Connect with us

LATEST NEWS

ಮುಂಬೈ ಟು ದುಬೈಗೆ ಓರ್ವನ ಪ್ರಯಾಣಕ್ಕಾಗಿ 17 ಟನ್ ಇಂಧನ ವ್ಯಯಿಸಿದ ಎಮಿರೇಟ್ಸ್ ಏರ್ ಲೈನ್ಸ್..!

Published

on

ಮುಂಬೈ: ಕೇವಲ ಓರ್ವ ವ್ಯಕ್ತಿಗಾಗಿ ಮುಂಬೈಯಿಂದ ದುಬೈಗೆ ವಿಮಾನ ಹಾರಾಟ ನಡೆಸಿದ ವಿದ್ಯಾಮಾನ ವರದಿಯಾಗಿದೆ. ಪ್ರತಿಷ್ಟಿತ ಎಮಿರೇಟ್ಸ್ ವಿಮಾನ ಯಾನ ಸಂಸ್ಥೆ ಈ ಕಾರ್ಯವನ್ನು ಮಾಡಿದ್ದು, ಮುಂಬೈ ಮೂಲದ ಉದ್ಯಮಿ ಅನಿವಾಸಿ ಭಾರತೀಯ 40 ವರ್ಷದ ಭವೇಶ್ ಜವೇರಿ ಏಕ ವ್ಯಕ್ತಿಯಾಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಎಮಿರೇಟ್ಸ್ ಫ್ಲೈಟ್ ಟಿಕೆಟ್ ಅನ್ನು ರೂ 18,000 ತೆತ್ತು ಖರೀದಿಸಿದ್ದ 40 ವರ್ಷದ ಭವೇಶ್ ಜವೇರಿ 360 ಸೀಟಿನ ಬೋಯಿಂಗ್ 777 ವಿಮಾನದಲ್ಲಿ ಮೇ 19ರಂದು ಏಕೈಕ ಪ್ರಯಾಣಿಕನಾಗಿದ್ದರು.

ಮುಂಬೈಯಿಂದ ದುಬೈಗೆ ಇಲ್ಲಿಯ ತನಕ 240ಕ್ಕೂ ಅಧಿಕ ಬಾರಿ ಪ್ರಯಾಣಿಸಿರುವ ಅವರು ಇದೇ ಮೊದಲ ಬಾರಿಗೆ ಇಂತಹ ವಿಶೇಷ ಸವಲತ್ತು ಪಡೆದರು.ಕಳೆದ 20 ವರ್ಷಗಳಿಂದ ಅವರು ದುಬೈ ನಿವಾಸಿಯಾಗಿದ್ದಾರೆ. ಜೀವನದಲ್ಲಿ ಅದೆಷ್ಟೋ ಬಾರಿ ವಿಮಾನದಲ್ಲಿ ಸಂಚರಿಸಿರುವ ಅವರಿಗೆ ಈ ಒಂದು ಪ್ರಯಾಣ ಬಹಳ ರೋಮಾಂಚನ ತಂದಿದ್ದು, ಈ ಪ್ರಯಾಣದ ಸುದ್ದಿ ಭಾರಿ ವೈರಲ್‌ ಆಗಿದೆ.

ಇದಕ್ಕೆ ಕಾರಣ, ಇವರು ದುಬೈನಿಂದ ಮುಂಬೈಗೆ ವಿಮಾನದಲ್ಲಿ ಒಬ್ಬರೇ ಕುಳಿತು ಬಂದಿದ್ದಾರೆ. ಅದೂ 360 ಸೀಟುಗಳಿರುವ ಬೋಯಿಂಗ್ 777 ಎಮಿರೇಟ್ಸ್  ವಿಮಾನದಲ್ಲಿ ಕೇವಲ 18 ಸಾವಿರ ರೂಪಾಯಿ ಕೊಟ್ಟು!

ಈ ರೋಚಕ ಪ್ರಯಾಣವನ್ನು ಅವರು ಮಾಧ್ಯಮಗಳ ಜತೆ ಹಂಚಿಕೊಂಡಿದ್ದು, ಈ ಎರಡೂವರೆ ಗಂಟೆಗಳ ಪ್ರಯಾಣ ಜೀವನದಲ್ಲಿ ಮರೆಯಲಾರೆ ಎಂದಿದ್ದಾರೆ.

ಯುಎಇಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳ ಪ್ರಕಾರ, ಯುಎಇ ಪ್ರಜೆಗಳು, ಯುಎಇ ಗೋಲ್ಡನ್ ವೀಸಾ ಹೊಂದಿರುವವರು ಮತ್ತು ರಾಜತಾಂತ್ರಿಕ ಯೋಜನೆಯ ಸದಸ್ಯರು ಮಾತ್ರವೇ ಭಾರತದಿಂದ ಯುಎಇಗೆ ತೆರಳಬಹುದಾಗಿದೆ.

