LATEST NEWS
ಮುಗಿಯಲಿವೆ ಕನ್ನಡದ 3 ಜನಪ್ರಿಯ ಧಾರಾವಾಹಿಗಳು; ಯಾವುವು ಗೊತ್ತಾ?
ಕನ್ನಡ ವಾಹಿನಿಗಳಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಬಹುತೇಕ ಧಾರಾವಾಹಿಗಳು ಜನಪ್ರಿಯವಾಗಿವೆ. ಈ ನಡುವೆ ಪ್ರಸಿದ್ಧ 3 ಧಾರಾವಾಹಿಗಳು ಅಂತ್ಯವಾಗಲಿವೆ ಎಂದು ಹೇಳಲಾಗುತ್ತಿದೆ.ಈಗಾಗಲೇ ಹಳೆಯ ಧಾರಾವಾಹಿಗಳು, ರಿಯಾಲಿಟಿ ಶೋ ಅಂತ್ಯ ಕಂಡಿದ್ದವು. ಕನ್ನಡದಲ್ಲಿ ಹೊಸ ಧಾರವಾಹಿಗಳು ಇತ್ತೀಚೆಗೆ ಆರಂಭಗೊಂಡಿದ್ದವು. ಶ್ರೀಗೌರಿ, ಕರಿಮಣಿ, ಆಸೆ, ಲಕ್ಷ್ಮೀ ನಿವಾಸ ಧಾರಾವಾಹಿಗಳು ಹೊಸದಾಗಿ ಆರಂಭಗೊಂಡಿದ್ದು, ಸದ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಮತ್ತೆ ಹಳೆಯ ಜನಪ್ರಿಯ ಧಾರಾವಾಹಿಗಳು ಮುಗಿಯಲಿವೆ ಎಂದು ಹೇಳಲಾಗಿದೆ.
ಯಾವೆಲ್ಲಾ ಧಾರಾವಾಹಿಗಳು ಮುಗಿಯಲಿವೆ?
ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಮೂರು ಧಾರಾವಾಹಿಗಳು ಅಂತ್ಯವಾಗಲಿವೆ. ಕಲರ್ಸ್ ಕನ್ನಡ ವಾಹಿನಿಯ ಗೀತಾ, ಝೀ ಕನ್ನಡದ ಹಿಟ್ಲರ್ ಕಲ್ಯಾಣ, ಸ್ಟಾರ್ ಸುವರ್ಣ ವಾಹಿನಿಯ ಕಥೆಯೊಂದು ಶುರುವಾಗಿದೆ ಧಾರಾವಾಹಿಗಳು ಮುಗಿಯಲಿವೆ ಎಂದು ಹೇಳಲಾಗಿದೆ.
‘ಗೀತಾ’ ಮುಕ್ತಾಯ :
ಧನುಷ್ ಗೌಡ, ಭವ್ಯಾ ಗೌಡ ನಾಯಕ – ನಾಯಕಿಯಾಗಿ ಕಾಣಿಸಿಕೊಂಡಿರುವ ಗೀತಾ ಸೀರಿಯಲ್ ಮುಗಿಯಲಿದೆ ಎಂದು ಹೇಳಲಾಗಿದೆ. ಜ. 6,2020 ರಂದು ಗೀತಾ ಧಾರಾವಾಹಿ ಆರಂಭಗೊಂಡಿತ್ತು. ಲವ್ ಸ್ಟೋರಿ, ದ್ವೇಷ, ರಾಜಕಾರಣ, ಕೌಟುಂಬಿಕ ಕಥೆಯನ್ನೊಳಗೊಂಡಿದ್ದ ಈ ಧಾರಾವಾಹಿ ಭಾರೀ ಜನಮನ್ನಣೆ ದೊರಕಿತ್ತು.
ಮುಗಿಯಲಿದೆ ‘ಹಿಟ್ಲರ್ ಕಲ್ಯಾಣ’ :
ಆರಂಭದಲ್ಲಿ ಭಾರೀ ಸದ್ದು ಮಾಡಿದ್ದ, ದಿಲೀಪ್ ರಾಜ್ ನಟನೆಯ ಹಿಟ್ಲರ್ ಕಲ್ಯಾಣ ತನ್ನ ಅಂತಿಮ ಹಂತದ ಶೂಟಿಂಗ್ ನಲ್ಲಿದೆ. ಮಲ್ಐಕಾ ಟಿ ವಸುಪಾಲ್ ನಾಯಕಿಯಾಗಿದ್ದ ಈ ಧಾರಾವಾಹಿಯಲ್ಲಿ ನೇಹಾ ಪಾಟೀಲ್, ರವಿ ಭಟ್, ವಾಣಿಶ್ರೀ, ವಿದ್ಯಾಮೂರ್ತಿ, ರಜನಿ ಪಾತ್ರವಾಗಿದ್ದಾರೆ.
