Connect with us

    LATEST NEWS

    ನಿಮ್ಮ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಪರಿವರ್ತಿಸಬಹುದು.. ಹೇಗೆ ಗೊತ್ತಾ..?

    Published

    on

    ಭಾರತವು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ ಅನೇಕ ಸ್ಟಾರ್ಟ್​​ಅಪ್​​ಗಳು ಭಾರತದಲ್ಲಿ ಹುಟ್ಟಿಕೊಂಡು ವಿವಿಧ ವೈಶಿಷ್ಟ್ಯತೆಗಳುಳ್ಳ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ. ಮಾತ್ರವಲ್ಲದೆ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇತ್ತ ಕರ್ನಾಟಕದಲ್ಲೂ, ಅದರಲ್ಲೂ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಅತ್ತ ಪೆಟ್ರೋಲ್​, ಡೀಸೆಲ್​ ವಾಹನಗಳು ಮೂಲೆ ಸರಿಯುತ್ತಿವೆ.

    ಇದರ ನಡುವೆ ಅನೇಕರಿಗೆ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಬೇಕೆಂಬ ಹಂಬಲವಿದೆ. ಆದರೆ ಸ್ಕೂಟರ್​ಗಳ ಕೈಗೆಟಕದ ಬೆಲೆಯಿಂದಾಗಿ ಹಿಂದೆ ಸರಿಯುತ್ತಿದ್ದಾರೆ. ಆದರೀಗ ಅಂತವರಿಗಾಗಿ ಇಂಧನ ಬಳಕೆಯ ಸ್ಕೂಟರ್​​ಗಳನ್ನೇ ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುವ ಅವಕಾಶವನ್ನು ಬೆಂಗಳೂರು ಮೂಲದ ಸ್ಟಾರ್ಟ್​ಅಪ್​ ತೆರೆದಿಟ್ಟಿದೆ. ಆ ಮೂಲಕ ಎಲೆಕ್ಟ್ರಿಕ್ ಸ್ಕೂಟರ್​​ ಖರೀದಿಸಲಾಗದವರು ತಮ್ಮ ಇಂಧನ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿಸಬಹುದಾಗಿದೆ.

    ಸ್ಟಾರ್ಯಾ ಎಂಬ ಕಂಪನಿ ಇಂಧನ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ. ಅಂದಹಾಗೆಯೇ ಬೆಂಗಳೂರು ಮೂಲದ ಈ ಕಂಪನಿ 2018 ಜುಲೈ ತಿಂಗಳಲ್ಲಿ ಪ್ರಾರಂಭಗೊಂಡಿದೆ. CEO ರವಿಕುಮಾರ್​ ಜಗನ್ನಾಥ್​ ಇದನ್ನು ಮುನ್ನಡೆಸುತ್ತಿದ್ದಾರೆ.

    ಸ್ಟಾರ್ಯಾ ಸ್ವದೇಶಿ ಎಲೆಕ್ಟ್ರಿಕ್ ಪ್ರೊಪಲ್ಷನ್​​ ರೆಟ್ರೋಫಿಟ್​ ಕಿಟ್​ ಬಳಸಿ ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ. ಇದರ ಮೂಲಕ ಸ್ಕೂಟರ್​​ ಗರಿಷ್ಠ 6-6.5 ಕಿಲೋ ವ್ಯಾಟ್​​ ಶಕ್ತಿಯನ್ನು ಉತ್ಪಾದಿಸುತ್ತದೆ. ಗಂಟೆಗೆ ಸ್ಕೂಟರ್​​ 85 ಕಿಲೋ ಮೀಟರ್​ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

    ಸ್ಟಾರ್ಯಾ ಪರಿವರ್ತಿತ ಎಲೆಕ್ಟ್ರಿಕ್​ ಸ್ಕೂಟರ್​ ಮೂಲಕ 185 ನ್ಯೂಟನ್​​ ಮೀಟರ್​​ಗಳ ಟಾರ್ಕ್​ ಪಡೆಯಬಹುದಾಗಿದೆ. ಇದರಲ್ಲಿ 51 ವೋಲ್ಟ್​ಗಳ ಬ್ಯಾಟರಿಯನ್ನು ಬಳಸಲಾಗುತ್ತಿದೆ. ಸಮತಟ್ಟಾದ ರಸ್ತೆಯಲ್ಲಿ ಗಂಟೆಗೆ 85 ಕಿಲೋ ಮೀಟರ್​​ ವೇಗದಲ್ಲಿ ಚಲಿಸಬಹುದಾಗಿದೆ.