ಭವೇಶ್ ಅವರು ತಮ್ಮ ಬಳಿ ಗೋಲ್ಡನ್ ವೀಸಾ ಹೊಂದಿದ್ದ ಕಾರಣ ಇಂಥದ್ದೊಂದು ಅವಕಾಶ ಅವರಿಗೆ ಸಿಕ್ಕಿದೆ. ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ…

”ನಾನು ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆಯೇ ಗಗನಸಖಿಯರು ಜೋರಾಗಿ ಚಪ್ಪಾಳೆ ತಟ್ಟಿ ನಗುಮೊಗದಿಂದ ಸ್ವಾಗತಿಸಿದರು. ಇಂಥ ಅನುಭವ ಸಾಮಾನ್ಯ ಆದರೆ ಈ ಪಯಣದಲ್ಲಿನ ಅನುಭವ ವಿಶೇಷವೇ ಆಗಿತ್ತು.

ಇದು ಏಕಾಂಗಿ ಪಯಣ. ಈಗಾಗಲೇ  ದುಬೈ ಮತ್ತು ಮುಂಬೈ ನಡುವೆ 240 ಬಾರಿ ಸಂಚರಿಸಿದ್ದೇನೆ. ಆದರೆ ಇಂಥ ಸ್ವಾಗತ ಇದೇ ಮೊದಲು ನೋಡಿದ್ದು’ ಎಂದಿದ್ದಾರೆ.

ವಿಮಾನ ಇಳಿದ ಬಳಿಕ ಬ್ಯಾಗ್ ಸಂಗ್ರಹಿಸಲು ತೆರಳಿದಾಗಲೂ ಕನ್ವೇಯರ್ ಬೆಲ್ಟ್‌ನಲ್ಲಿ ಇದ್ದಿದ್ದು ನನ್ನ ಬ್ಯಾಗ್‌ ಮಾತ್ರ ಎಂದಿದ್ದಾರೆ. ಭಾರತದ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಮುಂಬೈ ವಿಮಾನ ನಿಲ್ದಾಣ ಒಂದಾಗಿದೆ.

ಸುಮಾರು 180 ಟನ್ ತೂಕದ ಬೋಯಿಂಗ್ ವಿಮಾನವನ್ನು ಒಬ್ಬರೇ ಒಬ್ಬ ಎಕಾನಮಿ ದರ್ಜೆಯ ಪ್ರಯಾಣಿಕನ ಎರಡೂವರೆ ಗಂಟೆ ಪ್ರಯಾಣಕ್ಕಾಗಿ ಸುಮಾರು ಎಂಟು ಲಕ್ಷ ರೂ ಮೌಲ್ಯದ 17 ಟನ್ ಇಂಧನ ಉರಿಸಿದ್ದು ಅಚ್ಚರಿಯ ಸಂಗತಿ.

ಆದರೆ ಮುಂಬೈನಿಂದ ದುಬೈಗೆ ವಿಮಾನ ಹೋದ ಮೇಲೆ ಅಲ್ಲಿಂದ ವಾಪಸ್‌ ಬರಲೇಬೇಕಿರುವುದು ಅನಿವಾರ್ಯ. ಆದ್ದರಿಂದ ಪ್ರಯಾಣಿಕರು ಇಲ್ಲದಿದ್ದರೂ ಬರಲೇಬೇಕಿತ್ತು ಎಂದು ವಿಮಾನಯಾನ ಸ್ಪಷ್ಟನೆ ಕೊಟ್ಟಿದೆ.

LATEST NEWS

ಇದು ಭಾರತದಲ್ಲಿರುವ ದೇವಸ್ಥಾನ… ಆದ್ರೆ ಭಾರತ ಸರ್ಕಾರಕ್ಕಿಲ್ಲ ಇದರ ಮೇಲೆ ಹಕ್ಕು…!