ಕಥೆಯೊಂದು ಶುರುವಾಗಿದೆ ಅಂತ್ಯ :
ಎರಡು ಮನೆತನಗಳ ನಡುವಿನ ಕಥಾಹಂದರ ಒಳಗೊಂಡಿದ್ದ ಕಥೆಯೊಂದು ಶುರುವಾಗಿದೆ ಅಂತ್ಯ ಕಾಣುವ ಹಂತದಲ್ಲಿದೆ. ಅಕ್ಷತಾ ದೇಶಪಾಂಡೆ, ಚಂದು ಬಿ.ಗೌಡ, ಸುಜಾತಾ ಅಕ್ಷಯ್, ಸುಂದರ ಶ್ರೀ, ಇಂಚರಾ ಜೋಶಿ ಮೊದಲಾದವರು ಧಾರವಾಹಿಗಾಗಿ ಬಣ್ಣ ಹಚ್ಚಿದ್ದಾರೆ.
ಹೊಸ ಧಾರಾವಾಹಿಗಳಾಗಮನ :
ಹಳೇ ಧಾರಾವಾಹಿಗಳು ಮುಗಿಯುತ್ತವೆ ಎಂದರೆ ಆ ಜಾಗಕ್ಕೆ ಹೊಸ ಧಾರಾವಾಹಿ ಅಥವಾ ರಿಯಾಲಿಟಿ ಶೋಗಳು ಆರಂಭವಾಗುತ್ತವೆ. ಅಂತೆಯೇ, ಈ ಬಾರಿ ಹೊಸ ಧಾರಾವಾಹಿಗಳು ಲಗ್ಗೆ ಇಡಲಿವೆ. ಕಥೆಯೊಂದು ಶುರುವಾಗಿದೆ ಧಾರಾವಾಹಿ ಜಾಗಕ್ಕೆ ಲಕ್ಷ್ಮೀ ನಿವಾಸ ಆಗಮನವಾಗಲಿದೆ.
ಅಲ್ಲದೇ ಕಲರ್ಸ್ ಕನ್ನಡ ಧಾರಾವಾಹಿ ಆರಂಭಗೊಳ್ಳಲಿದೆ. ‘ಚುಕ್ಕಿ ತಾರೆ’ ಎಂಬ ಧಾರಾವಾಹಿ ಪ್ರಾರಂಭವಾಗಲಿದೆ. ಈಗಾಗಲೇ ಪ್ರೋಮೋಗಳು ಗಮನ ಸೆಳೆದಿವೆ. ಅಲ್ಲದೇ, ನವೀನ್ ಸಜ್ಜು ನಟಿಸುತ್ತಿರೋದು ಹೆಚ್ಚು ವಿಶೇಷ.
LATEST NEWS
ಲಂಕೇಶ್ ಪುತ್ರನ ಜೊತೆ ಭರ್ಜರಿ ಸ್ಟೆಪ್ ಹಾಕಿದ ಶ್ರೇಯಾಂಕ ಪಾಟೀಲ್..! ಫುಲ್ ಫಿದಾ ಆದ ನೆಟ್ಟಿಗರು
ಬೆಂಗಳೂರು: ಆರ್ಸಿಬಿ ಆಟಗಾರ್ತಿ ಶ್ರೇಯಾಂಕ್ ಪಾಟೀಲ್ ವೇದಿಕೆಯೊಂದರಲ್ಲಿ ಸಮರಜಿತ್ ಲಂಕೇಶ್ ಅವರೊಂದಿಗೆ ಡ್ಯಾನ್ಸ್ ಮಾಡಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಲ್ಲಿದೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ರವರ ಪುತ್ರ ಸಮರಜಿತ್ ಲಂಕೇಶ್ ‘ಗೌರಿ’ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಈ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸಮರಜಿತ್ ಲಂಕೇಶ್ ಜೊತೆ ಸೇರಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ಸೇರಿದ್ದ ಜನರು ಆರ್ಸಿ. ಬಿ ಎಂದು ಕೂಗಿದ್ದಾರೆ. ಇನ್ನು ಶ್ರೇಯಾಂಕ ಡ್ಯಾನ್ಸ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವೀಡಿಯೋವನ್ನು ಶ್ರೇಯಾಂಕ ತಮ್ಮ ಇನ್ಸ್ಟಾಗ್ರಾಂ shreyanka_patil31 ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಗೂಗಲ್ ಮ್ಯಾಪ್ ನಂಬಿ ಸಂಕಷ್ಟ; ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿದ ಕಾರು!
