DAKSHINA KANNADA
ಜೈನ ಮುನಿ ಹತ್ಯೆ ಪ್ರಕರಣ: ಜೈನ ಸಮುದಾಯದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ
ಜೈನ ಸಮಾಜದ ಮುನಿ ಸಂತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಜೈನ ಸಮಾಜ ಬಂಧುಗಳು ಜು.10ರಂದು ಮಂಗಳೂರಿನ ಕ್ಲಾಕ್ ಟವರ್ ಬಳಿಯಿಂದ ಜಿಲ್ಲಾಧಿಕಾರಿಯವರ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು.
ಮಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಹಿರೇಕೊಡಿ ಗ್ರಾಮದ ನಂದಿ ಪರ್ವತ ಜೈನ ಕ್ಷೇತ್ರದ ಜೈನ ಮುನಿ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ, ಸಮಗ್ರ ತನಿಖೆಗಾಗಿ ಹಾಗೂ ಜೈನ ಸಮಾಜದ ಮುನಿ ಸಂತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಜೈನ ಸಮಾಜ ಬಂಧುಗಳು ಜು.10ರಂದು ಮಂಗಳೂರಿನ ಕ್ಲಾಕ್ ಟವರ್ ಬಳಿಯಿಂದ ಜಿಲ್ಲಾಧಿಕಾರಿಯವರ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೂಡುಬಿದಿರೆ ಮಠದ ಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ‘ಬಂಧಿತ ಕೊಲೆ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಹೊರಬಾರದಂತೆ ಕಠಿಣ ಸಜೆ ವಿಧಿಸಬೇಕು.
ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಿ, ಕೂಡಲೇ ಅಪರಾಧಿಗಳಿಗೆ ಸಜೆ ವಿಧಿಸುವಂತೆ ಆಗ್ರಹಿಸಿದರು.
ಶಾಂತಿ, ಸೌಹಾರ್ದತೆಯಿಂದ ದೇಶ ಕಟ್ಟುವ ಕೆಲಸ ಮಾಡುವ ಮುನಿವರ್ಯರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಎಲ್ಲ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಿದರೆ ಇಂತಹ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ.
ಅಲ್ಪ ಸಂಖ್ಯಾತ ಇಲಾಖೆಯಿಂದ ಸಿಸಿ ಟಿವಿ ಅಳವಡಿಸಲು ಅನುದಾನ ನೀಡಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ , ಆಶ್ರಮಗಳಿಗೆ ರಕ್ಷಣೆ ಒದಗಿಸುವಂತೆ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಜೈನ ಮುನಿಗಳ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.
ಜೈನ ಬಸದಿಗಳಿಗೆ ರಕ್ಷಣೆ ಒದಗಿಸ ಬೇಕು ಎಂದು ಆಗ್ರಹಿಸಿದರು. ಭಾರತೀಯ ಜೈನ್ ಮಿಲನ್ ವಲಯ 8ರ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್, ಉಪಾಧ್ಯಕ್ಷ ಸುದರ್ಶನ್ ಜೈನ್, ಮುಖಂಡರಾದ ಸುರೇಶ್ ಬಲ್ಲಾಳ್, ರತ್ನಾಕರ ಜೈನ್, ಪದ್ಮಶೇಖರ್ ಜೈನ್, ಜಗತ್ಪಾಲ್ ಜೈನ್, ಮಹಾವೀರ್ ಪ್ರಸಾದ್, ಸುಭಾಶ್ಚಂದ್ರ ಜೈನ್ ಬಂಟ್ವಾಳ, ಶ್ವೇತಾ ಜೈನ್ ಮೂಡಬಿದಿರೆ, ಸುದೇಶ್ ಜೈನ್ ಮಕ್ಕಿಮನೆ, ಸುಕುಮಾರ್ ಬಲ್ಲಾಳ್, ವರ್ಧಮಾನ್ ಜೈನ್ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.
