Connect with us

FILM

ಶಿವಮೊಗ್ಗ: ಕಿರುತೆರೆ ನಟನನ್ನು ಮದುವೆಯಾಗುವುದಾಗಿ ನಂಬಿಸಿ, 6.50 ಲಕ್ಷ ರೂ. ವಂಚಿಸಿದ ನಟಿಯ ಬಂಧನ..!

Published

on

ಸ್ಯಾಂಡಲ್ ವುಡ್ ನ ಸಹನಟಿಯೊಬ್ಬರು ಕಿರುತೆರೆ ನಟನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಸುಮಾರು 6.50 ಲಕ್ಷ ರೂನಷ್ಟು ಹಣ ವಂಚಿಸಿದ್ದು, ಪ್ರಕರಣದ ವಿರುದ್ಧ ನಟ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದ ಮೇರೆಗೆ ಪೊಲೀಸರು ನಟಿಯನ್ನು ಅವರನ್ನು ಬಂಧಿಸಿದ್ದಾರೆ.

ಶಿವಮೊಗ್ಗ: ಸ್ಯಾಂಡಲ್ ವುಡ್ ನ ಸಹನಟಿಯೊಬ್ಬರು ಕಿರುತೆರೆ ನಟನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಸುಮಾರು 6.50 ಲಕ್ಷ ರೂನಷ್ಟು ಹಣ ವಂಚಿಸಿದ್ದು, ಪ್ರಕರಣದ ವಿರುದ್ಧ ನಟ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದ ಮೇರೆಗೆ ಪೊಲೀಸರು ನಟಿಯನ್ನು ಅವರನ್ನು ಬಂಧಿಸಿದ್ದಾರೆ.

ಶರವಣನ್​ ಎಂಬವವರು ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಇವರಿಗೆ ಕನ್ನಡ ಚಿತ್ರರಂಗದ ಸಹ ನಟಿ ಉಷಾ ಅಲಿಯಾಸ್ ಉಷಾ ರವಿಶಂಕರ್​ ಅವರ ಪರಿಚಯವಾಗುತ್ತದೆ.

ಬಳಿಕ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ ಮದುವೆಯ ನಿರ್ಧಾರ ಸಹ ಮಾಡುತ್ತಾರೆ.

ಅಷ್ಟರಲ್ಲಿ ಉಷಾರವರು ನನಗೆ ಸಮಸ್ಯೆ ಇದೆ ಹಣ ಬೇಕೆಂದು ಶರವಣನ್​ರವರ ಬಳಿ ಕೇಳಿದಾಗ ಅವರು, ತಮ್ಮ ಬಳಿ ಹಣ ಇಲ್ಲದೇ ಹೋದಾಗ ಬ್ಯಾಂಕ್​ನಲ್ಲಿ ಸಾಲ ಮಾಡಿ, 5 ಲಕ್ಷ ರೂ ನೀಡಿದ್ದಾರೆ.

ಅಲ್ಲದೇ ಇವರ ಬಳಿ ಇದ್ದ ಕ್ರೆಡಿಟ್ ಕಾರ್ಡ್​ ಪಡೆದು ಉಷಾ ಅದರಲ್ಲೂ ಸಹ ಸುಮಾರು 1.50 ಲಕ್ಷ ರೂದಷ್ಟು ಹಣ ತೆಗೆದುಕೊಂಡಿರುತ್ತಾರೆ.

ಇದಾದ ಬಳಿಕ ಶರವಣನ್​ರವರು ಕೊಟ್ಟ ಹಣವನ್ನು ವಾಪಸ್​ ಕೇಳಿದಾಗ ಉಷಾ ನೀಡದೇ ಸತಾಯಿಸಿದ್ದಾರೆ.

ಕೊನೆಗೆ ಶರವಣನ್​ ಅವರಿಗೆ ಉಷಾರವರು ಚೆಕ್ ನೀಡಿರುತ್ತಾರೆ. ಆದರೆ ಚೆಕ್ ಸಹ ಬೌನ್ಸ್ ಆಗುತ್ತದೆ ಎಂದು ಶರವಣನ್​ ಅವರು ಹೇಳುತ್ತಾರೆ.

