BIG BOSS
ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟ
ದೆವ್ವ ಇದೆ ಅಥವಾ ಇಲ್ಲ ಎನ್ನುವ ಬಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ಕೆಲವರು ದೆವ್ವಗಳು ಇವೆ ಎಂದು ನಂಬಿದರೆ ಇನ್ನೂ ಕೆಲವರು ದೆವ್ವ ಇಲ್ಲ ಎಂದು ವಾದಿಸುತ್ತಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗುವಂಥ ಘಟನೆಗಳು ಕೂಡ ನಡೆಯುತ್ತಿವೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಏನು? ಮನೆ ಮಂದಿಗೆ ಭಯ ಮೂಡಲು ಕಾರಣ ಏನು ಎಂಬ ಪ್ರಶ್ನೆ ಎದುರಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಒಂದಷ್ಟು ವಿಚಿತ್ರ ಘಟನೆಗಳು ನಡೆದಿವೆ. ಇದು ಮನೆ ಮಂದಿಯ ಆತಂಕಕ್ಕೆ ಕಾರಣ ಆಗಿದೆ. ದೊಡ್ಮನೆಯಲ್ಲಿ ಇದ್ದಕ್ಕಿದ್ದಂತೆ ಕೆಲವು ಟೀ ಕಪ್ಗಳು ಒಡೆದು ಹೋಗುತ್ತಿವೆ. ಮೇಲೆ ಇಟ್ಟಂಥ ಕಪ್ಗಳು ಏಕಾಏಕಿ ನೆಲಕ್ಕೆ ಬೀಳುತ್ತಿವೆ.
ಅಕ್ಟೋಬರ್ 9ರ ಎಪಿಸೋಡ್ನಲ್ಲೂ ಇದೇ ರೀತಿ ಆಗಿದೆ. ಮೇಲೆ ಇಟ್ಟಂಥ ಕಪ್ ನೆಲಕ್ಕೆ ಬಿದ್ದು ಒಡೆದು ಹೋಗಿದೆ. ಇದರಿಂದ ಮನೆ ಮಂದಿ ಆತಂಕಗೊಂಡಿದ್ದಾರೆ. ‘ಮನೆಯಲ್ಲಿ ದೆವ್ವ ಇದೆಯೇನೋ ಅನಿಸುತ್ತಿದೆ’ ಎಂದು ಕೆಲವರು ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಹಂಸ ಅವರು ಆತಂಕಗೊಂಡರು. ‘ಹಾಗೆಲ್ಲ ಹೇಳಬೇಡಿ ಭಯ ಆಗುತ್ತದೆ’ ಎಂದರು.
ಇದಾದ ಬಳಿಕ ಅಲ್ಲಿದ್ದವರು, ‘ವಾತಾವರಣದಲ್ಲಿ ಪ್ಲಸ್ ಹಾಗೂ ಮೈನಸ್ ಎರಡೂ ಇರುತ್ತದೆ’ ಎಂದರು. ಇದರಿಂದ ಹಂಸಾಗೆ ಮತ್ತಷ್ಟು ಭಯ ಆಯಿತು. ಇದನ್ನು ಕೇಳಿ ಮನೆಯಲ್ಲಿ ಆತಂಕದ ವಾತಾವರಣ ಮೂಡಿತು. ಅಲ್ಲಿಯೇ ಇದ್ದ ಮಂಜು ಅವರು ಆ ರೀತಿ ಏನೂ ಇಲ್ಲ ಎಂದು ಸಮಾಧಾನ ಮಾಡಿದರು. ಕಪ್ ಒಡೆಯಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಟ್ಟೆಯ ಅಂಚಲ್ಲಿ ಇಟ್ಟ ಕಾರಣಕ್ಕೂ ಕಪ್ ಒಡೆದಿರಬಹುದು ಎಂದು ಕೆಲವರು ಊಹಿಸಿದ್ದಾರೆ.
BIG BOSS
ಜಗದೀಶ್ ಇದ್ರೇನೆ ಬಿಗ್’ಬಾಸ್ ಗೆ ಕಳೆ ಅಂತಿದ್ದಾರೆ ಜನ!
