Connect with us

    FILM

    ಮಾಲ್ಡೀವ್ಸ್‌ ದ್ವೀಪದಲ್ಲಿ ಹನಿಮೂನ್‌..! ಜಾಲಿ ಮೂಡ್‌ನಲ್ಲಿ ತರುಣ್ ಸುಧೀರ್ ದಂಪತಿ

    Published

    on

    ‘ಕಾಟೇರ’ ಡೈರೆಕ್ಟರ್ ತರುಣ್ ಸುಧೀರ್ ಮತ್ತು ಸೋನಲ್ ದಂಪತಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಹನಿಮೂನ್‌ನಲ್ಲಿ ಜಾಲಿ ಮೂಡ್‌ನಲ್ಲಿರುವ ಈ ಜೋಡಿ ಇದೀಗ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ತರುಣ್ ಮತ್ತು ಸೋನಲ್ ಜೋಡಿ ಬಿಳಿ ಬಣ್ಣದ ಉಡುಗೆ ಧರಿಸಿ ವಿವಿಧ ಭಂಗಿಯಲ್ಲಿ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ನವಜೋಡಿಯ ಕ್ಯೂಟ್ ಪೋಸ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಇನ್ನೂ ಅ.9ರಂದು ತರುಣ್ ಹುಟ್ಟುಹಬ್ಬದ ನಿಮಿತ್ತ ನವಜೋಡಿ ಮಾಲ್ಡೀವ್‌ಗೆ ತೆರಳಿದ್ದರು. ಅಲ್ಲೇ ಪತಿಯ ಹುಟ್ಟುಹಬ್ಬವನ್ನು ನಟಿ ಆಚರಿಸಿದ್ದಾರೆ. ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದರು.

    ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಈ ಜೋಡಿ ಭೇಟಿ ನೀಡುತ್ತಿದ್ದಾರೆ. ಅಂದಹಾಗೆ, ಆಗಸ್ಟ್ 11ರಂದು ತರುಣ್ ಮತ್ತು ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    BIG BOSS

    Bigg Boss ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ-ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆ ಆಗುತ್ತೆ ಗೊತ್ತಾ..?

    Published

    on

    ಬಿಗ್​ಬಾಸ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಒಂದು ವಿಜಯ ದಶಮಿ ಸಂಭ್ರಮವಾದರೆ, ಮತ್ತೊಂದು ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್​​ ಅವರ ಮಾತುಗಳನ್ನು ಆಲಿಸಿಕೊಳ್ಳುವ ಕೌತುಕ. ಬಿಗ್​ಬಾಸ್ ಶುರುವಾಗಿ ಎರಡು ವಾರ ಕಳೆದು ಹೋಗಿದ್ದು, ಶನಿವಾರವಾದ ಇಂದು ರಾತ್ರಿ ಮತ್ತೆ ಸುದೀಪ್ ಪಂಚಾಯ್ತಿ ನಡೆಸಲಿದ್ದಾರೆ.

    ಸ್ಪರ್ಧಿಗಳ ಕಿತ್ತಾಟ, ಬಿಗ್​​ಬಾಸ್​ ಕೊಟ್ಟ ಟಾಸ್ಕ್​, ಗೇಮ್ ಎಲ್ಲವನ್ನೂ ನೋಡಿ ಸರಿ ತಪ್ಪುಗಳ ಬಗ್ಗೆ ಮಾತಾಡಿಕೊಳ್ತಿದ್ದ ಅಭಿಮಾನಿಗಳು ಇಂದು ಸುದೀಪ್​ ಪ್ರತಿಕ್ರಿಯೆ ಹೇಗಿರುತ್ತದೆ? ಸ್ಪರ್ಧಿಗಳ ಜೊತೆ ಹೇಗೆ ಮಾತುಕತೆ ನಡೆಸ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಗ್​​ಬಾಸ್​ ಕಿಚ್ಚ ಸುದೀಪ್ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸ್ತಾರೆ ಅನ್ನೋದ್ರ ಬಗ್ಗೆ ಪ್ರೊಮೋದಲ್ಲಿ ಚಿಕ್ಕದಾಗಿ ರಿವೀಲ್ ಮಾಡಿದ್ದಾರೆ.

    25 ಸೆಕೆಂಡ್ ಇರುವ ವಿಡಿಯೋದಲ್ಲಿ ದೊಡ್ಮನೆಯ ಸ್ವರ್ಗ, ನರಕ ಒಂದಾಗಿದೆ. ರೂಲ್ಸ್​ ಬ್ರೇಕ್, ತಪ್ಪಿನ ಲೆಕ್ಕಾಚಾರಕ್ಕೆ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಬೇಕು ಎಂಬ ಸಂದೇಶವನ್ನು ಬಿಗ್​ಬಾಸ್ ನೀಡಿದ್ದಾರೆ. ಹೀಗಾಗಿ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಕುತೂಹಲ ಹೆಚ್ಚಿಸಿದೆ.

