LATEST NEWS
ಅತ್ಯಾಚಾರ ಆರೋಪ : ಶಾಸಕನ ವಿರುದ್ಧ FIR ದಾಖಲು.!
ಮಂಗಳೂರು/ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಿರುದ್ಧ ಅತ್ಯಾಚಾರ ಎಸಗಿರುವುದಾಗಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಶಾಸಕ ವಿನಯ್ ಕುಲಕರ್ಣಿ ಅವರು ಮಹಿಳೆಗೆ 2022 ರಿಂದ ಪರಿಚಯವಾಗಿದ್ದರು. ಆಗಾಗ ವಿಡಿಯೋ ಕಾಲ್ನಲ್ಲಿ ಸಂಪೂರ್ಣ ಬೆತ್ತಲೆಯಾಗಿ ನೋಡುವಂತೆ ಒತ್ತಾಯಿಸುತ್ತಿದ್ದರು. ಆಗಸ್ಟ್ 24, 2022 ರಂದು,ಸಂತ್ರಸ್ತೆಯನ್ನು ಮನೆಗೆ ಸಂಜೆ 4 ಗಂಟೆ ಸುಮಾರಿಗೆ ಮಹಿಳೆ ಕುಲಕರ್ಣಿ ಮನೆಗೆ ಬಂದಿದ್ದರು.
ಕುಲಕರ್ಣಿ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಕಾರಿನೊಳಗೆ ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಅಲ್ಲದೇ ಕುಲಕರ್ಣಿ ಅವರು ಸುಮ್ಮನಿರುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ನಡೆಸಿ ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ಆಮಿಷವೊಡ್ಡಿದ್ದರು ಎಂದು ತಿಳಿದು ಬಂದಿದೆ.
ಇದೀಗ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಸಂಜಯ್ ನಗರ ಪೊಲೀಸ್ ಠಾಣೆಯ ಪೊಲೀಸರು ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ, ಕಿರುಕುಳ, ಜೀವ ಬೆದರಿಕೆ, ವಂಚನೆ ಸೇರಿದಂತೆ ಹಲವು ಪ್ರಕರಣ ದಾಖಲಿಸಿದ್ದಾರೆ.
BIG BOSS
BBK 11: ಹಂಸಾಗೆ ಯಾವ ಸೀಮೆ ಕ್ಯಾಪ್ಟನ್ ಎಂದ ಚೈತ್ರಾ
ಬಿಗ್ ಬಾಸ್ ಮನೆ ಮಂದಿಗೆ ಒಂದಲ್ಲಾ ಒಂದು ಟಾಸ್ಕ್ ನೀಡುತ್ತಿರುತ್ತಾರೆ. ಅದರಂತೆಯೇ ‘ಗೊಬ್ಬರದ ಅಬ್ಬರ’ ಎಂಬ ಟಾಸ್ಕ್ ನೀಡಿದ್ದು, ಈ ಆಟದಲ್ಲಿ ಪ್ರತಿಸ್ಪರ್ಧಿಗಳು ಕ್ಯಾಪ್ಟನ್ ಹಂಸಾ ಅವರ ನಡೆಯನ್ನು ಕಂಡು ಮೋಸ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಕೊಟ್ಟ ಗೊಬ್ಬರದ ಅಬ್ಬರ ಟಾಸ್ಕ್ನಲ್ಲಿ ಸ್ಪರ್ಧಿಗಳ ಕೈ -ಕಾಲಿಗೆ ಬಿಗಿಯಾಗಿ ಕಟ್ಟಲಾಗಿರುತ್ತದೆ. ಸ್ಪರ್ಧಿಗಳು ಬಣ್ಣದ ಚೆಂಡನ್ನು ತಳ್ಳಿಕೊಂಡು ಮೀಸಲಿಡುವ ಸ್ಟ್ಯಾಂಡ್ನಲ್ಲಿ ಇಡಬೇಕು. ಆದರೆ ಟಾಸ್ಕ್ ವೇಳೆ ಕೆಲವರು ಕೈಯಲ್ಲಿ ಚೆಂಡನ್ನು ಎತ್ತಿಕೊಂಡು ಹೋದರೆ, ಇನ್ನು ಕೆಲವರು ಜಂಪ್ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಕಣ್ಣಾರೆ ಕಂಡರೂ ಸುಮ್ಮನಿದ್ದ ಕ್ಯಾಪ್ಟನ್ ವಿರುದ್ಧ ಪ್ರತಿಸ್ಪರ್ಧಿಗಳು ಕಿಡಿಕಾರಿದ್ದಾರೆ. ಪಂದ್ಯದ ರೂಲ್ಸ್ ವಿಚಾರವಾಗಿ ಮಾತಿನ ಚಕಮಕಿ ಕೂಡ ನಡೆದಿದೆ.
