Connect with us

    LIFE STYLE AND FASHION

    ಟೀ, ಕಾಫೀ ಜೊತೆ ರಸ್ಕ್ ತಿನ್ನೋರಿಗೆ ಅಪಾಯ ಕಟ್ಟಿಟ್ಟ ಬುತ್ತಿ..!!

    Published

    on

    ಮಂಗಳುರು : ರಸ್ಕ್‌ಗಳು ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ರೀತಿಯ ಅಂಶಗಳನ್ನು ಹೊಂದಿವೆ. ಸರಳವಾಗಿ ಹೇಳುವುದಾದರೆ ಇದು ಒಂದು ರೀತಿಯಲ್ಲಿ, ನಿಧಾನವಾಗಿ ದೇಹಕ್ಕೆ ಸೇರಿಕೊಳ್ಳುವ ವಿಷದಂತೆ ಜೊತೆಗೆ ಇದು ನಿಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು. ಇವು ಹೃದಯ ಸಂಬಂಧ ರೋಗಗಳಿಗೆ ಕಾರಣವಾಗುತ್ತದೆ ಎನ್ನಬಹುದು.

     

    ಅನೇಕರು ದಿನನಿತ್ಯ ಬೆಳಿಗ್ಗೆ ಬಿಸಿಬಿಸಿ ಚಹಾದೊಂದಿಗೆ ರಸ್ಕ್, ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದೇ ತಿಂಡಿ ಸಂಜೆಯೂ ಅನುಕರಣೆಯಾಗುತ್ತದೆ. ಹಲವರು ಇದನ್ನು ಆರೋಗ್ಯಕರ ತಿಂಡಿ ಎಂದು ಪರಿಗಣಿಸುತ್ತಾರೆ. ಆದರೆ ರಸ್ಕ್ ಗಳು ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ಇಲ್ಲಿದೆ ನೋಡಿ ಡೀಟೇಲ್ಸ್.

     

    ರಸ್ಕ್‌ ಏಕೆ ಆರೋಗ್ಯಕ್ಕೆ ಹಾನಿಕರ ? 

    ಇದರಲ್ಲಿ ಟ್ರಾನ್ಸ್ ಕೊಬ್ಬುಗಳಿವೆ. ಇವು ದೇಹದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಟ್ರಾನ್ಸ್ ಕೊಬ್ಬಿನ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗಗಳ ಅಪಾಯವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಇದಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಮೈದಾ ಹಿಟ್ಟನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಒಂದೇ ಸಲ ಏರಿಕೆಯಾಗುತ್ತದೆ. ಅದಲ್ಲದೆ ಇವುಗಳನ್ನು ಮತ್ತೆ ಮತ್ತೆ ಬೇಯಿಸುವುದರಿಂದ ಅವುಗಳ ಪೌಷ್ಠಿಕಾಂಶದ ಮೌಲ್ಯವೂ ಕೂಡ ಕಡಿಮೆಯಾಗುತ್ತದೆ

     

     

    Click to comment

    Leave a Reply

    Your email address will not be published. Required fields are marked *

    LATEST NEWS

    ದೀಪಾವಳಿಯಂದು ಈ ಜೀವಿಗಳನ್ನು ನೋಡಿದ್ರೆ ನಿಮ್ಮ ಲಕ್ ಚೇಂಜ್!

    Published

    on

    2024 ರ, ದೀಪಾವಳಿ ಹಬ್ಬವು ಅಕ್ಟೋಬರ್ 31 ರಂದು ಬಂದಿದೆ. ಈ ದಿನದಂದು ಕಾಣಿಸಿಕೊಳ್ಳುವ ಅನೇಕ ವಿಷಯಗಳು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಕೆಲವು ಜೀವಿಗಳನ್ನು ನೋಡುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯಿದೆ.

    ದೀಪಾವಳಿಯ ರಾತ್ರಿ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಕೆಲವು ಜೀವಿಗಳು ಕಾಣಿಸಿಕೊಂಡರೆ, ಅದು ಲಕ್ಷ್ಮಿ ಆಗಮನದ ಸೂಚನೆಯಂದು ಪರಿಗಣಿಸಲಾಗುತ್ತದೆ. ಲಕ್ಷೀದೇವಿ ಸಂಪನ್ನಗೊಂಡು ನಿಮ್ಮನ್ನು ಆರ್ಥಿಕ ಸಮಸ್ಯೆಯಿಂದ ಮುಕ್ತಿ ನೀಡಿ ಸಂತೋಷ ನೀಡುತ್ತಾಳೆ ಎಂದು ಶಕುನ ಶಾಸ್ತ್ರ ಹೇಳುತ್ತೆ.

