Connect with us

FILM

ಸಚಿನ್ ತೆಂಡೂಲ್ಕರ್ ಪುತ್ರಿ ಗುಟ್ಟು ರಟ್ಟು

Published

on

ಗಿಲ್​​-ಸಾರಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.

 

ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಲೇ ಇದೆ.

ಇದರ ಬೆನ್ನಲ್ಲೇ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.ಮುಂಬೈನ ಖಾಸಗಿ ಕಾರ್ಯಕ್ರವೊಂದರಲ್ಲಿ ಇಬ್ಬರು ಭಾಗವಹಿಸಿದ್ರು.

ಗಿಲ್​​-ಸಾರಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.

ಝಿಯೋ ಪ್ಲಾಜಾ ರೆಸ್ಟೋರೆಂಟ್​ನಲ್ಲಿ ಸಾರಾ ತೆಂಡುಲ್ಕರ್​ ಫ್ರೆಂಡ್ಸ್​ ಜೊತೆ ಮಾತನಾಡುವಾಗ ಗಿಲ್​​​​​​ ಹೊರಬಂದಿದ್ದಾರೆ.

ಯುವ ಜೋಡಿ ಕಳೆದೊಂದು ವರ್ಷ ಡೇಟಿಂಗ್​ ನಡೆಸ್ತಿದೆ ಅನ್ನೋ ಸುದ್ದಿ ಹಬ್ಬಿತ್ತು. ಪ್ರಸಕ್ತ ವಿಶ್ವಕಪ್​​​ನಲ್ಲಿ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಸಾರಾ ತೆಂಡುಲ್ಕರ್​​​​​​​ ಪಂದ್ಯ ವೀಕ್ಷಿಸಿ, ಗಿಲ್​​​ಗೆ ಚಿಯರ್​​ ಅಪ್​​​​​ ಮಾಡಿದ್ರು.

ಇಬ್ಬರು ಜೊತೆಯಾಗಿ ನಡೆದುಕೊಂಡು ಬರುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಇದೇ ಮೊದಲ ಬಾರಿಗೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದು ಇವರಿಬ್ಬರ ಡೇಟಿಂಗ್ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಶ್ರೀಲಂಕಾ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಮುಂಬೈನಲ್ಲಿ ಬೀಡಿ ಬಿಟ್ಟಿದೆ. ನವೆಂಬರ್ 2 ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಮುಂಬೈನಲ್ಲಿರುವ ಶುಭಮನ್ ಗಿಲ್ ಜಿಯೋ ವರ್ಲ್ಡ್ ಪ್ಲಾಜಾ ಕಾರ್ಯಕ್ರಮದಲ್ಲಿ ಸಾರಾ ಜೊತೆಗೆ ಕಾಣಿಸಿಕೊಂಡು ಇದೀಗ ವೈರಲ್ ಆಗಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಪುಷ್ಪ 2 ರಿಲೀಸ್ ಡೇಟ್ ಬದಲು…? ಸ್ಪಷ್ಟನೆ ನೀಡಿದ ಚಿತ್ರ ತಂಡ

