ಮಲ್ಲಿಗೆಯ ಚೆಂಡಿನ ರಾಶಿಯಲ್ಲಿ ವೈಭವಿತಳಾದ ಶ್ರೀ ಮಂಗಳಾದೇವಿಯ ಶಯನೋತ್ಸವ
ಮಲ್ಲಿಗೆಯ ಚೆಂಡಿನ ರಾಶಿಯಲ್ಲಿ ವೈಭವಿತಳಾದ ಶ್ರೀ ಮಂಗಳಾದೇವಿಯ ಶಯನೋತ್ಸವ
ಮಂಗಳೂರು: ಮಂಗಳೂರಿನ ಶ್ರೀ ಮಂಗಳಾದೇವಿ ಅಮ್ಮನ ಶಯನಕ್ಕೆ ದ.ಕ ದೇಗುಲಗಳ ಪೈಕಿ ವಿಶೇಷ ಸ್ಥಾನವಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಿಗೆ ಸಾವಿರಗಟ್ಟಲೆ ಮಲ್ಲಿಗೆ ಚೆಂಡು ಬರುತ್ತೆ.
ಈ ಬಾರಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕೂಡ ಸಾಕಷ್ಟು ಮಲ್ಲಿಗೆ ಹರಕೆ ರೂಪದಲ್ಲಿ ಬಂದಿದ್ದು, ದೇವಾಲಯದ ಒಳಾಂಗಣದ ಹೊರಭಾಗದ ಸುತ್ತು ಪೌಳಿಯ ಸುತ್ತ ಮಲ್ಲಿಗೆಯನ್ನು ಇಡಲಾಗಿತ್ತು.
ಹೀಗಾಗಿ ಸಂಪೂರ್ಣ ದೇವಸ್ಥಾನದಲ್ಲಿ ಮಲ್ಲಿಗೆಯ ಪರಿಮಳವೇ ಮನ ತಣಿಸುವಂತಿತ್ತು. ಪ್ರತೀವರ್ಷ ರಾತ್ರಿ ರಥಸವಾರಿ ಉತ್ಸವ ನಡೆಯುತ್ತೆ.
ರಥೋತ್ಸವದಿಂದ ಸಂತುಷ್ಟಳಾಗುವ ದೇವಿ ಗರ್ಭಗೃಹವನ್ನು ಸೇರುತ್ತಾಳೆ. ಅಲ್ಲಿ ಆಕೆ ಮಹಾಪೂಜೆಯನ್ನು ಸ್ವೀಕರಿಸಿದೊಡನೆಯೇ ‘ಶ್ರೀ ಭೂತಬಲಿ’ಯ ಬಳಿಕ ಶಯನೋತ್ಸವ ಆರಂಭವಾಗುತ್ತೆ.
‘ಶಯನ’ಎಂಬ ಪದವು ಸಂಸ್ಕೃತ ಭಾಷಾ ಸಾಹಿತ್ಯದ ಪದವಾಗಿದ್ದು, ‘ನಿದ್ರೆ’ ಅಥವಾ ‘ನಿದ್ರಾಭಂಗಿ’ ಎಂದರ್ಥ.
ಸಂಪೂರ್ಣ ದೇವಿಯ ಆವಾಸಸ್ಥಾನ ಮಲ್ಲಿಗೆಯಿಂದ ತುಂಬಿರುತ್ತೆ.
ಈ ಮಲ್ಲಿಗೆಯ ತಲ್ಪದ ಸುಪ್ಪತ್ತಿಗೆಯಲ್ಲಿ ಪರಿವೆಯಿಲ್ಲದೆ ಮಂಗಳಾಂಭೆಯು ಏಕಾಂತ ಸ್ಥಿತಿಯಲ್ಲಿ ಸುಖ ನಿದ್ದೆಗೆ ಜಾರುತ್ತಾಳೆ ಎಂಬುದು ನಂಬಿಕೆ.
ಅದೇ ಪ್ರಕಾರ ಗರ್ಭಗೃಹದ ಕವಾಟ ಬಂಧನವು ನಡೆದು, ದೇವಿಯ ಶಯನವು ಆರಂಭವಾಗುತ್ತದೆ.
