FILM
‘ಸಾಂಕೇತ್’ ಟ್ರೈಲರ್ ರಿಲೀಸ್…ವ್ಹಾವ್!ಥ್ರಿಲ್ಲಿಂಗ್ ಅಂದ್ರು ವೀಕ್ಷಕರು
ಮಂಗಳೂರು : ಪೋಸ್ಟರ್, ಟೀಸರ್ ಮೂಲಕ ಕುತೂಹಲ ಹುಟ್ಟು ಹಾಕಿದ್ದ ಸಿನಿಮಾ ‘ಸಾಂಕೇತ್’. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡ ವಿನೂತನ ಚಿತ್ರ ಅನ್ನೋದನ್ನು ಟ್ರೈಲರ್ ಕೂಡ ಕನ್ಫಮ್ ಮಾಡಿದೆ. ಯಾರು ಈ ಸಾಂಕೇತ್ ಅನ್ನೋ ಕೌತುಕತೆ ಟ್ರೈಲರ್ ನೋಡಿದವರಲ್ಲೂ ಹುಟ್ಟುವಂತೆ ಮಾಡಿದೆ.
ಟ್ರೈಲರ್ ನೋಡಿದ್ರೆ, ಇದೊಂದು ಹಾರರ್ ಸಿನಿಮಾನಾ? ಅಥವಾ ಮಾಟ, ಮಂತ್ರ ಇತ್ಯಾದಿ ಅಂಶಗಳನ್ನೊಳಗೊಂಡ ಸಿನಿಮಾನಾ? ಅಥವಾ ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾನಾ? ಎಂಬ ಪ್ರಶ್ನೆ ಮೂಡೋದು ಸಹಜ. ಚಿತ್ರದ ನಿರ್ದೇಶನ, ಸೌಂಡ್ ಡಿಸೈನಿಂಗ್, ಸಂಕಲನ ಜ್ಯೋತ್ಸ್ನಾ ಕೆ. ರಾಜ್ ಮಾಡಿದ್ದಾರೆ.
ಸ್ಕ್ರೀನ್ ಪ್ಲೇ, ಸಿನಿಮಾಟೋಗ್ರಾಫಿ, ಬಿಜಿಎಂ ಆ್ಯಂಡ್ ವಿಎಫ್ ಎಕ್ಸ್ ರಾಜ್ ಕಾರ್ತಿಕ್ ಮಾಡಿದ್ದಾರೆ. ಸಹಾಯಕ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಸನತ್ ಕುಮಾರ್ ಕೆಲಸ ಮಾಡಿದ್ದಾರೆ. ಪ್ರಕಾಶ್ ರಾವ್ ಸಾಹಿತ್ಯ ಚಿತ್ರಕ್ಕಿದೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿ ನಿಶಾನ್ ತೆಲ್ಲಿಸ್ ಕಾರ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ : WATCH : ಕೇದಾರನಾಥ ಬಳಿ ಭಾರಿ ಹಿಮಪಾತ; ವೀಡಿಯೋ ವೈರಲ್
ತುಳನಾಡ ಪ್ರತಿಭೆ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರಿಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮೊದಲಾವರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಇನ್ನು ಬಿಡುಗಡೆಯಾಗಿರುವ ಟ್ರೈಲರ್ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ವ್ಹಾವ್…ಥ್ರಿಲ್ಲಿಂಗ್ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದು, ಇನ್ನು ಕೆಲವರು ಸಿನಿಮಾ ನೋಡಲು ಕಾಯುತ್ತಿದ್ದೇವೆ ಎಂದಿದ್ದಾರೆ.
FILM
ಜೊತೆಯಾಗುತ್ತಿದ್ದಾರೆ ತ್ಯಾಗರಾಜರು…ಇದು ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’!
ತಮ್ಮ ನೆಚ್ಚಿನ ನಟರ ಸಿನಿಮಾಗಳು ಸೆಟ್ಟೇರುತ್ತವೆ ಅಂದಾಗ ಅಭಿಮಾಗಳಲ್ಲಿ ಸಂಭ್ರಮ ಮನೆ ಮಾಡುತ್ತೆ. ಅಂತಹುದರಲ್ಲಿ ಜನಪ್ರಿಯ ನಾಯಕರಿಬ್ಬರು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಂದ್ರೆ ಹೇಳ್ಬೇಕಾ ಡಬಲ್ ಸಂಭ್ರಮ. ಇದೀಗ ಇಂತಹ ಸಂಭ್ರಮ ಕೊಡ್ತಾ ಇರೋದು ಅಂದ್ರೆ ರಮೇಶ್ ಅರವಿಂದ್ ಹಾಗೂ ಗಣೇಶ್.