DAKSHINA KANNADA
ಮಂಗಳೂರಿನ ಆಟೋಮ್ಯಾಟ್ರಿಕ್ಸ್ ಶೋ ರೂಮ್ ನಲ್ಲಿ ಟಾಟಾ ನೆಕ್ಸಾನ್, ಇ.ವಿ ಬಿಡುಗಡೆ
ಟಾಟಾ ಕಂಪೆನಿಯ ವಾಹನಗಳ ಅಧಿಕೃತ ಡೀಲರ್ ಆಗಿರುವ ಮಂಗಳೂರಿನ ಬಿಜೈನ ಆಟೋಮ್ಯಾಟ್ರಿಕ್ಸ್ ಶೋ ರೂಮ್ ನಲ್ಲಿ ನೂತನ ಟಾಟಾ ನೆಕ್ಸಾನ್ ಮತ್ತು ನೆಕ್ಸಾನ್ ಇ.ವಿ. 3.0 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭ ನಡೆಯಿತು.
ಮಂಗಳೂರು: ಟಾಟಾ ಕಂಪೆನಿಯ ವಾಹನಗಳ ಅಧಿಕೃತ ಡೀಲರ್ ಆಗಿರುವ ಮಂಗಳೂರಿನ ಬಿಜೈನ ಆಟೋಮ್ಯಾಟ್ರಿಕ್ಸ್ ಶೋ ರೂಮ್ ನಲ್ಲಿ ನೂತನ ಟಾಟಾ ನೆಕ್ಸಾನ್ ಮತ್ತು ನೆಕ್ಸಾನ್ ಇ.ವಿ. 3.0 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭ ನಡೆಯಿತು.
ಟಾಟಾ ವಾಹನಗಳ ಗ್ರಾಹಕ ವರದರಾಜ ಶೆಣೈ, ಶರಣ್ ಚಿಲಿಂಬಿ ಮತ್ತು ಪ್ರಿಯಾ ಮೋನಿಕಾ ಡಿ’ಸೋಜಾ ಆವರು ಈ ನೂತನ ವಾಹನಗಳನ್ನು ಅನಾವರಣಗೊಳಿಸಿದರು.
ಟಾಟಾ ಮೋಟಾರ್ಸ್ ನ ವಿಠಲದಾಸ್ ಅವರು ಹೊಸ ವಾಹನಗಳ ವೈಶಿಷ್ಟ್ಯಗಳನ್ನು ವಿವರಿಸಿ ಅತ್ಯಾಧುನಿಕ ತಾಂತ್ರಿಕತೆ, ವಿನೂತನ ವಿನ್ಯಾಸ, ಇಂಧನ ದಕ್ಷತೆ, ಕಂಫರ್ಟ್ ಇತ್ಯಾದಿ ಎಲ್ಲವೂ ಸೇರಿದಂತೆ ಹೊಸ ಅನುಭವವನ್ನು ಈ ವಾಹನಗಳು ನೀಡುತ್ತವೆ ಎಂದು ಹೇಳಿದರು.
ಗ್ರಾಹಕ ವರದರಾಜ ಶೆಣೈ ಮಾತನಾಡಿ ಟಾಟಾ ವಾಹನಗಳು ಜನಪ್ರಿಯ ಬ್ರಾಂಡ್ ಆಗಿದ್ದು, ನೆಕ್ಸಾನ್ ಕಾರು ಸುರಕ್ಷತೆ ಮತ್ತು ಇಂಧನ ದಕ್ಷತೆಗೆ ಹೆಸರಾಗಿದೆ. ಆಟೋಮ್ಯಾಟ್ರಿಕ್ಸ್ ಉತ್ತಮ ಸರ್ವೀಸ್ ಒದಗಿಸುತ್ತದೆ ಎಂದರು.
ನಾನು ಈ ಹಿಂದೆ ಟಾಟಾ ಪಂಚ್ ಖರೀದಿಸಿದ್ದು, ಈ ವಾಹನದ ಬಗ್ಗೆ ಇದುವರೆಗೆ ಯಾವುದೇ ದೂರು ಇಲ್ಲ.
ಆಟೋಮ್ಯಾಟ್ರಿಕ್ಸ್ ನಿಂದ ಉತ್ತಮ ಸೇವೆ ಲಭಿಸಿದೆ. ಇದೀಗ ಟಾಟಾ ನೆಕ್ಸಾನ್ ಖರೀದಿಸುತ್ತಿದ್ದೇನೆ ಎಂದು ಶರಣ್ ಚಿಲಿಂಬಿ ಹೇಳಿದರು.