ಬಿಗ್ ಬಾಸ್ ಸೀಸನ್ 11 ಆರಂಭವಾದಾಗ ಲಾಯರ್ ಜಗದೀಶ್ ನಡವಳಿಕೆ ನೋಡಿ ಇವರನ್ನ ಈ ವಾರವೇ ಮನೆಯಿಂದ ಹೊರಗೆ ಕಳುಹಿಸಿ ಎಂದಿದ್ದ ಜನರು ಈಗ ಜಗ್ಗು ಇದ್ರೇನೆ ಬಿಗ್ ಬಾಸ್ ಗೆ ಕಳೆ ಅಂತಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ದಿನವೇ ಮನೆಮಂದಿ ಜೊತೆ ಜಗಳಕ್ಕೆ ನಿಂತಿದ್ದ ಜಗದೀಶ್, ನಂತರದ ದಿನಗಳಲ್ಲಿ, ಬಿಗ್ ಬಾಸ್ ನ್ನೆ ಎಕ್ಸ್ ಪೋಸ್ ಮಾಡುವ, ಕಲರ್ಸ್ ಕನ್ನಡಕ್ಕೆ ಬೆದರಿಕೆ ಹಾಕುವ ಬಗ್ಗೆ ಮಾತನಾಡಿ ಭಾರಿ ಸುದ್ದಿಯಾಗಿದ್ದರು. ಕಿಚ್ಚನ ಪಂಚಾಯ್ತಿಯಲ್ಲೂ ಸಹ ಜಗದೀಶ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು ಆಯ್ತು.
ಮೊದಲನೇ ವಾರದಲ್ಲಿ ಜಗದೀಶ್ ಜಗಳ, ಧನಿ ಎತ್ತರಿಸಿ ಮಾತನಾಡುತ್ತಾ, ಯಾವಾಗ್ಲೂ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದ ಜಗದೀಶ್ ಅವರನ್ನು ನೋಡಿ ಜನ ದಯವಿಟ್ಟು ಇವರನ್ನ ಬಿಗ್ ಬಾಸ್ ಮನೆಯಿಂದ ಹೊರಹಾಕಿ, ಇವರಿದ್ದರೆ ಬಿಗ್ ಬಾಸ್ ನೋಡೊದಕ್ಕೆ ಸಾಧ್ಯ ಆಗ್ತಿಲ್ಲ. ತುಂಬಾನೆ ಇರಿಟೇಟಿಂಗ್ ವ್ಯಕ್ತಿ ಎಂದೆಲ್ಲಾ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದರು.
ಆದ್ರೆ ದಿನಗಳು ಕಳೆಯುತ್ತಿದ್ದಂತೆ, ಲಾಯರ್ ಜಗದೀಶ್ ಜನಪ್ರಿಯತೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಬಿಗ್ ಬಾಸ್ ಶೋ ಬಿಡುಗಡೆ ಮಾಡುತ್ತಿರುವ ಪ್ರತಿಯೊಂದು ಪ್ರೊಮೋದಲ್ಲಿ ಹೆಚ್ಚಾಗಿ ಜಗದೀಶ್ ಅವರೇ ಹೈಲೈಟ್ ಆಗುತ್ತಿದ್ದು, ಸಿಕ್ಕಾಪಟ್ಟೆ ಎಂಟರ್ ಟೇನ್ ಮೆಂಟ್ ಕೂಡ ಕೊಡುತ್ತಿದ್ದಾರೆ, ಜಗಳಾನೂ ಮಾಡ್ತಾರೆ, ಗೇಮ್ ಕೂಡ ಆಡಿ ಎಲ್ಲಾ ಕಡೆ ಸದ್ದು ಮಾಡ್ತಿದ್ದಾರೆ.