Published

on

ಮಂಗಳೂರು  : ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಬಹು ನಿರೀಕ್ಷಿತ ಪುಷ್ಪ 2 ಚಿತ್ರ ಯಾವಾಗ ತೆರೆಗೆ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಸಿನೆಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಆಗಸ್ಟ್‌ 15 ರಂದು ನಿಗದಿಯಾಗಿದ್ದ ಬಿಡುಗಡೆಯ ದಿನವನ್ನು ಬದಲಾಯಿಸಲಾಗಿದೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಎಡಿಟಿಂಗ್ ಸಮಸ್ಯೆಯಿಂದ ಪುಷ್ಪ 2 ರಿಲೀಸ್ ವಿಳಂಬವಾಗಲಿದೆ ಎಂಬ ಊಹಾಪೋಹಗಳು ಹರಡಿದೆ. ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಆಂಟೋನಿ ರೂಬೆನ್‌ ಪುಷ್ಪ 2 ತಂಡದಿಂದ ಹೊರಬಂದಿದ್ದಾರೆ ಎಂದು ಹೇಳಿತ್ತು.
ಆಂಟೋನಿ ರೂಬೆನ್‌ ಜಾಗಕ್ಕೆ ನವೀನ್ ನೂಲಿ ಬರಲಿದ್ದು, ಪುಷ್ಪ 2 ಬಿಡುಗಡೆ ವಿಳಂಬವಾಗಲಿದೆ ಎಂದು ಹೇಳಿತ್ತು. ಇದು ಎಲ್ಲೆಡೆ ಸುದ್ದಿಯಾಗಿದ್ದು, ಸಿನೆಮಾ ರಿಲೀಸ್‌ನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಆದ್ರೆ, ಇದೊಂದು ಸುಳ್ಳು ಸುದ್ದಿಯಾಗಿದ್ದು, ನಿಗದಿತ ದಿನಾಂಕ ಆಗಸ್ಟ್‌ 15 ರಂದೇ ಸಿನೆಮಾ ರಿಲೀಸ್ ಆಗಲಿದೆ ಎಂದು ಸಿನೆಮಾ ತಂಡ ಸ್ಪಷ್ಟನೆ ನೀಡಿದೆ. ಅಲ್ಲೂ ಅರ್ಜುನ್‌ ಅವರ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ಜೂನ್ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಹೀಗಾಗಿ ಎಡಿಟಿಂಗ್ ಕೂಡಾ ನಿರಾಂತಕವಾಗಿ ನಡೆಯಲಿದ್ದು, ಈಗಾಗಲೇ ಟೀಸರ್‌ ಕೂಡಾ ಭಾರೀ ಸದ್ದು ಮಾಡಿದೆ. ರಿಲೀಸ್ ಜೊತೆಗೆ ಬಾಕ್ಸ್‌ ಆಫೀಸಿನಲ್ಲಿ ಚಿಂದಿ ಉಡಾಯಿಸಲಿರುವ ಪುಷ್ಪಾ 2 ನಿಗದಿಯಾದ ದಿನದಂತೆ ಬಿಡುಗಡೆ ಆಗಲಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

Continue Reading

FILM

ರಾಖಿ ಸಾವಂತ್ ಗೆ ಕ್ಯಾನ್ಸರ್!? ಮಾಜಿ ಪತಿ ಹೇಳಿದ್ದೇನು?

Published

on

ಮುಂಬೈ : ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್, ಇತ್ತೀಚೆಗೆ ಎದೆ ನೊವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಟಿ ರಾಖಿ ಸಾವಂತ್‌ಗೆಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಅಭಿಮಾನಿಗಳು ಹೇಳಿದ್ದರು. ಇದೀಗ ರಾಖಿ ಸಾವಂತ್ ಮಾಜಿ ಪತಿ ರಿತೇಶ್ ರಾಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.


ರಾಖಿಗೆ ಏನಾಯಿತು?

ಶೂಟಿಂಗ್‌ ವಿಚಾರದಲ್ಲಿ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ರಾಖಿ ಸಾವಂತ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ರಸ್ತೆಯಲ್ಲೇ ಇದ್ದ ಒಂದು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಆಕೆಯ ಕಂಡಿಷನ್ ಕ್ರಿಟಿಕಲ್ ಇದೆ ಎಂದು ರಿತೇಶ್ ಹೇಳಿದ್ದಾರೆ. ರಾಖಿ ಸಾವಂತ್‌ಗೆ ಹೃದಯ ಸಂಬಂಧಿ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದೀಗ ಆಂಜಿಯೋಪ್ಲಾಸ್ಟಿ ಮಾಡಲಾಗುತ್ತಿದೆ. ಇದರ ಜೊತೆಗೆ ರಾಖಿಗೆ ಗರ್ಭಕೋಶದ ಕ್ಯಾನ್ಸರ್ ಕೂಡಾ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಆಸ್ಪತ್ರೆಯ ವೈದ್ಯರು ಹೃದಯಾಘಾತದ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಅದೇ ರೀತಿ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಖಚಿತವಾಗಿ ಹೇಳಲು ಸಾದ್ಯವಿಲ್ಲ. ಆದ್ರೆ ಆಕೆಯ ಗರ್ಭಕೋಶದಲ್ಲಿ ಗೆಡ್ಡೆ ಕಾಣಿಸಿಕೊಂಡಿದ್ದು ಅದರ ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಲಾಗಿದೆ. ಆದ್ರೆ ವೈದ್ಯರು ಇದು ಕ್ಯಾನ್ಸರ್ ಆಗಿರಬಹುದು ಎಂದು ಹೇಳಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.

