LATEST NEWS
ಮೊಸಳೆ ದಾಳಿಯಿಂದ ಯುವ ರೈತನ ಜೀವ ಉಳಿಸಿದ ಎತ್ತು!
ಬಾಗಲಕೋಟೆ: ಎತ್ತಿನ ಮೈ ತೊಳೆಯಲು ಹೋದ ಯುವ ರೈತನ ಮೇಲೆ ಮೊಸಳೆ ದಾಳಿ ಮಾಡಿದ್ದು, ಎತ್ತು ಮಾಲೀಕನ ಜೀವ ಉಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೊನ್ಯಾಳ ಬಳಿಯ ಆಲಮಟ್ಟಿ ಜಲಾಶಯ ಹಿನ್ನೀರಲ್ಲಿ ನಡೆದಿದೆ.
ಯುವಕ ಧರಿಯಪ್ಪ ಮೇಟಿ ಅವರ ಬಲಗೈಗೆ ಮೊಸಳೆ ಬಾಯಿ ಹಾಕಿದ ಪರಿಣಾಮ ಬಲಗೈ ಕಟ್ ಆಗಿದ್ದು, ಕೂಡಲೇ ಯುವ ರೈತ ಎಡಗೈಯಿಂದ ಎತ್ತಿನ ಹಗ್ಗ ಹಿಡಿದಿದ್ದಾನೆ. ಬಳಿಕ ಮಾಲೀಕನನ್ನು ಹಿನ್ನೀರಿನಿಂದ ಎತ್ತು ಹೊರ ತಂದಿದೆ. ಇನ್ನು ಮಾಲೀಕನನ್ನು ಹಿನ್ನೀರಿನಿಂದ ಹೊರತಂದು ಬಿಟ್ಟಾಗ ಮೊಸಳೆ ಓಡಿ ಹೋಗಿದೆ. ಅಷ್ಟರಲ್ಲೇ ಬಲಗೈ ಮೊಸಳೆ ಬಾಯಿಗೆ ಸಿಲುಕಿ ಕಟ್ ಆಗಿತ್ತು. ಎತ್ತಿನ ಹಗ್ಗದ ಆಸರೆಯಿರದಿದ್ದರೆ ಜೀವಕ್ಕೆ ಕಳೆದುಕೊಳ್ಳುವ ಸಾಧ್ಯತೆಯಿತ್ತು.
ಗಾಯಾಳುವನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬೀಳಗಿ ಶಾಸಕ ಜೆಟಿ ಪಾಟಿಲ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕೂಡಲೇ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಕರೆ ಮಾಡಿ, ಸೂಕ್ತ ಪರಿಹಾರ ಕೊಡಬೇಕು ಎಂದರು.
BIG BOSS
Bigg Boss ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ-ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲ ಚರ್ಚೆ ಆಗುತ್ತೆ ಗೊತ್ತಾ..?
ಬಿಗ್ಬಾಸ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಒಂದು ವಿಜಯ ದಶಮಿ ಸಂಭ್ರಮವಾದರೆ, ಮತ್ತೊಂದು ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್ ಅವರ ಮಾತುಗಳನ್ನು ಆಲಿಸಿಕೊಳ್ಳುವ ಕೌತುಕ. ಬಿಗ್ಬಾಸ್ ಶುರುವಾಗಿ ಎರಡು ವಾರ ಕಳೆದು ಹೋಗಿದ್ದು, ಶನಿವಾರವಾದ ಇಂದು ರಾತ್ರಿ ಮತ್ತೆ ಸುದೀಪ್ ಪಂಚಾಯ್ತಿ ನಡೆಸಲಿದ್ದಾರೆ.
ಸ್ಪರ್ಧಿಗಳ ಕಿತ್ತಾಟ, ಬಿಗ್ಬಾಸ್ ಕೊಟ್ಟ ಟಾಸ್ಕ್, ಗೇಮ್ ಎಲ್ಲವನ್ನೂ ನೋಡಿ ಸರಿ ತಪ್ಪುಗಳ ಬಗ್ಗೆ ಮಾತಾಡಿಕೊಳ್ತಿದ್ದ ಅಭಿಮಾನಿಗಳು ಇಂದು ಸುದೀಪ್ ಪ್ರತಿಕ್ರಿಯೆ ಹೇಗಿರುತ್ತದೆ? ಸ್ಪರ್ಧಿಗಳ ಜೊತೆ ಹೇಗೆ ಮಾತುಕತೆ ನಡೆಸ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಗ್ಬಾಸ್ ಕಿಚ್ಚ ಸುದೀಪ್ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸ್ತಾರೆ ಅನ್ನೋದ್ರ ಬಗ್ಗೆ ಪ್ರೊಮೋದಲ್ಲಿ ಚಿಕ್ಕದಾಗಿ ರಿವೀಲ್ ಮಾಡಿದ್ದಾರೆ.
