Connect with us

    LATEST NEWS

    ಕಟ್ಟಡ ಕಾಮಗಾರಿಯ ಸ್ಥಳದಲ್ಲಿ ಮಣ್ಣು ಕುಸಿತ ಪ್ರಕರಣ; ಇನ್ನೋರ್ವ ಕಾರ್ಮಿಕ ಮೃ*ತ್ಯು

    Published

    on

    ಮಂಗಳೂರು: ನಿನ್ನೆ(ಜು.3) ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಣ್ಣು ಕುಸಿತ ಉಂಟಾಗಿ ಸಂಭವಿಸಿದ ದುರ್ಘಟನೆಯಲ್ಲಿ ಉತ್ತರ ಪ್ರದೇಶ ಮೂಲಕ ಕಾರ್ಮಿಕ ಚಂದನ್ ಕುಮಾರ್ ಮೃ*ತ ಪಟ್ಟಿದ್ದಾರೆ. ಮಧ್ಯಾಹ್ನದ ವೇಳೆ ನಡೆದಿದ್ದ ಈ ದುರ್ಘಟನೆಯಲ್ಲಿ ಬಿಹಾರ ಮೂಲದ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಕಾರ್ಯಾಚರಣೆ ಮುಂದುವರಿಸಿದ ಎನ್‌ಡಿಆರ್‌ಎಫ್‌ ಹಾಗೂ ಇತರ ರಕ್ಷಣಾ ತಂಡಗಳು ರಾತ್ರಿ ಎಂಟು ಗಂಟೆಯ ವೇಳೆಗೆ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಚಂದನ್ ಕುಮಾರ್ ಅವರನ್ನು ಹೊರತೆಗೆದಿದ್ದಾರೆ. ಅವರು ಸಿಲುಕಿಕೊಂಡಿದ್ದ ಜಾಗದಲ್ಲಿ ರಾಡ್‌ಗಳು ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಲು ಕಾರಣವಾಗಿತ್ತು. ಆದಾಗ್ಯೂ ಸ್ಥಳದಲ್ಲಿ ಹಾಜರಿದ್ದ ವೈದ್ಯಕೀಯ ತಂಡದವರು ಚಂದನ್ ಕುಮಾರ್ ಅವರಿಗೆ ಜೀವರಕ್ಷಕ ವ್ಯವಸ್ಥೆಯನ್ನು ಒದಗಿಸುವ ಪ್ರಯತ್ನ ಮಾಡಿದ್ದರು.

    ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾ*ವು..!

    ರಿಟೈನಿಂಗ್ ವಾಲ್‌ಗೆ ಕೋರ್ ಕಟ್ಟಿಂಗ್ ಮೆಷಿನ್ ಬಳಸಿ ಹೋಲ್ ಮಾಡಿದ್ದು, ಚಂದನ್ ಕುಮಾರ್ ಕೈ ಚಲನೆ ಕಾಣಿಸುತ್ತಿದ್ದ ಕಾರಣ ಕ್ಷಿಪ್ರಗತಿಯಲ್ಲಿ ರಕ್ಷಣಾ ಕಾರ್ಯ ಮುಂದುವರಿಲಾಗಿತ್ತು. ಆದ್ರೆ ರಕ್ಷಣೆ ಮಾಡಿ ಹೊರತರುವಷ್ಟರಲ್ಲಿ ಚಂದನ್ ಕುಮಾರ್ ಅಸುನೀಗಿದ್ದಾರೆ. ಈ ಘಟನೆಯ ಬಳಿಕ ಮುಂಜಾಗ್ರತಾ ಕ್ರಮವಾಗಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಕಟ್ಟಡ ಕಾಮಗಾರಿಗಳನ್ನು ಮಳೆಗಾಲ ಮುಗಿಯುವ ತನಕ ಸ್ಥಗಿತ ಗೊಳಿಸಿ ಆದೇಶ ಮಾಡಲಾಗಿದೆ. ಈಗ ನಡೆಯುತ್ತಿರುವ ಎಲ್ಲಾ ಕಟ್ಟಡ ಕಾಮಗಾರಿಗಳನ್ನು ಅನಾಹುತ ಸಂಭವಿಸಿದಂತೆ ಕ್ರಮ ಕೈಗೊಂಡು ತಕ್ಷಣ ನಿಲ್ಲಿಸುವಂತೆ ಸೂಚಿಸಲಾಗಿದೆ. ಆದೇಶ ಉಲ್ಲಂಘಸಿದ್ರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಇರಾನ್‌ ಅಧ್ಯಕ್ಷೀಯ ಚುನಾವಣೆ..! ಹಿಜಾಬ್‌ ವಿರೋಧಿ ನಾಯಕನಿಗೆ ಗೆಲುವು..!

