಾಲಯದ ಮುಂದೆ ನಿಂತಿದ್ದರೆ , ಐವತ್ತಕ್ಕೂ ಹೆಚ್ಚು ಆನೆಗಳು ಉತ್ಸವದಲ್ಲಿ ಭಾಗಿಯಾಗುತ್ತದೆ. ಚಿನ್ನದ ಹಣೆಪಟ್ಟಿ, ಚಿನ್ನದ ಪ್ರಭಾವಳಿಯನ್ನು ಹಿಡಿದು , ಪಾರೆಮೆಕ್ಕಾವು ಮತ್ತು ತಿರುವಂಬಾಡಿ ಎಂಬ ಎರಡು ತಂಡಗಳು ಪೂರಂ ನಡೆಯುವ ಸ್ಥಳದಲ್ಲಿ ಮುಖಾಮುಖಿಯಾಗಿ ನಿಂತು ಛತ್ರಿ ವಿನಿಯಮ ಮಾಡಿಕೊಳ್ಳುವ ದೃಶ್ಯ ಪೂರಂನಲ್ಲಿ ವಿಶೇಷ ಅನುಭವ ನೀಡುವ ದೃಶ್ಯ ಕೂಡಾ ಹೌದು. ಕುಡಮಟ್ಟಂ ಅಂತ ಇದನ್ನು ಕರೆಯಲಾಗುತ್ತಿದ್ದು ಶಿವದೇವಲಾಯದ ಪಶ್ಚಿಮ ಗೋಪುರದ ಬಳಿ ಇದು ಸಂಪನ್ನಗೊಳ್ಳುತ್ತದೆ.

 

Continue Reading

DAKSHINA KANNADA

MANGALURU : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟು; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿ ಅನಾಹುತ

Published

on

ಮಂಗಳೂರು : ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಕಾರಿಗೆ ಪೆಟ್ರೋಲ್ ತುಂಬಿಸುವ ಬದಲು ಡೀಸೆಲ್ ತುಂಬಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪರಿಣಾಮ ಕಾರು ಇಂಜಿನ್ ಸಂಪೂರ್ಣ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಕಾರು ಮಾಲಕ ಆರೋಪಿಸಿದ್ದಾರೆ.

ಹೊಟೇಲ್ ಉದ್ಯಮಿ ಜೀವನ್ ಶೆಟ್ಟಿ ಎಂಬವರು ತಮ್ಮ ಹುಂಡೈ ಐ 10 ಗ್ರ್ಯಾಂಡ್ ಕಾರ್ ಗೆ ಪೆಟ್ರೋಲ್ ತುಂಬಿಸುವ ಸಲುವಾಗಿ, ಎಪ್ರಿಲ್ 5 ರಂದು ಮಧ್ಯಾಹ್ನ 12 ರ ಸುಮಾರಿಗೆ ಬಲ್ಮಠದ ಜ್ಯೂಸ್ ಜಂಕ್ಷನ್ ಮುಂಭಾಗದ ಹೆಚ್ ಪಿ ಪೆಟ್ರೋಲ್ ಬಂಕ್ ಗೆ ಬಂದಿದ್ದರು. ಕ್ಯಾಪ್ ಮೇಲೆ ಪೆಟ್ರೋಲ್ ಎಂದು ಬರೆದಿದ್ದರೂ, ಸಿಬ್ಬಂದಿ ಮಾತ್ರ ಕಾರಿಗೆ ಡೀಸೆಲ್ ತುಂಬಿಸಿದ್ದಾರೆ.

 

ಪರಿಣಾಮ ಕಾರು ಕೆಲವೇ ಕಿಲೋ ಮೀಟರ್ ಸಂಚರಿಸಿ ಮುಂದಕ್ಕೆ ಹೋಗದೆ ನಿಂತಿದೆ. ಪರಿಶೀಲಿಸಿದಾಗ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ತುಂಬಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪೆಟ್ರೋಲ್ ಬಂಕ್ ಮ್ಯಾನೇಜರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರು ಇಂಜಿನ್ ದುರಸ್ಥಿಗೆ 2 ಲಕ್ಷಕ್ಕೂ ಅಧಿಕ ಖರ್ಚು ಆಗಲಿದೆ. ಆದರೆ, ಪೆಟ್ರೋಲ್ ಬಂಕ್ ಮಾಲಕ ಬರೀ 30 ಸಾವಿರ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಜೀವನ್ ಶೆಟ್ಟಿ ದೂರಿದ್ದಾರೆ. ಕಡಿಮೆ ಸಂಬಳಕ್ಕೆ ಅನುಭವವಿಲ್ಲದ ಕಾರ್ಮಿಕರನ್ನು ನೇಮಿಸುತ್ತಾರೆ. ಇಂತಹ ಸಮಸ್ಯೆಯಾದಾಗ ತಮ್ಮ ಇನ್ಶೂರೆನ್ಸ್ ನಲ್ಲಿ ಪರಿಹಾರ ನೀಡುವ ಅವಕಾಶವಿದ್ದರೂ ಬಂಕ್ ಮಾಲಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ತಾನು ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವುದಾಗಿ ಜೀವನ್ ಶೆಟ್ಟಿ ಹೇಳಿದ್ದಾರೆ.

Continue Reading

DAKSHINA KANNADA

ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್‌..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು

Published

on

ಉಳ್ಳಾಲ: ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಸ್ಟಾಲ್ ಒಂದರಲ್ಲಿ ಆಕಸ್ಮಿ*ಕ ಬೆಂಕಿಯಿಂದಾಗಿ ಸ್ಟಾಲ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಉಳ್ಳಾಲದ ದೇರಳಕಟ್ಟೆಯಲ್ಲಿ ನಡೆದಿದೆ.

sweet corn burn

ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ರಸ್ತೆಯ ಬದಿಯಲ್ಲೇ ಇರಿಸಲಾಗಿದ್ದ ಸ್ವೀಟ್ ಕಾರ್ನ್ ಅಂಗಡಿ ಮಾಲೀಕ ಕಾರ್ನ್ ತಯಾರಿಸುವಾಗ ಈ ಅವಘಡ ಸಂಭವಿಸಿದೆ. ತಕ್ಷಣ ಅಂಗಡಿ ಮಾಲೀಕ ಹಾಗೂ ಸ್ವೀಟ್ ಕಾರ್ನ ತಿನ್ನಲು ಬಂದಿದ್ದ ಗ್ರಾಹಕರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಮರಳು ಹಾಗೂ ನೀರನ್ನ ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಸ್ಟಾಲ್ ಉರಿದು ಭಸ್ಮವಾಗಿ ಹೋಗಿದೆ.

Read More..; ಬೆಂಕಿ ಹಚ್ಚಿ ಯುವತಿಯ ಬರ್ಬ*ರ ಹ*ತ್ಯೆ..!! ಕತ್ತು ಕೊಯ್ದು ಸು*ಟ್ಟು ಹಾಕಿರುವ ಶಂಕೆ

sweet corn burn 2

Continue Reading

LATEST NEWS

Trending