LATEST NEWS
ದರೋಡೆ ಪ್ರಕರಣ ಭೇದಿಸಿದ ಪೊಲೀಸರು: ಮೂವರ ಬಂಧನ
ಗಂಗಾವತಿ: ಬಂಗಾರ ಪರೀಕ್ಷಿಸುವ ಯಂತ್ರದ ದುರಸ್ತಿಗೆಂದು ಗಂಗಾವತಿಯಿಂದ ಬೆಂಗಳೂರಿಗೆ ಹೊರಟಿದ್ದ ಬಂಗಾರದ ವ್ಯಾಪಾರಿಯೊಬ್ಬರ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣವನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಗಾವತಿಯಿಂದ ಸ್ವತಃ ಬಂಗಾರದ ವ್ಯಾಪಾರಿಯೊಂದಿಗೆ ಕಾರಿನಲ್ಲಿ ತೆರಳುವ ಸಂದರ್ಭದಲ್ಲಿಯೇ ಸಂಚು ರೂಪಿಸಿದ್ದ ಒಬ್ಬ ಆರೋಪಿ ಸೇರಿದಂತೆ ಒಟ್ಟು ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಿಕ್ಕ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ.
ಬಂಧಿತ ಆರೋಪಿಗಳನ್ನು ಗಂಗಾವತಿ ನಗರದ ಲಿಂಗರಾಜ ಕ್ಯಾಂಪಿನ ರವಿ ಅಲಿಯಾಸ್ ಬಾದಶಾ ರವಿ ಬಸವರಾಜ, ಪ್ರಶಾಂತನಗರ ಸುನಿಲ್ ವಾದಿರಾಜ ರಾಯ್ಕರ್ ಹಾಗೂ ಬಳ್ಳಾರಿಯ ಬಳ್ಳಾರಪ್ಪ ಕಾಲೋನಿಯ ರಾಜಾಹುಸೇನ್ ರಾಜಾಸಾಬ್ ಎಂದು ಗುರುತಿಸಲಾಗಿದೆ. ಬಂಧಿತ ಆರೊಪಿಗಳಿಂದ ದರೋಡೆ ಮಾಡಿದ್ದ ಹಣದ ಪೈಕಿ 10.33 ಲಕ್ಷ ನಗದು, 20 ಸಾವಿರ ಬೆಲೆಯ ಎರಡು ಮೊಬೈಲ್ ಮತ್ತು ಹದಿನಾಲ್ಕು ಲಕ್ಷ ರೂಪಾಯಿ ಮೌಲ್ಯದ ಎರಡು ಕಾರು ಮತ್ತು ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ..; ಗುದನಾಳದಲ್ಲಿ ಅಕ್ರಮ ಚಿನ್ನ ಸಾಗಾಟ; ಗಗನಸಖಿ ಬಂಧನ
ಘಟನೆಯ ವಿವರ:
ಮೇ.15 ರಂದು ಈ ಘಟನೆ ನಡೆದಿದ್ದು, ಗಂಗಾವತಿಯ ವಿಜಯನಗರ ಕಾಲೋನಿಯ ವಿಜಯ ಅಣ್ವೇಕರ್ ಎಂಬ ಬಂಗಾರ ವ್ಯಾಪಾರಿಯು ತಮ್ಮ ಸಂಬಂಧಿ ಸುನಿಲ್ ರಾಯ್ಕರ್ ಮತ್ತು ಮಹೇಶ ಮಡಿವಾಳ ಅವರೊಂದಿಗೆ ಗೋಲ್ಡ್ ಟೆಸ್ಟಿಂಗ್ ಮಸೀನ್ ದುರಸ್ತಿ ಮಾಡಿಸಿಕೊಂಡ ಬರಲು ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ದಾವಣಗೆರೆ ಮಾರ್ಗದ ಮೂಲಕ ಹೊರಟಾಗ ಮಧ್ಯೆ ಬೆಣ್ಣೆಹಳ್ಳಿ ಗ್ರಾಮದ ಹತ್ತಿರ ಕಾರನ್ನು ಆರೋಪಿಗಳು ಹಿಂಬಾಲಿಸಿದ್ದಾರೆ. ನಂತರ ಹಂಚಿಕೇರಿ ಮಾರ್ಗವಾಗಿ ದಾವಣೆಗೆರೆಗೆ ಹೊರಟಾಗ ರಾತ್ರಿ 1 ಗಂಟೆ ಸುಮಾರಿಗೆ ಹರಪನಹಳ್ಳಿ ಸಬ್ ಜೈಲ್ ಹತ್ತಿರ ಆರೋಪಿಗಳು ಕಾರನ್ನು ತಡೆದು ನಿಲ್ಲಿಸಿದ್ದಾರೆ.
