Tuesday, May 30, 2023

ರಾಜಕೀಯ ಸಭೆ-ಸಮಾರಂಭಗಳಿಗೂ ನಿರ್ಬಂಧ : ಸಿಎಂ ಬೊಮ್ಮಾಯಿ

ಬೆಂಗಳೂರು:  ಕೊರೊನಾದ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರಾಲಿಗಳು ರಾಜ್ಯಾದ್ಯಂತ ನಡೆಯುತ್ತಿದ್ದು, ಇವುಗಳಿಗೆ ನಿರ್ಬಂಧ ಹೇರಲು ನಿಯಮ‌ ಜಾರಿಗೆ ತರುತ್ತೇವೆ ಎಂದು  ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಹಾಮಾರಿ ಕೋವಿಡ್ ಕೊಂಚ ಕಡಿಮೆಯಾಗಿದ್ದರೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇನ್ನು ತಾಂಡವ ಆಡುತ್ತಿದೆ.

ಈ  ನಡುವೆಯೂ ರಾಜಕೀಯ ಸಭೆ, ಸಮಾರಂಭ, ರಾಲಿಗಳು ರಾಜ್ಯಾದ್ಯಂತ ನಡೆಯುತ್ತಿದ್ದು, ಇವುಗಳಿಗೆ ನಿರ್ಬಂಧ ಹೇರಲು ನಿಯಮ‌ ಜಾರಿಗೆ ತರುತ್ತೇವೆ ಎಂದು  ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜಕೀಯ ಸಭೆ, ಸಮಾರಂಭಗಳನ್ನೆಲ್ಲ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಕೋವಿಡ್ ಹರಡುವ ಭೀತಿಯಿದ್ರೂ ಕೆಲವು ಸಮಾರಂಭಗಳು ಎಗ್ಗಿಲ್ಲದೇ ನಡೆದಿವೆ. ಇವುಗಳಿಗೆ ನಿರ್ಬಂಧ ಹೇರಲು ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತೇವೆ. ಈ ಬಗ್ಗೆ ಪುನಃ ಮಾರ್ಗಸೂಚಿ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿಗಳು ನುಡಿದರು.

LEAVE A REPLY

Please enter your comment!
Please enter your name here

Hot Topics