ಇದರಿಂದ ಶರವಣನ್​ ತಮಗೆ ಮೋಸವಾಗಿದೆ ಎಂದು ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ.

ಬಳಿಕ ಒಟ್ಟು 6.50 ಲಕ್ಷ ರೂನಷ್ಟು ಹಣ ಪಡೆದು ವಾಪಸ್ ಮಾಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶರವಣನ್​ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ನ್ಯಾಯಾಲಯದ ಆದೇಶದ ಮೇರೆಗೆ ಉಷಾ ರವಿಶಂಕರ್​ ಅವರನ್ನು ವಂಚನೆ ಪ್ರಕರಣದಲ್ಲಿ ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.

 

FILM

Film: ಹಂದಿ ಮಾಂಸ ಸೇವಿಸಿದ ಟಿಕ್‌ಟಾಕ್‌ ಸ್ಟಾರ್‌ಗೆ 2 ವರ್ಷ ಜೈಲು ಶಿಕ್ಷೆ..!

Published

on

ಟಿಕ್‌ ಟಾಕ್‌ ಸ್ಟಾರ್‌ ಒಬ್ಬರು ಹಂದಿ ಮಾಂಸ ಸೇವಿಸಿದಕ್ಕೆ ಇಂಡೋನೇಷ್ಯಾ ನ್ಯಾಯಾಲಯವು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಜಕಾರ್ತ: ಟಿಕ್‌ ಟಾಕ್‌ ಸ್ಟಾರ್‌ ಒಬ್ಬರು ಹಂದಿ ಮಾಂಸ ಸೇವಿಸಿದಕ್ಕೆ ಇಂಡೋನೇಷ್ಯಾ ನ್ಯಾಯಾಲಯವು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಲೀನಾ ಮುಖರ್ಜಿ (33) ಶಿಕ್ಷೆಗೊಳಗಾದ ಟಿಕ್‌ ಟಾಕ್‌ ಸ್ಟಾರ್‌.

ಲೀನಾ ಮುಖರ್ಜಿ ಅವರು ಬಾಲಿಯಲ್ಲಿ ಕಳೆದ ಮಾರ್ಚ್‌ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವಿಡಿಯೊ ವೈರಲ್‌ ಆಗುತ್ತಿದ್ದ ಬೆನ್ನಲೇ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿದೆ.

ಆ ಕಾರಣದಿಂದ ಲೀನಾ ಮುಖರ್ಜಿಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಹಾಗಾಗಿ ಇದೀಗ ಧರ್ಮ ನಿಂದನೆಯ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಲೀನಾ ಮುಖರ್ಜಿಯವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದರೊಂದಿಗೆ 16,245 ಡಾಲರ್‌ (13.47 ಲಕ್ಷ ರೂ.) ದಂಡ ವಿಧಿಸಿದೆ.

ನಿಗದಿತ ಅವಧಿಯಲ್ಲಿ ದಂಡ ಪಾವತಿಸದೇ ಇದ್ದರೆ ಇನ್ನೂ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್‌ ಹೇಳಿದೆ.

ಧಾರ್ಮಿಕ ಆಚಾರ-ವಿಚಾರಗಳನ್ನು ನಂಬುವವರು ಹಾಗೂ  ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷ ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಲೀನಾ ಮುಖರ್ಜಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಲೆಮ್‌ಬಾಂಗ್‌ ನ್ಯಾಯಾಲಯವು ತಿಳಿಸಿದೆ.

ಇಸ್ಲಾಮಿಕ್‌ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ.

Continue Reading

FILM

ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!

