Sunday, June 4, 2023

ಹಿಂದೂ ಧರ್ಮೀಯರು ಹೆಚ್ಚು ಮಕ್ಕಳನ್ನು ಹೆರಬೇಕು: ಕಾಳಿಚರಣ್‌ ಸ್ವಾಮೀಜಿ

ಲಖನೌ: ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು. ಧರ್ಮದ ಆಧರಿತವಾಗಿಯೇ ಮತ ಚಲಾಯಿಸಬೇಕು. ನಾವೆಲ್ಲರೂ ಒಗ್ಗೂಡದಿದ್ದರೆ, ಹಿಂದೂ ಧರ್ಮ ಬೆಂಬಲಿಸದಿದ್ದರೆ ನಮ್ಮ ಮಹಿಳೆಯರಿಗೆ ಸುರಕ್ಷತೆ ಇರುವುದಿಲ್ಲ ಎಂದು ಕಾಳಿಚರಣ್‌ ಮಹಾರಾಜ್ ಸ್ವಾಮೀಜಿ ಹೇಳಿದ್ದಾರೆ.


ಉತ್ತರ ಪ್ರದೇಶದ ಅಲಿಗಡ ಪಟ್ಟಣದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇರುವುದು ಒಂದೇ ಧರ್ಮ, ಅದೂ ಸನಾತನ ಧರ್ಮ.

ಹಿಂದೂಗಳು ಧರ್ಮದ ಆಧಾರದ ಮೇಲೆ ಒಗ್ಗೂಡಿ ಮತ ಚಲಾಯಿಸಬೇಕು.

ಭಾರತವನ್ನು ಹಿಂದೂ ರಾಷ್ಟ್ರವಾಗಿಸಬೇಕು. ದೇಶವು ಇಸ್ಲಾಮಿಕ್ ರಾಷ್ಟ್ರವಾಗಿ ಬದಲಾಗಬಾರದು ಮತ್ತು ಮುಸ್ಲಿಮರು ಪ್ರಧಾನಿಯಾಗಬಾರದು. ಅದಕ್ಕಾಗಿ ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು. ಧರ್ಮದ ಆಧರಿತವಾಗಿಯೇ ಮತ ಚಲಾಯಿಸಬೇಕು’ ಎಂದರು.

ನಾವೆಲ್ಲರೂ ಒಗ್ಗೂಡದಿದ್ದರೆ, ಹಿಂದೂ ಧರ್ಮ ಬೆಂಬಲಿಸದಿದ್ದರೆ ನಮ್ಮ ಮಹಿಳೆಯರಿಗೆ ಸುರಕ್ಷತೆ ಇರುವುದಿಲ್ಲ. ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೇ ಇದೇ ಕಾಳಿಚರಣ್‌ ಸ್ವಾಮೀಜಿ ಗೋಡ್ಸೆ ಬಗ್ಗೆ ಹೇಳಿಕೆ ನೀಡಿ ಜೈಲು ಪಾಲಾಗಿದ್ದರು.

LEAVE A REPLY

Please enter your comment!
Please enter your name here

Hot Topics