Published

on

 

ಕಾಶಿ ವಿಶ್ವನಾಥನ ಸನ್ನಿಧಿಗೆ ಹೋಗುವ ಭಕ್ತರು ಅಲ್ಲೇ ಪಕ್ಕದಲ್ಲಿ ಗಂಗಾ ನದಿಯ ದಡದಲ್ಲಿರುವ ಪಶುಪತಿನಾಥ ದೇವಸ್ಥಾನಕ್ಕೂ ಭೇಟಿ ನೀಡ್ತಾರೆ. ಲಲಿತ್ ಘಾಟ್‌ನಲ್ಲಿರುವ ಈ ದೇವಸ್ಥಾನ ಭಾರತದಲ್ಲೇ ಇದ್ರೂ ಇದರ ಮೇಲೆ ದೇಶದ ಯಾವ ಕಾನೂನು ಅನ್ವಯ ಆಗೋದಿಲ್ಲ. ಈ ದೇವಸ್ಥಾನದ ವಿಚಾರದಲ್ಲಿ ಭಾರತ ದೇಶದ ಯಾವುದೇ ಪ್ರಾಧಿಕಾರವಾಗಲಿ ಅಧಿಕಾರ ಚಲಾಯಿಸುವಂತೆಯೂ ಇಲ್ಲ. ಈ ದೇವಸ್ಥಾನ ಕಾಶಿಯಿಂದ ಸುಮಾರು 400 ಕಿಲೋ ಮೀಟರ್ ದೂರದ ನೇಪಾಳ ಸರ್ಕಾರದ ಹಿಡಿತದಲ್ಲಿದೆ. ಹೀಗಾಗಿ ಭಾರತ ದೇಶದಲ್ಲೇ ಈ ದೇವಸ್ಥಾನ ಇದ್ರೂ ದೇವಸ್ಥಾನದ ಒಂದು ಹುಲ್ಲು ಕಡ್ಡಿ ಅಲುಗಾಡಿಸಬೇಕಾದ್ರೂ ನೇಪಾಳದ ಒಪ್ಪಿಗೆ ಪಡೆಯಬೇಕು.

ದೇವಸ್ಥಾನದ ಸಂಪೂರ್ಣ ಅಧಿಕಾರ ನೇಪಾಳದ್ದು

 


ದೇವಸ್ಥಾನದ ನಿರ್ವಹಣೆಯಿಂದ ಹಿಡಿದು, ಪೂಜೆ ಪುನಸ್ಕಾರ, ಅರ್ಚಕರಿಗೆ ನೀಡುವ ಸೌಲಭ್ಯ ಎಲ್ಲವೂ ನೇಪಾಳ ಸರ್ಕಾರವೇ ಭರಿಸುತ್ತದೆ. ಈ ದೇವಸ್ಥಾನವನ್ನು ನೇಪಾಳದ ರಾಜ ರಾಣಾ ಬಹದ್ದೂರ್ ನಿರ್ಮಿಸಿರೋದೇ ಇದಕ್ಕೆ ಕಾರಣ. 1800 -1804 ರ ನಡುವೆ ಕಾಶಿಯಲ್ಲಿ ತಂಗಿದ್ದ ರಾಣಾ ಬಹದ್ದೂರು ಈ ದೇವಾಲಯವನ್ನು ನಿರ್ಮಾಣ ಮಾಡಿದ ಅನ್ನೋ ಐತಿಹಾಸಿಕ ದಾಖಲೆಗಳು ಇದೆ.

1843 ರಲ್ಲಿ ಪೂರ್ಣಗೊಂಡ ನಿರ್ಮಾಣ ಕಾರ್ಯ

ರಾಣಾ ಬಹದ್ದೂರ್ ಸಹಾ ನಾಲ್ಕು ವರ್ಷ ಕಾಶಿಯಲ್ಲಿ ಇದ್ದಾಗ ದೇವಸ್ಥಾನ ನಿರ್ಮಾಣ ಆರಂಭಿಸಿದ್ದರೂ, 1843 ರಲ್ಲಿ ಈ ದೇವಸ್ಥಾನ ಪೂರ್ಣಗೊಂಡಿತ್ತು. ರಾಣಾ ಬಹದ್ದೂರು ಸಹಾ ಅವರ ಮಗ ರಾಜ ರಾಜೇಂದ್ರ ವೀರ್ ಈ ದೇವಾಲಯದ ಕಾರ್ಯವನ್ನು ಪೂರ್ಣಗೊಳಿಸಿದ್ದರು. ಕಠ್ಮಂಡುವಿನ ಪಶುಪತಿನಾತ ದೇವಾಲಯದಂತೆಯೇ ಈ ದೇವಸ್ಥಾನವನ್ನು ನಿರ್ಮಾಣಮಾಡಲಾಗಿದೆ. ಈ ದೇವಸ್ಥಾನದ ಸಂಪೂರ್ಣ ನಿರ್ಮಾಣ ಕಾರ್ಯವನ್ನೂ ನೇಪಾಳಿ ಕುಶಲಕರ್ಮಿಗಳೇ ಮಾಡಿದ್ದಾರೆ.