Published

on

ಆ್ಯಮಿ ಜಾಕ್ಸನ್ ಅವರ  ಅಚ್ಚರಿಯ ಬದಲಾವಣೆಯನ್ನು ನೋಡಿದ ನೆಟ್ಟಿಗರು ಆ್ಯಮಿ ಮುರ್ಫಿ ಕಾಪಿ ಎನ್ನುತ್ತಿದ್ದಾರೆ. ಚೆನ್ನಾಗಿದ್ದ ಆ್ಯಮಿಗೆ ಏನಾಯ್ತು ಅಂತ ಯೋಚಿಸುತ್ತಿದ್ದಾರೆ.

 

ಬಹುಭಾಷಾ ನಟಿ ಹಾಗೂ ರೂಪದರ್ಶಿಯೂ ಆಗಿರುವ ಆ್ಯಮಿ ಜಾಕ್ಸನ್ ಕನ್ನಡಿಗರಿಗೆ ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ಜೋಡಿಯಾಗಿ ನಟಿಸಿ ಹೆಸರುವಾಸಿಯಾಗಿದ್ದರು. ಆದ್ರೆ ಈಗಿನ ಆ್ಯಮಿ ಜಾಕ್ಸನ್ ಗೂ ಅಂದಿನ ಆ್ಯಮಿ ಜಾಕ್ಸನ್ ಗೂ ಅಜಗಜಾಂತರ ವ್ಯತ್ಯಾಸವಾಗಿದೆ. ನಿಜಕ್ಕೂ ಕುರೂಪಿ ಆಗೋದ್ರಾ ಎಂಬ ಅನುಮಾನ ಕಾಡದಿರದು.


ಈಗ ತಮ್ಮ ಹೊಸ ಲುಕ್​ನಿಂದಾಗಿ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದ್ದಾರೆ.ಅವರ ಫಾಲೋವರ್ಸ ಹಾಗೂ ಫ್ಯಾನ್ಸ್ ಅವರ ಲುಕ್​​ನಲ್ಲಿ ಹಲವಾರು ಬದಲಾವಣೆಗಳನ್ನು ಗುರುತಿಸಿಕೊಂಡಿದ್ದಾರೆ.

ನಟಿಯ ಹೊಸ ಲುಕ್​ನಲ್ಲಿ ಅವರ ಚೀಕ್ ಬೋನ್ಸ್ ಹಾಗೂ ಚಿಕ್ಕ ಕಣ್ಣು ಎಲ್ಲರಿಗೂ ಅಚ್ಚರಿ ಮೂಡಿಸಿದೆ.ಆ್ಯಮಿ ಜಾಕ್ಸನ್ ಅವರ ಈ ಅಚ್ಚರಿಯ ಬದಲಾವಣೆಯನ್ನು ನೋಡಿದ ನೆಟ್ಟಿಗರು ಆ್ಯಮಿ ಮುರ್ಫಿ ಅವರ ಕಾಪಿಯಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.

ಸದ್ಯ ಇದು ಸರ್ಜರಿಯಾ, ಮೇಕಪ್ ಮಾಡಿರೋದಾ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಸುಂದರಿಯಾಗಿದ್ದ ಆ್ಯಮಿ ಈ ರೀತಿಯಾಗಿ ಯಾಕೆ ಕಾಣಿಸಿಕೊಂಡ್ರು. ಮೊದಲಿದ್ದ ಚಾರ್ಮ್ ಈಗ ಕುಂದಿದಂತೆ ಕಾಣುತ್ತಿದ್ದು, ಸ್ಕೆಲಿಟನ್ ರೀತಿ ಕಾಣುತ್ತಿದ್ದಾರೆ.

