Connect with us

DAKSHINA KANNADA

ನವರಾತ್ರಿ ಉತ್ಸವ ದೇವಿ ಆರಾಧನೆಯೊಂದಿಗೆ ಸನ್ನಡತೆಯ ಮನಸ್ಸೂ ಜಾಗೃತವಾಗಲಿ : ಒಡಿಯೂರುಶ್ರೀ

Published

on

ನವರಾತ್ರಿ ಉತ್ಸವ ದೇವಿ ಆರಾಧನೆಯೊಂದಿಗೆ ಸನ್ನಡತೆಯ ಮನಸ್ಸೂ ಜಾಗೃತವಾಗಲಿ : ಒಡಿಯೂರುಶ್ರೀ

ನಮ್ಮ ಕುಡ್ಲ ವಾಹಿನಿಯ 10 ದಿನಗಳ ದಸರಾ ವೈಭವ 2020ಗೆ ಚಾಲನೆ…

ಮಂಗಳೂರು : ಇಂದು ದಸರಾ ಅಂದಾಕ್ಷಣ ಎಲ್ಲರೂ ಮೈಸೂರಿನತ್ತ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಜನ ಕರಾವಳಿಯತ್ತಲೂ ಈಗ ನೋಡುತ್ತಿದ್ದಾರೆ. ದಸರಾದ ಉತ್ಸವ ನಮ್ಮ ಅಂತರಂಗದ ಉತ್ಸವವಾಗಬೇಕು.

ದೇವಿ ಅನುಗ್ರಹವನ್ನು ಬೆಳಕಾಗಿಸುವ ಕೆಲಸ ನಾವು ಮಾಡಬೇಕು. ದೇವಿ ಆವಿರ್ಭಾವವಾಗಬೇಕು. ಅಂದರೆ ನಮ್ಮೊಳಗಿನ ಮನಸ್ಸು ದೇವಿಗಾಗಿ ಜಾಗೃತವಾಗಬೇಕು.

ಅಮ್ಮನ ಅನುಗ್ರಹವಿಲ್ಲದೆ ಯಾವುದೂ ನಡೆಯಲು ಸಾಧ್ಯವಿಲ್ಲ. ಮಹಾಕಾಳಿ, ಸರಸ್ವತಿ, ಶಾರದೆ ಹೀಗೆ ನಾನಾ ರೂಪದಲ್ಲಿ ದೇವಿ ಅವತರಿಸುತ್ತಾಳೆ.

ಜ್ಞಾನದ ಜೊತೆಗೆ ನಮ್ಮಲ್ಲಿ ಇಚ್ಛಾಶಕ್ತಿಯೂ ಇರಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಅವರು ನಮ್ಮ ಕುಡ್ಲ ವಾಹಿನಿಯ ದಸರಾ ವೈಭವ -2020ರ ಹತ್ತು ದಿನಗಳ ಕಾಲದ ಸಾಂಸ್ಕೃತಿಕ ವೈಭವಗಳ  ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಾರತಕ್ಕೆ ಸರಿಸಾಟಿಯಾಗಿ ಬೇರನನ್ನೂ ಕೊಡಲು ಸಾಧ್ಯವಿಲ್ಲ.  ಕೊರೊನಾದ ಸಂಕಷ್ಟದಲ್ಲಿರುವ ಭಾರತ ಅದನ್ನು ಮೆಟ್ಟಿನಿಂತಿದೆ. ಕರಾವಳಿಯಲ್ಲೂ ಕೊರೊನಾವನ್ನು ಎದುರಿಸಿ ಜನ ಮತ್ತೆ ಲವಲವಿಕೆಯತ್ತ ಮರಳಿದ್ದಾರೆ.

ಮತ್ತೆ ಉತ್ಸವ, ನೇಮ, ಕೋಲ ಶುರುವಾಗುತ್ತಿದೆ. ನಮ್ಮ ಬದುಕು ನಿಂತ ನೀರಲ್ಲ. ಅದು ಹರಿಯುವ ಶುದ್ಧ ನೀರಾಗುತ್ತಿರಬೇಕು. ತಾಯಿ ಎಲ್ಲರನ್ನೂ ಹರಸಲಿ ಎಂದು ಅವರು ಹರಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸದ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್ ಕಟೀಲು ಮಾತನಾಡಿ, ಭಾರತೀಯರ ಪ್ರತಿಯೊಂದು ಸೊತ್ತಿನಲ್ಲಿಯೂ ದೈವ ದೇವರನ್ನು ಕಂಡವರು. ಅಷ್ಟೇ ಅಲ್ಲ ಕಲೆ, ಸಂಸ್ಕೃತಿಯಲ್ಲೂ ನಾವು ದೇವರನ್ನು ಕಂಡವರು.