LATEST NEWS
ಶೆಡ್ಗೆ ನುಗ್ಗಿದ ಖಾಸಗಿ ಕಂಪನಿಯ ಬಸ್.. ಒಳಗೆ ಮಲಗಿದ್ದ ನಾಲ್ವರು ಸ್ಥಳದಲ್ಲೇ ಸಾವು
ಪಣಜಿ: ಖಾಸಗಿ ಕಂಪನಿಯ ಬಸ್ವೊಂದು ರಸ್ತೆ ಬದಿಯ ಶೆಡ್ಗಳಿಗೆ ನುಗ್ಗಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ದಕ್ಷಿಣ ಗೋವಾದ ವೆರ್ನಾದಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರು ಬಿಹಾರ ಮೂಲದವರೆಂದು ತಿಳಿದು ಬಂದಿದ್ದು ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಖಾಸಗಿ ಕಂಪನಿಯೊಂದರ ಉದ್ಯೋಗಿಗಳಿದ್ದ ಬಸ್ ಅತಿ ವೇಗವಾಗಿ ಬಂದು ರಸ್ತೆ ಬದಿಯಲ್ಲಿದ್ದ ಶೆಡ್ಗಳಿಗೆ ನುಗ್ಗಿದೆ.
ಇದರಿಂದ ಮನೆಯಲ್ಲಿ ಮಲಗಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಉದ್ಯೋಗಿಗಳನ್ನ ಹತ್ತಿಸಿಕೊಂಡು ಬರುತ್ತಿದ್ದ ಬಸ್ ಚಾಲಕ ಮದ್ಯಪಾನ ಮಾಡಿದ್ದನು. ಹೀಗಾಗಿ ಬಸ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಶೆಡ್ಗಳಿಗೆ ನುಗ್ಗಿಸಿದ ಪರಿಣಾಮ ಸಾವಿಗೆ ಕಾರಣನಾಗಿದ್ದಾನೆ. ಬಸ್ ಒಳಗಿದ್ದ ಉದ್ಯೋಗಿಗಳಿಗೆ ಯಾವುದೇ ಗಾಯಗಳು ಆಗಿಲ್ಲ. ಬಸ್ನ ಮುಂದಿನ ಭಾಗದ ಗ್ಲಾಸ್ ಒಡೆದು ಹೋಗಿದೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
LATEST NEWS
ಗೂಗಲ್ ಪೇ ಬಳಸ್ತಾ ಇದ್ದೀರಾ? ಜೂನ್ 4ರಿಂದ ಈ ಆ್ಯಪ್ ಕೆಲಸ ಮಾಡಲ್ಲ!
ಮಂಗಳೂರು: ಆನ್ಲೈನ್ ಪೇಮೆಂಟ್ ಆ್ಯಪ್ಗಳಾದ ಗೂಗಲ್ ಪೇ, ಪೇಟಿಯಂ, ಫೋನ್ ಪೇಯನ್ನು ಅನೇಕರು ಬಳಸುತ್ತಿದ್ದಾರೆ. ಅದರ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ. ಬ್ಯಾಂಕ್ಗೆ ತೆರಳದೆ ಮೊಬೈಲ್ ಮೂಲಕ ಸೇವೆಯನ್ನು ನಡೆಸಲು ಈ ಆ್ಯಪ್ಗಳು ಸಹಾಯಕವಾಗಿದೆ. ಆದರೀಗ ಇಂತಹ ಸೇವೆಯನ್ನು ಒದಗಿಸುತ್ತಿರುವ ಗೂಗಲ್ ಪ್ಲೇ ಜೂನ್ 4ರಿಂದ ಕಾರ್ಯ ನಿರ್ವಹಿಸುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಗೂಗಲ್ ಪೇ ಕೇವಲ ಹಣದ ವ್ಯವಹಾರ ಮಾತ್ರವಲ್ಲ, ಗ್ಯಾಸ್ ಬುಕ್ಕಿಂಗ್, ರೀಚಾರ್ಜ್, ಇನ್ಶುರೆನ್ಸ್ ಹೀಗೆ ನಾನಾ ಸೇವೆಯನ್ನು ನೀಡುತ್ತಾ ಬಂದಿದೆ. ಆದರೀಗ ಗೂಗಲ್ ಪೇ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸುದ್ದಿ ಎಲ್ಲರಿಗೂ ಆಚ್ಚರಿಯಾಗಿದೆ.