25 ಸೆಕೆಂಡ್ ಇರುವ ವಿಡಿಯೋದಲ್ಲಿ ದೊಡ್ಮನೆಯ ಸ್ವರ್ಗ, ನರಕ ಒಂದಾಗಿದೆ. ರೂಲ್ಸ್ ಬ್ರೇಕ್, ತಪ್ಪಿನ ಲೆಕ್ಕಾಚಾರಕ್ಕೆ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಬೇಕು ಎಂಬ ಸಂದೇಶವನ್ನು ಬಿಗ್ಬಾಸ್ ನೀಡಿದ್ದಾರೆ. ಹೀಗಾಗಿ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಕುತೂಹಲ ಹೆಚ್ಚಿಸಿದೆ.
LATEST NEWS
ರೆಫ್ರಿಜರೇಟರ್ನಲ್ಲಿ ಇಟ್ಟ ಆಹಾರ ಸೇವನೆ ಎಷ್ಟು ಹಾನಿಕಾರಕ ಗೊತ್ತಾ ? ಆಹಾರ ವಿಷವಾಗಬಹುದು… !!!
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರ ಕೆಡದಂತೆ ತಡೆಯಲು ರೆಫ್ರಿಜರೇಟರ್ನಲ್ಲಿ ಇಡಸಲಾಗುತ್ತದೆ. ಆದರೆ ಕೆಲವು ಆಹಾರಗಳು ಇದಕ್ಕೆ ಹೊರತಾಗಿವೆ. ಶೈತ್ಯೀಕರಣವು ಅವುಗಳನ್ನು ವಿಷಪೂರಿತಗೊಳಿಸುತ್ತದೆ. ಈ ವಿಷಗಳು ತುಂಬಾ ಅಪಾಯಕಾರಿ ಮತ್ತು ಕ್ಯಾನ್ಸರ್ ಕೋಶಗಳು ರೂಪುಗೊಳ್ಳಲು ಪ್ರಾರಂಭಿಸುವ ರೀತಿಯಲ್ಲಿ ದೇಹಕ್ಕೆ ಹಾನಿ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಆರೋಗ್ಯ ತಜ್ಞರು 4 ವಸ್ತುಗಳನ್ನು ರೆಫ್ರಿಜರೇಟರ್ನಲ್ಲಿ ಇಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ಈ ವಸ್ತುಗಳನ್ನು ಫ್ರಿಡ್ಜ್ನಲ್ಲಿ ಇಡುವುದು ಹೆಚ್ಚು ಹಾನಿಕಾರಕ ಎಂದಿದ್ದದಾರೆ.
ಈ ನಾಲ್ಕು ಆಹಾರಗಳು ಯಾವುದು ಗೊತ್ತಾ ?
ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ವಿಶೇಷವಾಗಿ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಎಂದಿಗೂ ತೆರೆದ ಅಥವಾ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಾರದು ಎಂದು ತಜ್ಞರು ಹೇಳುತ್ತಾರೆ. ಇದು ಬಹಳ ಬೇಗನೆ ಶಿಲೀಂಧ್ರವನ್ನು ಸೋಂಕಿಗೆ ಒಳಪಡಿಸುತ್ತದೆ. ಇದು ಆರೋಗ್ಯಕ್ಕೆ ಅಪಾಯಕಾರಿ.
ಈರುಳ್ಳಿ: ಈರುಳ್ಳಿ ಕಡಿಮೆ ತಾಪಮಾನಕ್ಕೆ ನಿರೋಧಕವಾಗಿದೆ. ರೆಫ್ರಿಜರೇಟರ್ನಲ್ಲಿ ಅದನ್ನು ಇರಿಸಿದಾಗ, ಸುಲಭವಾಗಿ ಶಿಲೀಂದ್ರ ಸೋಂಕಿಗೆ ಒಳಗಾಗುತ್ತದೆ. ಅನೇಕ ಜನರು ಅರ್ಧ ಕತ್ತರಿಸಿದ ಈರುಳ್ಳಿಯನ್ನು ಫ್ರಿಜ್ನಲ್ಲಿ ಇಡುತ್ತಾರೆ, ಇದು ಪರಿಸರದಿಂದ ಎಲ್ಲಾ ಅನಾರೋಗ್ಯಕರ ಬ್ಯಾಕ್ಟೀರಿಯ ಅದರೊಳಗೆ ಪ್ರವೇಶಿಸುವಂತೆ ಅನುವು ಮಾಡಿಕೊಡುತ್ತದೆ.
