Connect with us

    LATEST NEWS

    ಆರ್ಯ ಮುತಾಲಿಕ್ ಸಂತತಿಯಿಂದ ಶರಣ್‌ನ್ನು ಬಳಸಿ ಮಳಲಿ ವಿವಾದ ಸೃಷ್ಟಿ-ಕೆ ಅಶ್ರಫ್

    Published

    on

    ಮಂಗಳೂರು: ‘ಮಳಲಿಯ ಅತಿ ಪುರಾತನ ಮಸೀದಿಯ ವಿಸ್ತೃತ ಕಟ್ಟಡದ ನವೀಕರಣ ಕಾಮಗಾರಿ ಆರಂಭಿಸುವಾಗ,ಪುರಾತನ ರಚನೆಯ ವಾಸ್ತು ಶಿಲ್ಪವನ್ನು ವೀಕ್ಷಿಸಿ,ದೇವಸ್ಥಾನವೆಂದು ರದ್ದಾಂತವೆಬ್ಬಿಸಿದ, ಸಂಘೀ, ಕೃಪಾ, ನಿಖೇತನಿಗಳಿಗೆ, ತಮ್ಮ ಮುಸ್ಲಿಮರ ಮೇಲಿನ ವಿದ್ವೇಶವನ್ನು ಕರಾವಳಿ ಜಿಲ್ಲೆಗಳಲ್ಲಿ ಮತ್ತಷ್ಟು ಹಬ್ಬಿಸಿ ಶತಾಯ ಗತಾಯ ಒಂದು ಬೃಹತ್ ಕೋಮು ಗಲಭೆಯನ್ನು ಸೃಷ್ಟಿಸಲು ಸಂಘ ಪರಿವಾರ ಪ್ರಯತ್ನ ನಡೆಸುತ್ತಿದೆ’ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದರು.

    ಮಳಲಿ ದರ್ಗಾ ವಿವಾದ ಹಿನ್ನೆಲೆ ಮಾತನಾಡಿದ ಇವರು ‘ಆ ಮೂಲಕ ಇಲ್ಲಿನ ಹಿಂದುಳಿದ ವರ್ಗ,ದಲಿತರು,ಪರಿಶಿಷ್ಟರು,ಬುಡಕಟ್ಟು ಜನರು,ಮುಸ್ಲೀಮರ ಮದ್ಯೆ ಭಿನ್ನತೆ ಸೃಷ್ಟಿಸುವುದಾಗಿದೆ.

    ಈಗಾಗಲೇ ಬ್ರಹ್ಮಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ, ಪಠ್ಯ ಇತ್ಯಾದಿ ವಿವಾದದಲ್ಲಿ ಸಿಲುಕಿ ಹಾಕಿಕೊಂಡು ದ.ಕ.ಜಿಲ್ಲೆಯ ಸುಮಾರು ನಾಲ್ಕು ಲಕ್ಷ ಬಿಲ್ಲವರ ದ್ವೇಷವನ್ನು ಕಟ್ಟಿಕೊಂಡ ಬೀಜೆಪಿ ಸಂಘಿಗಳಿಗೆ, ಸ್ವಘೋಷಿತ ಹಿಂದೂ ನಾಯಕ ಎಂದು ಕರೆಸಿ ಕೊಳ್ಳುತ್ತಿರುವ ಶರಣ್ ಪಂಪ್ ವೆಲ್ ನನ್ನು ಮಳಲಿ ಮಸೀದಿ ವಿವಾದದಲ್ಲಿ ಮುಂದೆ ಹಾಕಿ, ಪ್ರಚೋದಿತ ಹೇಳಿಕೆ ಕೊಡಿಸಿ ಗಲಭೆಗೆ ಪ್ರಯತ್ನಿಸಲಾಗುತ್ತಿದೆ.

    ಈಗಾಗಲೇ ಹಿಂದುಳಿದ ವರ್ಗದ ಜನರಿಗೆ, ಈ ಸಂಘಿಗಳು ,ಅವರ ಆರಾಧನಾ ಹಕ್ಕುಗಳನ್ನು ಕಸಿದು,ಅವರನ್ನು ಗುಲಾಮ ಸ್ಥಿತಿಗೆ ತಂದು, ಕೈಯಲ್ಲಿ ತ್ರಿಶೂಲ, ಬಂದೂಕು ಕೊಟ್ಟು ಸಮಾಜ ಘಾತುಕ ಶಕ್ತಿಯಾಗಿ ಮಾರ್ಪಡಿಸಲು ಪ್ರಯತ್ನಿಸಿರುತ್ತಾರೆ.