ಇದನ್ನೂ ಓದಿ…ಈ ದೇವಸ್ಥಾನದಲ್ಲಿ ಒಂದು ಲಿಂಬೆಹಣ್ಣಿಗೆ ಲಕ್ಷಾಂತರ ರೂ. ಬೇಡಿಕೆ..! ಅಂತದ್ದೇನಿದೆ ಈ ಲಿಂಬೆ ಹಣ್ಣಲ್ಲಿ?

ಮರದಿಂದ ಮಾಡಿದ ವಿಶೇಷ ದೇವಾಲಯ

ಈ ದೇವಾಲಯದ ವಿಶೇಷವೆಂದರೆ ಈ ದೇವಾಲಯವು ಕಲ್ಲಿನಿಂದ ಮಾಡಲಾಗಿಲ್ಲ, ಆದರೆ ಮರದಿಂದ ಮಾಡಲ್ಪಟ್ಟಿದೆ ಮತ್ತು ಸುಂದರವಾದ ಕೆತ್ತನೆಗಳನ್ನು ಸಹ ಕೆತ್ತಲಾಗಿದೆ. ಜನರು ಈ ದೇವಾಲಯವನ್ನು ಮಿನಿ ಖಜುರಾಹೋ ಎಂದೂ ಕರೆಯುತ್ತಾರೆ. ಕಾಶಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಭಾರತ ಮತ್ತು ನೇಪಾಳ ನಡುವಿನ ಸ್ನೇಹಕ್ಕೆ ಒಂದು ವಿಶಿಷ್ಟ ಉದಾಹರಣೆಯಾಗಿದೆ. ಈ ದೇವಾಲಯದಲ್ಲಿ, ಪೂಜೆ ಸೇರಿದಂತೆ ಎಲ್ಲಾ ಆಚರಣೆಗಳನ್ನು ನೇಪಾಳದ ಜನರು ಮಾತ್ರ ಮಾಡುತ್ತಾರೆ.

Continue Reading

FILM

ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟ ‘ಪಾರು’ ಧಾರಾವಾಹಿ ನಟ ‘ಆದಿ’!

Published

on

ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡಿದ್ದ ಧಾರಾವಾಹಿಗಳಲ್ಲಿ ‘ಪಾರು’ ಕೂಡಾ ಒಂದು. ಆದಿ – ಪಾರು ಪ್ರೇಮಕಥೆ, ಅಖಿಲಾಂಡೇಶ್ವರಿ ಎಂಬ ಹಿರಿಮೆ ಎಲ್ಲವೂ ಧಾರಾವಾಹಿಯ ಜೀವಾಳವಾಗಿತ್ತು. ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.

ಕಿರುತೆರೆಯಲ್ಲಿ ಸುಮಾರು ಆರು ವರ್ಷಗಳ ಈ ಧಾರಾವಾಹಿ ಪ್ರಸಾರವಾಗಿದೆ. ಈ ಧಾರಾವಾಹಿಯಲ್ಲಿ ಪಾರು ಪಾತ್ರದಿಂದ ಮೋಕ್ಷಿತಾ ಪೈ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿದ್ದರು. ಹಾಗೆಯೇ ಆದಿ ಪಾತ್ರದಿಂದ ನಟ ಶರತ್ ಪದ್ಮನಾಭ್ ಕೂಡ ಅಭಿಮಾನಿಗಳನ್ನು ಗಳಿಸಿದ್ದಾರೆ.

ಜೀ ಕನ್ನಡದಲ್ಲಿ ಬರುತ್ತಿದ್ದ ಪಾರು ಸೀರಿಯಲ್ ಈಗ ಅಂತ್ಯ ಕಂಡಿದೆ. ಈ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಅಂದರೆ ಶರತ್ ಪದ್ಮನಾಭ್ ಹಿರಿತೆರೆ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಬೆಳ್ಳಿಪರದೆ ಮೇಲೆ ‘ಆದಿ’

ಹೌದು, ನಟ ಶರತ್ ಪದ್ಮನಾಭ್ ನಾಯಕನಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು ‘ಅನಿಮಾ’. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ನಿರ್ದೇಶಕ ವರ್ಧನ್ ಎಂ ಎಚ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಅನಿಮಾ’ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ.

ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿಮಾ ಸಿನಿಮಾದ ಚಿತ್ರೀಕರಣ ಕೊನೆ ಹಂತದಲ್ಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಎನ್ನಲಾಗಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗಲೇ ಶೂಟಿಂಗ್ ನಡೆಸಲಾಗುತ್ತಿದೆ.

ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ. ಸಿನಿಮಾ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ಶರತ್ ಪದ್ಮನಾಭ್ ಹಂಚಿಕೊಂಡಿದ್ದಾರೆ.


” ಅನಿಮಾ, ನಮ್ಮ ಸಿನಿಮಾ, ನಿಮ್ಮ ಸಿನಿಮಾ ಆಗುವ ಮೊದಲ ಹೆಜ್ಜೆ!! Presenting you the title poster of our movie !! ಒಂದು ರೋಚಕವಾದ ಕಥೆಯನ್ನು ಹೇಳಲು ಆದಷ್ಟು ಬೇಗ ಬರ್ತಾ ಇದೀವಿ !! ನಮ್ಮ ತಂಡಕ್ಕೆ ನಿಮ್ಮ ಬೆಂಬಲವಿರಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಅನುಷಾ ಕೃಷ್ಣ ನಾಯಕಿ

ಅನಿಮಾ ಚಿತ್ರದಲ್ಲಿ ಶರತ್ ಪದ್ಮನಾಭ್ ಗೆ ನಾಯಕಿಯಾಗಿ ಅನುಷಾ ಕೃಷ್ಣ ಜೊತೆಯಾಗಿದ್ದಾರೆ. ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಸಂಗೀತ ಚಿತ್ರಕ್ಕಿದೆ.

Continue Reading

LATEST NEWS

ಆಭರಣ ಪ್ರಿಯರಿಗೆ ನಿರಾಸೆ….ಇಂದು ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ…!

Published

on

ಬೆಂಗಳೂರು : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ನಿನ್ನೆಗಿಂತ ಇಂದು(ಮಾ.29)  ಚಿನ್ನದ ದರ ಮತ್ತಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆಯೂ ಕೂಡ ಹೆಚ್ಚಾಗಿದ್ದು, ಶುಭಕಾರ್ಯಗಳಿಗೆ ಚಿನ್ನ ಖರೀದಿಸಬೇಕು ಎಂದುಕೊಂಡವರು ಯೋಚಿಸುವಂತಾಗಿದೆ.

ಮದುವೆ ಸಮಾರಂಭಗಳ ಸೀಸನ್ ಇದು. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹಾಗಾಗಿ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯೇ ಇದೆ.

ಎಷ್ಟಿದೆ ಬೆಲೆ ?
ಸದ್ಯ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 61,700 ರೂಪಾಯಿ ಇದ್ದು, 24 ಕ್ಯಾರೆಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 67,310 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,750 ರೂಪಾಯಿ ಇದೆ.

ಒಂದು ಗ್ರಾಂ ಚಿನ್ನದ ದರ
22 ಕ್ಯಾರೆಟ್ ಚಿನ್ನದ ದರ – 6,170 ರೂಪಾಯಿ
24 ಕ್ಯಾರೆಟ್ ಚಿನ್ನದ ದರ – 6,731 ರೂಪಾಯಿ

10 ಗ್ರಾಂ ಚಿನ್ನದ ದರ

22 ಕ್ಯಾರೆಟ್ ಆಭರಣ ಚಿನ್ನದ ದರ – 61,700 ರೂಪಾಯಿ
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 67,310 ರೂಪಾಯಿ

8 ಗ್ರಾಂ ಚಿನ್ನದ ದರ
22 ಕ್ಯಾರೆಟ್ ಆಭರಣ ಚಿನ್ನದ ದರ – 49,360 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
ಬೆಂಗಳೂರು- 61,700 ರೂಪಾಯಿ
ಚೆನ್ನೈ – 62,500 ರೂಪಾಯಿ
ಮುಂಬೈ – 61,700 ರೂಪಾಯಿ
ಕೇರಳ -61,700 ರೂಪಾಯಿ
ಕೋಲ್ಕತ್ತಾ – 61,700 ರೂಪಾಯಿ
ಜೈಪುರ್ -61,850 ರೂಪಾಯಿ
ಭುವನೇಶ್ವರ್- 61,700 ರೂಪಾಯಿ
ಅಹ್ಮದಾಬಾದ್- 61,750 ರೂಪಾಯಿ
ಲಕ್ನೋ – 61,850 ರೂಪಾಯಿ
ನವದೆಹಲಿ – 61,850 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಬೆಂಗಳೂರು-7,750 ರೂಪಾಯಿ
ಚೆನ್ನೈ- 8,050 ರೂಪಾಯಿ
ಮುಂಬೈ-7,750 ರೂಪಾಯಿ
ಕೋಲ್ಕತ್ತಾ-7,750 ರೂಪಾಯಿ
ನವದೆಹಲಿ-7,750 ರೂಪಾಯಿ

Continue Reading

LATEST NEWS

Trending