Connect with us

LATEST NEWS

ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಗಲಾಟೆ ಪ್ರಕರಣ: ಪ್ರತಿದೂರು ದಾಖಲು

Published

on

ಉಡುಪಿ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ನಿನ್ನೆ ನಡೆದ ಗಲಾಟೆ ಪ್ರಕರಣದಲ್ಲಿ ದೂರು ಪ್ರತಿ ದೂರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಶಾಹಿದ್‌ ಖಾಸಗಿ ಬಸ್‌ನ ಚಾಲಕರಾಗಿದ್ದು, 2019ರ ಜೂ. 19ರಂದು ಕೊರಂಗ್ರಪಾಡಿಯಲ್ಲಿ ನಡೆದ ಆಟೋ ರಿಕ್ಷಾ ಚಾಲಕನ ರಸ್ತೆ ಅಪಘಾತದಲ್ಲಿ ಓರ್ವ ಹುಡುಗ ಮೃತಪಟ್ಟಿದ್ದನು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ಯ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಯಲ್ಲಿತ್ತು. ಕೇಸಿನ ಸಂಬಂಧ 5-6 ಬಾರಿ ಶಾಹಿದ್‌ ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಹಾಜರಾದರೂ ಎದುರು ವಾದಿ ವಕೀಲರು ನ್ಯಾಯಾಧೀಶರಲ್ಲಿ ಪದೇ ಪದೇ ಮುಂದಿನ ದಿನಾಂಕ ಕೇಳಿಕೊಂಡು ಕೇಸನ್ನು ಮುಂದೂಡುತ್ತಿದ್ದರು. ಮಾ.5ರಂದು ಸಾಕ್ಷಿ ವಿಚಾರಣೆಯ ವೇಳೆ ಎದುರು ವಾದಿ ವಕೀಲರು ಮತ್ತೆ ದಿನಾಂಕವನ್ನು ಮುಂದೂಡುವಂತೆ ಕೇಳಿಕೊಂಡಿದ್ದಾರೆ.

ಈ ವೇಳೆ ಶಾಹಿದ್‌ ಪದೇ ಪದೇ ಕೋರ್ಟ್‌ಗೆ ಹಾಜರಾಗುವುದರಿಂದ ತಮಗಾಗುವ ಕಷ್ಟದ ಬಗ್ಗೆ ನ್ಯಾಯಾಧೀಶರಲ್ಲಿ ಹೇಳಿಕೊಂಡಾಗ ಎದುರು ವಾದಿ ವಕೀಲರು ‘ಕೇಸು ನೀನೆ ಮಾಡಿದ್ದು, ಪದೇ ಪದೇ ಕೋರ್ಟ್‌ಗೆ ಬರಬೇಕು. ‘ನೀನು ಬಹಳ ಮಾತನಾಡುತ್ತೀಯಾ, ನೀನು ಹೊರಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ವಿಚಾರಣೆ ನಂತರ ಕೋರ್ಟ್‌ ಹಾಲ್‌ನಿಂದ ಹೊರಗೆ ಬಂದಾಗ ಎದುರುವಾದಿ ವಕೀಲರು ಶಾಹಿದ್‌ನನ್ನು ಅಡ್ಡ ತಡೆದು ನಿಲ್ಲಿಸಿ, ಎಡಕೆನ್ನೆಗೆ ಹಲ್ಲೆ ನಡೆಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಶಾಹಿದ್‌ ಸಹ ವಕೀಲರ ಕೆನ್ನೆಗೆ ಹೊಡೆದಿದ್ದಾರೆ. ಹೊರಗೆ ನಡೆದ ವಿಷಯವನ್ನು ನ್ಯಾಯಾಧೀಶರಲ್ಲಿ ಹೇಳಲು ಕೋರ್ಟ್‌ ಹಾಲ್‌ ಒಳಗೆ ಹೋದಾಗ ನ್ಯಾಯಾಧೀಶರು ಕೋರ್ಟ್‌ ಹಾಲ್‌ ಒಳಗೆ ಇರುವ ಬೆಂಚ್‌ನಲ್ಲಿ ಕುಳಿತುಕೊಳ್ಳಲು ಸೂಚಿಸಿದ್ದರು. ಈ ವೇಳೆ ಎದುರು ವಾದಿಯ ವಕೀಲರು ಹಲವು ಜನ ವಕೀಲರನ್ನು ಸೇರಿಸಿದ್ದಾರೆ.