ಜಗದೀಶ್ ಆಟ, ಮನರಂಜನೆ ನೋಡಿ ಜನರು ಈಗ ಜಗ್ಗಿ ಮಹಾನ್ ಕಲಾವಿದ, ಜಗದೀಶ್ ಕೊನೆವರೆಗೂ ಇರಬೇಕು, ಜಗದೀಶ್ ಇದ್ರೆನೆ ಬಿಗ್ ಬಾಸ್ ಗೊಂದು ಕಳೆ, ಇಲ್ಲಾಂದ್ರೆ ತುಂಬಾನೆ ಬೋರ್, ಜಗದೀಶ್ ಒಬ್ರೇನೆ ಮನರಂಜನೆ ನೀಡ್ತಿರೋದು, ಜಗದೀಶ್ ಮತ್ತು ಹಂಸ ಕೊನೆವರೆಗೂ ಇರಬೇಕು, ಜಗದೀಶ್ ಇದ್ರೇನೆ ಮಜಾ ಅಂತೆಲ್ಲಾ ಪ್ರೊಮೋ ನೋಡಿ ಕಾಮೆಂಟ್ ಮಾಡ್ತಿದ್ದಾರೆ.
ಅಷ್ಟೇ ಅಲ್ಲ ಜಗ್ಗು ದಾದಾಗೆ ನಮ್ಮ ಬೆಂಬಲ, ಜಗ್ಗು ಆಟ ಬೆಂಕಿ, ನಾವು ಜಗ್ಗು ಅಭಿಮಾನಿಗಳು, ಜಗದೀಶ್ ಅಣ್ಣ ನೀವು ಏನ್ ಮಾಡಿದ್ರು ನಿಮ್ಮ ಬೆಂಬಲಕ್ಕೆ ನಾವಿದ್ದೀವಿ ಎನ್ನುತ್ತಿದ್ದಾರೆ ಜನ. ಒಟ್ಟಲ್ಲಿ ಜಗದೀಶ್ ಕಂಡ್ರೆ ಆಗದೆ ಇರೋ ಜನರು ಈಗ ಜಗದೀಶ್ ಇರ್ಬೇಕು ಅಂತಿದ್ದಾರೆ.
BIG BOSS
ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರು ಸಿಗರೇಟ್ ಸೇದ್ತಾರೆ, ಆದರೆ ತೋರಿಸಲ್ಲ!
ಬಿಗ್ ಬಾಸ್ ಮನೆಯಲ್ಲಿ ಹುಡುಗಿಯರು ಸಿಗರೇಟ್ ಸೇದ್ತಾರೆ, ಆದ್ರೆ ಅದನ್ನ ತೋರಿಸಲ್ಲ ಅಂತ ಎಲಿಮಿನೇಟ್ ಆದ ಸ್ಪರ್ಧಿಯೊಬ್ಬರು ಹೇಳಿದ್ದಾರೆ.
ಒಬ್ಬ ಹುಡುಗಿ ಒತ್ತಡದಲ್ಲಿ ಸಿಗರೇಟ್ ಸೇದ್ತೀನಿ ಅಂದಾಗ, ಬೇಡ ಅಂತ ನಾನು ಹೇಳಿದ್ದೆ ಅಂತ ಸೋನಿಯಾ ಹೇಳಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸಿಗರೇಟ್ ಸೇದ್ತಾ ಇರೋ ಹುಡುಗಿಯರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 8ರ ಸ್ಪರ್ಧಿಗಳಲ್ಲಿ ಸೋನಿಯಾ ಆಕುಲ ಒಬ್ಬರು. ಮೊದಲ ವಾರ ಮನೆಗೆ ಕಾಲಿಟ್ಟಿದ್ರು. ಆದ್ರೆ ನಾಲ್ಕೇ ವಾರಗಳಲ್ಲಿ ಅವರ ಜರ್ನಿ ಮುಗಿದು ಹೋಯ್ತು. ಸೋನಿಯಾ ಆಕುಲ ತುಂಬಾ ನೆಗೆಟಿವಿಟಿ ಹೊತ್ತು ತಂದಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸೋನಿಯಾ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿತ್ತು.
