LATEST NEWS
ಇನ್ಮುಂದೆ ಕನ್ನಡದಲ್ಲೇ ನಡೆಯಲಿದೆ ರೈಲ್ವೆ ಪರೀಕ್ಷೆ.!
ಬೆಂಗಳೂರು: ಇನ್ಮುಂದೆ ಕನ್ನಡದಲ್ಲೇ ನಡೆಯಲಿದೆ ರೈಲ್ವೆ ಪರೀಕ್ಷೆ ಎಂದು ಬಹು ವರ್ಷಗಳ ಕನ್ನಡಿಗರ ಬೇಡಿಕೆಯನ್ನು ಕೇಂದ್ರ ಸಚಿವ ಸೋಮಣ್ಣ ಈಡೇರಿಸಿದ್ದಾರೆ.
ಎಷ್ಟೋ ವರ್ಷಗಳಿಂದ ರೈಲ್ವೆ ಪರೀಕ್ಷೆ ಹಿಂದಿ ಮತ್ತು ಇಂಗ್ಲೀಷ್ನಲ್ಲೇ ನಡೆಯುತ್ತಿತ್ತು. ಇದರ ಪರಿಣಾಮ ಕನ್ನಡಿಗರು ರೈಲ್ವೆ ಪರೀಕ್ಷೆ ತೇರ್ಗಡೆಗೆ ಹರಸಾಹಸ ಮಾಡಬೇಕಾದ ಪರಿಸ್ಥಿತಿ ಇತ್ತು. ಬಹುತೇಕರಿಗೆ ಹಿಂದಿ, ಇಂಗ್ಲೀಷ್ ಅರ್ಥವೇ ಆಗಲ್ಲ. ಹಾಗಾಗಿ ರೈಲ್ವೆ ಕೆಲಸ ತೆಗೆದುಕೊಳ್ಳಬೇಕು ಅನ್ನೋ ಕನಸು ಕನಸಾಗಿಯೇ ಉಳಿಯುತ್ತಿತ್ತು. ಹೀಗಿರುವಾಗ ಕನ್ನಡಿಗರಿಗೆ ಕೇಂದ್ರ ಸಚಿವ ವಿ ಸೋಮಣ್ಣ ಗುಡ್ನ್ಯೂಸ್ ಕೊಟ್ಟಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತಾಡಿದ ವಿ. ಸೋಮಣ್ಣ ಅವರು, ಇನ್ನು ಮುಂದೆ ಕನ್ನಡದಲ್ಲೇ ರೈಲ್ವೆ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿವೆ. ಸುಮಾರು 15 ಲಕ್ಷ ಜನ ಪಿಂಚಣಿ ಪಡೆಯುತ್ತಿದ್ದಾರೆ. ಖಾಲಿಯಿರೋ 16,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದೇನೆ. ಈ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಲು ಆದೇಶ ನೀಡಲಾಗಿದೆ ಎಂದರು.
ಕನ್ನಡಿಗರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಇದಕ್ಕೆ ಅಗತ್ಯವಿರೋ ಬೇಕಾದಷ್ಟು ಪುಸ್ತಕಗಳು ಸಿಗುತ್ತವೆ. ಎಲ್ಲರೂ ಉಪಯೋಗ ಮಾಡಿಕೊಳ್ಳಿ. ಮುಂದೆ ಇನ್ನೂ ಖಾಲಿ ಇರುವ 46,000 ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದರು.
BIG BOSS
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ 17 ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಲಾಯರ್ ಜಗದೀಶ್ ಅವರು ಮಿತಿಮೀರಿ ವರ್ತಿಸುತ್ತಿದ್ದಾರೆ. ಇದನ್ನು ಸುದೀಪ್ ಅವರು ಖಂಡಿಸಿ, ಹಿಂದಿ ಬಿಗ್ ಬಾಸ್ ರೀತಿಯೇ ಇಲ್ಲಿಯೂ ಮಾಡಲಿ ಎಂದು ಕೋರಿಕೊಳ್ಳಲಾಗುತ್ತಿದೆ.
