LATEST NEWS
ಕುಂದಾಪುರ: ರಿಕ್ಷಾದಲ್ಲಿ ಬಿಟ್ಟುಹೋಗಿದ್ದ ಚಿನ್ನದ ಕರಿಮಣಿ ಹಿಂತಿರುಗಿಸಿದ ಚಾಲಕ
ಕುಂದಾಪುರ: ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಬಂದಿದ್ದ ದಂಪತಿ ಚಿನ್ನದ ಕರಿಮಣಿ ಬಿಟ್ಟು ಹೋಗಿ, ರಿಕ್ಷಾ ಚಾಲಕ ಪ್ರಾಮಾಣಿಕತೆಯಿಂದ ಅದನ್ನು ಮತ್ತೆ ಹಿಂತಿರುಗಿಸಿದ ಘಟನೆ ಬೈಂದೂರು ತಾಲೂಕು ಯಾಡ್ತರೆಯಿಂದ ವರದಿಯಾಗಿದೆ.
ಬೆಂಗಳೂರಿನಿಂದ ಬಸ್ನಲ್ಲಿ ಯೆಡ್ತೆರೆಗೆ ಬಂದಿಳಿದ ಶೋಭಾ ದಂಪತಿ ಆಟೋ ಚಾಲಕ ಅನಿಲ್ ಆಸ್ಕರ್ ಫೆರ್ನಾಂಡಿಸ್ ರಿಕ್ಷಾದಲ್ಲಿ ಅರೇಶಿರೂರಿಗೆ ಬಾಡಿಗೆ ಹೋಗಿದ್ದರು.
ಬಾಡಿಗೆ ಬಿಟ್ಟು ವಾಪಸ್ ಯಡ್ತರೆ ಸ್ಟ್ಯಾಂಡಿಗೆ ಬಂದು ರಿಕ್ಷಾ ಸ್ವಚ್ಫಗೊಳಿಸುತ್ತಿದ್ದಾಗ ಒಂದು ಚಿನ್ನದ ಕರಿಮಣಿ ಸಿಕ್ಕಿದ್ದು, ಅದನ್ನು ಅನಿಲ್ ಪ್ರಾಮಾಣಿಕವಾಗಿ ಬೈಂದೂರು ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದರು.
ಚಿನ್ನ ಕಳೆದುಹೋದ ಬಗ್ಗೆ ದೂರು ನೀಡಲು ಠಾಣೆಗೆ ಬಂದ ದಂಪತಿಗೆ ಚಿನ್ನದ ಕರಿಮಣಿ ತೋರಿಸಿದಾಗ ತನ್ನದೆಂದು ಗುರುತು ಪತ್ತೆ ಹಚ್ಚಿದರು.
ನಂತರ ಪೊಲೀಸರ ಸಮಕ್ಷಮದಲ್ಲಿ ವಾರಿಸುದಾರರಿಗೆ ಹಸ್ತಾಂತರಿಸಿದರು. ರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ದಂಪತಿ ಹಾಗೂ ಪೊಲೀಸ್ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದರು.
FILM
“ಮಮ್ಮುಟ್ಟಿ” ಸಿನೆಮಾದಲ್ಲಿ “ರಾಜ್ ಬಿ ಶೆಟ್ಟಿ” ಖದರ್ ! ‘ಟರ್ಬೊ’ ಟ್ರೈಲರ್ಗೆ ಫಿದಾ ಆದ ಸಿನಿಪ್ರಿಯರು
ಮಂಗಳೂರು: ಕನ್ನಡ ಸಿನೆಮಾ ನಟ ಮಂಗಳೂರಿನ ಪ್ರತಿಭೆ ರಾಜ್ ಬಿ ಶೆಟ್ಟಿ. ಈಗಾಗಲೇ ತನ್ನ ಅದ್ಭುತ ನಟನೆಯ ಮೂಲಕ, ನಿರ್ದೇಶನ, ಚಿತ್ರಕಥೆಯ ಮೂಲಕ ಜನರ ಮನ ಗೆದ್ದಿದ್ದಾರೆ. ಹಾಸ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶೆಟ್ರು.. ಬಳಿಕ ಮಾಸ್ ಸಿನೆಮಾದಲ್ಲಿ ಮಿಂಚಿದ್ದರು. ಒಂದು ಮೊಟ್ಟೆಯ ಕಥೆ ಸಿನೆಮಾದಲ್ಲಿ ತುಂಬಾನೇ ಸೈಲಂಟ್ ಆದ ನಟನೆ ಇದ್ರೆ, ಇನ್ನು ಗರುಡ ಗಮನ ವೃಷಭ ವಾಹನದಲ್ಲಿ ಕಂಪ್ಲೀಟ್ ಒಪೋಸಿಟ್ ಕ್ಯಾರೆಕ್ಟರ್. ಶಿವನ ಪಾತ್ರದಲ್ಲಿ ಮೈ ಜುಮ್ಮೆನ್ನಿಸುವ ನಟನೆ ಶೆಟ್ರದ್ದು. ಹೀಗಾಗಿ ಶೆಟ್ರು ಎಲ್ಲಾ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಶೆಟ್ಟು ಮಳಯಾಲಂ ನ ಸೂಪರ್ ಸ್ಟಾರ್ ಮಮ್ಮುಟಿ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಯವರು ರಾಜ್ ಬಿ ಶೆಟ್ಟಿ ಯವರ ಅಭಿನಯಕ್ಕೆ ಫಿದಾ ಆಗಿದ್ದರು. ಅವರ ‘ಟರ್ಬೊ’ ಸಿನೆಮಾದಲ್ಲಿ ಮಮ್ಮುಟ್ಟಿಗೆ ಸರಿಸಮಾನದ ಪಾತ್ರವನ್ನು ಅಭಿನಯಿಸುವ ಅವಕಾಶ ಇವರದಾಗಿದೆ. ಈಗಾಗಲೇ ಸಿನೆಮಾ ಪ್ರೋಮೋ ಕೂಡಾ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಬಿಗ್ಬಾಸ್ ಸಂಗೀತಾ ಶೃಂಗೇರಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!