ಪ್ರೀತಿಯಿಂದ ಅರ್ಪಿಸಿದ ಮಲ್ಲಿಗೆಯ ಮಂಟಪದಲ್ಲಿ ಸುಖ ನಿದ್ರಾಸನಸ್ತಿತಳಾದ ಶ್ರೀದೇವಿ, ಅರುಣೋದಯದ ಮಹಾಪೂಜೆಯ ಬೆಳಕಲ್ಲಿ ತೇಜೋಮಯ ಕಾಂತಿಯುಕ್ತಳಾಗಿ ಮಂಗಳೆಯು ಬಿಂಬರೂಪದಲ್ಲಿ ದರ್ಶನವನ್ನೀಯುವ ಆ ಸೊಬಗನ್ನು ನೋಡಲೆಂದೇ ಕಾದಿದ್ದ ಸರ್ವರಿಗೂ ಮಲ್ಲಿಗೆಯ ಸುವಾಸನೆಯ ಘಮದೊಂದಿಗೆ ದೇವಿಯ ಶಯನಾಲಂಕಾರ ದರ್ಶನವಾಗುತ್ತದೆ.
ಅಂತೆಯೇ ಈ ಬಾರಿ ಕೂಡ ಶಯನ ಮಹಾಪೂಜೆಯ ಮಂಗಳಾರತಿಯ ಬೆಳಕಲ್ಲಿ ತೇಜೋಮಯ ಕಾಂತಿಯುಕ್ತನಾಗಿ ದರ್ಶನವನ್ನೀಯುವ ಮಂಗಳಾಂಬಿಕೆಯ ತೇಜೋ ರೂಪವನ್ನು ಕಣ್ತುಂಬಿಕೊಳ್ಳಲು ತವಕಿಸಿದ ಸರ್ವರಿಗೂ ಮಲ್ಲಿಗೆಯ ಸುವಾಸನೆಯೊಂದಿಗೆ ತಾಯಿಯ ಶಯನಾಲಂಕಾರ ದರ್ಶನವಾಯಿತು.
ಹೃದಯಂಗಮ ರಮಣೀಯ ದೃಶ್ಯಗಳಿಂದ, ಸರ್ವ ವಾದ್ಯ ನಿನಾದಗಳಿಂದ, ಮಲ್ಲಿಗೆಯ ಸೌರಭದ ಸಂಗಮದಿಂದ ಬಹುಖ್ಯಾತಿಯನ್ನು ಪಡೆದ ಶಯನ ಸೇವೆಯ ಬಳಿಕ ತಾಯಿಗೆ ಮಹಾಪೂಜೆಯು ನಡೆದು ಸಂತೋಷದಿಂದ ದೇವಿಯ ತೇಜೋ ರೂಪವನ್ನು ಕಣ್ತುಂಬಿಕೊಂಡ ನಂತರ ‘ಅಷ್ಟಾವಧಾನ’ ಸೇವೆಯೊಂದಿಗೆ ,ದೇವಿಯ ಬಲಿ ಹೊರಟು ದೇವಳದ ಒಳ ಹಾಗ ಹೊರ ಪ್ರಾಂಗಣದ ಬಲಿ ಗಲ್ಲಿಗೂ ಶಯನದ ಹೂವುಗಳು ಸಂದವು.
ಬಳಿಕ ಶಯನಾಲಂಕಾರದ ಹೂವುಗಳನ್ನು ಮಹಾ ಪ್ರಸಾದವಾಗಿ ನೆರೆಯಲ್ಪಟ್ಟ ಭಕ್ತಾದಿಗಳಿಗೆ ನೀಡಲಾಯಿತು.
ಶ್ರೀ ದೇವಿಯ ಶಯನೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಸಿಕೊಂಡು ಧನ್ಯರಾಗಿ ದೇವಿಯ ಕೃಪೆಗೆ ಪಾತ್ರರಾದರು.
DAKSHINA KANNADA
ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!
ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.
ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.
ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
LATEST NEWS
ನಾಲ್ಕನೇ ಮಗುವೂ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದ ತಂದೆ
ಮಂಗಳೂರು/ ಇಟ್ವಾ: ಹೆಣ್ಣು ಮಕ್ಕಳು ಹುಟ್ಟಿದರೆ ಮನೆಗೆ ಲಕ್ಷ್ಮಿ ಬಂದಳು ಎಂಬ ಸಂಭ್ರಮ ಹೆಚ್ಚಿನ ಮನೆಗಳಲ್ಲಿ ಇರುತ್ತದೆ. ಭೇಟಿ ಬಚಾವೋ, ಭೇಟಿ ಪಡಾವೋ ಎಂಬುದಾಗಿ ಸರ್ಕಾರ ಹೆಣ್ಣು ಮಕ್ಕಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಕಡಿಮೆ ಆಗಿಲ್ಲ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಸಾಕ್ಷಿ.