ಕಾರು ಚಾಲನೆ ಮಾಡುತ್ತಿದ್ದ ಸುನಿಲ್ ರಾಯ್ಕರ್ ಮತ್ತು ಮಹೇಶ ಅವರ ಮೇಲೆ ದಾಳಿ ಮಾಡಿದ ಆರೋಪಿಗಳು, ಅವರ ಬಳಿ ಇದ್ದ ರೂ.40 ಲಕ್ಷ ನಗದು ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡು ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು.
ನಂತರ ಸುನಿಲ್ ಮತ್ತು ಮಹೇಶ ಅವರು ಬಂದು ಗಂಗಾವತಿಯ ತಮ್ಮ ಬಂಗಾರ ಅಂಗಡಿ ಮಾಲೀಕನಿಗೆ ವಿಷಯ ತಿಳಿಸಿ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದರೋಡೆ ಆಗಿರುವ ಕುರಿತು ದೂರು ನೀಡಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ಸುನಿಲ್ ಮೇಲೆ ಅನುಮಾನ ಬಂದಿದೆ. ತೀವ್ರ ವಿಚಾರಣೆಗೊಳಪಡಿಸಿದಾಗ ಅಸಲಿ ಕಹಾನಿ ಹೊರ ಬಂದಿದೆ. ಕಾರಿನಲ್ಲಿ ಸಂಚರಿಸುತ್ತಿರುವಾಗಲೇ ಸಂಚನ್ನು ರೂಪಿಸಿದ್ದಾಗಿ ಸುನಿಲ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ವಿಜಯನಗರದ ಜಿಲ್ಲಾ ಎಸ್ಪಿ ಹರಿಬಾಬು ಮಾಹಿತಿ ನೀಡಿದರು.
LATEST NEWS
ಉತ್ತರ ಪ್ರದೇಶದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತು*ಳಿತ; ಮಕ್ಕಳು ಸೇರಿ 27 ಜನ ಬ*ಲಿ
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭೀ*ಕರ ಕಾಲ್ತು*ಳಿತ ಸಂಭವಿಸಿದ್ದು, 27ಕ್ಕೂ ಅಧಿಕ ಮಂದಿ ಸಾವ*ನ್ನಪ್ಪಿರುವುದಾಗಿ ವರದಿಯಾಗಿದೆ.
ಮಂಗಳವಾರ ಭೋಲೆ ಬಾಬಾ ಎಂಬವರ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಲ್ತು*ಳಿತ ಉಂಟಾಗಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರು ಗಾಯಗೊಂಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಈವರೆಗೆ 27 ಮೃ*ತದೇಹಗಳು ಇಟಾಹ್ ಜಿಲ್ಲೆಯ ಆಸ್ಪತ್ರೆಗೆ ತಲುಪಿರುವುದಾಗಿ ವರದಿಯಾಗಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳವು ಇಟಾಹ್- ಸಿಕಂದರ ರಾವ್ ಗಡಿಯಲ್ಲಿದ್ದು, ಮೃ*ತಪಟ್ಟವರಲ್ಲಿ ಹಲವಾರು ಮಹಿಳೆಯರು ಮತ್ತು ಒಂದು ಮಗು ಕೂಡ ಸೇರಿರುವುದಾಗಿ ವರದಿಯಾಗಿದೆ.
ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಬಳಿಕ ಹಲವರು ಸಾವ*ನ್ನಪ್ಪಿದ್ದು, ಮಹಿಳೆಯರು ಹಾಗೂ ಮಕ್ಕಳ ಮೃ*ತದೇಹಗಳು ಅಲ್ಲಲ್ಲಿ ಬಿದ್ದಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮೃ*ತದೇಹಗಳನ್ನು ಟೆಂಪೋಗಳಲ್ಲಿ ಸಾಗಿಸುತ್ತಿರುವ ವಿಡಿಯೋ ಕೂಡ ಹರಿದಾಡುತ್ತಿವೆ.
FILM
ಜೊತೆಯಾಗುತ್ತಿದ್ದಾರೆ ತ್ಯಾಗರಾಜರು…ಇದು ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’!
ತಮ್ಮ ನೆಚ್ಚಿನ ನಟರ ಸಿನಿಮಾಗಳು ಸೆಟ್ಟೇರುತ್ತವೆ ಅಂದಾಗ ಅಭಿಮಾಗಳಲ್ಲಿ ಸಂಭ್ರಮ ಮನೆ ಮಾಡುತ್ತೆ. ಅಂತಹುದರಲ್ಲಿ ಜನಪ್ರಿಯ ನಾಯಕರಿಬ್ಬರು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಂದ್ರೆ ಹೇಳ್ಬೇಕಾ ಡಬಲ್ ಸಂಭ್ರಮ. ಇದೀಗ ಇಂತಹ ಸಂಭ್ರಮ ಕೊಡ್ತಾ ಇರೋದು ಅಂದ್ರೆ ರಮೇಶ್ ಅರವಿಂದ್ ಹಾಗೂ ಗಣೇಶ್.
ತ್ಯಾಗರಾಜರ ಸಮಾಗಮ :
ಇಂದು(ಜು.2) ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಹೀಗಾಗಿ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅದರಲ್ಲಿ ಗಣೇಶ್ – ರಮೇಶ್ ಕಾಂಬಿನೇಷನ್ ಚಿತ್ರದ ಪೋಸ್ಟರ್ ಕೂಡ ಒಂದು. ಈ ಪೋಸ್ಟರ್ ನೋಡಿ ಇಬ್ಬರ ಅಭಿಮಾನಿಗಳಿಗೆ ಸಂತಸವಾಗಿರೋದು ಸುಳ್ಳಲ್ಲ.
ಕನ್ನಡ ಚಿತ್ರರಂಗದಲ್ಲಿ ‘ತ್ಯಾಗರಾಜ’ ಎಂದೇ ರಮೇಶ್ ಅರವಿಂದ್ ಫೇಮಸ್. ಬ್ಯಾಕ್ ಟು ಬ್ಯಾಕ್ ಹಿಟ್ಗಳನ್ನು ಕೊಟ್ಟಿದ್ದ ರಮೇಶ್ ಅರವಿಂದ್ ಪ್ರತಿ ಸಿನಿಮಾದಲ್ಲೂ ನಾಯಕಿಯನ್ನು ಕಳೆದುಕೊಂಡಿದ್ದರು. ಹಾಗಾಗಿ ಅವರನ್ನು ಎಂದು ಕರೆಯಲಾಗುತ್ತಿತ್ತು. ಮುಂಗಾರು ಮಳೆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ತ್ಯಾಗರಾಜ ಪಟ್ಟ ಸಿಕ್ಕಿತ್ತು. ಇದೀಗ ಇವರಿಬ್ಬರು ಒಂದಾಗುತ್ತಿರೋ ಅಭಿಮಾನಿಗೆ ವ್ಹಾವ್ ಎಂದೆನಿಸಿರೋದು ಸುಳ್ಳಲ್ಲ.