ಆ್ಯಕ್ಷನ್ ಪ್ಯಾಕ್ಡ್ ಸಿನೆಮಾ ‘ಟರ್ಬೊ’:
ಇನ್ನು ಟರ್ಬೊ ಸಿನಿಮಾ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಸಿನೆಮಾ ಟ್ರೈಲರ್ ನೋಡಿದ್ರೇನೆ ಸಿನೆಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚುತ್ತೆ. ಈ ಸಿನೆಮಾದಲ್ಲಿ ಶೆಟ್ರು ಕಪ್ಪು ಶರ್ಟ್, ಕಪ್ಪು ಪಂಚೆ ಧರಿಸಿದ್ದಾರೆ. ಇನ್ನು ಮಮ್ಮುಟ್ಟಿ ಡಿಫೆರೆಂಟ್ ಲುಕ್ನಲ್ಲಿ ಕಾಣಿಸುತ್ತಿದ್ದು, ಬ್ಲ್ಯಾಕ್ ಶರ್ಟ್ ಹಾಗೂ ವೈಟ್ ಪಂಚೆ ಧರಿಸಿದ್ದಾರೆ. ಇನ್ನು ಇವರಿಬ್ಬರ ಪಾತ್ರ ಒಬ್ಬರಿಗೊಬ್ಬರು ಠಕ್ಕರ್ ಕೊಡುವಂತಿದೆ.
ಮಮ್ಮುಟಿಗೆ ಠಕ್ಕರ್ ನೀಡಲಿದ್ದಾರಾ ಶೆಟ್ರು..!
ಸಿನೆಮಾ ಟ್ರೈಲರ್ ನಲ್ಲಿ ರಾಜ್ ಬಿ ಶೆಟ್ಟಿಗೆ ಹೆಚ್ಚು ಸ್ಪೇಸ್ ನೀಡಿದ್ದಾರೆ. ನಾಲ್ಕೈದು ಕಡೆಗಳಲ್ಲಿ ರಾಜ್ ಬಿ ಶೆಟ್ಟಿಯನ್ನು ತೋರಿಸಿದ್ದಾರೆ. ಹೆಲಿಕಾಫ್ಟರ್ನಿಂದ ಇಳಿದು ಬರುವ ದೃಶ್ಯ ಮೊದಲು ಕಂಡುಬರುತ್ತದೆ. ಮಮ್ಮುಟ್ಟಿಗಿಂತ ರಾಜ್ ಅವರನ್ನೇ ಈ ಸಿನೆಮಾ ಟ್ರೈಲರ್ನಲ್ಲಿ ಹೈಲಟ್ ಮಾಡಿದ್ದಾರೆ ಅನ್ನೋದು ಸತ್ಯ. ಒಂದು ರೀತಿ ಶ್ರೀಮಂತ ವಿಲನ್ ರೀತಿಯಲ್ಲಿಯೇ ರಾಜ್ ಬಿ ಶೆಟ್ಟಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿಗೂ ಕಣ್ಣಲ್ಲಿ ಕಣ್ಣಿಟ್ಟು ಡೈಲಾಗ್ ಕೂಡ ಹೊಡೆಯುತ್ತಾರೆ.
‘ಪುಲಿ ಮುರುಗನ್’ ಖ್ಯಾತಿಯ ವೈಶಾಖ್ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದು, ಮಿಧುನ್ ಮ್ಯಾನ್ಯಯೆಲ್ ಥಾಮಸ್ ಕಥೆ ಬರೆದಿದ್ದಾರೆ. ಈ ಸಿನೆಮಾದಲ್ಲಿ ತೆಲುಗು ನಟ ಸುನಿಲ್, ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಇನ್ನು ಸಿನೆಮಾ ಮೇ।23 ರಂದು ತೆರೆ ಕಾಣಲಿದ್ದು ಸಿನಿಪ್ರಿಯರು ಕಾತುರದಿಂದ ಕಾಯ್ತಾ ಇದ್ದಾರೆ.