ನಾಲ್ಕನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ತಂದೆಯೇ ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದಿರುವ ಕ್ರೂ*ರ ಘಟನೆ ನಡೆದಿದೆ. ಇಟ್ವಾ ಎಂಬಲ್ಲಿ ಈ ಕ್ರೌ*ರ್ಯ ನಡೆದಿದೆ.
ನೆಲಕ್ಕೆ ಬಡಿದು ಕೊಂದ ಪಾಪಿ!
30 ವರ್ಷದ ಬಬ್ಲು ದಿವಾಕರ್ ಈ ಕೃ*ತ್ಯ ಎಸಗಿದ ತಂದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಹೆಣ್ಣು ಮಕ್ಕಳ ಬಳಿಕ ದಿವಾಕರ್ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ. ಆದರೆ, ನಾಲ್ಕನೇ ಮಗುವೂ ಹೆಣ್ಣಾಯಿತು. ಇದರಿಂದ ಕೋಪಗೊಂಡ ಆತ ಭಾನುವಾರ(ಸೆ.15) ತಿಂಗಳ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ.
ಮೊದಲ ಹೆಂಡತಿಯಿಂದ ಈಗಾಗಲೇ ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ದಿವಾಕರ್ ಇದೇ ಕಾರಣದಿಂದ ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೂ ಮೊದಲ ಮಗು ಹೆಣ್ಣಾಗಿತ್ತು. ಇದೀಗ ಎರಡನೇ ಮಗುವೂ ಹೆಣ್ಣಾಗಿದೆ. ಒಂದು ತಿಂಗಳ ಹಿಂದೆ ಮಗು ಜನಿಸಿದ್ದು, ಭಾನುವಾರ ಮಗು ತಾಯಿಯ ಮಡಿಲಲ್ಲಿ ಮಲಗಿತ್ತು. ಈ ವೇಳೆ ಡ ದಿವಾಕರ್ ತಾಯಿಯಿಂದ ಮಗುವನ್ನು ಕಸಿದು, ನೆಲಕ್ಕೆ ಬಡಿದಿದ್ದಾನೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಗು ಅದಾಗಲೇ ಗಂಭೀ*ರ ಗಾ*ಯದಿಂದ ಮೃ*ತಪಟ್ಟಿತ್ತು.
ಇದನ್ನೂ ಓದಿ : ಹನಿಟ್ರ್ಯಾಪ್ : ಸುಂದರಿ ಮನೆಗೆ ಕರೆದಳೆಂದು ಹೋಗಿ 40 ಲಕ್ಷ ಕಳೆದುಕೊಂಡ ಉದ್ಯಮಿ
ಇದೀಗ ಹೆಂಡತಿ ನೀಡಿರುವ ದೂರಿನ ಆಧಾರದ ಮೇಲೆ. ಬಿಎನ್ಎಸ್ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
LATEST NEWS
ಮಂಗಳೂರು: ಮೂರು ದಿನದ ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋ-2024ಗೆ ಚಾಲನೆ
ಮಂಗಳೂರು: ಉದ್ಯಮಿಗಳ ಮತ್ತು ವೃತ್ತಿಪರರ ಸಂಘಟನೆ ಬಿಸ್ನೆಸ್ ನೆಟ್ವರ್ಕ್ ಇಂಟರ್ ನ್ಯಾಶನಲ್ – ಬಿಎನ್ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಗ್ ಬ್ರಾಂಡ್ಸ್ ಎಕ್ಸ್ಪೊ – 2024 ಪ್ರದರ್ಶನ ಇಂದು ಮಂಗಳೂರಿನ ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಶನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆರಂಭಗೊಂಡಿತು. ಮೂರು ದಿನಗಳ ಕಾಲ ನಡೆಯುವ ಎಕ್ಸ್ಪೋವನ್ನು ರಿಬ್ಬನ್ ಕತ್ತರಿಸುವ ಮೂಲಕ ಸ್ಪೀಕರ್ ಯು ಟಿ ಖಾದರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಖಾದರ್, ಇಂತಹ ಎಕ್ಸ್ಪೋಗಳು ನಮ್ಮ ರಾಜ್ಯ, ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಆರ್ಥಿಕವಾದ ಚಲನವಲನಗಳು ಎಲ್ಲಿ ಹೆಚ್ಚಾಗಿ ಆಗುತ್ತದೆಯೋ ಅಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಎಕ್ಸ್ಪೋ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ನುಡಿದರು.