ಇತ್ತೀಚೆಗೆ ಸೋನಿಯಾ ಹಲವಾರು ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ನಿರೂಪಕ ಶಿವ್, ಸೋನಿಯಾ ಅವರನ್ನು ಸಂದರ್ಶಿಸಿದ್ದಾರೆ. ನಾನು ನಿಖಿಲ್ ಗೆ ನೀನು ಸ್ಮೋಕಿಂಗ್ ಬಿಡ್ತಿಯಾ, ನೀನು ಏನು ಕೇಳಿದ್ರೂ ಕೊಡ್ತೀನಿ ಅಂದೆ. ನಿಜಕ್ಕೂ ಅವ್ರು ಸ್ಮೋಕ್ ಬಿಡೋಕೆ ಹೋಗಲಿಲ್ಲ. ಆದ್ರೆ ಸಂಖ್ಯೆ ಕಡಿಮೆ ಮಾಡಬೇಕು ಅಂತ ಅಂದುಕೊಂಡ್ರು. ನಿಖಿಲ್ ಜೊತೆ ನೈನಿಕ ಎಲ್ಲಾ ಹಂಚಿಕೊಳ್ತಿದ್ರು. ಅವ್ರು ನಿಖಿಲ್ ಗೆ ಸಿಗರೇಟ್ ತಂದು ಕೊಡ್ತಿದ್ರು, ಜಾಸ್ತಿ ಸೇದಬೇಡ ಅಂತ ನೋಡ್ಕೊಳ್ತಿದ್ರು. ಆದ್ರೆ ಇದ್ಯಾವುದನ್ನೂ ತೋರಿಸಲಿಲ್ಲ.
ಇನ್ನು ಕೆಲವು ಹುಡುಗಿಯರು ಸ್ಮೋಕ್ ಮಾಡ್ತಾರೆ. ಆದ್ರೆ ಅದನ್ನ ತೋರಿಸಲ್ಲ. ಒಬ್ಬ ಹುಡುಗಿ ಒತ್ತಡದಲ್ಲಿ ಸಿಗರೇಟ್ ಸೇದೋಕೆ ಹೋದ್ರು. ಬೇಡ ಅನಾವಶ್ಯಕವಾಗಿ ಅಭ್ಯಾಸ ಮಾಡ್ಕೋಬೇಡ ಅಂತ ನಾನು ಹೇಳಿದೆ ಅಂತ ಸೋನಿಯಾ ಹೇಳಿದ್ದಾರೆ. ಸಿಗರೇಟ್ ಸೇದ್ತೀನಿ ಅಂದ ಹುಡುಗಿ ಯಾರು ಅಂತ ನಿರೂಪಕ ಕೇಳಿದಾಗ. ಸೋನಿಯಾ ಹೆಸರು ಹೇಳಲಿಲ್ಲ.
ಸೋನಿಯಾಗೆ ಈಗಾಗಲೇ ಮದುವೆ ನಿಶ್ಚಯವಾಗಿದೆಯಂತೆ. ಡಿಸೆಂಬರ್ ನಲ್ಲಿ ಅವರ ಮದುವೆ ನಡೆಯಬೇಕಿತ್ತು. ಅತ್ತೆ ಮಾವ ಮತ್ತು ಗಂಡನ ಅನುಮತಿ ಪಡೆದು ಬಿಗ್ ಬಾಸ್ ಶೋಗೆ ಬಂದಿದ್ದಾಗಿ ಸೋನಿಯಾ ಪೋಷಕರು ಹೇಳಿದ್ದಾರೆ. ಬಿಗ್ ಬಾಸ್ ಶೋ ಹೇಗಿರುತ್ತೆ ಅಂತ ನಮಗೆ ಗೊತ್ತು. ಬಿಗ್ ಬಾಸ್ ಹೇಳಿದ ಹಾಗೆ ಸ್ಪರ್ಧಿಗಳು ಆಟ ಆಡಬೇಕು. ಸೋನಿಯಾ ವರ್ತನೆಯಿಂದ ನಮಗೆ ಯಾವುದೇ ತಕರಾರು ಇಲ್ಲ.
ಆದ್ರೆ ನಮ್ಮ ಸುತ್ತಮುತ್ತಲಿನವರು ತಪ್ಪು ತಿಳಿದುಕೊಳ್ಳುತ್ತಿದ್ದಾರೆ. ಪೃಥ್ವಿ ಮತ್ತು ನಿಖಿಲ್ ಅವರನ್ನ ಸೋನಿಯಾ ಅಣ್ಣ ತಮ್ಮಂದಿರಂತೆ ಭಾವಿಸುತ್ತಾಳೆ. ಆದ್ರೆ ಅವರ ಸಂಬಂಧವನ್ನ ಕೆಟ್ಟದಾಗಿ ಬಿಂಬಿಸುತ್ತಾರೆ. ದಯವಿಟ್ಟು ಸೋನಿಯಾ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ ಅಂತ ಸೋನಿಯಾ ಪೋಷಕರು ಮೊದಲೇ ವಿನಂತಿ ಮಾಡಿದ್ದರು.