    ದೀಪಾವಳಿಯ ದಿನದಂದು ನೀವು ಮನೆಯಲ್ಲಿ ಹಲ್ಲಿಯನ್ನು ನೋಡಿದರೆ, ಶುಭ ಶಕುನ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹಲ್ಲಿಯನ್ನು ಓಡಿಸಬೇಡಿ. ದೀಪಾವಳಿ ಹಬ್ಬದಂದು ಹಲ್ಲಿಯನ್ನು ನೋಡುವುದು ಮುಂದಿನ ದಿನಗಳಲ್ಲಿ ನಿಮಗೆ ಹಣದ ಕೊರತೆಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

    ದೀಪಾವಳಿಯ ರಾತ್ರಿ ನೀವು ಗೂಬೆಯನ್ನು ನೋಡಿದರೆ, ಅದನ್ನು ತುಂಬಾ ಮಂಗಳಕರ ಎಂಬ ನಂಬಿಕೆಯಿದೆ. ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನ ಎಂದೂ ಪರಿಗಣಿಸಲಾಗುತ್ತದೆ. ದೀಪಾವಳಿಯ ರಾತ್ರಿ ಗೂಬೆಯನ್ನು ಕಂಡರೆ ನಿಮ್ಮ ಮನೆಗೆ ಲಕ್ಷ್ಮಿ ದೇವಿ ಬರಲಿದ್ದಾಳೆ ಎಂದರ್ಥ.

     

     

    ಧರ್ಮಗ್ರಂಥಗಳ ಪ್ರಕಾರ ದೀಪಾವಳಿಯಂದು ನಿಮ್ಮ ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಹೆಗ್ಗಣ ಕಂಡರೆ ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ನೀವು ತುಂಬಾ ಅದೃಷ್ಟವಂತರು ಮತ್ತು ಹಣಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳಲಿವೆ ಎಂಬ ನಂಬಿಕೆಯಿದೆ.

     

    ಇದಲ್ಲದೇ ದೀಪಾವಳಿಯಂದು ಕೇಸರಿ ಬಣ್ಣದ ಹಸು, ಬೆಕ್ಕನ್ನು ನೋಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಲಕ್ಷ್ಮಿ ದೇವಿಯ ಆಗಮನದ ಸೂಚಕವೆಂದು ಪರಿಗಣಿಸಲಾಗಿದೆ.

    Continue Reading

    LATEST NEWS

    ಊಟದ ನಂತರ ಸಣ್ಣ ನಿದ್ದೆ ಮಾಡುವುದು ಒಳ್ಳೆಯದೇ?

    Published

    on

    ಮಂಗಳೂರು: ಸಾಮಾನ್ಯವಾಗಿ ಸಾಕಷ್ಟು ಜನ ಮಧ್ಯಾಹ್ನದ ಊಟದ ನಂತರ ಮಲಗುವ ಅಥವಾ ಸ್ವಲ್ಪ ಸಮಯದ ವರೆಗೆ ಕಿರು ನಿದ್ದೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಊಟದ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಮಗೆ ಏಕಕಾಲದಲ್ಲಿ ಮಂಪರು ಮತ್ತು ದಣಿವನ್ನು ಉಂಟುಮಾಡುತ್ತದೆ. ಆದರೆ ಹಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ? ಮಧ್ಯಾಹ್ನದ ನಿದ್ರೆ ದೇಹಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ? ನಿಮಗೂ ಈ ರೀತಿಯ ಪ್ರಶ್ನೆಗಳಿದ್ದರೆ ಅವುಗಳಿಗೆ ಇಲ್ಲಿದೆ ಉತ್ತರ.

    ವೈದ್ಯರು ಸಾಮಾನ್ಯವಾಗಿ 7 ರಿಂದ 8 ಗಂಟೆಗಳ ನಿದ್ರೆ ಒಳ್ಳೆಯದು ಎಂದು ಹೇಳುತ್ತಾರೆ. ಹೆಚ್ಚಿನ ಸಮಯದಲ್ಲಿ ನೀವು ಕೆಲಸ, ಕುಟುಂಬದ ಜವಾಬ್ದಾರಿಗಳು ಮತ್ತು ಇತರ ಕಾರಣಗಳಿಂದಾಗಿ ಬೆಳಿಗ್ಗೆ ಬೇಗನೆ ಎದ್ದೇಳಬೇಕಾಗುತ್ತದೆ. ಅಂತಹ ಸಮಯದಲ್ಲಿ ಮಧ್ಯಾಹ್ನ ಮಲಗಬೇಕು. ಹೆಚ್ಚುತ್ತಿರುವ ಕೆಲಸದ ಹೊರೆ, ಬಿಡುವಿಲ್ಲದ ಜೀವನಶೈಲಿ ಮತ್ತು ಒತ್ತಡದ ಸಂದರ್ಭಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಉಲ್ಲಾಸ ನೀಡುತ್ತದೆ ಜೊತೆಗೆ ದಣಿವನ್ನು ಕಡಿಮೆ ಮಾಡುತ್ತದೆ.