ರಾಖಿ ಸಾವಂತ್‌ಗೆ ಈ ಹಿಂದೆಯೇ ಗರ್ಭಕೋಶದಲ್ಲಿ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದು, ಆಕೆಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದ್ದರು. ಅವರ ಕುಟುಂಬದಲ್ಲಿಯೂ ತಾಯಿ, ಸಹೋದರಿಗೆ ಕ್ಯಾನ್ಸರ್ ಇತ್ತು ಅನ್ನೋ ಮಾಹಿತಿ ಕೂಡಾ ಇದೆ.

ಇದನ್ನೂ ಓದಿ : WATCH VIDEO : ಕೈ ಮುರಿದುಕೊಂಡ್ರಾ ಐಶ್ವರ್ಯಾ ರೈ..?

ನಾಟಕವಲ್ಲ ಎಂದ ಮಾಜಿ ಪತಿ :

ರಾಖಿ ಸಾವಂತ್‌ ವಿಚಾರದಲ್ಲಿ ಆಕೆಯ ಮಾಜಿ ಪತಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಅನ್ನೋ ಅನುಮಾನ ಮಾಧ್ಯಮದವರಲ್ಲಿ ಇದೆ. ವೈದ್ಯರು ಈ ಬಗ್ಗೆ ಯಾವುದೇ ಮಾಹಿತಿ ಮಾಧ್ಯಮದವರಿಗೆ ನೀಡದ ಕಾರಣ ಇವರ ಹೇಳಿಕೆಯಲ್ಲಿ ಅನುಮಾನ ಮೂಡಿದೆ.
ರಾಖಿ ಸಾವಂತ್‌ ಆರ್ಥಿಕ ಪರಿಸ್ಥಿತಿ ಕೂಡಾ ಸರಿ ಇಲ್ಲದೆ ಇರುವುದು ಕೂಡಾ ಆಕೆಯ ಈಗಿನ ಈ ಆಸ್ಪತ್ರೆಗೆ ದಾಖಲಾಗಿರುವ ವಿಚಾರಕ್ಕೆ ತಳುಕು ಹಾಕಲಾಗುತ್ತಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಿತೇಶ್, ರಾಖಿ ಈ ಹಿಂದೆ ಹಲವು ಬಾರಿ ಹಲವು ನಾಟಕ ಮಾಡಿರಬಹುದು. ಆದ್ರೆ, ಇದೀಗ ನಿಜವಾಗಿ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಹೇಳಿದ್ದಾರೆ.

ತಾಯಿಯನ್ನು ಕಳೆದುಕೊಂಡಿರುವುದು ಹಾಗೂ ಇತರ ಘಟನೆಗಳು ಆಕೆಯ ಮನಸಿನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದು, ಇದು ಪ್ರಚಾರಕ್ಕೆ ಆಸ್ಪತ್ರೆಗೆ ದಾಖಲಾಗಿರುವುದಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Continue Reading

FILM

WATCH VIDEO : ಅಬ್ಬಬ್ಬಾ! ಆನೆ ಏರಿದ ದಿವ್ಯಾ ಉರುಡುಗ; ವ್ಹಾವ್! ಏನ್ ತಾಕತ್ತು ಗುರು ಅಂದ್ರು ಫ್ಯಾನ್ಸ್

Published

on

ದಿವ್ಯಾ ಉರುಡುಗ ಕಿರುತೆರೆ, ಹಿರಿತೆರೆ ಎರಡರಲ್ಲೂ ಮಿಂಚುತ್ತಿರುವ ಕಲಾವಿದೆ. ಚಿಟ್ಟೆ ಹೆಜ್ಜೆ, ಅಂಬಾರಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ದಿವ್ಯ ಉರುಡುಗ, ಅರವಿಂದ್ ಕೌಶಿಕ್ ನಿರ್ದೇಶನದ ‘ಹುಲಿರಾಯ’ ಮೂಲಕ ಬೆಳ್ಳಿಪರದೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇತ್ತೀಚೆಗೆ ಅವರು ನಟಿಸಿದ್ದ ಅರ್ಧಂಬರ್ಧ ಪ್ರೇಮಕತೆ ಚಿತ್ರ ಬಿಡುಗಡೆಗೊಂಡಿತ್ತು.

