LATEST NEWS
ಪುರುಷರಂತೆ ಟ್ರಕ್ ಒಡಿಸೋ ಮಹಿಳೆ: 20 ಚಕ್ರದ ಲಾರಿ ಒಡಿಸೋಕು ಸೈ
ಹುಬ್ಬಳ್ಳಿ: ಹೆಣ್ಣು ಮಗು ಹುಟ್ಟಿತು ಅಂತ ಕೆಲವರು ಆಕಾಶ ಕಳಚಿ ಬಿದ್ದವರ ತರ ಆಡಿದ್ರೆ ಇನ್ನೂ ಕೆಲವರು ಹೆಣ್ಣು ಮಗುವನ್ನ ಎಲ್ಲೋ ಎಸೆದೋ, ಆಶ್ರಮದ ಬಾಗಿಲಲ್ಲೋ ಬಿಟ್ಟು ಬಿಡ್ತಾರೆ. ಹಾಗೇ ತಮ್ಮ ಕೊನೆಯ ಕಾಲದಲ್ಲಿ ಆಸರೆಯಾಗುವುದು ಹೆಣ್ಣು ಮಕ್ಕಳೇ ಅನ್ನೋದ ವಿಚಾರವನ್ನು ಎಷ್ಟೋ ಜನರು ಮರೆತು ಬಿಡ್ತಾರೆ. ಇಂತಹ ಜನರಿಗೆ, ಹೆಣ್ಣು ಮಕ್ಕಳು ಏನು ಮಾಡಬಲ್ಲರು ಅನ್ನೋದನ್ನ ಹುಬ್ಬಳ್ಳಿಯ ಯುವತಿಯೊಬ್ಬಳು ಮಾಡಿ ತೋರಿಸಿಕೊಟ್ಟಿದ್ದಾರೆ.
ಮನೆಯ ಕಷ್ಟಕ್ಕೆ ಬೆನ್ನೆಲುಬಾದ ಮಗಳು:
ಸಾಮಾನ್ಯವಾಗಿ ಗಂಡು ಮಕ್ಕಳಿದ್ರೆ ನಮ್ಮ ಕಷ್ಟಕಾಲಕ್ಕೆ ಆಗ್ತಾರೆ ಅನ್ನೋರ ನಡುವೆ ಅದೆಷ್ಟೋ ಹೆಣ್ಣು ಮಕ್ಕಳು ಎದೆಗುಂದದೆ ಕಷ್ಟ ಎದುರಿಸಿ ಮನೆಗೆ ಆದಾರವಾದ ಘಟನೆ ನಮ್ಮ ಕಣ್ಣಮುಂದೆ ಇದೆ. ಹಾಗಿದ್ರೂ ಹೆಣ್ಣು ಮಕ್ಕಳು ಅಂದ್ರೆ ಮೂಗು ಮುರಿಯುವ ಜನರಿಗೆ ಹುಬ್ಬಳಿಯ ಶೋಭಾ ಮಾದರಿಯಾಗಿದ್ದಾರೆ. ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದವರಾದ ಶೋಬಾ, ಸದ್ಯ ಹುಬ್ಬಳಿಯಲ್ಲಿ ನೆಲೆಸಿದ್ದಾರೆ. ಮನೆಯ ಸಂಕಷ್ಟಕ್ಕೆ ತಾನೇನಾದ್ರೂ ಮಾಡಲೇ ಬೇಕು ಎಂದು ಆರಿಸಿಕೊಂಡಿದ್ದು ಚಾಲಕ ವೃತ್ತಿಯನ್ನು. ಆರಂಭದಲ್ಲಿ ಕಾರು ಓಡಿಸ್ತಾ ಇದ್ದ ಶೋಭಾ ಹಂತ ಹಂತವಾಗಿ ಬೇರೆ ಬೇರೆ ವಾಹನ ಚಾಲನೆಯನ್ನು ಕಲಿತಿದ್ದಾರೆ. ಸಾರಿಗೆ ಇಲಾಕೆಯಲ್ಲಿ ಬೃಹತ್ ವಾಹನ ಚಾಲನೆಯ ಲೈಸನ್ಸ್ ಪಡೆದುಕೊಂಡಿರುವ ಶೋಭಾ ಇದೀಗ ಟ್ರಕ್ ಡ್ರೈವರ್ ಆಗಿದ್ದಾರೆ. VRL ಸಂಸ್ಥೆಯಲ್ಲಿ ಪುರುಷರು ಓಡಿಸೋ 20 ಚಕ್ರದ ಲಾರಿ ಓಡಿಸೋ ಡ್ರೈವರ್ ಆಗಿ ಈಗ ಫೇಮಸ್ ಆಗಿದ್ದಾರೆ.