    ಆರ್ಯ ಸಂತತಿಯ ಮುತಾಲಿಕ ಈಗಾಗಲೇ ಉತ್ತರ ಕರ್ನಾಟಕದಲ್ಲಿ ಜನರ ಜೀವನಕ್ಕೆ ಕೊಳ್ಳಿ ಇಡಲು ಪ್ರಯತ್ನಿಸಿ ಗಲಭೆ ನಡೆಸಲು ವಿಫಲವಾಗಿ ದ.ಕ.ಜಿಲ್ಲೆಗೆ ವಕ್ಕರಿಸಿ ಈ ಹಿಂದುಳಿದ ವರ್ಗದ, ವಿಶ್ವ ಹಿಂದೂ ಪರಿಷತ್ ನಿಯಂತ್ರಿತ ಶರಣ್ ಪಂಪ್ ವೆಲ್ ನನ್ನು ಇಲ್ಲಿನ ಮುಸ್ಲಿಮರ ವಿರುದ್ದ ಇಳಿಸಿದ್ದಾನೆ.

    ಹಿಂದುಳಿದ ವರ್ಗದ ಶರಣ್ ಏನಾದರೂ ಅಂದು ಮಳಲಿ ಮಸೀದಿಗೆ ಪರಿಶೀಲನೆಗೆ ಪ್ರವೇಶಿಸಿದಂತೆ ಯಾವುದಾದರೂ ಆರ್ಯರ ಧಾರ್ಮಿಕ ಕೇಂದ್ರ ಪ್ರವೇಶಿಸಿದ್ದರೆ ಅಂದೇ ಅಂತಹ ಧಾರ್ಮಿಕ ಕೇಂದ್ರದಿಂದ ಇದೇ ಶರಣನನ್ನು ಬಹಿಷ್ಕಾರ ಮಾಡುತ್ತಿದ್ದರು.

    ಇದು ಸಂಘೀ ಮನಸ್ಥಿತಿ. ಬಹುಶ ಹಿಂದುಳಿದ ವರ್ಗದ ಶರಣ್ ತನ್ನ ಪರಿವಾರದಲ್ಲಿ ಆರಾಧನಾ ಹಕ್ಕಿನಿಂದ ವಂಚಿತನಾಗಿದ್ದಾನೆ. ಆದುದರಿಂದಲೇ ಇತರ ಧರ್ಮದ ಆರಾಧನಾ ಕೇಂದ್ರ ಗಳತ್ತ ಆಕರ್ಷಿತನಾಗಿ ಈ ರೀತಿಯ ವಿವಾದ ಸೃಷ್ಟಿಸುತ್ತಿದ್ದಾನೆ.

    ಶರಣ್ ಸಂಘೀಗಳ ಆಳು ಆಗಿರಬಹುದು,ಆದರೆ ಇತರ ಧರ್ಮದ ಆರಾಧನಾಲಯದ ವಿಷಯದಲ್ಲಿ ಕಾನೂನು ಪ್ರಕ್ರಿಯೆಯಿಂದ ಹೆಚ್ಚಿನ ಕೃತ್ಯ ನಡೆಸಿದರೆ, ಶರಣ್ ಅಂತಹ ಪ್ರಯತ್ನಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಮುಸ್ಲಿಮ್ ಧಾರ್ಮಿಕ ಸಂಕೇತಗಳನ್ನು,ಭೀಕರವಾಗಿ ಬಿಂಬಿಸಿ,ಇತರರಲ್ಲಿ ಭಯ ಹುಟ್ಟಿಸಿ,ಹಿಂದೂ ಧರ್ಮಕ್ಕೆ ಅಪಾಯವಿದೆ,ಇತ್ಯಾದಿಯಾಗಿ ಸರ್ವ ಪ್ರಯತ್ನದ ಮೂಲಕ ಕರಾವಳಿಯಲ್ಲಿ ಮುಸ್ಲಿಮ್ ವಿರೋಧಿ ಗಲಭೆ ನಡೆಸಲು ವಿಫಲವಾದಾಗ,ಇನ್ನೂ ಯಾವುದೇ ಮುಸ್ಲಿಮ್ ಧಾರ್ಮಿಕ ಸಂಕೇತಗಳು,

