Connect with us

sports

ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಅವರ ಸಾಲಿಗೆ ಸೇರಿದ ರೋಹಿತ್ ಶರ್ಮಾ…!

Published

on

ಓಪನರ್ ಆಗಿ ಉತ್ತಮ ಫಾರ್ಮ್‌ನಲ್ಲಿರೋ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೀಗ ಕ್ರಿಕೆಟ್ ದಂತಕತೆ ಭಾರತದ ಸುನಿಲ್ ಗಾವಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ದ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಶತಕ ಬಾರಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ನಲ್ಲಿ ಇದು ರೋಹಿತ್ ಶರ್ಮಾರ 12ನೇ ಶತಕವಾಗಿದ್ದು, IPL ನ 5 ಶತಕ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 48 ನೇ ಶತಕವಾಗಿದೆ. ಇನ್ನು ಇಂಗ್ಲೆಂಡ್ ತಂಡದ ವಿರುದ್ಧ ಇದು ರೋಹಿತ್‌ ಶರ್ಮಾ ಅವರ ನಾಲ್ಕನೇ ಶತಕವಾಗಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಸುನಿಲ್ ಗವಾಸ್ಕರ್ ಹೊಡೆದಿದ್ದ ನಾಲ್ಕು ಶತಕವನ್ನು ಸಮಗಟ್ಟಿದ್ದಾರೆ.

ಮತ್ತೊಂದು ದಾಖಲೆ :

ಇನ್ನು ಇದೇ ವೇಳೆ ಇನ್ನೊಂದು ದಾಖಲೆ ಬರೆದಿರುವ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಓಪನಿಂಗ್ ಬ್ಯಾಟರ್‌ಗಳ ಪಟ್ಟಿಯಲ್ಲೂ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಆರಂಭಿಕ ಬ್ಯಾಟರ್ ಕ್ರಿಸ್ ಗೇಲ್ ಅವರನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ.

49 ಶತಕದೊಂದಿಗೆ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ರೆ, 45 ಶತಕದೊಂದಿಗೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇದ್ದಾರೆ.


ಇದೀಗ ಕ್ರಿಸ್‌ ಗೇಲ್ ಅವರನ್ನು ಹಿಂದಿಕ್ಕಿ ರೋಹಿತ್ ಶರ್ಮಾ 43 ಶತಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ದಾಖಲೆ ಮುರಿದ ರೋಹಿತ್ ಶರ್ಮಾ 162 ಎಸೆತಗಳಲ್ಲಿ 103 ರನ್ ಗಳಿಸಿ ಔಟ್ ಆಗಿದ್ದಾರೆ.

LATEST NEWS

ಟೆಸ್ಟ್‌ ಕ್ರಿಕೆಟ್‌ ಗೆ ಧೋನಿ ವಿದಾಯ ಹೇಳಿದ್ಯಾಕೆ…? ಸಿಕ್ರೆಟ್‌ ರಿವೀಲ್ ಮಾಡಿದ ಪತ್ನಿ..!

Published

on

ದೆಹಲಿ: ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ ಕ್ರಿಕೇಟ್‌ಗೆ ವಿದಾಯ ಹೇಳಿದ್ಯಾಕೆ ಅನ್ನೋ ಸೀಕ್ರೇಟ್‌ ಈಗ ಬಯಲಾಗಿದೆ. ಧೋನಿಯ ಪತ್ನಿ ಹತ್ತು ವರ್ಷದ ಬಳಿಕ ಹಳೆಯ ವಿಡಿಯೋದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ವಿಶ್ವ ಶ್ರೇಷ್ಠ ಕ್ರಿಕೆಟ್ ಕ್ಯಾಪ್ಟನ್‌ಗಳಲ್ಲಿ ಅತ್ಯುತ್ತಮ ಎಂದೆನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಹತ್ತು ವರ್ಷಗಳಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ನಾಲ್ಕು ವರ್ಷ ಆಗಿದೆ. ಆದ್ರೆ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ತಮ್ಮ ಆಟ ಮುಂದುವರೆಸಿದ್ದಾರೆ. ದೋನಿ ಕ್ರಿಕೆಟ ಫೀಲ್ಡ್‌ಗೆ ಇಳಿದ್ರೆ ಸ್ಟೇಡಿಯಂ ತುಂಬಾ ಕಿವಿಗಡಕಿಚ್ಚುವ ಸದ್ದು ಕೇಳಿಸ್ತದೆ. ಇದು ಧೋನಿ ಆಟ ನೋಡಲು ಈಗಲೂ ಅಭಿಮಾನಿಗಳು ಕಾತರದಿಂದ ಕಾಯ್ತಾರೆ ಅನ್ನೋದಕ್ಕೆ ಸಾಕ್ಷಿ. ಇಷ್ಟೊಂದು ಅಭಿಮಾನಿಗಳಿದ್ದು, ಉತ್ತಮ ಫಾರ್ಮ್‌ನಲ್ಲಿದ್ದ ಮಾಹಿ ಯಾಕೆ ನಿವೃತ್ತಿ ಘೋಷಣೆ ಮಾಡಿದ್ರು ಅಂತ ಫ್ಯಾನ್ಸ್‌ಗಳಿಗೆ ಇಂದಿಗೂ ಗೊತ್ತಿಲ್ಲ. ಆದ್ರೆ ಆ ಸೀಕ್ರೇಟ್ ಈಗ ಬಯಲಾಗಿದೆ.