ಶಾಹಿದ್‌ನನ್ನು ಪೊಲೀಸರು ಕೋರ್ಟ್‌ ಹೊರಗೆ ಕರೆದುಕೊಂಡು ಹೋಗುತ್ತಿರುವಾಗ 5-6 ಜನ ವಕೀಲರ ತಂಡ ಬಂದು ಶಾಹಿದ್‌ಗೆ ತುಳಿದು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://nammakudlanews.com/lawyer-assaulted-by-a-youth-in-udupi-court-premises/

FILM

“ಮಮ್ಮುಟ್ಟಿ” ಸಿನೆಮಾದಲ್ಲಿ “ರಾಜ್‌ ಬಿ ಶೆಟ್ಟಿ” ಖದರ್ ! ‘ಟರ್ಬೊ’ ಟ್ರೈಲರ್‌ಗೆ ಫಿದಾ ಆದ ಸಿನಿಪ್ರಿಯರು

Published

on

ಮಂಗಳೂರು: ಕನ್ನಡ ಸಿನೆಮಾ ನಟ ಮಂಗಳೂರಿನ ಪ್ರತಿಭೆ ರಾಜ್ ಬಿ ಶೆಟ್ಟಿ. ಈಗಾಗಲೇ ತನ್ನ ಅದ್ಭುತ ನಟನೆಯ ಮೂಲಕ, ನಿರ್ದೇಶನ, ಚಿತ್ರಕಥೆಯ ಮೂಲಕ ಜನರ ಮನ ಗೆದ್ದಿದ್ದಾರೆ. ಹಾಸ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶೆಟ್ರು.. ಬಳಿಕ ಮಾಸ್ ಸಿನೆಮಾದಲ್ಲಿ ಮಿಂಚಿದ್ದರು. ಒಂದು ಮೊಟ್ಟೆಯ ಕಥೆ ಸಿನೆಮಾದಲ್ಲಿ ತುಂಬಾನೇ ಸೈಲಂಟ್‌ ಆದ ನಟನೆ ಇದ್ರೆ, ಇನ್ನು ಗರುಡ ಗಮನ ವೃಷಭ ವಾಹನದಲ್ಲಿ ಕಂಪ್ಲೀಟ್ ಒಪೋಸಿಟ್ ಕ್ಯಾರೆಕ್ಟರ್. ಶಿವನ ಪಾತ್ರದಲ್ಲಿ ಮೈ ಜುಮ್ಮೆನ್ನಿಸುವ ನಟನೆ ಶೆಟ್ರದ್ದು. ಹೀಗಾಗಿ ಶೆಟ್ರು ಎಲ್ಲಾ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಶೆಟ್ಟು ಮಳಯಾಲಂ ನ ಸೂಪರ್‌ ಸ್ಟಾರ್ ಮಮ್ಮುಟಿ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಯವರು ರಾಜ್‌ ಬಿ ಶೆಟ್ಟಿ ಯವರ ಅಭಿನಯಕ್ಕೆ ಫಿದಾ ಆಗಿದ್ದರು. ಅವರ ‘ಟರ್ಬೊ’ ಸಿನೆಮಾದಲ್ಲಿ ಮಮ್ಮುಟ್ಟಿಗೆ ಸರಿಸಮಾನದ ಪಾತ್ರವನ್ನು ಅಭಿನಯಿಸುವ ಅವಕಾಶ ಇವರದಾಗಿದೆ. ಈಗಾಗಲೇ ಸಿನೆಮಾ ಪ್ರೋಮೋ ಕೂಡಾ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಬಿಗ್‌ಬಾಸ್ ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