    ಮಧ್ಯಾಹ್ನದ ನಿದ್ರೆಯು ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ವಿಶ್ರಾಂತಿಗೊಳಿಸುತ್ತದೆ. ದಿನಕ್ಕೆ ಸುಮಾರು 1 ಗಂಟೆ ಮಲಗುವುದು ಇಡೀ ದೇಹದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಅಲ್ಲದೆ, ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ನಿದ್ದೆ ಮಧ್ಯಾಹ್ನದ ಸಮಯದಲ್ಲಿ ಒಳ್ಳೆಯದಲ್ಲ.

    ಆದರೆ, ಮಧ್ಯಾಹ್ನ ಅರ್ಧ ಗಂಟೆ ಅಥವಾ 1 ಗಂಟೆಗಿಂತ ಹೆಚ್ಚು ನಿದ್ರೆ ಮಾಡಬೇಡಿ. ಇದಕ್ಕಿಂತ ಹೆಚ್ಚು ಸಮಯ ಮಲಗುವುದು ನಿಮ್ಮ ದೇಹದ ಜೈವಿಕ ಗಡಿಯಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ನೈಸರ್ಗಿಕವಾಗಿ ಬರುವ ನಿದ್ರೆಗೆ ಇದು ಅಡ್ಡಿಯಾಗುತ್ತದೆ. ಆದ್ದರಿಂದ ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡುವವರು ಹಗಲಿನಲ್ಲಿ ಅರ್ಧ ಗಂಟೆಗಿಂತ ಹೆಚ್ಚು ನಿದ್ರೆ ಮಾಡಬಾರದು ಎಂದು ವೈದ್ಯರು ಹೇಳುತ್ತಾರೆ.

    ಮಕ್ಕಳಿಗೆ ಮಧ್ಯಾಹ್ನದ ನಿದ್ರೆ ಒಳ್ಳೆಯದಲ್ಲ

    ಶಾಲಾ ವಿದ್ಯಾರ್ಥಿಗಳು ಮನೆಗೆ ಬಂದ ಮೇಲೆ ಅಂದರೆ ಸಾಮಾನ್ಯವಾಗಿ 3 ಗಂಟೆಯ ನಂತರ ಶಾಲೆಯಿಂದ ಮನೆಗೆ ಬಂದರೆ ಅವರನ್ನು ಆಡಲು ಬಿಡಿ. ಈ ರೀತಿ ಮಾಡಿದರೆ, ಮಕ್ಕಳು ರಾತ್ರಿ ಬೇಗನೆ ಮಲಗಲು ಒಗ್ಗಿಕೊಳ್ಳುತ್ತಾರೆ. ಮಧ್ಯಾಹ್ನ 3 ಗಂಟೆಯ ನಂತರ ಮಲಗುವುದರಿಂದ ರಾತ್ರಿಯಲ್ಲಿ ಮಕ್ಕಳ ನಿದ್ರೆಗೆ ಭಂಗವಾಗುತ್ತದೆ. ಹಾಗಾಗಿ ಮಕ್ಕಳು ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಒಳ್ಳೆಯದಲ್ಲ.