    ಅಂದಹಾಗೆಯೇ ಸ್ಟಾರ್ಯಾ ತಂತ್ರಜ್ಞಾನ ವಿಚಾರದಲ್ಲಿ 4 ಪೇಟೆಂಟ್​​ ಪಡೆದಿದೆ. ಸ್ಕೂಟರ್​​ ಸವಾರಿಯ ಇತಿಹಾಸ, ಮೈಲೇಜ್​, ಪವರ್​ ಮುಂತಾದ ಮಾಹಿತಿಯನ್ನು ಟ್ರ್ಯಾಕ್​ ಮಾಡುವ ಅಪ್ಲಿಕೇಷನ್ಸ್ ಅಭಿವೃದ್ಧಿ ಪಡಿಸಿದೆ.

    ಇನ್ನು ಸ್ಟಾರ್ಯಾ ಕಂಪನಿಯ ಕಾರ್ಯವನ್ನು ಆಟೋಮೋಟಿವ್​ ರಿಸರ್ಚ್​ ಆಸೋಸಿಯೇಷನ್​ ಆಫ್​ ಇಂಡಿಯಾ ಅನುಮೋದಿಸಿದೆ. ಹಳೆಯ ಬಜಾಜ್​​ ಚೇತಕ್​, ಹೋಂಡಾ ಕೈನೆಟಿಕ್​​ನಂತಹ ವಾಹನಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ.

    ಗ್ರಾಹಕರು ತಮ್ಮ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಮಾರ್ಪಡಿಸಲು 90 ಸಾವಿರ ಖರ್ಚು ಮಾಡಬೇಕಿದೆ. ಅಥವಾ ಶೇ.40ರಷ್ಟು ಹಣವನ್ನು ಪಾವತಿಸಿ ಕೂಡ ಎಲೆಕ್ಟ್ರಿಕ್​ ವಾಹನವನ್ನಾಗಿ ಪರಿವರ್ತಿಸುವ ಆಯ್ಕೆಯನ್ನು ನೀಡಿದೆ.

    FILM

    ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ

    Published

    on

    ಬೆಂಗಳೂರು : ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.

    ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ
    ಬೆಂಗಳೂರಿನ ಆರ್​ ಆರ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಸಾವನ್ನಪಿದ್ದಾರೆ.

    ‘ಮನಸಾಲಜಿ’, ‘ಶುಗರ್​ ಫ್ಯಾಕ್ಟರಿ’ ಸಿನಿಮಾಗಳಿಗೆ ದೀಪಕ್ ನಿರ್ದೇಶನ ಮಾಡಿದ್ದರು. ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ.

    Continue Reading

    LATEST NEWS

    ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಹೆಸರು ಶಿಫಾರಸು..!

    Published

    on

    ನವದೆಹಲಿ : ನವೆಂಬರ್ 8 ರಂದು ನಿವೃತ್ತಿಯಾಗಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್‌ ಡಿವೈ ಚಂದ್ರಚೂಡ್‌ ಅವರು ತಮ್ಮ ಉತ್ತರಾಧಿಕಾರಿಯಾಗಿ ಹಿರಿಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ನೇಮಮಿಸುವಂತೆ ಶಿಫಾರಸು ಮಾಡಿದ್ದಾರೆ. ಡಿವೈ ಚಂದ್ರಚೂಡ್ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಮೆಮೊರಾಂಡಮ್ ಆಫ್‌ ಪ್ರೊಸೀಜರ್ ಪ್ರಕಾರ ಶಿಫಾರಸು ಕಳುಹಿಸುವಂತೆ ಸರ್ಕಾರ, ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿತ್ತು. ಡಿವೈ ಚಂದ್ರಚೂಡ್‌ ಅವರ ಶಿಫಾರಸನ್ನು ಸರ್ಕಾರ ಅನುಮೋದಿಸಿದ ಬಳಿಕ ನ್ಯಾಯಮೂರ್ತಿ ಸಂಜೀನ್ ಖನ್ನಾ ಅವರು ಭಾರತ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಲಿದ್ದಾರೆ. ಖನ್ನಾ ಅವರಿಗೆ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲು ಕೇವಲ ಆರು ತಿಂಗಳ ಅವಕಾಶ ಮಾತ್ರ ದೊರೆತಿದ್ದು ಅವರು 2025 ಮೇ 13 ರಂದು ನಿವೃತ್ತಿಯಾಗಲಿದ್ದಾರೆ.