ಹೆಚ್ಚಿನ ಸಂಪಾದನೆಗೆ ಚಾಲಕ ವೃತ್ತಿ ಆಯ್ಕೆ:
ಎಸ್ಎಸ್ಎಲ್ಸಿ ವರೆಗೆ ಓದಿರೋ ಶೋಭಾ ತಂದೆಯ ಅನಾರೋಗ್ಯ ಕಾರಣದಿಂದ ಓದು ಮುಂದುವರೆಸಲು ಆಗಿರಲಿಲ್ಲ. ಹಾಗಂತ ಪಡೆದಿರೋ ಕಡಿಮೆ ಶಿಕ್ಷಣದಿಂದ ಒಂದು ಉತ್ತಮ ಸಂಪಾದನೆಯ ಕೆಲಸ ಕೂಡಾ ಸಿಗೋದಿಲ್ಲ ಅನ್ನೋದು ಗೊತ್ತಿತ್ತು. ಹೀಗಾಗಿ ಸ್ವಂತವಾಗಿ ಕಾರು ಓಡಿಸೋ ಸಲುವಾಗಿ ಕಾರ್ ಡ್ರೈವಿಂಗ್ ಕಲಿತ ಶೋಭಾ ಮೊದಲು ಕಾರ್ ಡ್ರೈವರ್ ಆಗಿ ಕೆಲಸ ಆರಂಭಿಸಿದ್ರು. ಹೀಗೇ ಆರಂಭವಾದ ಡ್ರೈವಿಂಗ್ ಜರ್ನಿ ಶೋಭಾ ಅವರನ್ನು ಇದೀಗ ಟ್ರಕ್ ಡ್ರೈವರ್ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಎಷ್ಟೇ ದೂರದ ಪ್ರಯಾಣವಾದ್ರೂ ಟ್ರಕ್ ಚಲಾಯಿಸಿಕೊಂಡು ಹೋಗುವ ಶೋಭಾ ಸದ್ಯ ಹುಬ್ಬಳ್ಳಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮನೆಗೆ ಆಧಾರವಾದ ಚಾಲಕ ವೃತ್ತಿ:
ಅನಾರೋಗ್ಯ ಪೀಡಿತ ತಂದೆಗೆ ಚಿಕಿತ್ಸೆಯಿಂದ ಹಿಡಿದು ಮನೆಯ ಎಲ್ಲಾ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿರುವ ಶೋಭಾ ಟ್ರಕ್ ಡ್ರೈವರ್ ಆಗಿ ಉತ್ತಮ ಸಂಪಾದನೆ ಹೊಂದಿದ್ದಾರೆ. ತನ್ನ ಹೆತ್ತವರ ಕಷ್ಟಕ್ಕೆ ತಾನು ಇರಬೇಕು ಎಂದು ಮದುವೆ ಮಾಡಿಕೊಳ್ಳದೆ ಮನೆಗೆ ಗಂಡು ಮಗನಂತೆ ಆಸರೆಯಾಗಿ ನಿಂತಿದ್ದಾರೆ. ಸರ್ಕಾರಿ ಸಂಸ್ಥೆಯಲ್ಲಿ ಚಾಲಕಿ ಆಗಬೇಕು ಎಂಬ ಆಸೆಯೊಂದಿಗೆ ಕಾರು ಓಡಿಸೋದು ಕಲಿತು ಇದೀಗ ಟ್ರಕ್ ಡ್ರೈವರ್ ಆಗಿದ್ದಾರೆ. ಸರ್ಕಾರಿ ಇಲಾಖೆಯಲ್ಲಿ ಯಾವುದೇ ಚಾಲನಾ ವೃತ್ತಿ ಸಿಕ್ಕರೂ ಮಾಡುವ ವಿಶ್ವಾಸ ಇಟ್ಟುಕೊಂಡಿದ್ದಾರೆ.
