Connect with us

    DAKSHINA KANNADA

    ನವರಾತ್ರಿ ಉತ್ಸವ ದೇವಿ ಆರಾಧನೆಯೊಂದಿಗೆ ಸನ್ನಡತೆಯ ಮನಸ್ಸೂ ಜಾಗೃತವಾಗಲಿ : ಒಡಿಯೂರುಶ್ರೀ

    Published

    on

    ನವರಾತ್ರಿ ಉತ್ಸವ ದೇವಿ ಆರಾಧನೆಯೊಂದಿಗೆ ಸನ್ನಡತೆಯ ಮನಸ್ಸೂ ಜಾಗೃತವಾಗಲಿ : ಒಡಿಯೂರುಶ್ರೀ

    ನಮ್ಮ ಕುಡ್ಲ ವಾಹಿನಿಯ 10 ದಿನಗಳ ದಸರಾ ವೈಭವ 2020ಗೆ ಚಾಲನೆ…

    ಮಂಗಳೂರು : ಇಂದು ದಸರಾ ಅಂದಾಕ್ಷಣ ಎಲ್ಲರೂ ಮೈಸೂರಿನತ್ತ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಜನ ಕರಾವಳಿಯತ್ತಲೂ ಈಗ ನೋಡುತ್ತಿದ್ದಾರೆ. ದಸರಾದ ಉತ್ಸವ ನಮ್ಮ ಅಂತರಂಗದ ಉತ್ಸವವಾಗಬೇಕು.

    ದೇವಿ ಅನುಗ್ರಹವನ್ನು ಬೆಳಕಾಗಿಸುವ ಕೆಲಸ ನಾವು ಮಾಡಬೇಕು. ದೇವಿ ಆವಿರ್ಭಾವವಾಗಬೇಕು. ಅಂದರೆ ನಮ್ಮೊಳಗಿನ ಮನಸ್ಸು ದೇವಿಗಾಗಿ ಜಾಗೃತವಾಗಬೇಕು.

    ಅಮ್ಮನ ಅನುಗ್ರಹವಿಲ್ಲದೆ ಯಾವುದೂ ನಡೆಯಲು ಸಾಧ್ಯವಿಲ್ಲ. ಮಹಾಕಾಳಿ, ಸರಸ್ವತಿ, ಶಾರದೆ ಹೀಗೆ ನಾನಾ ರೂಪದಲ್ಲಿ ದೇವಿ ಅವತರಿಸುತ್ತಾಳೆ.

    ಜ್ಞಾನದ ಜೊತೆಗೆ ನಮ್ಮಲ್ಲಿ ಇಚ್ಛಾಶಕ್ತಿಯೂ ಇರಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

    ಅವರು ನಮ್ಮ ಕುಡ್ಲ ವಾಹಿನಿಯ ದಸರಾ ವೈಭವ -2020ರ ಹತ್ತು ದಿನಗಳ ಕಾಲದ ಸಾಂಸ್ಕೃತಿಕ ವೈಭವಗಳ  ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಭಾರತಕ್ಕೆ ಸರಿಸಾಟಿಯಾಗಿ ಬೇರನನ್ನೂ ಕೊಡಲು ಸಾಧ್ಯವಿಲ್ಲ.  ಕೊರೊನಾದ ಸಂಕಷ್ಟದಲ್ಲಿರುವ ಭಾರತ ಅದನ್ನು ಮೆಟ್ಟಿನಿಂತಿದೆ. ಕರಾವಳಿಯಲ್ಲೂ ಕೊರೊನಾವನ್ನು ಎದುರಿಸಿ ಜನ ಮತ್ತೆ ಲವಲವಿಕೆಯತ್ತ ಮರಳಿದ್ದಾರೆ.

    ಮತ್ತೆ ಉತ್ಸವ, ನೇಮ, ಕೋಲ ಶುರುವಾಗುತ್ತಿದೆ. ನಮ್ಮ ಬದುಕು ನಿಂತ ನೀರಲ್ಲ. ಅದು ಹರಿಯುವ ಶುದ್ಧ ನೀರಾಗುತ್ತಿರಬೇಕು. ತಾಯಿ ಎಲ್ಲರನ್ನೂ ಹರಸಲಿ ಎಂದು ಅವರು ಹರಸಿದರು.