    Published

    on

    ಮಂಗಳೂರು ( ಇರಾನ್‌ )  :  ಇರಾನ್‌ನ ಉದಾರವಾದಿ ನಾಯಕ ಮಸೌದ್ ಪೆಜೆಶ್ಕಿಯಾನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ಮೂಲಭೂತವಾದಿ ನಾಯಕ ಸಯೀದ್ ಜಲಿಲಿ ಅವರನ್ನು 30 ಲಕ್ಷ ಮತಗಳಿಂದ ಸೋಲಿಸಿದ್ದಾರೆ. ಇಬ್ರಾಹಿಂ ರೈಸಿ ಅವರ ನಿಧನದಿಂದ ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿತ್ತು.

    ಪಜಾಶ್ಕಿಯಾನ್ 1.64 ಕೋಟಿ ಮತಗಳನ್ನು ಪಡೆದರೆ, ಜಲಿಲಿಗೆ 1.36 ಕೋಟಿ ಮತಗಳು ಬಂದಿವೆ. ಈ ವರ್ಷದ ಫೆಬ್ರವರಿಯಲ್ಲಿ ಇರಾನ್‌ನಲ್ಲಿ ಚುನಾವಣೆ ನಡೆದು ಇಬ್ರಾಹಿಂ ರೈಸಿ ದೇಶದ ಅಧ್ಯಕ್ಷಾಗಿದ್ದರು. ಮೇ 19 ರಂದು ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ರೈಸಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ನಡೆಸಲಾಗಿದೆ. ಈ ಚುನಾವಣೆಯಲ್ಲಿ ಮಸೌದ್ ಪೆಜೆಶ್ಕಿಯಾನ್ ಇರಾನ್ ದೇಶದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಚುನಾವಣೆಯ ವಿಷಯವಾಗಿದ್ದ ಹಿಜಾಬ್‌..! ಕೈ ಹಿಡಿದ ಮತದಾರರು..!

    1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ದೇಶದಲ್ಲಿ ಹಿಜಾಬ್ ಕಾನೂನು ಜಾರಿ ಮಾಡಲಾಗಿತ್ತು. ಹಿಜಾಬ್ ವಿಚಾರವಾಗಿ ಇರಾನ್‌ ಮಹಿಳೆಯರು ಸಾಕಷ್ಟು ಪ್ರತಿಭಟನೆ ನಡೆಸಿದ್ದು 22 ವರ್ಷದ ಮಹ್ಸಾ ಅಮಿನಿಯ ಸಾವಿನ ಬಳಿಕ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿತ್ತು. ಇರಾನ್ ದೇಶದ ಆರೋಗ್ಯ ಸಚಿವರಾಗಿದ್ದ ಮಸೌದ್ ಪಜಾಶ್ಕಿಯಾನ್ ವೈದ್ಯರಾಗಿದ್ದು, ಶಸ್ತ್ರಚಿಕಿತ್ಸಕರಾಗಿದ್ದಾರೆ. ಚುನಾವಣೆಯ ರಾಜಕೀಯ ಭಾಷಣದಲ್ಲಿ ಹಿಜಾಬ್ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಹಿಜಾಬ್ ವಿರೋಧಿಯಾದ ಅವರು ನೈತಿಕ ಪೊಲೀಸ್ ಗಿರಿಯ ವಿರುದ್ಧ ಕ್ರಮ ಜರುಗಿಸುವುದಾಗಿ ಭಾಷಣದಲ್ಲಿ ಹೇಳಿದ್ದರು. ಇದೇ ಕಾರಣದಿಂದ ಉದಾರವಾದಿ ನಾಯಕ ಮಸೌದ್ ಪೆಜಶ್ಕಿಯಾನ್ ಇರಾನ್‌ ದೇಶದ ಅಧ್ಯಕ್ಷಗಾದಿ ಏರಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