ಹಿಂದಿ ಬಿಗ್ ಬಾಸ್ ನ 10ನೇ ಸೀಸನ್ ನಲ್ಲಿ ಪ್ರಿಯಾಂಕಾ ಜಗ್ಗಾ ಎಂಬುವವರು ದರ್ಪ ತೋರಿದ್ದರು. ‘ಬಿಗ್ ಬಾಸ್ ಶೋ ನನ್ನ ಲೆವೆಲ್ಲ ಅಲ್ಲವೇ ಅಲ್ಲ’ ಎಂದಿದ್ದರು.ವೀಕೆಂಡ್ ನಲ್ಲಿ ಸಲ್ಮಾನ್ ಖಾನ್ ಅವರು ನೇರವಾಗಿ ಹೊರಹೋಗುವಂತೆ ಹೇಳಿದ್ದರು. ಜೊತೆಗೆ ಕಲರ್ಸ್ ವಾಹಿನಿಯ ಜೊತೆ ಅವರು ಕೆಲಸ ಮಾಡಿದರೆ ನಾನು ಕಲರ್ಸ್ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತೇನೆ ಎಂದು ಹೇಳಿದ್ದರು ಸಲು. ತಕ್ಷಣವೇ ಪ್ರಿಯಾಂಕಾನ ಹೊರಹಾಕಲಾಯಿತು.
ಕನ್ನಡದಲ್ಲೂ ಬಿಗ್ ಬಾಸ್ ಗೆ ಅವಮಾನ ಮಾಡುವ ರೀತಿಯ ಘಟನೆ ನಡೆದಿದೆ. ಜಗದೀಶ್ ಅವರು ‘ಬಿಗ್ ಬಾಸ್ ಕಿತ್ತೋಗಿರೋ ಪ್ರೋಗ್ರಾಂ’, ‘ಬಿಗ್ ಬಾಸ್ನೇ ಖರೀದಿ ಮಾಡುತ್ತೇನೆ’, ‘ನನ್ನ ಎದುರಾಕ್ಕೊಂಡು ಬಿಗ್ ಬಾಸ್ ನಡೆಸ್ತೀರಾ’ ಎಂದೆಲ್ಲ ಪ್ರಶ್ನೆ ಮಾಡಿದ್ದರು. ಮನೆಯಲ್ಲಿದ್ದುಕೊಂಡೇ ಸ್ಪರ್ಧಿ ಹೇಳುವ ಮಾತು ಇದಲ್ಲ. ಹೀಗಾಗಿ, ಜಗದೀಶ್ ಅವರನ್ನು ಸುದೀಪ್ ನೇರವಾಗಿ ಹೊರಕ್ಕೆ ಹಾಕಲಿ ಎಂದು ಅನೇಕರು ಬಯಸಿದ್ದಾರೆ.
LATEST NEWS
ಅರಿಯದೆ ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲು…. ಎಲ್ಲಿ ಗೊತ್ತಾ ?
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಮಮದ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ನಡೆದಿರುವುದು ತಿಳಿದು ಬಂದಿದೆ. ಜನರಿಗೆ ವಾಂತಿ, ಭೇಧಿ ಉಂಟಾಗಿದ್ದು ಇಡೀ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಕರ್ಕಿಹಳ್ಳಿ ಹಾಗೂ ಮೇಡಿಕಲ್ ಗ್ರಾಮಸ್ಥರು ಕಾಫಿನಾಡಿಯ ಟ್ಯಾಂಕಿನಿಂದ ಕಲುಷಿತ ನೀರನ್ನು ಕುಡಿದು, ಕರ್ಕಿಹಳ್ಳಿಯಲ್ಲಿ 500 ಹಾಗೂ ಮೇಡಿಕಲ್ನಲ್ಲಿ 600 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರೂ ವಾಂತಿ ಭೇದಿಯನ್ನು ಅನುಭವಿಸುತ್ತಿದ್ದು, 80 ವರ್ಷದ ವೃದ್ಧನ ಪರಿಸ್ಥಿತ ತೀರಾ ಹದಗೆಟ್ಟು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ 6 ಮತ್ತು 7 ನೇ ವಾರ್ಡ್ನಲ್ಲಿ ಬರುವ ನೀರು ಸಂಪೂರ್ಣವಾಗಿ ಅಶುದ್ಧಿಯಾದ ಹಿನ್ನಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BIG BOSS
BBK11: ದೊಡ್ಮನೆಗೆ ಬಂದ 4 ದಿನಕ್ಕೆ ಸ್ಪರ್ಧಿಗಳ ಕಣ್ಣೀರು; ಕಾರಣವೇನು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ 4 ದಿನಕ್ಕೆ ಕಾಲಿಟ್ಟಿದೆ. ಬಿಗ್ಬಾಸ್ ಸೀಸನ್ 11 ಬಹಳ ಅದ್ಧೂರಿಯಾಗಿ ಓಪನಿಂಗ್ ಕಂಡಿದೆ. ಆದರೆ ಕಳೆದ 10 ಸೀಸನ್ಗೂ ಈಗಿನ ಸೀಸನ್ 11ಗೂ ತುಂಬಾನೇ ವ್ಯತ್ಯಾಸವಿದೆ.