ಆ್ಯಕ್ಷನ್ ಪ್ಯಾಕ್ಡ್‌ ಸಿನೆಮಾ ‘ಟರ್ಬೊ’:

ಇನ್ನು ಟರ್ಬೊ ಸಿನಿಮಾ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಸಿನೆಮಾ ಟ್ರೈಲರ್ ನೋಡಿದ್ರೇನೆ ಸಿನೆಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚುತ್ತೆ. ಈ ಸಿನೆಮಾದಲ್ಲಿ ಶೆಟ್ರು ಕಪ್ಪು ಶರ್ಟ್, ಕಪ್ಪು ಪಂಚೆ ಧರಿಸಿದ್ದಾರೆ. ಇನ್ನು ಮಮ್ಮುಟ್ಟಿ ಡಿಫೆರೆಂಟ್ ಲುಕ್‌ನಲ್ಲಿ ಕಾಣಿಸುತ್ತಿದ್ದು, ಬ್ಲ್ಯಾಕ್ ಶರ್ಟ್‌ ಹಾಗೂ ವೈಟ್ ಪಂಚೆ ಧರಿಸಿದ್ದಾರೆ. ಇನ್ನು ಇವರಿಬ್ಬರ ಪಾತ್ರ ಒಬ್ಬರಿಗೊಬ್ಬರು ಠಕ್ಕರ್ ಕೊಡುವಂತಿದೆ.

ಮಮ್ಮುಟಿಗೆ ಠಕ್ಕರ್ ನೀಡಲಿದ್ದಾರಾ ಶೆಟ್ರು..!

ಸಿನೆಮಾ ಟ್ರೈಲರ್‌ ನಲ್ಲಿ ರಾಜ್‌ ಬಿ ಶೆಟ್ಟಿಗೆ ಹೆಚ್ಚು ಸ್ಪೇಸ್ ನೀಡಿದ್ದಾರೆ. ನಾಲ್ಕೈದು ಕಡೆಗಳಲ್ಲಿ ರಾಜ್ ಬಿ ಶೆಟ್ಟಿಯನ್ನು ತೋರಿಸಿದ್ದಾರೆ. ಹೆಲಿಕಾಫ್ಟರ್‌ನಿಂದ ಇಳಿದು ಬರುವ ದೃಶ್ಯ ಮೊದಲು ಕಂಡುಬರುತ್ತದೆ. ಮಮ್ಮುಟ್ಟಿಗಿಂತ ರಾಜ್‌ ಅವರನ್ನೇ ಈ ಸಿನೆಮಾ ಟ್ರೈಲರ್‌ನಲ್ಲಿ  ಹೈಲಟ್ ಮಾಡಿದ್ದಾರೆ ಅನ್ನೋದು ಸತ್ಯ. ಒಂದು ರೀತಿ ಶ್ರೀಮಂತ ವಿಲನ್ ರೀತಿಯಲ್ಲಿಯೇ ರಾಜ್ ಬಿ ಶೆಟ್ಟಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿಗೂ ಕಣ್ಣಲ್ಲಿ ಕಣ್ಣಿಟ್ಟು ಡೈಲಾಗ್ ಕೂಡ ಹೊಡೆಯುತ್ತಾರೆ.

‘ಪುಲಿ ಮುರುಗನ್’ ಖ್ಯಾತಿಯ ವೈಶಾಖ್ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದು, ಮಿಧುನ್ ಮ್ಯಾನ್ಯಯೆಲ್ ಥಾಮಸ್ ಕಥೆ ಬರೆದಿದ್ದಾರೆ. ಈ ಸಿನೆಮಾದಲ್ಲಿ ತೆಲುಗು ನಟ ಸುನಿಲ್, ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಇನ್ನು ಸಿನೆಮಾ ಮೇ।23 ರಂದು ತೆರೆ ಕಾಣಲಿದ್ದು ಸಿನಿಪ್ರಿಯರು ಕಾತುರದಿಂದ ಕಾಯ್ತಾ ಇದ್ದಾರೆ.