Continue Reading

FILM

ಸಮಂತ ಇನ್ಸ್ಟಾ ಫೀಡ್ ನಲ್ಲಿ ಕಾಣಿಸಿಕೊಂಡ ‘ಗಂಡ’ನ ಫೋಟೋ

Published

on

ಆಂಧ್ರ ಪ್ರದೇಶ: ಸಮಂತ ರುತ್ ಪ್ರಭು ಅವರ ಇನ್ಸ್ಟಾ ಗ್ರಾಮ್ ಫೀಡ್ ನಲ್ಲಿ ಮತ್ತೆ ನಾಗಚೈತನ್ಯ ಜೊತೆಗಿನ ಹಳೆಯ ಫೋಟೋಗಳು ಕಾಣಿಸಿಕೊಂಡಿದೆ. ಮಾಜಿ ದಂಪತಿ ಮತ್ತೆ ಒಂದಾಗಬಹುದು ಎಂಬ ಸಂತೋಷದಲ್ಲಿ ಸಮಂತ ಹಾಗೂ ನಾಗಚೈತನ್ಯ ಫ್ಯಾನ್ಸ್ ಕಾಯ್ತಿದ್ದಾರೆ. 
ನಾಗ ಚೈತನ್ಯ ಹಾಗೂ ಸಮಂತ ಅವರದ್ದು ಹಲವು ವರ್ಷಗಳ ಪ್ರೀತಿ. ಪ್ರೀತಿಸಿ ಮದುವೆ ಆದ ಸಮಂತ ಏಕಾಏಕಿ ವಿಚ್ಛೇದನ ಘೋಷಿಸಿ ಶಾಕ್ ನೀಡಿದ್ರು.
ಈಗ ಮತ್ತೆ ಸಮಂತಾ ರುತ್​ ಪ್ರಭು ಹಾಗೂ ನಾಗ ಚೈತನ್ಯ ಅವರು ಒಂದಾಗುತ್ತಾರಾ ಎಂಬ ಅನುಮಾನ ಮೂಡಿದೆ.
ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಫುಲ್‌ಸ್ಟಾಪ್‌ ಇಡುತ್ತಿದ್ದಂತೆ ಸಮಂತಾ ಅವರು ನಾಗ ಚೈತನ್ಯ ಅವರೊಂದಿಗಿನ ಬಹುತೇಕ ಎಲ್ಲಾ ಚಿತ್ರಗಳನ್ನು ತೆಗೆದುಹಾಕಿದ್ದರು.
ಆದರೀಗ ಮದುವೆಯ ಫೋಟೊವೊಂದು ಏಕಾಏಕಿ ಖಾತೆಯಲ್ಲಿ ಕಾಣಿಸತೊಡಗಿದೆ.
ಡಿವೋರ್ಸ್​ ಪಡೆದ ಬಳಿಕ ಸಮಂತಾ ಅವರು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಶೈಲಿ ಕೂಡ ಬದಲಾಯಿತು. ಅನೇಕ ದೇಶಗಳಿಗೆ ಅವರು ಭೇಟಿ ನೀಡಿ ಬೋಲ್ಡ್​ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸಿದರು.
ಅದರ ನಡುವೆ ಅವರಿಗೆ ಆರೋಗ್ಯ ಕೂಡ ಕೈ ಕೊಟ್ಟಿತ್ತು. ಅದರಿಂದ ಹಲವು ತಿಂಗಳ ಕಾಲ ಅವರು ಸಿನಿಮಾ ಕೆಲಸಗಳಿಂದ ದೂರ ಉಳಿಯಬೇಕಾಯಿತು. ಅತ್ತ, ನಾಗ ಚೈತನ್ಯ ಅವರು ನಟಿ ಶೋಭಿತಾ ಜೊತೆ ಡೇಟಿಂಗ್ ಮಾಡಲು ಆರಂಭಿಸಿದರು.
ಈಗ ಸಮಂತ ಇನ್ಸ್ಟಾ ದಲ್ಲಿ ಮದುವೆ ಫೋಟೋ ಕಾಣಿಸಿದ್ದು, ಮತ್ತೆ ಒಂದಾಗ್ತಾರ ಎಂಬ ಸಂಶಯ ಕಾಡ್ತಿದೆ. ಬೇಗ ಒಂದಾದ್ರೆ ಸ್ಯಾಮ್-ನಾಗ್ ಫ್ಯಾನ್ಸ್ ಗಂತೂ ಹಬ್ಬವೂ ಹಬ್ಬ.

 

Continue Reading

LATEST NEWS

Trending