ಶುಂಠಿ: ಶುಂಠಿಯನ್ನು ಶೈತ್ಯೀಕರಣಗೊಳಿಸಿದಾಗ, ಅದು ಬೇಗನೆ ಶಿಲೀಂದ್ರ ಬೆಳೆಯಲು ಪ್ರಾರಂಭಿಸುತ್ತದೆ. ಅದರಿಂದ ಉಂಟಾಗುವ ವಿಷ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯ ಉಂಟುಮಾಡಬಹುದು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಶುಂಠಿಯನ್ನು ಯಾವಾಗಲೂ ಸಾಮಾನ್ಯ ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು.
ಅನ್ನ: ಈ ತಪ್ಪು ಎಲ್ಲರ ಮನೆಯಲ್ಲೂ ನಡೆಯುತ್ತದೆ. ಉಳಿದ ಅನ್ನವನ್ನು ಫ್ರಿಜ್ನಲ್ಲಿ ಇಡಲಾಗುತ್ತದೆ. ಆದರೆ, ಅನ್ನವನ್ನು ರೆಫ್ರಿಜರೇಟರ್ನಲ್ಲಿ ಇಡುವುದು ತುಂಬಾ ಅಪಾಯಕಾರಿ 8-10 ಗಂಟೆಗಳಿಗಿಂತ ಹೆಚ್ಚು ಕಾಲ ಅದನ್ನು ಫ್ರಿಜ್ನಲ್ಲಿ ಇಡುವಂತಿಲ್ಲ. ಇದು ಆರೋಗ್ಯಕ್ಕೆ ಬಹಳ ಅಪಯಕಾರಿ.
LATEST NEWS
Watch Video: ನವರಾತ್ರಿಯಲ್ಲಿ ಯಮನೊಂದಿಗೆ ಪ್ರತ್ಯಕ್ಷವಾದ ರೇಣುಕಾಸ್ವಾಮಿ ಪ್ರೇತ
ನವರಾತ್ರಿಯಲ್ಲಿ ನಾನಾ ವೇಷಗಳು ಜನರನ್ನು ರಂಜಿಸುವ ಮೂಲಕ ನವರಾತ್ರಿಗೆ ವಿಶೇಷ ಮೆರುಗು ನೀಡುತ್ತದೆ. ಹುಲಿ ವೇಷದ ಗಂಭೀರ ಹೆಜ್ಜೆ, ಸಿಂಹ ವೇಷದ ವೇಗದ ಕುಣಿತ ಇದೆಲ್ಲದರ ನಡುವೆ ಸಣ್ಣಪುಟ್ಟ ವೇಷಗಳು ಗಮನ ಸೆಳೆಯುತ್ತದೆ. ಅಂತಹ ಸಣ್ಣ ವೇಷವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ.
ಆ ವೇಷಗಳನ್ನು ನೋಡಿದ ಜನರು ಕೂಡಾ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಯವನ ವೇಷದಾರಿಯೊಬ್ಬ ಪ್ರೇತವೊಂದನ್ನು ಎಳೆದೊಯ್ಯುತ್ತಾ ಕೆಲವೊಂದು ಡೈಲಾಗ್ ಹೇಳುತ್ತಿದ್ದಾರೆ. ಇದು ರಾಜ್ಯದಲ್ಲಿ ಬಹು ಸುದ್ದಿಯಾಗಿದ್ದ ನಟ ದರ್ಶನ್ನಿಂದ ಹತ್ಯೆಯಾದ ರೇಣುಕಾಸ್ವಾಮಿಯ ಪ್ರೇತಾತ್ಮ ಎಂದು ಹೇಳುವ ಯಮನ ಈ ಡೈಲಾಗ್ ಜನರಿಗೆ ನಗು ತರಿಸುತ್ತಿದೆ.
ಹಿಂಸಾತ್ಮಕವಾಗಿ ಹತ್ಯೆಯಾದ ರೇಣುಕಾಸ್ವಾಮಿ ಬಗ್ಗೆಯೂ ಯಮ ವೇಷದಾರಿಯ ಡೈಲಾಗ್ ಸಕತ್ ಮಜಾ ನೀಡುತ್ತಿದೆ. ರಾಜ್ಯದಲ್ಲಿ ನಡೆದ ಘೋರ ಘಟನೆಯೊಂದನ್ನು ಇಟ್ಟುಕೊಂಡು ಬಡ ಕಲಾವಿದರು ಮಾಡಿರೊ ಈ ವೇಷವನ್ನು ಜನರೂ ಮೆಚ್ಚಿಕೊಂಡಿದ್ದಾರೆ.
Watch Video:
- LATEST NEWS6 days ago
ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ
- FILM4 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- DAKSHINA KANNADA5 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು
- LATEST NEWS4 days ago
ನ.8 ಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ನಿವೃತ್ತಿ..! 15 ದಿನದಲ್ಲಿ 8 ಪ್ರಮುಖ ತೀರ್ಪು ಸಾಧ್ಯತೆ..!