ಆಸಕ್ತಿದಾಯಕವಾಗಿದೆ ಪೋಸ್ಟರ್ :
ಇನ್ನು ರಿಲೀಸ್ ಆಗಿರೋ ಪೋಸ್ಟರ್ ಆಸಕ್ತಿ ಹುಟ್ಟು ಹಾಕಿದೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಅವರ ಯಂಗ್ ಇರುವ ಫೋಟೊಗಳನ್ನು ಬಳಸಲಾಗಿದೆ. ಒಂದು ಕಾಗದದ ಲಕೋಟೆ, ಅದರ ಮೇಲೊಂದು ಪೀಪಿ ಇಡಲಾಗಿದೆ. ವಿದೇಶದ ಸೀಲೊಂದು ಇದೆ. ಹಾಗಾಗಿ ಚಿತ್ರದಲ್ಲೇನೋ ವಿಶೇಷತೆ ಇದೆ ಅನ್ನಿಸುತ್ತೆ. ಆಗಸ್ಟ್ 16ಕ್ಕೆ ಫಸ್ಟ್ ಲುಕ್ ರಿಲೀಸ್ ಆಗುತ್ತೆ ಎಂದಿರುವ ಚಿತ್ರತಂಡ ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’ ಎಂದು ಬರೆದುಕೊಂಡು, ಪೋಸ್ಟರ್ ಹಂಚಿಕೊಂಡಿದೆ.
ಇದನ್ನೂ ಓದಿ :ದರ್ಶನ್ ಅಭಿಮಾನಿಗಳ ಹುಚ್ಚುತನ; ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್
ಅಂದಹಾಗೆ, ಪುಷ್ಪಕ ವಿಮಾನ, ಇನ್ಸ್ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ನಿರ್ದೇಶಕನ ಟೋಪಿ ಹಾಕಿದ್ದಾರೆ.
LATEST NEWS
ಡೋರ್ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ
ಚಿಕ್ಕಮಗಳೂರು: ಸರಕಾರಿ ಬಸ್ಸು ಹತ್ತುವ ವೇಳೆ ಡೋರ್ ಲಾಕ್ ತುಂಡಾದ ಪರಿಣಾಮ ಮಹಿಳೆ ಬಸ್ಸಿನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಐದಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಐದಳ್ಳಿ ಗ್ರಾಮದ ಶಕುಂತಲಮ್ಮ ಎಂಬ ಮಹಿಳೆಗೆ ಗಂಭೀರ ಗಾಯವಾಗಿದ್ದು ಅವರನ್ನು ಅಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಸ್ಸು ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದು ಶಕುಂತಳಮ್ಮ ಬಾಳೆಹೊನ್ನೂರಿಗೆ ತೆರಳಲು ಬಸ್ ಹತ್ತುವಾಗ ಬಸ್ಸಿನ ಬಾಗಿಲಿನ ಲಾಕ್ ತುಂಡಾಗಿದೆ. ಬಾಗಿಲು ಹಿಡಿದ್ದಿದ್ದ ಮಹಿಳೆ ಏಕಾಏಕಿ ಬಸ್ಸಿನಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ.
ಬಸ್ಸಿನ ಸರಿಯಾದ ನಿರ್ವಹಣೆ ಇಲ್ಲದೆ ಈ ರೀತಿ ಆಗಿದೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದು ಘಟನೆ ಸಂಬಂಧ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- DAKSHINA KANNADA5 days ago
ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು
- DAKSHINA KANNADA4 days ago
ಶಿರಾಡಿಘಾಟ್ ನಲ್ಲಿ ಸರಣಿ ಅಪಘಾ*ತ; ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿ*ಕ್ಕಿ
- DAKSHINA KANNADA7 days ago
ಮುಳುಗಿದ ಪಡೀಲ್ ಅಂಡರ್ಪಾಸ್ – ಸಂಚಾರ ಸ್ಥಗಿತ
- DAKSHINA KANNADA6 days ago
ಭಾರೀ ಮಳೆಗೆ ಧರೆ ಕುಸಿದು ಮನೆಗೆ ಹಾನಿ, ಮಣ್ಣಿನಡಿ ಸಿಲುಕಿದ ಮಕ್ಕಳ ರಕ್ಷಣೆ