    Continue Reading

    BIG BOSS

    ಬಿಗ್‌ಬಾಸ್ ಮನೆಯ ನಾಯಕತ್ವ ಬದಲಾಯ್ತು! ಅಸಲಿ ಆಟ ಈಗ ಶುರುವಾಗುತ್ತಾ?

    Published

    on

    ಬಿಗ್​ ಬಾಸ್​ ಕನ್ನಡ ಸೀಸನ್​​ 11 ಭಾರೀ ಕುತೂಹಲದಿಂದ ಮುನ್ನುಗ್ಗುತ್ತಿದೆ. ಮೊದಲ ವಾರ ನಟಿ ಹಂಸಾ ಮನೆಯ ಕ್ಯಾಪ್ಟನ್​ ಆಗುವ ಮೂಲಕ ಮನೆಯನ್ನು ಮುನ್ನಡೆಸಿಕೊಂಡು ಬಂದಿದ್ದರು. ಆದರೀಗ ನಾಯಕತ್ವ ಬದಲಾಗಿದೆ. ನರಕ ನಿವಾಸಿಯಾಗಿದ್ದ ಶಿಶಿರ್​ ನಾಯಕತ್ವ ವಹಿಸಿಕೊಂಡಿದ್ದಾರೆ.

    ಬಿಗ್​ ಬಾಸ್​​ ಮನೆಯಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಭಾಗಗಳಿದ್ದವು. ಆದರೀಗ ಎಲ್ಲ ಸ್ಪರ್ಧಿಗಳು ಒಟ್ಟಾಗಿದ್ದಾರೆ. ಸ್ವರ್ಗ ಮತ್ತು ನರಕದ ನಿವಾಸಿಯನ್ನು ಒಟ್ಟಿಗೆ ಜೀವಿಸುವಂತೆ ಮಾಡಿದ್ದಾರೆ. ಶಿಶಿರ್​ ನರಕದ ನಿವಾಸಿಯಾಗಿದ್ದು, ಇದೀಗ ಮನೆಯ ಕ್ಯಾಪ್ಟನ್​ ಆಗಿ ಬದಲಾಗಿದ್ದಾರೆ.

    ಮನೆಯ ನಾಯಕತ್ವಕ್ಕಾಗಿ ಶಿಶಿರ್​ಗೆ ಪೈಪೋಟಿಯಾಗಿ ಚೈತ್ರಾ ಕುಂದಾಪುರ, ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾದವ್​ ಸ್ಪರ್ಧೆ ನೀಡಿದ್ದರು. ಆದರೆ ಅದರಲ್ಲಿ ಶಿಶಿರ್​ ನಾಯಕನಾಗಿ ಆಯ್ಕೆಯಾಗಿದ್ದಾರೆ.

    ಇನ್ಮೇಲೆ ಮನೆಯ ಸ್ಪರ್ಧಿಗಳ ಆಟ ಹೇಗಿರಲಿದೆ ಎಂಬ ಕುತೂಹಲ ಎಲ್ಲರನ್ನು ಕೆರಳಿಸಿದೆ. ಅದರ ಜೊತೆಗೆ 2ನೇ ವಾರಂತ್ಯದಲ್ಲಿ ವಾರದ ಕಥೆ ಕಿಚ್ಚನ ಜೊತೆ ಹೇಗಿರಲಿದೆ? ಎಂಬ ಕುತೂಹಲವು ವೀಕ್ಷಕರಲ್ಲಿ ಹುಟ್ಟಿಕೊಂಡಿದೆ.

    Continue Reading

    FILM

    ಪಬ್ಲಿಕ್ ಪ್ಲೇಸ್‌ನಲ್ಲಿ ಕಿತ್ತಾಡಿಕೊಂಡ್ರಾ ಐಶ್ – ಅಭಿ; ಏನಿದರ ಅಸಲಿತ್ತು?

    Published

    on

    ಮುಂಬೈ : ಬಾಲಿವುಡ್‌ ಸೂಪರ್‌ಸ್ಟಾರ್ ಜೋಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇದೀಗ ದಂಪತಿ ಪಬ್ಲಿಕ್ ಪ್ಲೇಸ್‌ನಲ್ಲಿ ಕಿತ್ತಾಡಿಕೊಂಡಿದ್ದಾಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಪಿಂಕ್ ಪ್ಯಾಂಥರ್ಸ್‌ ಕಬ್ಬಡಿ ಪಂದ್ಯದ ಸಮಯದಲ್ಲಿ ಗ್ಯಾಲರಿಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿರುವ ವಿಡಿಯೋ ಎಂದು ಹೇಳಲಾಗಿದೆ.