2017 ರಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್ ಕಾರು 2020 ರಲ್ಲಿ ಸುಧಾರಣೆ ಕಂಡಿತ್ತು. ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಮಾರಾಟವಾಗುವ ಎಸ್.ಯು.ವಿ. ಎನಿಸಿರುವ ನೆಕ್ಸಾನ್ ಇದೀಗ ಆಲ್ ನ್ಯೂ ನೆಕ್ಸಾನ್ ಮತ್ತು ನೆಕ್ಸಾನ್ ಇವಿ 3.0 ಸುಧಾರಿತ ಆವೃತ್ತಿಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಆಟೋಮ್ಯಾಟ್ರಿಕ್ಸ್ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರದೀಪ್ ಮಯ್ಯ ಮತ್ತು ಇತರರು ಉಪಸ್ಥಿತರಿದ್ದರು.
bengaluru
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕನ್ನಡ ಖ್ಯಾತ ನಟ ವಿಜಯ ರಾಘವೇಂದ್ರ ಸೆ.24ರಂದು ಭೇಟಿ ನೀಡಿದರು.
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ ರಾಘವೇಂದ್ರ ಅವರು ಭೇಟಿ ನೀಡಿದರು.
ಬಳಿಕ ತಾಯಿ ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಿದರು.
ಈ ಸಂದರ್ಭ ದೇವಳದ ವತಿಯಿಂದ ವಿಜಯ ರಾಘವೇಂದ್ರ ಅವರನ್ನು ಗೌರವಿಸಲಾಯಿತು.
ಈ ಹಿಂದೆ ಯಾವತ್ತೂ ನಟ ರಾಘು ಕಟೀಲು ಕ್ಷೇತ್ರಕ್ಕೆ ಪತ್ನಿ ಸ್ಪಂದನ ಜೊತೆ ಭೇಟಿ ನೀಡುತ್ತಿದ್ದರು.
ಆದರೆ ಈ ಬಾರಿ ಪತ್ನಿಯ ಅಗಲಿಕೆಯ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ನಟ ಭೇಟಿ ನೀಡಿದ್ದು, ಮುಖದಲ್ಲಿ ಪತ್ನಿಯ ಅಗಲಿಕೆಯ ನೋವು ಕಂಡು ಬರ್ತಾ ಇತ್ತು.
bengaluru
ಬೆಂಗಳೂರಿನಲ್ಲಿ ಅನಾವರಣಗೊಂಡ ತುಳುನಾಡ ಸಂಸ್ಕೃತಿ -ಶಾಸಕ ಪೂಂಜಾ ಮೆಚ್ಚುಗೆ
ಬೆಂಗಳೂರು: ತುಳುನಾಡ ಜವನೆರ್ ಬೆಂಗಳೂರು ರಿಜಿಸ್ಟರ್ ಆಯೋಜಿಸಿರುವ ರಾಜಬೂಡುಡು ಕುಡೊರ ಗರ್ದ್ ಗಮ್ಮತ್ ದ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಎಂಬ ಕಾರ್ಯಕ್ರಮವು ಸೆ.24ರಂದು ಬೆಂಗಳೂರಿನ ವಿಜಯನಗರದ ಬಂಟರ ಸಂಘದ ಸಭಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಅತಿಥಿ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಗುವನ್ನು ತೊಟ್ಟಿಲಿಗೆ ಹಾಕಿ ತೂಗುವ ಮೂಲಕ ಮತ್ತೊಮ್ಮೆ ವಿಶೇಷವಾಗಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು.
ನಂತರ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ – ಬೆಳೆಸುವ ಕಾರ್ಯವನ್ನು ತುಳುನಾಡ ಜವನೆರ್ ಬೆಂಗಳೂರು ಇವರ ತಂಡ ಮಾಡ್ತ ಇರುವುದು ಶ್ಲಾಘನೀಯ ಎಂದರು.