ಗೂಗಲ್ ಪ್ಲೇಗೆ ಏನಾಯ್ತು?
ಪ್ರಪಂಚದಾದ್ಯಂತ ಗೂಗಲ್ ಪೇ ಜನಪ್ರಿಯವಾಗಿದೆ. . ಆದರೆ ಕೆಲವು ದೇಶಗಳಲ್ಲಿ ಗೂಗಲ್ ಪೇ ಕಾರ್ಯವನ್ನು ಮಾಡೋದಿಲ್ಲ. ಆದರೆ ಭಾರತೀಯರು ಟೆನ್ಶನ್ ಮಾಡುವ ಅವಶ್ಯಕತೆ ಇಲ್ಲ. ಇದು ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಗೂಗಲ್ ಯೋಚನೆಯೇ ಬೇರೆ
ಗೂಗಲ್ ತನ್ನ ಎಲ್ಲಾ ಬಳಕೆದಾರರನ್ನು ಗೂಗಲ್ ವಾಲೆಟ್ಗೆ ತೆರಳುವಂತೆ ಕೇಳಿಕೊಂಡಿದೆ. ಹಾಗಾಗಿ ಅದರ ಪ್ರಚಾರ ಮಾಡುತ್ತಿದೆ. ಇದೇ ಕಾರಣಕ್ಕೆ ಗೂಗಲ್ ಪೇ ಕೆಲವು ದೇಶಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಡೆಹಿಡಿದಿದೆ. ಆದರೆ ಭಾರತ ಮತ್ತು ಸಿಂಗಾಪುರದಲ್ಲಿ ಗೂಗಲ್ ಪೇ ಕಾರ್ಯ ನಿರ್ವಹಿಸುತ್ತದೆ.
ಬಂದಿದೆ ಗೂಗಲ್ ವಾಲೆಟ್
ಇತ್ತೀಚೆಗೆ ಗೂಗಲ್ ವಾಲೆಟ್ ಅನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಸದ್ಯ ಇದರ ಪ್ರಚಾರ ಕಾರ್ಯ ನಡೆಸುತ್ತಿದೆ. ಜೊತೆಗೆ ಬಳಕೆದಾರರನ್ನು ಸೆಳೆಯಲು ಕೆಲವು ಆಫರ್ ನೀಡುತ್ತಿದೆ. ಅದರಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಲಾಯಲ್ಟಿ ಕಾರ್ಡ್, ಉಡುಗೊರೆಗಳನ್ನು ನೀಡುತ್ತಿದೆ.
ಇನ್ನು ಗೂಗಲ್ ವಾಲೆಟ್ ಹಲವು ಫೀಚರ್ಸ್ ಹೊಂದಿದೆ. ಈ ಅಪ್ಲಿಕೇಶನ್ ಪಿನ್ ರಕ್ಷಣೆ, ಕಳೆದು ಹೋದ ಸಾಧನದಲ್ಲಿರುವ ಅಕೌಂಟ್ ಅನ್ನು ನಿಷ್ಟ್ರೀಯಗೊಳಿಸುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೆ ಸ್ನೇಹಿತರಿಗೆ ಸುಲಭವಾಗಿ ಹಣ ಕಳುಹಿಸಲು ಸಾಧ್ಯವಾಗುತ್ತದೆ.
- LATEST NEWS7 days ago
ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಮಗು ಬ*ಲಿ
- DAKSHINA KANNADA7 days ago
ಮುಲ್ಕಿ : ಪ್ರೀತಿಸಿದ ಹುಡುಗಿ ಆತ್ಮಹ*ತ್ಯೆ ಬೆನ್ನಲ್ಲೇ ರೈಲಿಗೆ ತಲೆಕೊಟ್ಟು ಇಹಲೋಕ ತ್ಯಜಿಸಿದ ಯುವಕ!
- kerala5 days ago
ಕೇರಳ ಲಾಟರಿಯಲ್ಲಿ ಬೀದಿ ವ್ಯಾಪಾರಿ ಮಹಿಳೆಗೆ 1 ಕೋಟಿ ರೂ ಬಂಪರ್..!! ಖದೀಮ ಟಿಕೆಟ್ ಮಾರಾಟಗಾರ ಅಂದರ್..! ನಡೆದಿದ್ದೇನು?
- FILM6 days ago
‘ಅಣ್ಣಾವ್ರ’ ಹಾಡು ಹಾಡಿದ ‘ಮೋಹನ್ ಲಾಲ್’; ವೀಡಿಯೋ ವೈರಲ್