ಈ ವೇಳೆ ಚೈತ್ರಾ ಕುಂದಾಪುರ ಯಾವ ಸೀಮೆ ಕ್ಯಾಪ್ಟನ್ ನೀವು? ಎಂದು ಕಿಡಿಕಾರಿದರೆ, ಅತ್ತ ಜಗದೀಶ್ ಕೂಡ ಹಂಸಾ ವಿರುದ್ಧ ತಿರುಗಿ ಬಿದ್ದಿದ್ದು, ಅವರ ಜೊತೆಗೆ ಊಟ ಮಾಡುವುದಾದರೆ ಮನೆಗೆ ಹೋಗಿ ಋಣ ತೀರಿಸಿ ಆಟದಲ್ಲಲ್ಲ ಎಂದು ಹೇಳಿದ್ದಾರೆ. ಅತ್ತ ಗೋಲ್ಡ್ ಸುರೇಶ್ ಕೂಡ ಬಿಗ್ ಬಾಸ್ ನಾವಿನ್ನು ಯಾವ ಆಟ ಕೂಡ ಆಡಲ್ಲ. ಮೋಸ, ಅನ್ಯಾಯ ಎಂದು ಹೇಳಿದ್ದಾರೆ.
LATEST NEWS
ಯೋಧರನ್ನು ಅಪಹರಣ ಮಾಡಿದ ಭಯೋತ್ಫಾದಕರು..! ಓರ್ವ ಯೋಧ ಹುತಾತ್ಮ..!
ಭಾರತೀಯ ಸೇನೆಯು ಭಯೋತ್ಫಾದಕರ ವಿರುದ್ಧ ನಡೆಸಿದ್ದ ಕಾರ್ಯಾಚರಣೆಯ ವೇಳೆ ಇಬ್ಬರು ಯೋಧರ ಅಪಹರಣವಾಗಿದ್ದು, ಓರ್ವ ಯೋಧ ಹುತಾತ್ಮನಾಗಿದ್ದರೆ, ಮತ್ತೋರ್ವ ಯೋಧ ಗುಂಡಿನ ಗಾಯದೊಂದಿಗೆ ಪತ್ತೆಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಕ್ಟೋಬರ್ 8 ರಂದು ಈ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ಟೋಬರ್ 9 ರಂದು ಯೋಧರು ಪತ್ತೆಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜೊತೆ ಸೇರಿದ್ದ ಭಾರತೀಯ ಸೇನೆಯ ಯೋಧರ ತಂಡ ಖಚಿತ ಮಾಹಿತಿ ಮೆರೆಗೆ ಭಯೋತ್ಫಾದಕರ ತಂಡದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಇಬ್ಬರು ಯೋಧರನ್ನು ಭಯೋತ್ಫಾಧಕರು ಅಪಹರಣ ಮಾಡಿದ್ದರು. ನಾಪತ್ತೆಯಾದ ಯೋಧರಿಗಾಗಿ ರಾತ್ರಿ ಇಡಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ಯೋಧರಿಗೆ ಓರ್ವ ಯೋಧ ಹುತಾತ್ಮನಾಗಿ ಪತ್ತೆಯಾಗಿದ್ದಾರೆ. ಯೋಧ ಹಿಲಾಲ್ ಅಹ್ಮದ್ ಭಟ್ ಅವರ ಮೇಲೆ ಅನೇಕ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮತ್ತೋರ್ವ ಯೋಧ ಭಯೋತ್ಫಾದಕರ ಗುಂಡೇಟು ತಗುಲಿದ್ರೂ ಅವರಿಂದ ತಪ್ಪಿಸಿಕೊಂಡಿದ್ದಾರೆ. ಗಾಯಾಳು ಯೋಧನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನದಂತೆ ಈ ಘಟನೆ ನಡೆದಿದ್ದು, ಒಂದು ದಿನದ ಬಳಿಕ ಯೋಧರು ಪತ್ತೆಯಾಗಿದ್ದಾರೆ. ಇದೀಗ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.ಘಟನೆಯ ಕುರಿತಾಗಿ ಭಾರತೀಯ ಸೇನೆಯ ಶ್ರೀನಗರ ಮೂಲದ ಚಿನಾರ್ ಕೋರ್ ತನ್ನ ಅಧಿಕೃತ X ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದೆ.