ಬಿಎನ್ಐ ಎಕ್ಸ್ಪೋದಲ್ಲಿ ವಿಶೇಷ ಪುರವಣಿಯನ್ನು ಕೂಡಾ ಬಿಡುಗಡೆಗೊಳಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಇದನ್ನು ಬಿಡುಗಡೆಗೊಳಿಸಿದರು. ಈ ಬಗ್ಗೆ ಮಾತನಾಡಿದ ಅವರು, 125ಕ್ಕೂ ಹೆಚ್ಚಿನ ಮಳಿಗೆಗಳು ಈ ಎಕ್ಸ್ಪೋ ಯಶಸ್ವಿಯಾಲೆಂದು ಹಾರೈಸಿದರು. ಇಂತಹ ಎಕ್ಸ್ಪೋಗಳ ಪ್ರದರ್ಶನಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಆರ್ಥಿಕತೆಯ ವಿಚಾರದಲ್ಲಿ ಮುಂಚೂಣಿ ನಗರವಾಗಿರುವ ಮಂಗಳೂರಿನಲ್ಲಿ ಇಂತಹ ಎಕ್ಸ್ಪೋ ಮಾಡಲು ಪ್ರತ್ಯೇಕ ವ್ಯವಸ್ಥೆ ಆಗಬೇಕು ಎಂದರು.
ಬಿಎನ್ಐ ಕಾರ್ಯ ನಿರ್ವಾಹಕ ನಿರ್ದೇಶಕ ಗಣೇಶ್ ಶರ್ಮಾ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್. ಆಭರಣಗಳು, ವಿಮೆ, ಗಾರ್ಮೆಂಟ್ಸ್, ಐಟಿ ಉತ್ಪನ್ನಗಳು, ಸಾಫ್ಟ್ವೇರ್, ಕಚೇರಿ ಮತ್ತು ಗೃಹ ಪೀಠೋಪಕರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ 120 ಕ್ಕೂ ಆಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನ ಇರುತ್ತದೆ ಎಂದರು.
ಬಿಎನ್ಐ ಸದಸ್ಯರಾಗಿರುವ ಹಾಗೂ ಎಕ್ಸ್ಪೋದಲ್ಲಿ ಪಾಲ್ಗೊಂಡ ಉದ್ಯಮಿಗಳನ್ನು ಇದೇ ವೇಳೆ ಗೌರವಿಸಲಾಯಿತು. ವಿವಿಧ ಕಂಪೆನಿಗಳಿಂದ ನೀಡಲಾಗುತ್ತಿರುವ ಆಫರ್ಗಳನ್ನು ಪ್ರಕಟಿಸಲಾಯಿತು. ಮಂಗಳೂರು- ಉಡುಪಿ ಜಗತ್ತಿನ ಉದ್ಯಮಿಗಳ ಸಂಘಟನೆ ಬಿಸ್ನೆಸ್ ನೆಟ್ವರ್ಕ್ ಇಂಟರ್ ನ್ಯಾಶನಲ್ ನ ಭಾಗವಾಗಿದ್ದು, ನೂರಕ್ಕೂ ಅಧಿಕ ವಿವಿಧ ವ್ಯಾಪಾರ- ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 310 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ವರ್ಷದ ಎಕ್ಸ್ಪೊ ಈ ಸರಣಿಯ 3 ನೇ ಆವೃತ್ತಿಯಾಗಿದೆ. ಕಾರ್ಯಕ್ರಮದಲ್ಲಿ ಎಕ್ಸ್ಪೋ ಅಧ್ಯಕ್ಷ ಮೋಹನ್ ರಾಜ್, ಬಿಎನ್ ಐ ಸದಸ್ಯ ಮಹೇಶ್ ಶೆಟ್ಟಿ, ನಿರ್ದೇಶಕ ಸುನಿಲ್ ದತ್ ಪೈ, ಪ್ರಜ್ವಲ್ ಶೆಟ್ಟಿ, ಡಾ. ಸಚಿನ್ ನಡ್ಕ , ಪ್ರೀತಿ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.