    ಲಭ್ಯವಿಲ್ಲದ ಕಾರಣ ಮಳಲಿ ಮಸೀದಿಯ ವಾಸ್ತುಶಿಲ್ಪಕ್ಕೆ ಹಸ್ತ ಕ್ಷೇಪ ನಡೆಸಿ, ಅದು ಇತರ ಧರ್ಮದ ಧಾರ್ಮಿಕ ಕೇಂದ್ರ ಎಂಬಿತ್ಯಾದಿಯಾಗಿ ಇಲ್ಲದ ಸಮಸ್ಯೆಯನ್ನು ಹುಟ್ಟು ಹಾಕಿ, ಜಿಲ್ಲೆಯಲ್ಲಿ ತಾಂಬೂಲ ಪ್ರಶ್ನೆ ಎಂಬ ಅವೈಜಾನಿಕ ಪದ್ಧತಿಗಳು ಇತ್ಯಾದಿ ಮೂಲಕ,ಪ್ರದೇಶದ ಶಾಂತಿ ಸುವ್ಯವಸ್ಥೆಯನ್ನು ಹಾನಿ ಗೊಳಿಸಿ ,ಗಲಭೆ ನಡೆಸಿ ಸಾಮಾನ್ಯ ಜನರ ಜೀವ,ಆಸ್ತಿ ಗಳನ್ನು ನಷ್ಟ ಮಾಡಲು ಮುಂದಾದ ದುಷ್ಕರ್ಮಿ ಗಳಾದ ಪ್ರಮೋದ್ ಮುತಾಲಿಕ್ ಮತ್ತು ಶರಣ್ ಪಂಪ್ವೆಲ್ ನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

    ದ.ಕ.ಜಿಲ್ಲೆಯ ಜನರ ನೆಮ್ಮದಿಯ ಬಗ್ಗೆ ಮತ್ತು ಪೊಲೀಸ್ ಪರಿಕಲ್ಪನೆ ಜಿಲ್ಲೆಯಲ್ಲಿ ಜೀವಂತ ಇದೆ ಎಂದಿದ್ದರೆ ಪೊಲೀಸರು ಎಂದು ಹೇಳಿಸಿ ಕೊಳ್ಳುವವರು ತಕ್ಷಣ ಈ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಂಡು ಪೊಲೀಸು ಪರಿಕಲ್ಪನೆಯ ಶುದ್ಧತೆಯನ್ನು ಪಾಲಿಸಲಿ.

     

     

    DAKSHINA KANNADA

    ಬೆಂ*ಕಿಗೆ ಆಹುತಿಯಾದ ಹಡಗಿನಿಂದ ಅಪಾಯವಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸ್ಪಷ್ಟನೆ

    Published

    on

    ಮಂಗಳೂರು : ಮಂಗಳೂರು ಕರಾವಳಿಯ ಸಮುದ್ರದಲ್ಲಿ ಬೆಂ*ಕಿಗೆ ಆಹುತಿಯಾದ ವಿದೇಶಿ ಹಡಗಿನಿಂದ ಮಂಗಳೂರು ಕರಾವಳಿಗೆ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.

    ಜುಲೈ 19 ರಂದು ಗುಜರಾತ್‌ನಿಂದ ಕೊಲೊಂಬೋಕ್ಕೆ ತೆರಳುತ್ತಿದ್ದ ಸರಕು ಸಾಗಟದ ಹಡುಗು ಬೆಂ*ಕಿಗೆ ಆಹುತಿಯಾಗಿತ್ತು. ತಕ್ಷಣ ಕೋಸ್ಟ್‌ಗಾರ್ಡ್ ತಂಡ ನಿರಂತರ ನಲುವತ್ತು ಗಂಟೆ ಪ್ರಯತ್ನ ನಡೆಸಿ ಬೆಂಕಿ ನಂದಿಸುವ ಕೆಲಸವಾಗಿತ್ತು. ಬಳಿಕ ಹಡಗನ್ನು ಮಂಗಳೂರು ಕರಾವಳಿಯ 30 ನಾಟಿಕಲ್ ದೂರದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ತೈಲ ಸೋರಿಕೆ ಆಗುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ : 5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    ಹಡಗು ಮುಳುಗಡೆಯಾಗುವ ಭೀತಿ ಇದ್ದು ಹಾಗಾದಲ್ಲಿ ಹಡಗಿನಲ್ಲಿರುವ ತೈಲ ಸೋರಿಕೆ ಆಗಬಹುದು ಎಂದು ಸುದ್ದಿಯಾಗಿತ್ತು. ಆದ್ರೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಅಂತಹ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಅಂತಹ ಅವ*ಘಡ ನಡೆದಲ್ಲಿ ಅದನ್ನು ಎದುರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಹಾಗೂ ಕೋಸ್ಟ್‌ಗಾರ್ಡ್‌ ಮತ್ತು ಕರಾವಳಿ ಕಾವಲು ಪಡೆ ಸನ್ನದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    Continue Reading

    kerala

    5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    Published

    on

    ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.

    ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.

    ಆನ್‌ ಲೈನ್ ಗೇಮಿಂಗ್‌ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?

    ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
    ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.

    Continue Reading

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    LATEST NEWS

    Trending