ಬಿಗ್ ಬಾಸ್ ನಲ್ಲೂ ದಿವ್ಯಾ ಗಮನಸೆಳೆದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ  ದಿವ್ಯಾ ಉರುಡುಗ ಭಾಗವಹಿಸಿದ್ದರು. ಮತ್ತೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಲಗ್ಗೆ ಇಟ್ಟಿದ್ದರು. ಅದರಲ್ಲಿ 5ನೇ ಸ್ಥಾನ  ಪಡೆದಿದ್ದರು.

ಇದೀಗ ಅವರು ಬೆಳ್ಳಿತೆರೆಯಿಂದ ಕಿರುತೆರೆಗೆ ಲಗ್ಗೆ ಇಡುತ್ತಿದ್ದಾರೆ. ಹೌದು, ದಿವ್ಯ ಉರುಡುಗ ‘ನಿನಗಾಗಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಸಾಲು ಸಾಲು ಪ್ರೋಮೋಗಳು ಬಿಡುಗಡೆಯಾಗುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿ ಈಗಾಗಲೇ ಕುತೂಹಲ ಹುಟ್ಟುಹಾಕಿದೆ.

ವೀಡಿಯೋ ಹಂಚಿಕೊಂಡ ನಟಿ :

ರಚನಾ ಎಂಬ ಸಿನಿಮಾ ನಾಯಕಿಯಾಗಿ ದಿವ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ತಾಯಿ ಪ್ರೀತಿಯ ಹಂಬಲ ಈ ಧಾರಾವಾಹಿಯ ಕಥಾವಸ್ತು ಅನ್ನೋದು ರುಜುವಾತಾಗಿದೆ. ಇನ್ನು ಬಿಡುಗಡೆಯಾಗಿರುವ ಪ್ರೋಮೋವೊಂದರಲ್ಲಿ ಆನೆಯನ್ನೇರಿದ ರಾಜಕುಮಾರಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ. ಇದರ ಮೇಕಿಂಗ್ ವೀಡಿಯೋವನ್ನು ನಟಿ ಹಂಚಿಕೊಂಡಿದ್ದಾರೆ.


ವೀಡಿಯೋ ಹಂಚಿಕೊಂಡಿರುವ ದಿವ್ಯಾ, ಅಂಬಿಕಾ ಎನ್ನುವ ಈ ಆನೆಗೆ 50 ವರ್ಷ ವಯಸ್ಸು. ಕೇರಳದ ಕುಮಿಲಿ ಎಂಬ ಜಾಗದ ಆನೆ ಇದಾಗಿದ್ದು, ಬಹಳ ಗ್ರೇಸ್‌ಫುಲ್ ಆಗಿದೆ. ಚಿಕ್ಕಂದಿನಲ್ಲಿ ಮರ ಹತ್ತಿದ ಅಭ್ಯಾಸವಿದ್ದುದರಿಂದ ಆನೆ ಏರಲು ಸಹಾಯವಾಯಿತು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : WATCH VIDEO : ಕೈ ಮುರಿದುಕೊಂಡ್ರಾ ಐಶ್ವರ್ಯಾ ರೈ..?

ಸಿನಿಮಾದಲ್ಲಿ ನಟರು ಆನೆ ಏರುವಂತೆ ಕಿರುತೆರೆಯಲ್ಲಿ ದಿವ್ಯಾ ಆನೆ ಏರಿದ್ದಾರೆ. ಅವರು ಸಲೀಸಾಗಿ ಆನೆ ಏರಿರೋದು ಆಶ್ಚರ್ಯ ಉಂಟು ಮಾಡಿದೆ. ಇನ್ನು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೆದರಿಕೆಯಿಲ್ಲದ ಧೈರ್ಯವಂತೆ ಡಿಯು, ಏನ್ ತಾಕತ್ತು ಗುರು, ವ್ಹಾವ್, ಬೆಂಕಿ ಎಂದೆಲ್ಲಾ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ, ‘ನಿನಗಾಗಿ’ ಧಾರಾವಾಹಿ ಮೇ 27 ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಗಿಣಿರಾಮ ಖ್ಯಾತಿಯ ಋತ್ವಿಕ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading

LATEST NEWS

Trending