    ಅಧ್ಯಕ್ಷತೆಯನ್ನು ವಹಿಸಿದ್ದ ಸಂಸದ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್ ಕಟೀಲು ಮಾತನಾಡಿ, ಭಾರತೀಯರ ಪ್ರತಿಯೊಂದು ಸೊತ್ತಿನಲ್ಲಿಯೂ ದೈವ ದೇವರನ್ನು ಕಂಡವರು. ಅಷ್ಟೇ ಅಲ್ಲ ಕಲೆ, ಸಂಸ್ಕೃತಿಯಲ್ಲೂ ನಾವು ದೇವರನ್ನು ಕಂಡವರು.

    ನವರಾತ್ರಿ ಉತ್ಸವ ಕರಾವಳಿಯಲ್ಲೂ ಸಾಕಷ್ಟು ಕಲಾವಿದರಿಗೆ ನೆರವು ಸಿಗುತ್ತಿದೆ. ಆರಾಧನೆ ಮೂಲಕ ನಾವು ಸಂಸ್ಕೃತಿ ಪೂಜಿಸೋಣ ಎಂದರು.

    ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಈ ಉತ್ಸವದ ಸಂದರ್ಭದಲ್ಲಿ ಕೊರೊನಾ ಕಾಡಿದ ಹಿನ್ನೆಲೆಯಲ್ಲಿಯೂ ನಾವು ಹುಲಿವೇಷ ಕುಣಿತಕ್ಕೆ, ಉತ್ಸವಗಳಿಗೆ ಅನುಮತಿಯನ್ನು ಪಕ್ಷ ನೀಡಿದೆ.

    ಜನರ ಮನಸ್ಸು ಕೇವಲ ದೇವರು ಮಾತ್ರ ನಮಗೆ ರಕ್ಷಣೆ ನೀಡಬಲ್ಲ ಎನ್ನುವ ಅರಿವು ಆಗಿದೆ. ಜನರ ಆಧ್ಯಾತ್ಮಿಕ ಬದುಕಿಗೆ ನಮಗೆ ಉತ್ಸವಗಳು ಹೆಚ್ಚು ಶಕ್ತಿ ನೀಡಲಿ ಎಂದು ಆಶಿಸಿದರು.

    ಕೊರೊನಾ ಬಂದ ಬಳಿಕ ಎಲ್ಲರೂ ನೆಮ್ಮದಿಯನ್ನು ಕೆಡಿಸಿಕೊಂಡು ಬದುಕುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣವೇ ನಮ್ಮೊಳಗಿನ ದುಷ್ಟತನವಾಗಿದೆ.

    ಈ ದುಷ್ಟತನವನ್ನು ಕೊನೆಗೊಳಿಸಬೇಕಾದರೆ ದೇವಿ ಆರಾಧನೆ, ಹಬ್ಬಗಳ ಆಚರಣೆ ಅತೀ ಅಗತ್ಯ ಎಂದು ಕರ್ಣಾಟಕ ಬ್ಯಾಂಕಿನ ಚೀಫ್‌ ಆಪರೇಟಿಂಗ್‌ ಆಫೀಸರ್‌ ವೈ ವಿ ಬಾಲಚಂದ್ರ ಅಭಿಪ್ರಾಯಪಟ್ಟರು.

    ಎನ್‌ಎಂಪಿಟಿಯ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಮಾತನಾಡಿ, ನವರಾತ್ರಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೂಪದಲ್ಲಿ ಆಚರಿಸುತ್ತಾರೆ.

    ಆದರೆ ಎಲ್ಲರ ಮನಸ್ಸೂ ಒಂದೇ ಅದು ದೇವಿ ಆರಾಧನೆ. ಪುರಾತನ ಕಾಲದಿಂದಲೂ ದೇವಿ ಆರಾಧನೆಯನ್ನು ರಾಜಮಹಾರಾಜರೇ ಮಾಡಿಕೊಂಡು ಬಂದಿರುವುದನ್ನು ನಾವು ಕಂಡಿದ್ದೇವೆ. ಮಹಾಭಾರತ, ರಾಮಾಯಣದಲ್ಲೂ ನವರಾತ್ರಿಯ ಉಲ್ಲೇಖವಿದೆ. ದೇವಿ, ಧರ್ಮದ ಆರಾಧನೆಯೇ  ನಮ್ಮ ಸಫಲತೆಯ ರಹಸ್ಯವಾಗಿದೆ ಎಂದರು.