ತ್ಯಾಗರಾಜರ ಸಮಾಗಮ :
ಇಂದು(ಜು.2) ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಹೀಗಾಗಿ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅದರಲ್ಲಿ ಗಣೇಶ್ – ರಮೇಶ್ ಕಾಂಬಿನೇಷನ್ ಚಿತ್ರದ ಪೋಸ್ಟರ್ ಕೂಡ ಒಂದು. ಈ ಪೋಸ್ಟರ್ ನೋಡಿ ಇಬ್ಬರ ಅಭಿಮಾನಿಗಳಿಗೆ ಸಂತಸವಾಗಿರೋದು ಸುಳ್ಳಲ್ಲ.
ಕನ್ನಡ ಚಿತ್ರರಂಗದಲ್ಲಿ ‘ತ್ಯಾಗರಾಜ’ ಎಂದೇ ರಮೇಶ್ ಅರವಿಂದ್ ಫೇಮಸ್. ಬ್ಯಾಕ್ ಟು ಬ್ಯಾಕ್ ಹಿಟ್ಗಳನ್ನು ಕೊಟ್ಟಿದ್ದ ರಮೇಶ್ ಅರವಿಂದ್ ಪ್ರತಿ ಸಿನಿಮಾದಲ್ಲೂ ನಾಯಕಿಯನ್ನು ಕಳೆದುಕೊಂಡಿದ್ದರು. ಹಾಗಾಗಿ ಅವರನ್ನು ಎಂದು ಕರೆಯಲಾಗುತ್ತಿತ್ತು. ಮುಂಗಾರು ಮಳೆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ತ್ಯಾಗರಾಜ ಪಟ್ಟ ಸಿಕ್ಕಿತ್ತು. ಇದೀಗ ಇವರಿಬ್ಬರು ಒಂದಾಗುತ್ತಿರೋ ಅಭಿಮಾನಿಗೆ ವ್ಹಾವ್ ಎಂದೆನಿಸಿರೋದು ಸುಳ್ಳಲ್ಲ.
ಆಸಕ್ತಿದಾಯಕವಾಗಿದೆ ಪೋಸ್ಟರ್ :
ಇನ್ನು ರಿಲೀಸ್ ಆಗಿರೋ ಪೋಸ್ಟರ್ ಆಸಕ್ತಿ ಹುಟ್ಟು ಹಾಕಿದೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಅವರ ಯಂಗ್ ಇರುವ ಫೋಟೊಗಳನ್ನು ಬಳಸಲಾಗಿದೆ. ಒಂದು ಕಾಗದದ ಲಕೋಟೆ, ಅದರ ಮೇಲೊಂದು ಪೀಪಿ ಇಡಲಾಗಿದೆ. ವಿದೇಶದ ಸೀಲೊಂದು ಇದೆ. ಹಾಗಾಗಿ ಚಿತ್ರದಲ್ಲೇನೋ ವಿಶೇಷತೆ ಇದೆ ಅನ್ನಿಸುತ್ತೆ. ಆಗಸ್ಟ್ 16ಕ್ಕೆ ಫಸ್ಟ್ ಲುಕ್ ರಿಲೀಸ್ ಆಗುತ್ತೆ ಎಂದಿರುವ ಚಿತ್ರತಂಡ ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’ ಎಂದು ಬರೆದುಕೊಂಡು, ಪೋಸ್ಟರ್ ಹಂಚಿಕೊಂಡಿದೆ.
ಇದನ್ನೂ ಓದಿ :ದರ್ಶನ್ ಅಭಿಮಾನಿಗಳ ಹುಚ್ಚುತನ; ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್
ಅಂದಹಾಗೆ, ಪುಷ್ಪಕ ವಿಮಾನ, ಇನ್ಸ್ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ನಿರ್ದೇಶಕನ ಟೋಪಿ ಹಾಕಿದ್ದಾರೆ.
FILM
ಕೊನೆಗೂ ಮೌನ ಮುರಿದ್ರಾ ಸುಮಲತಾ..! ವೈರಲ್ ಪೋಸ್ಟ್ನಲ್ಲಿ ಏನಿದೆ ಗೊತ್ತಾ?
ಬೆಂಗಳೂರು/ಮಂಗಳೂರು: ನಟ ದರ್ಶನ್ ಜೈಲು ಸೇರಿದ ಮೇಲೆ ಸುಮಲತಾ ಅಂಬರೀಶ್ ಮೌನಕ್ಕೆ ಜಾರಿದ್ದರು. ಚಿತ್ರರಂಗದ ಕೆಲವು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನು ಕೆಲವರು ಮೌನಕ್ಕೆ ಜಾರಿದ್ದಾರೆ. ಅದರಲ್ಲೂ ದರ್ಶನ್ ಆಪ್ತರು ಎಣಿಸಿಕೊಂಡವರು, ದರ್ಶನ್ನಿಂದ ಸಹಾಯ ಪಡೆದುಕೊಂಡವರು ಈಗ ಬೆಂಬಲ ನೀಡುತ್ತಿಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ.
ದರ್ಶನ್ ನನ್ನ ದೊಡ್ಡ ಮಗ ಎಂದೇ ಕರೆಯುತ್ತಿದ್ದರು ಸುಮಲತಾ. ಇನ್ನು ದರ್ಶನ್ ಕೂಡಾ ಸುಮಲತಾರವರನ್ನು ಮದರ್ ಇಂಡಿಯಾ ಎಂದೇ ಹೇಳುತ್ತಿದ್ದರು. ಇಷ್ಟೆಲ್ಲಾ ಇರುವಾಗ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲು ಸೇರಿದ ಮೇಲೆ ಸುಮಲತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ತಾಯಿಯಾಗುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ..! ಹೊಸ ಅತಿಥಿ ಆಗಮನ ಯಾವ್ಯಾಗ?
ಈ ಹಿಂದೆ ಸುಮಲತಾ ಪರ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ”ಅಮ್ಮ ಕಣ್ಣು ಮುಚ್ಚಿ ಹಾಳು ಬಾವಿಗೆ ಬೀಳು ಅಂದ್ರೂ ನಾನು ಬೀಳುತ್ತೇನೆ. ಅಮ್ಮ ಏನು ಹೇಳಿದರೂ ಶಿರಸಾವಹಿಸಿ ಪಾಲಿಸುವುದು ನನ್ನ ಹಾಗೂ ನನ್ನ ತಮ್ಮನ ಕೆಲಸ. ಅಷ್ಟೊಂದು ಗಾಢವಾದ ಬಾಂಧವ್ಯವಿದೆ ಆ ಮನೆಗೂ ನನಗೂ” ಎಂದು ಹೇಳಿದ್ದರು. ಆದರೆ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೂ ಸುಮಲತಾ ಯಾಕೆ ಅವರ ಪರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದರು.
ಇದೀಗ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಭಗವದ್ಗೀತೆಯಲ್ಲಿದ್ದ ಕೃಷ್ಣನ ಸಾಲುಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. “ಎಲ್ಲವೂ ಸರಿ ಹೋಗುವ ಮೊದಲು ಬಹಳಷ್ಟು ತಪ್ಪಾಗುತ್ತದೆ. ಕೇವಲ ನಂಬಿಕೆ ಇರಲಿ” ಎನ್ನುವ ಸಾಲುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಟ ದರ್ಶನ್ ಗೆ ಬಂದಿರುವ ಸಂಕಷ್ಟಕ್ಕೆ ಪರೋಕ್ಷವಾಗಿ ಸುಮಲತಾ ಈ ಪೋಸ್ಟ್ ಮಾಡಿದ್ದಾರೆ ಎಂದು ಹಲವರು ಅಂದುಕೊಂಡಿದ್ದಾರೆ.
FILM
ತಾಯಿಯಾಗುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ..! ಹೊಸ ಅತಿಥಿ ಆಗಮನ ಯಾವ್ಯಾಗ?
