Connect with us

    BIG BOSS

    ಇತಿಹಾಸದಲ್ಲೇ ಮೊದಲು.. ಬಿಗ್​ಬಾಸ್ ಕಂಟೆಸ್ಟಂಟ್ ಆಗಿ​ ಮನೆಗೆ ಎಂಟ್ರಿ ಕೊಟ್ಟ ಕತ್ತೆ; ಏನಿದರ ಗುಟ್ಟು?

    Published

    on

    ಈಗಂತೂ ಎಲ್ಲಾ ಭಾಷೆಯಗಳಲ್ಲಿ ಬಿಗ್​ಬಾಸ್​ನ​ದ್ದೇ ಹವಾ ಸೃಷ್ಟಿಯಾಗಿದೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕೆಲವೊಂದು ಭಾಷೆಯಲ್ಲಿ ಈಗಾಗಲೇ ಬಿಗ್​ಬಾಸ್​ ಸೀಸನ್​ ಮುಕ್ತಾಯಗೊಂಡಿದೆ. ಹೀಗೆ ಬಿಗ್​ಬಾಸ್​ ಕಾರ್ಯಕ್ರಮ ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿಕೊಂಡು ಮುನ್ನುಗ್ಗುತ್ತಿದೆ.

    ಈಗಾಗಲೇ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಇದರ ನಡುವೆ ನಿನ್ನೆ ಅಂದ್ರೆ ಭಾನುವಾರ ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಹೌದು, ಹಿಂದಿ ಬಿಗ್​ಬಾಸ್​ ಸೀಸನ್​ 18 ಶುರುವಾಗಿದೆ. ಆದರೆ ಬಿಗ್​ಬಾಸ್​ ಇತಿಹಾಸದ ಮೊಟ್ಟ ಮೊದಲ ಬಾರಿಗೆ ಸಾಕು ಪ್ರಾಣಿಯೊಂದನ್ನು ಮನೆಗೆ ಕಳುಹಿಸಲಾಗಿದೆ. ಒಟ್ಟು 19 ಕಂಟೆಸ್ಟೆಂಟ್​ಗಳ ಜೊತೆಗೆ ಒಂದು ಕತ್ತೆ ಕೂಡ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದೆ.

    ಸಲ್ಮಾನ್ ಖಾನ್ ನಡೆಸಿಕೊಡುತ್ತಿರೋ ಬಿಗ್​ಬಾಸ್​ ಸೀಸನ್​ 18 ಕಾರ್ಯಕ್ರಮದಲ್ಲಿ ಈ ಕತ್ತೆ ಎಂಟ್ರಿ ಕೊಟ್ಟಿದೆ. ವೇದಿಕೆಗೆ 19ನೇ ಸ್ಪರ್ಧಿಯಾಗಿ ಬಂದ ಕತ್ತೆಯನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ. ಬಿಗ್​ಬಾಸ್​ ಮನೆಗೆ ಬಂದ ‘ಗಧರಾಜ್’ ಕತ್ತೆಯನ್ನು ಕಂಡು ಮನೆ ಮಂದಿ ಫುಲ್​ ಶಾಕ್​ ಆಗಿದ್ದಾರೆ. ಸದ್ಯ ಹೊಸ ಪ್ರೋಮೋಗಳನ್ನು ನೋಡಿದ ವೀಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    BIG BOSS

    BBK 11: ಜಗದೀಶ್​ ಅಲ್ವಂತೆ! ಬಿಗ್​ ಬಾಸ್​ ಮನೆಯಲ್ಲಿ ಈ ವ್ಯಕ್ತಿ ತುಂಬಾ ಡೇಂಜರಸ್ ಎಂದ ನಟಿ ಯಮುನಾ!

    Published

    on

    ಬಿಗ್​ ಬಾಸ್​ ಕನ್ನಡ ಸೀಸನ್ 11 ಮೊದಲ ವಾರ ಪೂರ್ತಿಗೊಂಡು ಮುನ್ನುಗ್ಗುತ್ತಿದೆ. ಮೊದಲ ವಾರ ನಟಿ ಯಮುನಾ ಮನೆಯಿಂದ ಹೊರಬಂದಿದ್ದಾರೆ. ಹೊರ ಬಂದ ಬಳಿಕ ಬಿಗ್‌ಬಾಸ್ ಕುರಿತು ