DAKSHINA KANNADA
ಸಂಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಬೆಳೆಯೋಣ : ಮಹಾಬಲೇಶ್ವರ ಎಂ. ಎಸ್
ಸಂಕಷ್ಟಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಬೆಳೆಯೋಣ : ಮಹಾಬಲೇಶ್ವರ ಎಂ. ಎಸ್
ನಮ್ಮ ಕುಡ್ಲ ದಸರಾ ಸಂಭ್ರಮ : ದಶ ದಿನಗಳ ಸಂಭ್ರಮಕ್ಕೆ ವೈಭವದ ತೆರೆ..!
ಮಂಗಳೂರು : ಸಂಕಷ್ಟಗಳು ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲಿ ಬರುತ್ತದೆ. ಆದರೆ ಸಂಕಷ್ಟಗಳನ್ನು ಅವಕಾಶಗಳನ್ನಾಗಿ ನಾವು ಹೇಗೆ ಪರಿವರ್ತನೆ ಮಾಡುತ್ತೇವೆ ಎನ್ನುವುದನ್ನು ಅವಲಂಬಿಸಿ ನಾವು ಬೆಳೆಯುತ್ತೇವೆ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ ಎಸ್ ನುಡಿದರು.
ಅವರು ನಮ್ಮ ಕುಡ್ಲ ವಾಹಿನಿಯ ದಶದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ದಸರಾ ವೈಭವ- 2020ಯ ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಕೊರೊನಾದ ಬಗ್ಗೆ ನಮಗೆ ನೀಡಲಾಗಿರುವ ಆರೋಗ್ಯದ ಸೂತ್ರಗಳನ್ನು ನಾವು ಮುಂದಿನ ದಿನಗಳಲ್ಲೂ ಖಡ್ಡಾಯವಾಗಿ ಪಾಲಿಸೋಣ. ಈ ಮೂಲಕ ನಮ್ಮ ಜವಾಬ್ದಾರಿ, ಹೊಣೆಯನ್ನು ನಾವು ನಿಭಾಯಿಸಬೇಕಾಗಿದೆ. ಕೊರೊನಾದ ಸಂಕಷ್ಟದ ವೇಳೆ ಹಲವು ರಾಷ್ಟ್ರೀಯಮಟ್ಟದ ವಾಹಿನಿಗಳೇ ಕಾರ್ಯಕ್ರಮ ನೀಡಲಾಗದೇ ಸಂಕಷ್ಟಕ್ಕೆ ಸಿಲುಕಿರುವಾಗ ನಮ್ಮ ಕುಡ್ಲದ ಈ ಪ್ರಯತ್ನ ಶ್ಲಾಘನೀಯ. ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಜವಾಬ್ದಾರಿಯುತವಾಗಿ ಸುದ್ದಿಗಳನ್ನು ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಕೊರೊನಾದಿಂದಾಗಿ ಬ್ಯಾಂಕಿಂಗ್, ವೈದ್ಯಕೀಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ತಲ್ಲಣ ಉಂಟಾಗಿದೆ. ಆದರೆ ಇದರಿಂದ ಕೆಲವೊಂದು ಕ್ಷೇತ್ರದಲ್ಲಿ ಪ್ರಗತಿಯೂ ಉಂಟಾಗಿದೆ. ಮಾಹಿತಿ ತಂತ್ರಜ್ಞಾನ, ಆನ್ಲೈನ್ ಶಿಕ್ಷಣದ ಮೂಲಕ ಪ್ರಗತಿ ಸಾಧಿಸುವಂತಾಗಿದೆ. ಕಷ್ಟಕಾಲ ಬಂದಾಗ ಎದೆಗುಂದದೆ ಅದನ್ನು ನಿಭಾಯಿಸುವುದೇ ನಮ್ಮ ಜಾಣತನವಾಗಿದೆ ಎಂದರು.
ನವಾರಾತ್ರಿಯ ಈ ಪರ್ವಕಾಲದಲ್ಲಿ ದುರ್ಗಾಮಾತೆಯ ಅನುಗ್ರಹದಿಂದ, ಮಾನವನ ಪ್ರಯತ್ನದಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗತೊಡಗಿದೆ. ಹಾಗಾಗಿ ನಮಗೀಗ ಆಶಾಭಾವನೆ ಮೂಡಿದೆ. ಮುಂದಿನ ದಿನಗಳಲ್ಲಿ ನಮಗೆ ಒಳ್ಳೆಯ ದಿನಗಳು ಬರತೊಡಗಿವೆ. ಕೆಟ್ಟದ್ದನ್ನು ಒಳ್ಳೆತನ ಹೇಗೆ ನಿಭಾಯಿಸಿದೆ ಎನ್ನುವುದು ದಸರಾದ ಈ ಸಂದರ್ಭದಲ್ಲಿ ನಾವು ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಕರ್ಕೇರ ಅತಿಥಿಗಳನ್ನು ಸ್ವಾಗತಿಸಿದರು. ದಸರಾ ಸಂಭ್ರಮ 2020ರ ಕಾರ್ಯಕ್ರಮದ ಸಮಗ್ರ ನೋಟವನ್ನು ಅವರು ನೀಡಿದರು. 120 ತಂಡಗಳ 1500ಕ್ಕೂ ಮಿಕ್ಕಿದ ಕಲಾವಿದರನ್ನು ಕರೆಸಿ ಕಾರ್ಯಕ್ರಮದ ಆಯೋಜನೆ ಸುಲಭದ ಮಾತಾಗಿರಲಿಲ್ಲ. ಕೊರೊನಾದ ಸಂಕಷ್ಟವನ್ನೂ ಮೆಟ್ಟಿ ಎಲ್ಲರನ್ನೂ ಸುಧಾರಿಸಿಕೊಂಡು ಎಲ್ಲಾ ರಂಗದ ಕಲಾವಿದರನ್ನು ಒಗ್ಗೂಡಿಸುವುದು ಸವಾಲಿನ ಕೆಲಸವಾಗಿತ್ತು. ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ನುಡಿದರು.
ಸಹನಾ ಮಳಲಿ ಪ್ರಾರ್ಥಿಸಿದರೆ, ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಕುಡ್ಲ ದಸರಾ ಸಂಭ್ರಮ : ದಶ ದಿನಗಳ ಸಂಭ್ರಮಕ್ಕೆ ವೈಭವದ ತೆರೆ..!
ಕರಾವಳಿ ಕರ್ನಾಟಕದ ಪ್ರಪ್ರಥಮ ತುಳು ವಾರ್ತಾವಾಹಿನಿ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನಮ್ಮಕುಡ್ಲ ವಾಹಿನಿ ಸುಮಾರು 20 ವರ್ಷಗಳಿಂದಲೂ ನೇರಪ್ರಸಾರ ಕಾರ್ಯಕ್ರಮದ ಮೂಲಕ ಜನಮನ್ನಣೆ ಗಳಿಸಿದೆ.
ಬಳಿಕ 24*7 ವಾಹಿನಿಯು ಸೇರ್ಪಡೆಗೊಂಡು ಸಮಗ್ರ ಸುದ್ದಿಗಳನ್ನು ಬಿತ್ತರಿಸುವುದರ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು ವೀಕ್ಷಕರ ಮನೆಗೆದ್ದಿದೆ.ಕೊರೊನಾ ಕಾರಣಕ್ಕೆ 2020 ಅಕ್ಷರಶಃ ನೋವು- ಕಷ್ಟ ನಷ್ಟಗಳನ್ನು ಅನುಭವಿಸಿದ ವರ್ಷ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.
ಜನರ ಮನಸ್ಥಿತಿಯೂ ತೀರ ಹದಗೆಟ್ಟಿತ್ತು..ಹಬ್ಬ ಹರಿದಿನಗಳು ನೀರಸವಾಗಿತ್ತು..ಹೊರ ಜಗತ್ತಿಗೆ ಕಾಲಿಡದಂತೆ ಕೋವಿಡ್ ಆವರಿಸಿ ಬಿಟ್ಟಿತ್ತು.ಜೊತೆಗೆ ಅದೆಷ್ಟೋ ಕಲಾವಿದರ ಬದುಕು ಹೈರಾಣಾಗಿತ್ತು.