ಈ ವರ್ಷದ ಆಗಸ್ಟ್ನಲ್ಲಿ ಅನಂತ್ನಾಗ್ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್ಕೌಂಟರ್ನಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು ಮತ್ತು ಮೂವರು ಗಾಯಗೊಂಡಿದ್ದರು.
ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರೊಂದಿಗಿನ ಎನ್ಕೌಂಟರ್ನಲ್ಲಿ ನಾಲ್ವರು ಸೇನಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿ ಪ್ರಾಣ ಕಳೆದುಕೊಂಡಿದ್ದರು. ಪಾಕಿಸ್ತಾನ ಬೆಂಬಲಿತ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಪ್ರಾಕ್ಸಿ ಗ್ರೂಪ್ ‘ಕಾಶ್ಮೀರ ಟೈಗರ್ಸ್’ ಈ ದಾಳಿಯನ್ನು ಸಮರ್ಥಿಸಿಕೊಂಡಿದೆ.
LATEST NEWS
ಮಳಯಾಳಂ ನ ಖ್ಯಾತ ನಟ ವಿಧಿವಶ
ಮಂಗಳೂರು/ತಿರುವನಂತಪುರಂ: ಮಳಯಾಳಂ ಚಿತ್ರರಂಗದ ಹಿರಿಯ ನಟ ಟಿಪಿ ಮಾಧವನ್ (88) ಇಂದು (ಅ.90) ಕೊಲ್ಲಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಮೂಲಗಳು ತಿಳಿಸಿವೆ.
ನಟ ಮಾಧವನ್ ಮರೆಗುಳಿ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆರೋಗ್ಯ ಸ್ಥಿತಿ ತೀರ ಹದಗೆಟ್ಟೆದ್ದು, ಇಂದು ವಿಧಿವಶರಾದರೆಂದು ವರದಿ ತಿಳಿಸಿದೆ.
ನಟ ಮಾಧವನ್ ಅವರು ತಮ್ಮ 40 ನೇ ವಯಸ್ಸಿನಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಳಿಕ ಚಿತ್ರರಂಗ ಪ್ರವೇಶಿಸಿದ್ದರು. 1975ರಲ್ಲಿ ಬಿಡಿಗಡೆಯಾಗಿದ್ದ ರಾಗಂ ಸಿನಿಮಾದಲ್ಲಿ ಮಾಧವನ್ ನಟಿಸುವ ಮೂಲಕ ಬೆಳ್ಳಿಪರದೆಯಲ್ಲಿ ಪಯಣ ಆರಂಭಿಸಿದ್ದರು.
ಮೊದಲ ಸಿನಿಮಾದಲ್ಲೇ ನಟ ಮಾಧವನ್ಗೆ ಬಹು ಜನಪ್ರಿಯತೆ ಸಿಕ್ಕಿತ್ತು. ಹಾಸ್ಯ ಮತ್ತು ಗಂಭೀರ ಪಾತ್ರಗಳಲ್ಲಿ ನಟಿಸುವ ಮೂಲಕ ಮಾಧವನ್ ಮಳಯಾಳಂ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದರು. ಅನಾರೋಗ್ಯವಿದ್ದ ಕಾರಣ 2016ರಲ್ಲಿ ನಟನೆಯಿಂದ ದುರವಾದರು.
ಮಾಧವನ್ ಹಲವಾರು ಟಿವಿ ಸೀರಿಯಲ್ಗಳಲ್ಲಿ ನಟಿಸಿದ್ದರು. ದಾಂಪತ್ಯ ಜೀವನ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ಪುತ್ರ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.