    ನಮ್ಮ ಕುಡ್ಲ ನಿರ್ದೇಶಕ ಹರೀಶ್ ಬಿ. ಕರ್ಕೇರಾ, ಲೀಲಾಕ್ಷ ಬಿ. ಕರ್ಕೇರ, ಸೌಮ್ಯ ಬಿ ಕರ್ಕೇರಾ,  ಶರಣ್ ಕರ್ಕೇರಾ‌ ಮೊದಲಾದವರಿದ್ದರು. ಕುಮಾರಿ ಐಶ್ವರ್ಯ ಅವರು ಪ್ರಾರ್ಥಿಸಿದರು.  ನಿತಿನ್ ಬಿ. ಸಾಲಿಯಾನ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ದಸರಾ ವೈಭವ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ತಂಡಗಳ, ಒಂದೂವರೆ ಸಾವಿರಕ್ಕೂ ಅಧಿಕ ಕಲಾವಿದರ ಪ್ರದರ್ಶನ ನಮ್ಮ ಕುಡ್ಲ 24×7 ವಾಹಿನಿಯಲ್ಲಿ ನಿರಂತರ 10 ದಿನಗಳ ಕಾಲ ನಡೆಯಲಿದೆ.

    Click to comment

    Leave a Reply

    Your email address will not be published. Required fields are marked *

    BELTHANGADY

    ಬೈಕ್‌ಗೆ ಗುದ್ದಿ ಎಸ್ಕೇಪ್ ಆದ ಬೊಲೆರೋ..! ಮಗು ಸಾ*ವು..!

    Published

    on

    ಬೆಳ್ತಂಗಡಿ : ಬೊಲೆರೋ ವಾಹನವೊಂದು ಬೈಕ್‌ಗೆ ಡಿ*ಕ್ಕಿ ಹೊಡೆದು ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ನಡೆದಿದೆ. ಮುಂಡಾಜೆಯ ಸೀಟು ಬಳಿ ಈ ಅಪಘಾ*ತ ನಡೆದಿದ್ದು ಬೈಕ್ ಸವಾರ ಕಲ್ಮಂಜ ಕುಡೆಂಚಿಯ ಗುರುಪ್ರಸಾದ್ ಗೋಖಲೆ ಹಾಗೂ ಅವರ ಮಗು ಅನರ್ಘ್ಯ ಗಂಭೀ*ರ ಗಾಯಗೊಂಡಿದ್ದಾರೆ. ಗುರುಪ್ರಸಾದ್ ಗೋಕಲೆಯವರು ಕಾಲು ಮುರಿದಿದ್ದು, ಮಗುವಿನ ತಲೆಗೆ ತೀವ್ರ ಸ್ವರೂಪದ ಗಾ*ಯವಾಗಿದೆ. ಮಗುವಿನ ತಲೆಯ ಮೇಲೆ ಬೊಲೆರೋ ಟಯರ್ ಹರಿದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃ*ತಪಟ್ಟಿದೆ.

    ಅಪಘಾ*ತ ನಡೆಸಿದ ಬೊಲೇರೋ ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಸ್ಥಳೀಯರು ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ನೆರಿಯಾ ಗ್ರಾಮದ ನಾಲ್ವರು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದು ಅವರನ್ನು ಸಾರ್ವಜನಿಕರು ಹಿಡಿದಿದ್ದಾರೆ.
    ಮಗು ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಬೊಲೆರೋ ಡಿಕ್ಕಿಯ ರಭಸಕ್ಕೆ ಚಕ್ರದ ಅಡಿಗೆ ತಲೆ ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ.

    Continue Reading

    DAKSHINA KANNADA

    ಗುರುಪುರ : ನೂಯಿಯ ಕುಸಿದ ಮನೆಗೆ ಡಾ. ಭರತ್ ಶೆಟ್ಟಿ ಭೇಟಿ; ಸರ್ಕಾರದಿಂದ ಪರಿಹಾರ ಭರವಸೆ

    Published

    on

    ಗುರುಪುರ : ಅಡ್ಡೂರು ಗ್ರಾಮದ ನೂಯಿಯ ಇಂದಿರಾನಗರದಲ್ಲಿ ಜು. 25ರಂದು ಸಂಜೆ ಕುಸಿದು ಬಿದ್ದು ಹಾನಿಗೀಡಾದ ಮನೆಗೆ ಶನಿವಾರ(ಜು.27) ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.


    ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ ಆರ್ಥಿಕವಾಗಿ ಹಿಂದುಳಿದ ಧನಲಕ್ಷ್ಮಿ ಅವರಿಗೆ ಸರ್ಕಾರದಿಂದ ಲಭ್ಯವಿರುವ ಮಳೆಹಾನಿ ನಿಧಿಯಿಂದ ಪರಿಹಾರ ಮಂಜೂರಾತಿಗೆ ಬೇಕಾದ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ದಾನಿಗಳ ನೆರವು ಪಡೆದು ಹಾಗೂ ಹಾಗೂ ವೈಯಕ್ತಿಕ ನೆಲೆಯಲ್ಲಿ ಅವರ ಪುತ್ರನ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲು ಸಹಕರಿಸುವೆ ಎಂದು ಮನೆ ಮಂದಿಗೆ ಭರವಸೆ ನೀಡಿದರು.

    ಇದನ್ನೂ ಓದಿ : ಬೈಂದೂರು: ಪೇಂಟ್ ಮಾಡುವ ಯಂತ್ರದಲ್ಲಿ ವಿದ್ಯುತ್ ಪ್ರವಹಿಸಿ ಪೈಂಟರ್ ಮೃ*ತ್ಯು
    ಶಾಸಕರೊಂದಿಗೆ ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ಚಂದ್ರಾವತಿ, ಬಿಜೆಪಿ ಪ್ರಮುಖ ಚಿದಾನಂದ ನಂದ್ಯ ಮತ್ತಿತರರು ಇದ್ದರು.

    Continue Reading

    DAKSHINA KANNADA

    ಸುನೀಲ ನಾಯಕಗೆ ಪಿಎಚ್‌ಡಿ ಪದವಿ ಪ್ರದಾನ

    Published

    on

    ಮಂಗಳೂರು/ ವಿಜಯಪುರ : ವಿಜಯಪುರ ಜಿಲ್ಲೆಯ ಅಲಿಯಾಬಾದ ಗ್ರಾಮದ ನಾಥು ನಾಯಕರ ಪುತ್ರ ಸುನೀಲ ನಾಯಕ ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಾಯಿತು.

    ಮಂಗಳೂರು ಮೆರೈನ ಕಾಲೇಜು ಮತ್ತು ಟೆಕ್ನೋಲಾಜಿ, ಮಂಗಳೂರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಸುನೀಲ ನಾಯಕ ಅವರ “ಟ್ರೈಬಲಾಜಿಕಲ ಬಿಹೇವಿಯರ್ ಆ್ಯಂಡ್ ಮೆಕಾನಿಕಲ್ ಪ್ರಾಪರ್ಟೀಸ್ ಆಫ್ ರೈನ್ಫೋರ್ಸಾಡ್ ಪಾಲಿಮರ್ ಕಾಂಪೋಸಿಟ್ ಫೋರ್ ಪ್ರೊಪೆಲ್ಲರ್ ಬ್ಲೇಡ್ ಯೂಸಿಂಗ್ ಫೌಲ್ ರಿಲೀಸ್ ಕೋಟಿಂಗ್”ಎಂಬ ಶೀರ್ಷಿಕೆಯ ಪ್ರಬಂಧವು ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದ ವರ್ಧನೆಗೆ ಕೊಡುಗೆ ನೀಡುವ ವ್ಯಾಪಕ ಪ್ರಸ್ತುತತೆಯಿಂದ ಮನ್ನಣೆಯನ್ನು ಗಳಿಸಿತು.

    ಇದನ್ನೂ ಓದಿ : ಸತ್ತ ವ್ಯಕ್ತಿಗಳು ನಿಮ್ಮ ಕನಸಿನಲ್ಲಿ ಬಂದರೆ ಶುಭವೋ… ಅಶುಭವೋ.?
    ಡಾ.ಎಂ.ಪ್ರಸನ್ನಕುಮಾರ, ಕಾರ್ಯಕ್ರಮ ಸಂಯೋಜಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು ಅವರ ಮಾರ್ಗದರ್ಶನದಲ್ಲಿ ಸುನಿಲ ನಾಯಕ ಅವರು ಸಂಶೋಧನೆಯನ್ನು ಕೈಗೊಂಡಿದ್ದರು. ತಮ್ಮ ತಂದೆ ತಾಯಿ ಶ್ರೀ. ನಾಥು ನಾಯಕ ಮತ್ತು ಸರಿತಾ ನಾಯಕ ಸೇರಿದಂತೆ ಅವರ ಕುಟುಂಬದ ಅಚಲ ಬೆಂಬಲವು ಅವರ ಯಶಸ್ಸಿಗೆ ಕಾರಣವಾಗಿದೆ.

    Continue Reading

    LATEST NEWS

    Trending