BANTWAL
ಅಶಕ್ತರ- ನೊಂದವರ ಬಾಳಿಗೆ ಬೆಳಕಾಗಿ ಮಾದರಿಯಾದ ‘ಶ್ರೀದೇವಿ ಟೈಗರ್ಸ್ ಕಲ್ಲೇಗ’
ಪುತ್ತೂರು : ಮೋಜಿಗಾಗಿ ವೇಷಗಳನ್ನು ಹಾಕಿ ಹಣ ಸಂಗ್ರಹಣೆ ಮಾಡುವರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಒಂದು ಒಳ್ಳೇಯ ಸದುದ್ದೇಶವನ್ನು ಇಟ್ಟುಕೊಂಡು ಮಾಡುವವರು ಈ ಸಮಾಜದಲ್ಲಿದ್ದಾರೆ. ಇದರಲ್ಲಿ ಶ್ರೀದೇವಿ ಟೈಗರ್ಸ್ ಕಲ್ಲೇಗ ತಂಡವು ಒಂದಾಗಿದೆ.
ದಕ್ಷಿಣ ಕನ್ನಡ ಪುಣಚ ಗ್ರಾಮದ ತೋರಣಕಟ್ಟೆ ಚಂದ್ರಾವತಿ ಟಿ ತೀರ ಬಡತನದಲ್ಲಿರುವ ಇವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ ಒಬ್ಬ ಮಗನನ್ನು ಹೊಂದಿರುವ ಚಂದ್ರಾವತಿ ಅವರ ಮಗ ಹೋಟೆಲ್ನಲ್ಲಿ ಕಾರ್ಮಿಕ ವೃತ್ತಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಇವರ ಚಿಕತ್ಸೆಗೆ ಶ್ರೀ ದೇವಿ ಟೈಗರ್ಸ್ ಕಲ್ಲೇಗ ತಂಡವು ನೆರವಾಗಿದೆ.
ನೆಲ್ಲಿಗುಡ್ಡೆ ನವನಗರ ವಿಟ್ಲ ಕಸಬ ಗ್ರಾಮದ ಒಂದು ಮನೆಗೆ ಭೇಟಿ ನೀಡಿದ ಶ್ರೀದೇವಿ ಟೈಗರ್ಸ್ ಕಲ್ಲೇಗ ತಂಡ ಅವರ ಸಮಸ್ಯೆಯನ್ನು ತಿಳಿದು ಅವರ ಮಗಳ ಶಿಕ್ಷಣಕ್ಕೆ ನೆರವಾಗಿದೆ.
ಪುತ್ತೂರಿನ ಸೇಡ್ಯಾಪು ಬನ್ನೂರು ಗ್ರಾಮದ 13 ವರ್ಷದ ಕೃತಿ ಇವರು ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದು ಸೊಂಟದ ಕೆಳಗೆ ಬಲ ಕಳೆದುಕೊಂಡಿದ್ದು ಈಕೆಗೂ ತಂಡ ಆರ್ಥಿಕ ಸಹಕಾರ ನೀಡಿದೆ.
ಹವ್ಯಾಸಿ ಕಲಾವಿದರಾದ ಯೋಗೀಶ್ ಕರ್ಮಲ ಇವರ ಪುತ್ರ 2 ವರ್ಷ ವಯಸ್ಸಿನ ಗೌರವ್ ಲ್ ಸಿ ಹೆಚ್ ಎಂಬ ಅಪರೂಪದ ಚರ್ಮ ರೋಗಕ್ಕೆ ತುತ್ತಾಗಿದ್ದಾರೆ ಈ ಪುಟ್ಟ ಕಂದಮ್ಮನ ನೆರವಿಗೂ ಶ್ರೀದೇವಿ ಟೈಗರ್ಸ್ ಕಲ್ಲೇಗ ತಂಡ ಧಾವಿಸಿದೆ.
ಪ್ರತಿದಿನ 250 ಕ್ಕೂ ಅಧಿಕ ಶ್ವಾನಗಳ ಹಸಿವು ನೀಗಿಸುತ್ತಿರುವ ಹಾಗೆಯೇ 40 ಶ್ವಾನಗಳನ್ನು ಮನೆಯಲ್ಲೇ ಸಾಕುತ್ತಿರುವ ಮಂಗಳೂರುಇ ಬಳ್ಳಾಲ್ ಭಾಗ್ನ ರಜನಿ ಶೆಟ್ಟಿಯ ಧರ್ಮ ದಾರಿಗೂ ಶ್ರೀದೇವಿ ಟೈಗರ್ಸ್ ಕಲ್ಲೇಗ ಕೈ ಜೋಡಿಸಿದೆ.
2022 ರಲ್ಲಿ ಪ್ರಥಮ ವರ್ಷದ ಹುಲಿವೇಷ ಪ್ರಾರಂಭಿಸಿರುವ ಈ ಯುವಕರ ತಂಡ ಒಂದು ಒಳ್ಳೆ ಉದ್ದೇಶದ ಚಿಂತನೆ ಅಳವಡಿಸಿಕೊಂಡು ಇತರರಿಗೆ ದಾರಿದೀಪವಾಗಿದೆ. ಸಮಾಜದಲ್ಲಿ ಅಸಹಾಯಕರಿಗೆ ನೆರವು ನೀಡುವುದು ಹಾಗೆ ಕಡುಬಡವರ ಕಲಿವ ಮಕ್ಕಳಿಗೆ ನೆರವಾಗುವುದು ಈ ತಂಡದ ಮೂಲ ಉದ್ದೇಶವಾಗಿದೆ. ಈ ಬಾರಿ 35 ಹುಲಿಗಳ ತಂಡವನ್ನು ಬೀದಿಗಿಳಿಸಿ ಆ ಮೂಲಕ ಸಂಗ್ರಹವಾದ ಮೊತ್ತವನ್ನು ಸಂಕಷ್ಟದಲ್ಲಿದದ್ದವರಿಗೆ ಹಂಚಿ ಮಾನವೀಯತೆ ಮೆರೆದಿದ್ದಾರೆ.
BANTWAL
ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕ ಮೃ*ತ್ಯು
ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃ*ತಪಟ್ಟಿದ್ದಾರೆ.
ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ ಬಾತಿಷಾ( 22) ಮೃ*ತಪಟ್ಟವರು.
ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃ*ತಪಟ್ಟಿದ್ದಾರೆ
BANTWAL
ಬಂಟ್ವಾಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಹಾನಿ
ಬಂಟ್ವಾಳ: ರಾತ್ರಿ ಬೀಸಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.
ಬಿಸಿ ರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ, ಕಾಂಪೌಂಡ್, ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.
ಇನ್ನು ಬಂಟ್ವಾಳ ತಾಲೂಕಿನ ಮಾಧ್ವ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.
BANTWAL
ವಿಟ್ಲ: ಯುವಕ ನೇಣು ಬಿಗಿದು ಆತ್ಮಹ*ತ್ಯೆ..!
ವಿಟ್ಲ: ವಿಟ್ಲ ಬುಡೋಳಿ ಮಡಲ ನಿವಾಸಿ ಸುಶಾಂತ್(25 ವ) ಮನೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ರವರು ಇತ್ತೀಚೆಗೆ ಮಿನಿ ಬಸ್ ಖರೀದಿಸಿದ್ದು ಬಸ್ಸನ್ನು ತಾನೇ ಚಾಲನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಈತ ಸಂಘಟನೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ ಈತನ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