ಈ ಸಂದರ್ಭದಲ್ಲಿ ಜನರನ್ನು ಒಂದಿಷ್ಟು ಸಂತೋಷ ಪಡಿಸಬೇಕು, ಹೊರಗಡೆ ಸಂಭ್ರಮವಿಲ್ಲದಿದ್ರೂ ಮನೆಯೊಳಗಡೆ ಕೂತು ಹಬ್ಬ ಹರಿದಿನಗಳನ್ನು ಆಚರಿಸಿ, ಮನೋರಂಜನೆಯನ್ನು ಕೂಡ ಅನುಭವಿಸಲೀ ಅನ್ನುವ ದೃಷ್ಟಿಯಿಂದ, ಜೊತೆಗೆ ಕಲಾವಿದರಿಗೂ ಒಂದೊಳ್ಳೆ ವೇದಿಕೆ ಒದಗಿಸಬೇಕು ಅನ್ನುವ ನಿಟ್ಟಿನಲ್ಲಿ ನಮ್ಮ ಕುಡ್ಲ ವಾಹಿನಿಯು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೂರು ದಿನಗಳಲ್ಲೂ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ವೀಕ್ಷಕರಿಗೆ ಹಾಗೂ ಕಲಾವಿದರಿಗೆ ಮನೋಲ್ಲಾಸವನ್ನು ನೀಡಿದೆ.
ಇದರ ಯಶಸ್ಸೇ ನಮಗೆ ದಸರಾ ವೈಭವ ಕಾರ್ಯಕ್ರಮ ಮಾಡಲು ಸ್ಪೂರ್ತಿಯಾಯ್ತು..ದಶದಿನಗಳು ನಾರಾರು ಕಾರ್ಯಕ್ರಮಗಳು, ಸಾವಿರಾರು ಕಲಾವಿದರು, 50-60 ಸಭಾ ಅತಿಥಿಗಳನ್ನೊಳಗೊಂಡು ಕಾರ್ಯಕ್ರಮ ಯಶಸ್ವಿಯಾಯ್ತು.
.ದಸರಾ ವೈಭವದ ಹತ್ತು ದಿನಗಳಲ್ಲೂ ಪ್ರತೀ ದಿನ ಬೆಳಗ್ಗೆ ನಾಡಿನ ಹೆಸರಾಂತ ನಾದಸ್ವರವಾದಕರಿಂದ ಸ್ಯಾಕ್ಷೋಫೋನ್ ಕಚೇರಿ ಹಾಗೂ ಪ್ರಸಿದ್ದ ಗಾಯಕರಾದ ಅಜಯ್ ವಾರಿಯರ್, ಜಗದೀಶ್ ಪುತ್ತೂರು, ರವೀಂದ್ರ ಪ್ರಭು, ವಿ.ಶೀಲಾ ದಿವಾಕರ್ , ದೇವದಾಸ್ ಕಾಪಿಕಾಡ್ , ಭೋಜರಾಜ ವಾಮಂಜೂರು ಹಾಗೂ ಉದಯೋನ್ಮುಖ ಗಾಯಕರಿಂದ ಭಕ್ತಿ ಹಾಡುಗಳ ಸುರಿಮಳೆ , ಮ್ಯೂಸಿಕ್ ಕಲಾವಿದರಿಂದ ಮನಮೋಹಕ ಆರ್ಕೆಸ್ಟ್ರಾ , ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಭರತನಾಟ್ಯ ಹಾಗೂ ನೃತ್ಯ ಪಟುಗಳಿಂದ ಮನಮೋಹಕ ಡಾನ್ಸ್, ತುಳುನಾಡಿನ ಕಾರಣಿಕವನ್ನು ಎತ್ತಿ ತೋರಿಸಿದ ತುಳು ಪೌರಾಣಿಕ ನಾಟಕ, ತೆಂಕು ಹಾಗೂ ಬಡಗು ಮೇಳದ ಪ್ರಸಿದ್ದ ಯಕ್ಷ ಕಲಾವಿದರ ಕೂಡುವಿಕೆಯಲ್ಲಿ ಪ್ರತಿ ದಿನವೂ ಯಕ್ಷಗಾನ, ತಾಳಮದ್ದಳೆ… ಹುಲಿವೇಷಧಾರಿಗಳ ಅಬ್ಬರ ,ಶ್ರೀ ದೇವಿಮಹಾತ್ಮೆ ಯ ಯಕ್ಷಕಾವ್ಯ ಕಥನ, ಮಾರ್ನೆಮಿಡ್ ಭೂತಾರಾಧನೆ, ನಾರಿಯರಿಗಾಗಿ ನವರಂಗ್ ಸ್ಪರ್ಧೆಯೊಂದಿಗೆ ಪ್ರತಿ ದಿನವೂ ಸಭಾ ಕಾರ್ಯಕ್ರಮ ನಡೆದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು…ಮೊದಲ ದಿನ ಒಡಿಯೂರು ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಆಶೀರ್ವಾದದೊಂದಿಗೆ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಕರ್ನಾಟಕ ಬ್ಯಾಂಕ್ ನ ಮುಖ್ಯನಿರ್ವಹಣಾಧಿಕಾರಿ ವೈ.ವಿ.ಬಾಲಚಂದ್ರ, ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಅಂದಗಾಣಿಸಿಕೊಟ್ಟು, ದಸರಾ ವೈಭವದ ಎರಡನೇ ದಿನ ಸರ್ವಧರ್ಮ ಸಭಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದರಲ್ಲದೆ, ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ , ಮಂಗಳೂರು ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ, ಸಯ್ಯದ್ ಮದನಿ ದರ್ಗಾ ಉಳ್ಳಾಲದ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಸಹಿತ ಪ್ರತೀ ದಿನವೂ ಗಣ್ಯಾತಿಗಣ್ಯರು ಸಭಾ ಕಾರ್ಯಕ್ರಮಕ್ಕಾಗಮಿಸಿ ಶುಭಾಶಿರ್ವಚಿಸಿ, ಕಾರ್ಯಕ್ರಮದ ಕೊನೆಯದಾಗಿ ಇಂದು ಸಮಾರೋಪ ಸಮಾರಂಭ ನಡೆಯುತ್ತಿದೆ. ಇಂದಿನ ಅತಿಥಿಗಳು ಶ್ರೀಯುತ ಮಹಾಬಲೇಶ್ವರ ಎಂ ಎಸ್, ಸಿಇಒ ಮತ್ತು ಎಂ.ಡಿ.ಕರ್ಣಾಟಕ ಬ್ಯಾಂಕ್ , ಡಾ.ಎಂ.ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳು ಮೂಡಬಿದಿರೆ, ಡಾ.ಸತೀಶ್ ಭಂಡಾರಿ ಕುಲಪತಿ ನಿಟ್ಟೆ ವಿವಿ…. ಹತ್ತು ದಿನಗಳು ನಡೆದ ದಸರಾ ವೈಭವ ಕಾರ್ಯಕ್ರಮಗಳನ್ನು ಅಂದಗಾಣಿಸಿಕೊಟ್ಟ ಎಲ್ಲಾ ಅತಿಥಿ ಅಭ್ಯಾಗತರಿಗೆ, ಎಲ್ಲಾ ಕಲಾವಿದರಿಗೆ ಹಾಗೂ ನಮ್ಮ ಜಾಹೀರಾತುದಾರರಿಗೆ ಮತ್ತು ತಾಳ್ಮೆಯಿಂದ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದ ಸಮಸ್ತ ವೀಕ್ಷಕ ಬಾಂಧವರಿಗೂ ನಮ್ಮಕುಡ್ಲ ವಾಹಿನಿಯ ಪರವಾಗಿ ಅನಂತ ಅನಂತ ಧನ್ಯವಾದಗಳು…….
BANTWAL
ಮತ ಚಲಾಯಿಸಿದ ನವ ದಂಪತಿ…! ಶುಭ ಹಾರೈಸಿದ ಸ್ನೇಹಿತರು..!