ಧೋನಿ ನಿವೃತ್ತಿ ಪಡೆಯಲು ಯಾರು ಕಾರಣ ಗೊತ್ತಾ ?

ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಗ್ಗೆ ಅವರ ಪತ್ನಿ ಸಾಕ್ಷಿ ಮಾಡಿದ ಹಳೇ ವಿಡಿಯೋ ಒಂದು ಈಗ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಸಾಕ್ಷಿ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿಯ ಕಾರಣವನ್ನು ಹೇಳಿದ್ದಾರೆ. ಮಗಳು ಝಿವಾ ಸಲುವಾಗಿ ಎಂಎಸ್ ಧೋನಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು ಎಂದು ಪತ್ನಿ ಸಾಕ್ಷಿ ಹಳೆಯ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ..; ಕೇರಳದಲ್ಲಿ ಮತ್ತೊಂದು ಮನಕಲುಕುವ ಘಟನೆ…! ಎರಡು ಮಕ್ಕಳ ಜೊತೆ ತಾಯಿ ಜೀ*ವಾಂತ್ಯ…!

ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯುತ್ತಮ ನಾಯಕರಲ್ಲಿ ಎಣಿಸಲ್ಪಟ್ಟಿದ್ದಾರೆ, ಅವರು ಭಾರತದ ನಾಯಕತ್ವದಲ್ಲಿ ಮೂರು ICC ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಧೋನಿ 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇದಕ್ಕೂ ಮೊದಲು 2014 ರಲ್ಲಿ, ಅವರು ಟೆಸ್ಟ್‌ಗೆ ವಿದಾಯ ಹೇಳಿದ್ದರು ಆದರೆ ಬಹಳ ವರ್ಷಗಳ ನಂತರ, ಈಗ ಅವರ ನಿವೃತ್ತಿಯ ಬಗ್ಗೆ ವೀಡಿಯೊ ವೈರಲ್ ಆಗುತ್ತಿದೆ.

 

Continue Reading

LATEST NEWS

ಫೇಕ್ IPL ಟಿಕೆಟ್ ಮಾರಾಟ; 7 ಆರೋಪಿಗಳು ಅರೆಸ್ಟ್

Published

on

ಫೇಕ್ ವೆಬ್‌ಸೈಟ್ ಮುಕೇನ IPL ನ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಗುಜರಾತ್‌ನ್ 7 ಆರೋಪಿಗಳನ್ನು ಮುಂಬೈ ಸೈಬರ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಗುಜರಾತ್‌ದ ಮೂಲದ ಖುಶಾಲ್ ರಮೇಶ್‌ಭಾಯ್ (24), ಭಾರ್ಗವ್ ಕಿಶೋರಭಾಯ್ (22), ಉತ್ತಮ್ ಮನ್ಸುಖ್​ ಭಾಯಿ (21), ಜಾಸ್ಮಿನ್ ಗಿರ್ಧರ್ಭಾಯಿ (22), ಹಿಮ್ಮತ್ ರಮೇಶಭಾಯ್ (35), ನಿಕುಂಜ್ ಭೂಪತಭಾಯ್ (27) ಮತ್ತು ಅರವಿಂದಭಾಯ್ (25) ಅರೆಸ್ಟ್ ಆದ ಆರೋಪಿಗಳು. ನಕಲಿ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಮುಂಬೈನ ದಕ್ಷಿಣ ವಿಭಾಗದ ಸೈಬರ್ ವಿಭಾಗಕ್ಕೆ ಬಿಗ್ ಟ್ರೀ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಸಿಒಒ ಅನಿಲ್ ಮಖಿಜಾ ಎನ್ನುವವರು ದೂರು ನೀಡಿದ್ದಾರೆ.