ಕಳೆದ ಸೀಸನ್ ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ಅಷ್ಟೂ ಜನ ಇದ್ದರು ನನಗೆ ಒಂಟಿತನ ಕಾಡುತ್ತಿದೆ ಬಿಗ್ಬಾಸ್. ನನಗೆ ಮನೆಗೆ ಕಳುಹಿಸಿ ಬಿಗ್ಬಾಸ್, ನನಗೆ ಕುಟುಂಬಸ್ಥರ ನೆನಪಾಗುತ್ತದೆ ಅಂತ ಹೇಳುತ್ತಿದ್ದರು. ಆದರೆ ಈ ಬಾರಿಯ ಬಿಗ್ಬಾಸ್ ಸೀಸನ್ 11 ಶುರುವಾಗಿ ಎರಡೇ ದಿನಕ್ಕೆ ಸ್ಪರ್ಧಿಗಳು ಕಣ್ಣೀರು ಹಾಕುತ್ತಿದ್ದಾರೆ.
ಅದರಲ್ಲೂ ಬಿಗ್ಬಾಸ್ಗೆ ಬಂದ ಮೊದಲ ದಿನವೇ ಧನರಾಜ್ ಆಚಾರ್ಯ ಅವರು ಕಣ್ಣೀರು ಹಾಕಿದ್ದರು. ಇದಾದ ಬಳಿಕ ಅನುಷಾ ರೈ ಅವರು ಊಟಕ್ಕೆ ತೊಂದರೆ ಆಗ್ತಾ ಇದೆ ಅಂತ ಅತ್ತಿದ್ದರು. ಬಳಿಕ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಹಂಸ ನಾರಾಯಣ್ ಕೂಡ ಬಿಗ್ಬಾಸ್ಮನೆಯ ವಾತಾವರಣಕ್ಕೆ ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ್ರು. ಜೊತೆಗೆ ಮಾನಸಾ ಲಾಯರ್ ಜಗದೀಶ್ ಮಾತಿಗೆ ಬೇಸರದಿಂದ ಕಣ್ಣೀರು ಹಾಕಿದ್ದಾರೆ. ಇದೀಗ ಐಶ್ವರ್ಯ ಸಿಂಧೋಗಿ ಅವರು ಜೋರಾಗಿ ಅತ್ತುಕೊಂಡು ಆಚೆ ಬಂದಿದ್ದಾರೆ.
ಕಲರ್ಸ್ ಕನ್ನಡ ಶೇರ್ ಮಾಡಿಕೊಂಡ ಹೊಸ ಪ್ರೋಮೋದಲ್ಲಿ ಐಶ್ವರ್ಯ ಜೋರಾಗಿ ಅಳುತ್ತಾ ಬಂದಿದ್ದಾರೆ. ಐಶ್ವರ್ಯಾ ಅವರ ಕಣ್ಣೀರಿಗೆ ಕಾರಣ ಏನಂತ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಇನ್ನೂ ಜೋರಾಗಿ ಅಳುತ್ತಾ ಕುಳಿತುಕೊಂಡಿದ್ದ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ ಅಂತ ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಸದ್ಯ ಇದಕ್ಕೆಲ್ಲ ವೀಕ್ಷಕರು ಕಿಚ್ಚನ ಪಂಚಾಯ್ತಿಗಾಗಿ ಕಾಯುತ್ತಿದ್ದಾರೆ.
- BIG BOSS4 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS4 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!
- BIG BOSS4 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
- LATEST NEWS3 days ago
Watch Video: ಕೋಚಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿನಿಯೊಂದಿಗೆ ಬಯಾಲಜಿ ಶಿಕ್ಷಕನ ರೊಮ್ಯಾನ್ಸ್
Pingback: ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್ - NAMMAKUDLA NEWS - ನಮ್ಮಕುಡ್ಲ ನ್ಯೂಸ್