 

Continue Reading

FILM

ಬಿಗ್‌ಬಾಸ್ ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ಬಾಸ್​​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್​ ಮನೆಯಿಂದ ಆಚೆ ಬಂದ ಬಳಿಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಸದ್ಯ ಚಾರ್ಲಿ ನಟಿ ಸಂಗೀತಾ ಶೃಂಗೇರಿ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ. ಸಂಗೀತಾ ಶೃಂಗೇರಿ ಅವರ ಕುಟುಂಬ್ಥರು ಸಖತ್​ ಬ್ಯುಟಿಫುಲ್​ ಆಗಿರೋ ಸ್ಥಳದಲ್ಲಿ ಕೇಕ್​ ಕಟ್​ ಮಾಡಿಸಿದ್ದಾರೆ. ಇನ್ನು, ಚಾರ್ಲಿ ನಟಿಯ ಹುಟ್ಟು ಹಬ್ಬಕ್ಕೆ ಈ ಬಾರಿಯ ಬಿಗ್​ಬಾಸ್​ ಸ್ಫರ್ಧಿಗಳಾದ ವಿನಯ್ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ ಭಾಗಿಯಾಗಿದ್ದರು. ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬರ್ತ್​ಡೇ ಸೆಲೆಬ್ರೇಷನ್ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ಫೋಟೋದಲ್ಲಿ ನಟಿ ನೀಲಿ ಬಣ್ಣ ಡೇಸ್​ನಲ್ಲಿ ಸಖತ್​ ಕ್ಯೂಟ್​ ಆಗಿ ಮಿಂಚಿದ್ದಾರೆ.

ಇನ್ನು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂಗೀತಾ ಶೃಂಗೇರಿ ಅವರ ಫೋಟೋವನ್ನು ಶೇರ್​ ಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಕಮೆಂಟ್​ ಮಾಡುವ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಶೇರ್​ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Continue Reading

LATEST NEWS

ನಡುರಸ್ತೆಯಲ್ಲೇ ಬ್ಲಾಸ್ಟ್ ಆದ ರಾಯಲ್ ಎನ್‌ಫೀಲ್ಡ್‌.! ಪೊಲೀಸ್ ಸೇರಿ 10 ಮಂದಿ ಗಂಭೀರ

Published

on

ಹೈದರಾಬಾದ್/ಮಂಗಳೂರು: ರಾಯಲ್ ಎನ್‌ಫೀಲ್ಡ್ ಬೈಕ್‌ ರಸ್ತೆಯಲ್ಲೇ ಹೊತ್ತಿ ಉರಿದು ಬ್ಲಾಸ್ಟ್‌ ಆಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬೈಕ್‌ಗೆ ಬೆಂಕಿ ತಗುಲಿದ್ದು ಅದನ್ನು ಆರಿಸಲು ಜನರು ಮುಂದಾದ ಜನರು ಗಂಭೀರ ಗಾಯಗೊಂಡಿದ್ದಾರೆ.

royal enfield

ಬೈಕ್‌ಗೆ ತಗುಲಿದ್ದ ಬೆಂಕಿಯನ್ನು ಅಲ್ಲಿ ನೆರೆದಿದ್ದ ಜನರು ಆರಿಸುವಲ್ಲಿ ತೊಡಗಿದ್ದರು. ನೀರು, ಮರಳು ಹಾಕಿ ಬೆಂಕಿ ಆರಿಸಲು ಕಸರತ್ತು ಮಾಡಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿ ಬ್ಲಾಸ್ಟ್ ಆಗಿದೆ. ಇದರಿಂದ ಪಕ್ಕದಲ್ಲಿದ್ದ ಬೇರೆ ಗಾಡಿಗಳಿಗೂ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ. ಘಟನೆಯಿಂದ ಅಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಹತ್ತು ಜನರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಒತ್ರೆಗೆ ದಾಖಲಿಸಲಾಗಿದೆ.

Continue Reading

LATEST NEWS

Trending