ಕೊಡಗು/ಮಂಗಳೂರು: ಹರ್ಷಿಕಾ ಪೂಣಚ್ಚ ಕನ್ನಡದ ಕ್ಯೂಟ್ ನಟಿ. ಕಳೆದ ವರ್ಷ ಭುವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಕ್ಯೂಟ್ ಕಪಲ್ ಗುಡ್ ನ್ಯೂಸ್ ನೀಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಫೋಟೋಶೂಟ್ ಮಾಡಿಕೊಂಡಿದ್ದು ಸೋ಼ಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರೂ ಪ್ರೀತಿಯಲ್ಲಿದ್ದರು. ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯಲ್ಲಿ ತಮ್ಮದೇ ಕೊಡವ ಶೈಲಿಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಯ ಮದುವೆಗೆ ಸ್ಯಾಂಡಲ್ವುಡ್ನ ತಾರೆಯರು ಕೂಡ ಸಾಕ್ಷಿಯಾಗಿದ್ದರು. ಈಗ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಷಯವನ್ನು ಫೋಟೊಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.
ಒಂದೇ ವರ್ಷದೊಳಗೆ ಸಿಹಿಸುದ್ದಿ ಕೊಟ್ಟ ನಟ-ನಟಿ:
23 ಆಗಸ್ಟ್ 2023ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ಇದೀಗ ಒಂದೇ ವರ್ಷದಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫ್ಯಾಮಿಲಿ ಜೊತೆ ಸಾಂಪ್ರದಾಯವಾಗಿ ಫೊಟೋಶೂಟ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಜೊತೆಗೆ ಹೀಗೆ ಬರೆದುಕೊಂಡಿದ್ದಾರೆ. ‘ಗೆಳೆಯರೆ, ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವನದ ಮೇಲೆ ಇರಲಿ. ಅಕ್ಟೋಬರ್ಗೆ ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಭುವನ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಹರ್ಷಿಕಾ ಪೂಣಚ್ಚ ಕೂಡಾ ಶೇರ್ ಮಾಡಿಕೊಂಡಿದ್ದಾರೆ.
‘ಸಾಂಕೇತ್’ ಟ್ರೈಲರ್ ರಿಲೀಸ್…ವ್ಹಾವ್!ಥ್ರಿಲ್ಲಿಂಗ್ ಅಂದ್ರು ವೀಕ್ಷಕರು
ಸದ್ಯ ಸಿನೆಮಾ ನಟನೆಗಳಿಂದ ದೂರವಿರುವ ಹರ್ಷಿಕಾ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಬ್ಯುಸಿಯಾಗಿದ್ದರು. ಒಂದಲ್ಲಾ ಒಂದು ಕೊಡಗು ಶೈಲಿಯ ಅಡುಗೆಗಳನ್ನು ಮಾಡಿ ವೀಕ್ಷಕರಿಗೆ ಪರಿಚಯಿಸುತ್ತಿದ್ದರು. ಈ ಗ್ಯಾಪ್ನಲ್ಲೇ ತಮ್ಮ ಫ್ಯಾನ್ಸ್ಗೆ ಖುಷಿ ವಿಚಾರ ನೀಡಿದ್ದಾರೆ.
- DAKSHINA KANNADA5 days ago
ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು
- DAKSHINA KANNADA4 days ago
ಶಿರಾಡಿಘಾಟ್ ನಲ್ಲಿ ಸರಣಿ ಅಪಘಾ*ತ; ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿ*ಕ್ಕಿ
- DAKSHINA KANNADA6 days ago
ಭಾರೀ ಮಳೆಗೆ ಧರೆ ಕುಸಿದು ಮನೆಗೆ ಹಾನಿ, ಮಣ್ಣಿನಡಿ ಸಿಲುಕಿದ ಮಕ್ಕಳ ರಕ್ಷಣೆ
- DAKSHINA KANNADA4 days ago
ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!
Pingback: WATCH VIDEO : ಕಣ್ಣಿಗೆ ಬಿತ್ತು ಹಲಸಿನ ಮರ...ಗಜರಾಜ ಹಲಸಿನ ಹಣ್ಣನ್ನು ಹೇಗೆ ಕೊಯ್ದ ಗೊತ್ತಾ!? - NAMMAKUDLA NEWS - ನಮ್ಮಕುಡ್ಲ ನ್ಯೂಸ್
Pingback: ಒಂದೇ ವರ್ಷದೊಳಗೆ ಗುಡ್ನ್ಯೂಸ್ ಕೊಟ್ಟ ಹರ್ಷಿಕಾ ಪೂಣಚ್ಚ ದಂಪತಿ..! - NAMMAKUDLA NEWS - ನಮ್ಮಕುಡ್ಲ ನ್ಯೂಸ್