    ಪ್ರೋ ಕಬಡ್ಡಿ ಪಂದ್ಯಾವಳಿಯ ವೇಳೆ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ಪುತ್ರಿ ಆರಾಧ್ಯ ಜೊತೆಯಲ್ಲಿ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್‌  ಸೊಸೆ ನವ್ಯಾ, ಮತ್ತಾಕೆಯ ಸ್ನೇಹಿತ ಸಿಕಂದರ್ ಕೂಡಾ ಗ್ಯಾಲರಿಯಲ್ಲಿ ಇದ್ದಾರೆ. ಈ ವೇಳೆ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ವಾಗ್ವಾದ ನಡೆದಿದ್ದು , ಐಶ್ವರ್ಯಾ ಕೈ ಹಿಡಿದು ಸಮಜಾಯಿಶಿ ನೀಡುವ ಪ್ರಯತ್ನವನ್ನು ಅಭಿಷೇಕ್‌ ಮಾಡಿದ್ದಾರೆ. ಆದ್ರೆ, ಐಶ್ವರ್ಯಾ ರೈ ಮಾತ್ರ ಕೋಪದಿಂದ ಹರಿಹಾಯ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

    ಪಿಂಕ್ ಪ್ಯಾಂಥರ್ಸ್‌ ತಂಡದ ಮಾಲಕರಾಗಿರುವ ಅಭಿಷೇಕ್‌ ಬಚ್ಚನ್‌ ತಂಡಕ್ಕೆ ಪ್ರೋತ್ಸಾಹ ನೀಡಲು ಕುಟುಂಬ ಸಮೇತರಾಗಿ ಬಂದಿದ್ದರು. ಇದು ಜನವರಿಯಲ್ಲಿ ಮುಂಬೈನ ಸರ್ದಾರ್ ವಲ್ಲಭಾಯಿ ಪಟೇಲ್ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಘಟನೆ ಎಂದು ಗೊತ್ತಾಗಿದೆ.

    ಈ ಹಿಂದೆ ಐಶ್ವರ್ಯಾ ರೈ ಸಂದರ್ಶನವೊಂದರಲ್ಲಿ ತಮ್ಮಿಬ್ಬರ ನಡುವೆ ನಿರಂತರ ಜಗಳ ನಡೆಯುತ್ತದೆ ಎಂದು ಹೇಳಿದ್ದರು. 2010 ರಲ್ಲಿ ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲೂ ಐಶ್ವರ್ಯಾ ರೈ ಅಭಿಷೇಕ್‌ ಯಾವಾಗಲು ಜಗಳ ಆಡ್ತಾರೆ ಅಂತ ಹೇಳಿದ್ದರು. ಈ ವೇಳೆ ಅಭಿಷೇಕ್ ಅದು ಜಗಳ ಅಲ್ಲ ಭಿನ್ನಾಭಿಪ್ರಾಯ ಎಂದು ಸರಿ ಮಾಡಿದ್ದರು. ಅಂಬಾನಿ ಮಗನ ಮದುವೆಯಲ್ಲೂ ಇಬ್ಬರೂ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ಬಳಿಕ ಐಶ್ವರ್ಯಾ ತನ್ನ ಮದುವೆ ಉಂಗರುವಿಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗಿತ್ತು.

    ಇದನ್ನೂ ಓದಿ : ಸರಿಯಾದ ಬಟ್ಟೆ ಹಾಕದಿದ್ದರೆ ಮುಖಕ್ಕೆ ಆ್ಯಸಿಡ್ ಹಾಕುವೆ; ಪತ್ರಕರ್ತನ ಹೆಂಡತಿಗೆ ಬೆದರಿಕೆ
    ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವೀಡಿಯೋ ಕೂಡ ಇದೇ ರೀತಿಯಾಗಿದ್ದಾಗಿದೆ. ಅಸಲಿಗೆ ಪಂದ್ಯದಲ್ಲಿ ಗೆದ್ದಿದ್ದ ಅಭಿಷೇಕ್ ಬಚ್ಚನ್‌ ಅವರ ಪಿಂಕ್ ಪ್ಯಾಂಥರ್ ತಂಡಕ್ಕೆ ದಂಪತಿ ಚಿಯರ್‌ಅಪ್‌ ಮಾಡಿದ್ದಾರೆ. ಈ ವೇಳೆ ಪಂದ್ಯದ ವಿಚಾರವಾಗಿ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಇದನ್ನೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಈ ಬಗ್ಗೆ ಬಚ್ಚನ್ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ

    Continue Reading

    LATEST NEWS

    Trending