    Continue Reading

    LATEST NEWS

    ನೀವು ಸಹೋದರಿ, ಸ್ನೇಹಿತರ ಮೇಕ್​ಅಪ್ ಬಳಸುತ್ತಿದ್ದೀರಾ..? ಫಸ್ಟ್​ ಈ ವಿಷ್ಯ ತಿಳಿದುಕೊಳ್ಳಿ

    Published

    on

    ಹೆಣ್ಮಕ್ಕಳ ಪ್ರೀತಿಯ ಸಂಗಾತಿ ಮೇಕ್​ಅಪ್ ಕಿಟ್. ಸೌಂದರ್ಯದ ಗುಟ್ಟನ್ನು ಹುದುಗಿಟ್ಟುಕೊಂಡಿರುವ ಈ ಕಿಟ್​​ನಲ್ಲಿ ಅಂದದ ಹೆಣ್ಣಿಗೆ ಮತ್ತಷ್ಟು ಚೆಂದ ಕಾಣಲು ಏನೆಲ್ಲಾ ಬೇಕೋ ಅವೆಲ್ಲವೂ ಬಚ್ಟಿಟ್ಟುಕೊಂಡಿರುತ್ತದೆ. ವಿಷಯ ಅದಲ್ಲ, ಒಬ್ಬರು ಬಳಸಿದ ಮೇಕ್​ಅಪ್ ಐಟಂಗಳನ್ನು ಇನ್ನೊಬ್ಬರು ಬಳಸಬಹುದಾ ಅನ್ನೋದು!

    ಸಾಮಾನ್ಯವಾಗಿ ಮೇಕ್ಅಪ್ ಹಂಚಿಕೊಳ್ಳಲು ಯಾರೂ ಸಲಹೆ ನೀಡಲ್ಲ. ವಿಶೇಷವಾಗಿ ನಿಮ್ಮ ಕಣ್ಣುಗಳು, ತುಟಿಗಳು ಅಥವಾ ಲೋಳೆಯ ಪೊರೆಗಳೊಂದಿಗೆ ಸಂಪರ್ಕಕ್ಕೆ ಬರುವ ಐಟಂಗಳಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಸ್ಟೈ, ಪಿಂಕ್ ಐ ಮತ್ತು ಶೀತ, ಹುಣ್ಣುಗಳಂತಹ ಸೋಂಕುಗಳಿಗೆ ಕಾರಣ ಆಗಬಹುದು. ಮತ್ತೊಬ್ಬರು ಬಳಸಿದ ವಸ್ತುಗಳನ್ನು ಯೂಸ್ ಮಾಡೋದ್ರಿಂದ ನಿಮ್ಮ ಚರ್ಮಕ್ಕೆ ಸೂಕ್ತವಾಗದಿದ್ದರೆ ಮೊಡವೆಗಳಿಗೂ ದಾರಿ ಮಾಡಿ ಕೊಡುತ್ತದೆ ಎನ್ನುತ್ತಾರೆ ತಜ್ಞರು.

    ಬ್ಯಾಕ್ಟೀರಿಯಾ: ಮೇಕ್​ಅಪ್ ವಸ್ತುಗಳಿಂದ ಬ್ಯಾಕ್ಟೀರಿಯಾಗಳು ಶೇಖರಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಅವುಗಳನ್ನು ಮುಚ್ಚದೆ ಅಥವಾ ತೆರೆದಿದ್ದರೆ.

    ಕಣ್ಣುಗಳು: ಕಣ್ಣಿನ ಮೇಕಪ್ ಐಟಂಗಳಾದ ಮಸ್ಕರಾ, ಐಲೈನರ್ ಮತ್ತು ಕಾಜಲ್ ಹಂಚಿಕೊಳ್ಳುವುದು ಕಣ್ಣಿನ ಸೋಂಕುಗಳಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾಗಳು ಕಾಂಟ್ಯಾಕ್ಟ್ ಲೆನ್ಸ್‌ಗಳಿಗೆ ಅಂಟಿಕೊಳ್ಳಬಹುದು.

    ತುಟಿಗಳು: ಲಿಪ್​ಸ್ಟಿಕ್ ಅಥವಾ ತುಟಿಗೆ ಹಚ್ಚುವ ಬಣ್ಣವನ್ನು ಹಂಚಿಕೊಳ್ಳುವುದು ಕೂಡ ಅಪಾಯಕಾರಿ. ಇದರಿಂದಲೂ ಬ್ಯಾಕ್ಟೀರಿಯಾಗಳು ಹರಡುತ್ತವೆ.

    ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು: ಬೇರೆಯವರ ಬ್ರಷ್‌ಗಳು ಮತ್ತು ಅಪ್ಲಿಕೇಟರ್‌ಗಳು ಎಷ್ಟು ಸ್ವಚ್ಛವಾಗಿವೆ ಎಂದು ತಿಳಿಯುವುದು ಕಷ್ಟ. ಮೇಕ್ಅಪ್ ಹಂಚಿಕೊಳ್ಳುವ ಬದಲು ನೀವು ಸ್ವಂತ ಮೇಕ್​ಅಪ್ ಹೊಂದಿರೋರು ಒಳ್ಳೆಯದು.

    Continue Reading

    LATEST NEWS

    Trending