ನವರಾತ್ರಿ ಉತ್ಸವ ಕರಾವಳಿಯಲ್ಲೂ ಸಾಕಷ್ಟು ಕಲಾವಿದರಿಗೆ ನೆರವು ಸಿಗುತ್ತಿದೆ. ಆರಾಧನೆ ಮೂಲಕ ನಾವು ಸಂಸ್ಕೃತಿ ಪೂಜಿಸೋಣ ಎಂದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಈ ಉತ್ಸವದ ಸಂದರ್ಭದಲ್ಲಿ ಕೊರೊನಾ ಕಾಡಿದ ಹಿನ್ನೆಲೆಯಲ್ಲಿಯೂ ನಾವು ಹುಲಿವೇಷ ಕುಣಿತಕ್ಕೆ, ಉತ್ಸವಗಳಿಗೆ ಅನುಮತಿಯನ್ನು ಪಕ್ಷ ನೀಡಿದೆ.

ಜನರ ಮನಸ್ಸು ಕೇವಲ ದೇವರು ಮಾತ್ರ ನಮಗೆ ರಕ್ಷಣೆ ನೀಡಬಲ್ಲ ಎನ್ನುವ ಅರಿವು ಆಗಿದೆ. ಜನರ ಆಧ್ಯಾತ್ಮಿಕ ಬದುಕಿಗೆ ನಮಗೆ ಉತ್ಸವಗಳು ಹೆಚ್ಚು ಶಕ್ತಿ ನೀಡಲಿ ಎಂದು ಆಶಿಸಿದರು.

ಕೊರೊನಾ ಬಂದ ಬಳಿಕ ಎಲ್ಲರೂ ನೆಮ್ಮದಿಯನ್ನು ಕೆಡಿಸಿಕೊಂಡು ಬದುಕುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣವೇ ನಮ್ಮೊಳಗಿನ ದುಷ್ಟತನವಾಗಿದೆ.

ಈ ದುಷ್ಟತನವನ್ನು ಕೊನೆಗೊಳಿಸಬೇಕಾದರೆ ದೇವಿ ಆರಾಧನೆ, ಹಬ್ಬಗಳ ಆಚರಣೆ ಅತೀ ಅಗತ್ಯ ಎಂದು ಕರ್ಣಾಟಕ ಬ್ಯಾಂಕಿನ ಚೀಫ್‌ ಆಪರೇಟಿಂಗ್‌ ಆಫೀಸರ್‌ ವೈ ವಿ ಬಾಲಚಂದ್ರ ಅಭಿಪ್ರಾಯಪಟ್ಟರು.

ಎನ್‌ಎಂಪಿಟಿಯ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಮಾತನಾಡಿ, ನವರಾತ್ರಿಯನ್ನು ಒಂದೊಂದು ರಾಜ್ಯದಲ್ಲಿ ಒಂದೊಂದು ರೂಪದಲ್ಲಿ ಆಚರಿಸುತ್ತಾರೆ.

ಆದರೆ ಎಲ್ಲರ ಮನಸ್ಸೂ ಒಂದೇ ಅದು ದೇವಿ ಆರಾಧನೆ. ಪುರಾತನ ಕಾಲದಿಂದಲೂ ದೇವಿ ಆರಾಧನೆಯನ್ನು ರಾಜಮಹಾರಾಜರೇ ಮಾಡಿಕೊಂಡು ಬಂದಿರುವುದನ್ನು ನಾವು ಕಂಡಿದ್ದೇವೆ. ಮಹಾಭಾರತ, ರಾಮಾಯಣದಲ್ಲೂ ನವರಾತ್ರಿಯ ಉಲ್ಲೇಖವಿದೆ. ದೇವಿ, ಧರ್ಮದ ಆರಾಧನೆಯೇ  ನಮ್ಮ ಸಫಲತೆಯ ರಹಸ್ಯವಾಗಿದೆ ಎಂದರು.

ನಮ್ಮ ಕುಡ್ಲ ನಿರ್ದೇಶಕ ಹರೀಶ್ ಬಿ. ಕರ್ಕೇರಾ, ಲೀಲಾಕ್ಷ ಬಿ. ಕರ್ಕೇರ, ಸೌಮ್ಯ ಬಿ ಕರ್ಕೇರಾ,  ಶರಣ್ ಕರ್ಕೇರಾ‌ ಮೊದಲಾದವರಿದ್ದರು. ಕುಮಾರಿ ಐಶ್ವರ್ಯ ಅವರು ಪ್ರಾರ್ಥಿಸಿದರು.  ನಿತಿನ್ ಬಿ. ಸಾಲಿಯಾನ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ದಸರಾ ವೈಭವ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ತಂಡಗಳ, ಒಂದೂವರೆ ಸಾವಿರಕ್ಕೂ ಅಧಿಕ ಕಲಾವಿದರ ಪ್ರದರ್ಶನ ನಮ್ಮ ಕುಡ್ಲ 24×7 ವಾಹಿನಿಯಲ್ಲಿ ನಿರಂತರ 10 ದಿನಗಳ ಕಾಲ ನಡೆಯಲಿದೆ.

BANTWAL

ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!

Published

on

ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.

Continue Reading

DAKSHINA KANNADA

ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

Published

on

ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.

ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು

ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ.  ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

Trending