FILM
ಬಿಗ್ಬಾಸ್ ಸಂಗೀತಾ ಶೃಂಗೇರಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್ ಮನೆಯಿಂದ ಆಚೆ ಬಂದ ಬಳಿಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಸದ್ಯ ಚಾರ್ಲಿ ನಟಿ ಸಂಗೀತಾ ಶೃಂಗೇರಿ ಬರ್ತ್ಡೇ ಸೆಲೆಬ್ರೇಷನ್ನಲ್ಲಿ ಭಾಗಿಯಾಗಿದ್ದಾರೆ. ಸಂಗೀತಾ ಶೃಂಗೇರಿ ಅವರ ಕುಟುಂಬ್ಥರು ಸಖತ್ ಬ್ಯುಟಿಫುಲ್ ಆಗಿರೋ ಸ್ಥಳದಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಇನ್ನು, ಚಾರ್ಲಿ ನಟಿಯ ಹುಟ್ಟು ಹಬ್ಬಕ್ಕೆ ಈ ಬಾರಿಯ ಬಿಗ್ಬಾಸ್ ಸ್ಫರ್ಧಿಗಳಾದ ವಿನಯ್ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ ಭಾಗಿಯಾಗಿದ್ದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರ್ತ್ಡೇ ಸೆಲೆಬ್ರೇಷನ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ನೀಲಿ ಬಣ್ಣ ಡೇಸ್ನಲ್ಲಿ ಸಖತ್ ಕ್ಯೂಟ್ ಆಗಿ ಮಿಂಚಿದ್ದಾರೆ.
ಇನ್ನು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂಗೀತಾ ಶೃಂಗೇರಿ ಅವರ ಫೋಟೋವನ್ನು ಶೇರ್ ಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಕಮೆಂಟ್ ಮಾಡುವ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಶೇರ್ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
LATEST NEWS
ನಡುರಸ್ತೆಯಲ್ಲೇ ಬ್ಲಾಸ್ಟ್ ಆದ ರಾಯಲ್ ಎನ್ಫೀಲ್ಡ್.! ಪೊಲೀಸ್ ಸೇರಿ 10 ಮಂದಿ ಗಂಭೀರ
ಹೈದರಾಬಾದ್/ಮಂಗಳೂರು: ರಾಯಲ್ ಎನ್ಫೀಲ್ಡ್ ಬೈಕ್ ರಸ್ತೆಯಲ್ಲೇ ಹೊತ್ತಿ ಉರಿದು ಬ್ಲಾಸ್ಟ್ ಆಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಬೈಕ್ಗೆ ಬೆಂಕಿ ತಗುಲಿದ್ದು ಅದನ್ನು ಆರಿಸಲು ಜನರು ಮುಂದಾದ ಜನರು ಗಂಭೀರ ಗಾಯಗೊಂಡಿದ್ದಾರೆ.
ಬೈಕ್ಗೆ ತಗುಲಿದ್ದ ಬೆಂಕಿಯನ್ನು ಅಲ್ಲಿ ನೆರೆದಿದ್ದ ಜನರು ಆರಿಸುವಲ್ಲಿ ತೊಡಗಿದ್ದರು. ನೀರು, ಮರಳು ಹಾಕಿ ಬೆಂಕಿ ಆರಿಸಲು ಕಸರತ್ತು ಮಾಡಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿ ಬ್ಲಾಸ್ಟ್ ಆಗಿದೆ. ಇದರಿಂದ ಪಕ್ಕದಲ್ಲಿದ್ದ ಬೇರೆ ಗಾಡಿಗಳಿಗೂ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿದೆ. ಘಟನೆಯಿಂದ ಅಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಹತ್ತು ಜನರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಸ್ಥಳೀಯ ಆಸ್ಒತ್ರೆಗೆ ದಾಖಲಿಸಲಾಗಿದೆ.
- DAKSHINA KANNADA7 days ago
ಕಾಮಿಡಿ ಕಿಲಾಡಿಗಳು ಸೀಸಲ್-7ರಲ್ಲಿ ಮಿಂಚಲಿದ್ದಾರೆ ಪುತ್ತೂರಿನ ಪ್ರತಿಭೆಗಳು .!!
- LATEST NEWS7 days ago
ಧಾರಾಕಾರವಾಗಿ ಸುರಿದ ಮೀನಿನ ಮಳೆ.. ಫಿಶ್ಗಳನ್ನ ಕ್ಯಾಚ್ ಹಿಡಿದ ಜನ!
- FILM7 days ago
ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ
- FILM4 days ago
“ನಿವೇದಿತಾಜೈನ್”ಗೆ ಸಾ*ವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?