    Continue Reading

    LATEST NEWS

    ಗುಜರಾತ್‌ನಲ್ಲಿ ಆರು ಅಂತಸ್ಥಿನ ಕಟ್ಟಡ ಕುಸಿತ..!

    Published

    on

    ಗುಜರಾತ್‌ : ಗುಜಾರತ್‌ನಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಗುಜಾರತ್‌ನ ಸೂರತ್‌ನ ಸಚಿನ್ ಪಾಲಿ ಎಂಬ ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 15 ಜನ ಗಾಯಗೊಂಡ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಅಗ್ನಿಶಾಮಕ ಮತ್ತು ಪೊಲೀಸ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಬಿದ್ದ ಕಟ್ಟಡದ ಅಡಿಯಲ್ಲಿ ಜನರು ಸಿಲುಕಿರುವ ಶಂಕೆ ಇದ್ದು ಅವಶೇಷಗಳನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ಕಟ್ಟಡ ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿತ್ತು ಎನ್ನಲಾಗಿದೆ. ಶಿಥಿಲಗೊಂಡಿದ್ದ ಈ ಕಟ್ಟಡದಲ್ಲಿ ಹಲವರು ಬಾಡಿಗೆದಾರರಾಗಿ ವಾಸ ಮಾಡುತ್ತಿದ್ದು, ಅವಶೇಷದ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    ಜುಲೈ 22 ಬಜೆಟ್ ಅಧಿವೇಶನ ಆರಂಭ..! 23 ಕ್ಕೆ ಬಜೆಟ್ ಮಂಡನೆ.

    Published

    on

    ನವದೆಹಲಿ : ಸಂಸತ್ತಿನಲ್ಲಿ ಬಜೆಟ್ ಅಧಿವೇಶ ಕರೆಯಲು ರಾಷ್ಟ್ರಪತಿಗಳ ಅನುಮೋದನೆ ನೀಡಿದ್ದು, ಬಜೆಟ್ ಅಧಿವೇಶನ ಜುಲೈ 22 ರಂದು ಆರಂಭವಾಗಲಿದೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್‌ 12ರ ವರೆಗೆ ಅಧಿವೇಶನ ನಡೆಯಲಿದ್ದು, ಜುಲೈ 23 ಲೋಕಸಭೆಯಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

    ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್‌ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ ತಮ್ಮ 7ನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಏಳು ಬಾರಿ ಬಜೆಟ್ ಮಂಡಿಸಿದ ಮೊದಲ ವಿತ್ತ ಸಚಿವರಾಗಿ ನಿರ್ಮಲಾ ಸೀತಾರಾಮನ್‌ ಇತಿಹಾಸದ ದಾಖಲೆ ನಿರ್ಮಿಸಿದ್ದಾರೆ. ಮೋದಿ 3.O ಸರ್ಕಾರದಲ್ಲಿ ಅಭಿವೃದ್ದಿ ಹೊಂದಿದ ಭಾರತವನ್ನು ಕೇಂದ್ರೀಕರಿಸಿ ನಿರ್ಮಲಾ ಸೀತಾರಾಮನ್‌ 2025 ರ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಲಿದ್ದಾರೆ.

    Continue Reading

    LATEST NEWS

    Trending