ಶೋಭಾ ಸಾಧನೆಗೆ ಗೌರವ – ಸನ್ಮಾನ:
ಶೋಭಾ ಅವರ ಸಾಧನೆಯನ್ನು ಗುರುತಿಸಿ ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಅವರಿಗೆ ಗೌರವಿಸಿ ಸನ್ಮಾನಿಸಿದೆ. ಮಗನಂತೆ ಮನೆ ನಿರ್ವಹಿಸುವ ಶೋಭಾ ಬಗ್ಗೆ ಊರಲ್ಲಿ ಜನರು ಹೆಮ್ಮೆಯ ಮಾತುಗಳನ್ನ ಆಡುತ್ತಿದ್ದಾರೆ. ಟ್ರಕ್ ಡ್ರೈವಿಂಗ್ ಮಾಡೋ ಗಂಡಸರೇ ಒಂದು ಟ್ರಿಪ್ ಮುಗಿದಾಗ ಉಸ್ಸಪ್ಪಾ ಅನ್ನೋವಾಗ ಶೋಭಾ ಲೀಲಾಜಾಲವಾಗಿ ಟ್ರಕ್ ಚಲಾಯಿಸಿ ಸೈ ಅನಿಸಿಕೊಂಡಿದ್ದಾರೆ. ಹೆಣ್ಣೊಬ್ಬಳು ಮನಸ್ಸು ಮಾಡಿದ್ರೆ ಯಾವ ಹಂತಕ್ಕೂ ಬೆಳೆಯಬಲ್ಲಳು ಯಾವ ಕೆಲಸವನ್ನೂ ಮಾಡಬಲ್ಲಳು ಅನ್ನೋದಿಕ್ಕೆ ಶೋಭಾ ಒಂದು ಸ್ಪಷ್ಟ ಉದಾಹರಣೆ. ಹೆಣ್ಣು ಮಗು ಹುಟ್ಟಿದಾಗ ಬೇಸರ ಪಡುವ ಜನ ಶೋಭಾ ಅವರಂತ ಹೆಣ್ಣು ಮಗಳ ಸಾಧನೆ ನೋಡಿ ಖಷಿ ಪಡಬೇಕಾಗಿದೆ.
DAKSHINA KANNADA
ಬೆಂ*ಕಿಗೆ ಆಹುತಿಯಾದ ಹಡಗಿನಿಂದ ಅಪಾಯವಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸ್ಪಷ್ಟನೆ
ಮಂಗಳೂರು : ಮಂಗಳೂರು ಕರಾವಳಿಯ ಸಮುದ್ರದಲ್ಲಿ ಬೆಂ*ಕಿಗೆ ಆಹುತಿಯಾದ ವಿದೇಶಿ ಹಡಗಿನಿಂದ ಮಂಗಳೂರು ಕರಾವಳಿಗೆ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ಜುಲೈ 19 ರಂದು ಗುಜರಾತ್ನಿಂದ ಕೊಲೊಂಬೋಕ್ಕೆ ತೆರಳುತ್ತಿದ್ದ ಸರಕು ಸಾಗಟದ ಹಡುಗು ಬೆಂ*ಕಿಗೆ ಆಹುತಿಯಾಗಿತ್ತು. ತಕ್ಷಣ ಕೋಸ್ಟ್ಗಾರ್ಡ್ ತಂಡ ನಿರಂತರ ನಲುವತ್ತು ಗಂಟೆ ಪ್ರಯತ್ನ ನಡೆಸಿ ಬೆಂಕಿ ನಂದಿಸುವ ಕೆಲಸವಾಗಿತ್ತು. ಬಳಿಕ ಹಡಗನ್ನು ಮಂಗಳೂರು ಕರಾವಳಿಯ 30 ನಾಟಿಕಲ್ ದೂರದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ತೈಲ ಸೋರಿಕೆ ಆಗುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : 5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್..!
ಹಡಗು ಮುಳುಗಡೆಯಾಗುವ ಭೀತಿ ಇದ್ದು ಹಾಗಾದಲ್ಲಿ ಹಡಗಿನಲ್ಲಿರುವ ತೈಲ ಸೋರಿಕೆ ಆಗಬಹುದು ಎಂದು ಸುದ್ದಿಯಾಗಿತ್ತು. ಆದ್ರೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಅಂತಹ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಅಂತಹ ಅವ*ಘಡ ನಡೆದಲ್ಲಿ ಅದನ್ನು ಎದುರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಹಾಗೂ ಕೋಸ್ಟ್ಗಾರ್ಡ್ ಮತ್ತು ಕರಾವಳಿ ಕಾವಲು ಪಡೆ ಸನ್ನದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
kerala
5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್..!
ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.
ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.
ಆನ್ ಲೈನ್ ಗೇಮಿಂಗ್ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?
ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್ಲೈನ್ ಗೇಮಿಂಗ್ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