ತನಿಖೆ ಕೈಗೊಂಡ ಸೈಬರ್ ಪೊಲೀಸರು ಗುಜರಾತ್‌ನ ಸೂರತ್‌ನಿಂದ ಈ ವೆಬ್‌ಪೇಜ್ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದುಕೊಂಡರು. ನಂತರ ಅಲ್ಲಿಗೆ ತೆರಳಿ ಮೊದಲಿಗೆ ಖುಶಾಲ್ ರಮೇಶ್‌ಭಾಯ್ ಅವರನ್ನು ಬಂಧಿಸಿ ನಂತರ ಉಳಿದ 6 ಆರೋಪಿಗಳನ್ನು ಬಂಧಿಸಿದ್ದಾರೆ. ತಾವೇ ಸ್ವತಃ ವೆಬ್‌ಪೇಜ್‌ನ್ನು ಕ್ರಿಯೇಟ್ ಮಾಡಿ ಟಿಕೆಟ್‌ಗಳನ್ನು ಸೇಲ್ ಮಾಡಿದ್ದಾರೆ.

Continue Reading

LATEST NEWS

WATCH VIDEO : ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲು ಹಿಡಿದ ಅಭಿಮಾನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ! ವೀಡಿಯೋ ವೈರಲ್

Published

on

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.25 ರಂದು ನಡೆದ ಘಟನೆಯ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಸಿಬಂದಿ..!

ಹೌದು, ಐಪಿಎಲ್ 17ನೇ ಆವೃತ್ತಿಯ ಪಂದ್ಯದಲ್ಲಿ ಭದ್ರತಾ ನಿಯಮವನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ್ದ ಅಭಿಮಾನಿಗೆ ಕ್ರೀಡಾಂಗಣದ ಭದ್ರತಾ ಸಿಬ್ಬಂಧಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಪಂಜಾಬ್ ಕಿಂಗ್ ಹಾಗೂ ಆರ್​ಸಿಬಿ  ನಡುವೆ ನಡೆದ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ಅಭಿಮಾನಿ ಮೈದಾನಕ್ಕೆ ನುಗ್ಗಿದ್ದಾನೆ. ಕಿಂಗ್ ಕೊಹ್ಲಿ ಪಾದಕ್ಕೆರಗಿ,  ನಂತರ ಮೇಲೆದ್ದು, ಕೊಹ್ಲಿಯನ್ನು ತಬ್ಬಿಕೊಂಡು ಅಭಿಮಾನ ಮೆರೆದಿದ್ದ. ಅಲ್ಲಿಗೆ ಓಡಿಬಂದ ಮೈದಾನದ ಸೆಕ್ಯೂರಿಟಿ ಗಾರ್ಡ್​ಗಳು ಆತನನ್ನು ಮೈದಾನದಿಂದ ಹೊರಕ್ಕೆ ಎಳೆದೊಯ್ದಿದ್ದರು. ಬಳಿಕ ಆತನನ್ನು ಕಬ್ಬನ್‌ ಪಾರ್ಕ್ ಪೊಲೀಸರ ವಶಕ್ಕೆ ನೀಡಿ ವಿಚಾರಣೆ ನಡೆಸಲಾಗಿತ್ತು. ಆತ ರಾಯಚೂರಿನಿಂದ ಬಂದಿದ್ದ 17 ವರ್ಷದ ಅಪ್ರಾಪ್ತನಾಗಿದ್ದು, 3000 ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿ ಮಾಡಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಆದರೆ ಆತನನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೊದಲು ಮೈದಾನದ ಸಿಬಂಧಿಗಳು ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಡಿಯೋ ಈಗ ಸಕತ್ ವೈರಲ್ ಆಗುತ್ತಿದ್ದು, ಅಭಿಮಾನಿಯೊಬ್ಬನ ಹುಚ್ಚಾಟಕ್ಕೆ ಈ ರೀತಿಯ ಶಿಕ್ಷೆ ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Continue Reading

LATEST NEWS

Trending