ಮಂಗಳೂರು : ಇಂದು ಹೊಸ ಬಾಳಿಗೆ ಕಾಲಿಡುತ್ತಿದ್ದ ಆ ಜೋಡಿಗಳು ಹೊಸ ಬಾಳಿನ ಚಿಂತನೆಯ ಜೊತೆಗೆ ದೇಶದ ಚಿಂತನೆಯನ್ನೂ ಮಾಡಿದ್ದಾರೆ. ಮದುವೆಯ ಸಮಾರಂಭದಲ್ಲಿ ಹಸಮಣೆ ಏರಿ ಪತಿ ಪತ್ನಿಯರಾಗಿ ಒಂದಾದ ಜೋಡಿ ಎಲ್ಲಾ ಸಂಪ್ರದಾಯಗಳು ಪೂರ್ಣಗೊಂಡ ತಕ್ಷಣ ಮದುವೆ ಮನೆಯಿಂದ ಹೊರ ನಡೆದಿದ್ದಾರೆ. ಮದುವೆ ಮನೆಯಿಂದ ಬಂದವರೇ ನೇರವಾಗಿ ಮತಗಟ್ಟೆಗೆ ಹೋಗಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಹೌದು ಇದು ನಡೆದಿರುವುದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಬೂತ್ ಸಂಖ್ಯೆ 16 ರಲ್ಲಿ . ಇವರ ಮದುವೆ ನಿಗದಿಯಾದ ದಿನಂದಂತೆ ಪ್ರಜಾಪ್ರಭುತ್ವದ ಹಬ್ಬವಾಗಿರೋ ಚುನಾವಣೆ ದಿನಾಂಕ ಕೂಡಾ ಘೋಷಣೆ ಆಗಿದೆ. ಒಂದು ಕಡೆ ಹಸೆಮಣೆ ಏರಿ ತಮ್ಮ ಸ್ವಂತ ಭವಿಷ್ಯ ಕಟ್ಟಿಕೊಳ್ಳುವ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟಲು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಮಾದರಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಮಲ್ಲೆರ್ಮಳಕೋಡಿ ಜಯರಾಮ ಕುಲಾಲ್ ಎಂಬ ವರ ವದುವಿವೊಂದಿಗೆ ಬಂದು ತನ್ನ ಮತ ಚಲಾಯಿಸಿದ್ದಾರೆ. ಇವರಿಬ್ಬರ ಈ ಕಾಳಜಿಗೆ ಜನರು ಹಾಗೂ ಮತಗಟ್ಟೆ ಅಧಿಕಾರಿಗಳು ಶುಭ ಹಾರೈಸಿದ್ದಾರೆ. ಇದೇ ವೇಳೆ ಜಯರಾಮ್ ಕುಲಾಲ್ ಅವರ ಸ್ನೇಹಿತರು ಹಿತೈಷಿಗಳು ಕೂಡಾ ಶುಭ ಹಾರೈಸಿದ್ದಾರೆ.
DAKSHINA KANNADA
ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ
ಪುತ್ತೂರು : ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆಯಾಗಿರುವ ಘಟನೆ ಪುತ್ತೂರಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಗ್ರೂಪ್ ಗೆ ಶೇರ್ ಮಾಡಿದ ಯುವಕನ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.
ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ಶೇರ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ಇದನ್ನೂ ಓದಿ : ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಕುಸಿದು ಬಿದ್ದು ಸಾ*ವು
ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಫೋಟೊವನ್ನು ರಂಜಿತ್ ಬಂಗೇರ ಎಂಬ ಯುವಕ ತೆಗೆದಿದ್ದಾನೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಎಫ್ ಐ ಆರ್ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ / ಜಿಲ್ಲಾ ಚುನಾವಣಾಧಿಕಾರಿ ಮುಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
DAKSHINA KANNADA
ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು
ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
- FILM4 days ago
ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾದ ಜೆರುಶಾ
- FILM4 days ago
‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು
- FILM5 days ago
ವಿಚ್ಛೇದನದ ಸುದ್ದಿಗೆ ಉತ್ತರ ಕೊಟ್ಟ ಐಶ್ – ಅಭಿ ಆ್ಯನಿವರ್ಸರಿ ಫೋಟೋ!
- chikkamagaluru4 days ago
ಎಟಿಎಂ ಮೆಷಿನ್ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!