BIG BOSS
ಬಿಗ್ಬಾಸ್ ಮನೆಯ ಉಸ್ತುವಾರಿ ಸರಿಯಿಲ್ವಂತೆ!
ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದರು. ಗೊಬ್ಬರದ ಅಬ್ಬರ ಎಂಬ ಹೆಸರಿನಲ್ಲಿ ಸ್ಪರ್ಧೆ ಎರ್ಪಡಿಸಿದ್ದರು. ಆದರೆ ಈ ಟಾಸ್ಕ್ ವೇಳೆ ಮನೆಯ ಕ್ಯಾಪ್ಟನ್ ನಿರ್ಣಯ ಸ್ಪರ್ಧಿಗಳಿಗೆ ಬೇಸರ ತರಿಸಿದೆ. ಈ ಕುರಿತಾಗಿ ಇತ್ತಂಡಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಹಂಸಾ ಮನೆಯ ಕ್ಯಾಪ್ಟನ್ ಆಗಿದ್ದು, ಟಾಸ್ಕ್ ವೇಳೆ ನಿಯಮ ಉಲ್ಲಂಘನೆ ಬಗ್ಗೆ ಕ್ಯಾಪ್ಟನ್ ಸರಿಯಾದ ನಿರ್ಣಯ ಕೈಗೊಂಡಿರಲಿಲ್ಲ. ಟಾಸ್ಕ್ ವೇಳೆ ಚೆಂಡನ್ನು ತಳ್ಳಿಕೊಂಡು ಹೋಗುವ ಬದಲು ಕೈಯಲ್ಲಿ ಹಿಡಿದಿದ್ದಾರೆ. ಇನ್ನು ಕೆಲವರು ಜಂಪ್ ಮಾಡುತ್ತಾ ಟಾಸ್ಕ್ ಪೂರ್ತಿ ಮಾಡಿದ್ದಾರೆ. ಆದರೆ ಹಂಸಾ ಈ ಕುರಿತಾಗಿ ಸರಿಯಾಗಿ ಟಾಸ್ಕ್ ನಡೆಸಿಕೊಟ್ಟಿಲ್ಲ ಎಂದು ನರಕ ಮತ್ತು ಸ್ವರ್ಗದ ನಿವಾಸಿಗಳು ಪಟ್ಟಾಂಗ ಹಾಕುತ್ತಿದ್ದಾರೆ. ಉಸ್ತುವಾರಿ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ.
ನರಕದಲ್ಲಿ ಶಿಶಿರ್, ಜಗದೀಶ್, ಮಾನಸಾ ಉಸ್ತುವಾರಿ ಬಗ್ಗೆ ಮಾತನಾಡಿದರೆ, ಅತ್ತ ಸ್ವರ್ಗದಲ್ಲಿ ಉಗ್ರಂ ಮಂಜು, ತಿವಿಕ್ರಮ ಈ ಇದೇ ವಿಚಾರವಾಗಿ ಚರ್ಚಿಸಿದ್ದಾರೆ. ಆದರೀಗ ಹಂಸಾರವರು ಕ್ಯಾಪ್ಟನ್ಸಿ ವಿಚಾರವಾಗಿ ಮನೆಯ ಉಸ್ತುವಾರಿಯನ್ನು ಕಳೆದುಕೊಳ್ಳುತ್ತಾರಾ ಎಂಬ ಕುತೂಹಲತೆಯು ಅಭಿಮಾನಿಗಳನ್ನು ಕಾಡುತ್ತಿದೆ.
- BIG BOSS6 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS4 days ago
ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ
- BIG BOSS6 days ago
BBK11: ಬಿಗ್ಬಾಸ್ ಮನೆಯಲ್ಲಿರೋ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ; ಶೋ ವಿರುದ್ಧ ದೂರು ದಾಖಲು
- FILM2 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್