    ಸಂಜೀವ್ ಖನ್ನಾ ಅವರ ವೃತ್ತಿ ಜೀವನ :

    1983 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ ಮೂಲಕ ವಕೀಲ ವೃತ್ತಿ ಆರಂಭಿಸಿದ್ದ ಖನ್ನಾ ಬಳಿಕ ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ವಕೀಲ ವೃತ್ತಿಯನ್ನು ಮುಂದುವರೆಸಿದ್ದಾರೆ. ಬಳಿಕ ದೆಹಲಿ ಹೈಕೋರ್ಟ್‌ನಲ್ಲಿ ವಿವಿಧ ನ್ಯಾಯಮಂಡಳಿಗಳಲ್ಲಿ ಅವರು ತಮ್ಮ ಸೇವೆಯನ್ನು ನೀಡಿದ್ದಾರೆ.

    2005 ರಲ್ಲಿ ದೆಯಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಬಳಿಕ ಖಾಯಂ ನ್ಯಾಯಾಧೀಶರಾಗಿದ್ದರು. ತಮ್ಮ ಅಧಿಕಾರವಧಿಯಲ್ಲಿ ದೆಹಲಿ ನ್ಯಾಯಾಂಗ ಅಕಾಡೆಮಿ,,ದೆಹಲಿ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳು ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಅಧ್ಯಕ್ಷ ಮತ್ತು ನ್ಯಾಯಾಧೀಶರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಜನವರಿ 18, 2019 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಖನ್ನಾ ಅವರು ಅಧಿಕಾರ ವಹಿಸಿಕೊಂಡಿದ್ದರು.

    ನ್ಯಾಯಮೂರ್ತಿಯಾಗಿ ನೀಡಿದ ಪ್ರಮುಖ ತೀರ್ಪುಗಳು :

    * ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಇತ್ತೀಚೆಗೆ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಘೋಷಣೆ ಮಾಡಿದ ಪಂಚಪೀಠದ ಭಾಗವಾಗಿದ್ದರು. ಅನಾಮಧೇಯ ದೇಣಿಗೆಗಳು ಸಾರ್ವಜನಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಈ ಪೀಠ ಅಭಿಪ್ರಾಯಪಟ್ಟಿತ್ತು.

    * ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370ರ ರದ್ಧತಿಯನ್ನು ಎತ್ತಿಹಿಡಿದ ಖನ್ನಾ ಅದು ಜಮ್ಮು ಮತ್ತು ಕಾಶ್ಮೀರಕ್ಕೆ ಸಾರ್ವಭೌಮತ್ವನ್ನು ನೀಡುವುದಿಲ್ಲ ಎಂದು ಹೇಳಿದ್ದರು.

     

    Continue Reading

    LATEST NEWS

    ‘ಐ ಲವ್ ಯು’ ಹೇಳುವ ಬದಲು ಜಸ್ಟ್ ಹೀಗೆ ಮಾಡಿ ಸಾಕು …. ಸಂಗಾತಿ ಫುಲ್ ಫಿದಾ !!

    Published

    on

    ಮಂಗಳೂರು : ಈಗಿನ ಕಾಲದಲ್ಲಿ ಟೈಮ್ ಪಾಸ್‌ಗಾಗಿಯೇ ಲವ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಎಲ್ಲರ ಮುಂದೆ ಐ ಲವ್ ಯು ಹೇಳಿದರೆ ಅಥವಾ ದಿನಕ್ಕೆ ನೂರಾರು ಸಲ ಐ ಲವ್ ಯು ಎಂದು ಹೇಳಿದರೆ ಪ್ರೀತಿಯಿದೆ ಎಂದು ಸಾಬಿತಾಗುವಂತೆ ಮಾಡುತ್ತಾರೆ.ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ, ನಿಜವಾದ ಪ್ರೀತಿಗೆ ಕೊನೆಯಿಲ್ಲ. ಪದೇ ಪದೆ ಪ್ರೇಮಿಗೆ ಅಥವಾ ಸಂಗಾತಿಗೆ ಐ ಲವ್ ಯು ಎಂದು ಹೇಳಲು ಸಂಕೋಚವಾಗುತ್ತಿದ್ದರೆ ಈ ರೀತಿಯಾಗಿ ಪ್ರೀತಿ ವ್ಯಕ್ತಪಡಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.


    ಪ್ರೀತಿ ಎಂಬುವುದು ಮಧುರವಾದ ಭಾವನೆ. ಆದರೆ ಈಗಿನ ಕಾಲದಲ್ಲಿ ಪರಿಶುದ್ಧವಾಗಿ ಪ್ರೀತಿಸೋರು ಸಿಗೋದು ಕಷ್ಟ. ಪ್ರೀತಿಗೆ ಗ್ಯಾರಂಟಿಯೇ ಇರುವುದಿಲ್ಲ. ಪ್ರೀತಿಸುತ್ತೇನೆ ಎಂದು ಹೇಳುವ ಬದಲು ಈ ಟ್ರಿಕ್ಸ್ ಬಳಸಿ ಪ್ರೀತಿ ವ್ಯಕ್ತಪಡಿಸಬಹುದು.