ಇದೇ ವೇಳೆ ವೇಳೆ ಕಾರ್ಯಕ್ರದಮಲ್ಲಿ ಹಲವಾರು ಮಂದಿ ಅತಿಥಿ ಗಣ್ಯರು ಬೆಂಗಳೂರಿನಲ್ಲಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಸಂಘಟನೆ ಕುರಿತು ಸಂದರ್ಭೋಚಿತವಾಗಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಈ ಸಂದರ್ಭ ತುಳುನಾಡ ಜವನೆರ್ ಸಂಘಟನೆಯಿಂದ ಸನ್ಮಾನಿಸಿ ಸನ್ಮಾನಿಸ ಗೌರವಿಸಲಾಯಿತು.
ಇದಕ್ಕೂ ಮೊದಲು ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಕುಣಿತ ಭಜನೆ, ಹುಲಿ ವೇಷದ ತಂಡಗಳಿಂದ ಹುಲಿ ವೇಷದ ಕುಣಿತ ಪ್ರದರ್ಶನಗೊಂಡಿತು.
ಬಳಿಕ ಸಂಗೀತಗಾರದ ವಿದ್ಯಾಭೂಷಣ್ ಮತ್ತವರ ತಂಡದಿಂದ “ರಂಗಗ್ ಪದರಂಗ್” ಎನ್ನುವ ಭಕ್ತ ಗಾನೆ ಸುಧೆ ಮೂಡಿ ಬಂತು.
ಜೈ ತುಳುನಾಡು ರಿಜಿಸ್ಟರ್ ಬೆಂಗಳೂರು ಶಾಖೆ ಇವರ ತುಳುಲಿಪಿಯ ಕುರಿತಾದ “ತುಳು ಬರುವುದ ಐಸಿರ” ಎನ್ನುವ ಕೃತಿಯನ್ನು ವಿದ್ಯಾಭೂಷಣ್ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮಕ್ಕಳಿಗಾಗಿ ಕೃಷ್ಣ ವೇಷ ಮಕ್ಕಳ ವೇಷ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ಮುದ್ದು ಮಕ್ಕಳು ಈ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ನಂತರ ವಿಠಲ್ ನಾಯಕ್ ಅವರ ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ ಸೇರಿದಂತೆ,ಇನ್ನಿತರ ಹಲವಾರು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂತು.
ಒಟ್ಟಿನಲ್ಲಿ ತುಳುನಾಡಿ ಸಂಪೂರ್ಣ ಸಂಸ್ಕೃತಿ “ಅಸ್ಟೆಮಿದ ಐಸಿರ” ತುಳುವ ತಿರ್ಲ್ ಸಾಸಿರ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡು ನೋಡುಗರ ಮನಸೊರೆಗೊಂಡಿತು.
ಅಧ್ಯಕ್ಷ ಮಹೇಶ್ ಬೈಲೂರು ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಪಿಎಂಪಿ ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಕಳದ ಬಾಲಾಜಿ ಶಿಬಿರದ ಬಾಲಕೃಷ್ಣ ಹೆಗಡೆ, ಬಂಟರ ಸಂಘದ ಗೌರವ ಕಾರ್ಯದರ್ಶಿ ಅನಂದ್ ರಾಮ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಅತಿಥಿ-ಗಣ್ಯರು ಪಾಲ್ಗೊಂಡಿದ್ದರು.
- DAKSHINA KANNADA6 days ago
Suratkal: ಸಮುದ್ರ ವಿಹಾರಕ್ಕೆ ತೆರಳಿದ ಮೂವರಲ್ಲಿ ಓರ್ವ ಸಮುದ್ರ ಪಾಲು..!
- BANTWAL6 days ago
Bantwala: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು..!
- DAKSHINA KANNADA7 days ago
ಮೂಲ್ಕಿ: ಮಟ ಮಟ ಮಧ್ಯಾಹ್ನ ಮನೆಯ ಅಂಗಳಕ್ಕೆ ಬಂದು ಚೂರಿ ತೋರಿಸಿ ಚಿನ್ನದ ಕರಿಮಣಿ ಎಗರಿಸಿ ಪರಾರಿ..!
- LATEST NEWS5 days ago
Udupi: ಪತಿಗೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ ಪತ್ನಿ..!