    ಸಂಗಾತಿಯ ಪುಟ್ಟ ಪುಟ್ಟ ವಿಷಯಕ್ಕೂ ಆಧ್ಯತೆ ನೀಡಿ :
    ಪ್ರೇಮ ಸಂಬಂಧದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಮಾಡುವ ದೊಡ್ಡ ತಪ್ಪುಗಳಲ್ಲಿ ಇದು ಒಂದು. ನಮ್ಮವರು ಎನ್ನಿಸಿಕೊಂಡವರ ಸಣ್ಣ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು. ಆದರೆ ಪ್ರಾರಂಭದಲ್ಲಿ ಇದೇನು ಇಷ್ಟು ಸಣ್ಣ ವಿಷಯವೆಂದೆನಿಸಬಹುದು. ಆದರೆ ಈ ಸಣ್ಣಸಣ್ಣ ವಿಷಯಗಳೇ ಇಬ್ಬರೂ ವ್ಯಕ್ತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ಸಂಗಾತಿಯ ಸಣ್ಣ ಪುಟ್ಟ ವಿಷಯಗಳತ್ತ ಹೆಚ್ಚು ಗಮನ ಕೊಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಬಹುದು.

    ಸದಾ ಪ್ರೀತಿಯ ಅಪ್ಪುಗೆಯಿರಲಿ :
    ಸಂಗಾತಿಗಳಿಬ್ಬರೂ ಐಲವ್ ಯು ಎಂದು ಹೇಳಲೇ ಬೇಕೆಂದೇನಿಲ್ಲ. ಆದರೆ ದೀರ್ಘವಾದ ಅಪ್ಪುಗೆಯು ಕೂಡ ಪ್ರೀತಿಯಿದೆ ಎನ್ನುವುದನ್ನು ವ್ಯಕ್ತಪಡಿಸುತ್ತದೆ. ಸಂಗಾತಿಯ ಮಾತು ಕೇಳುವಾಗ ಅಪ್ಪುಗೆಯನ್ನು ನೀಡಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.

    ಸಂಗಾತಿಗಾಗಿ ಸಮಯ ಮೀಸಲಿಡಿ :
    ಯಾವುದೇ ಸಂಬಂಧವಿರಲಿ ಸಮಯಕ್ಕಿಂತ ಮತ್ತೊಂದು ಅಮೂಲ್ಯವಾದ ವಸ್ತುವಿಲ್ಲ. ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಲ್ಲಿ ಸಮಯ ನೀಡುವುದು ಕೂಡ ಒಂದು. ಇಬ್ಬರೂ ಜೊತೆಯಾಗಿ ಕಾಲ ಕಳೆಯಬೇಕು. ಸಂಗಾತಿಯ ಬೇಕು ಬೇಡಗಳ ಬಗ್ಗೆ ಸ್ಪಷ್ಟತೆಯಿರಬೇಕು.

    ಮಚ್ಚುಗೆ ವ್ಯಕ್ತಪಡಿಸುತ್ತಿರಿ :
    ಸಂಗಾತಿಗಳಿಬ್ಬರೂ ಐಲವ್ ಯು ಹೇಳದೇನೇ ಮೆಚ್ಚುಗೆಯ ಮಾತುಗಳಿಂದ ಒಬ್ಬರು ಇನ್ನೊಬ್ಬರ ಮನಸ್ಸನ್ನು ಗೆಲ್ಲಬಹುದು. ನಿಮ್ಮವರು ಯಾವುದೇ ಕೆಲಸವು ನನ್ನ ಕೈಯಲ್ಲಿ ಆಗುವುದಲ್ಲ ಎಂದು ಕುಳಿತಿದ್ದಾಗ ಅವರಿಗೆ ಧೈರ್ಯ ತುಂಬಿ ಆ ಕೆಲಸದಲ್ಲಿ ತೊಡಗಿ ಕೊಳ್ಳುತ್ತವೆ. ನಮ್ಮ ಮಾತು ನಮ್ಮವರ ಮೇಲೆ ಎಷ್ಟು ಪ್ರೀತಿಯಿದೆ ಎನ್ನುವುದನ್ನು ಅರ್ಥ ಮಾಡಿಸುತ್ತದೆ.

    Continue Reading

    LATEST NEWS

    Trending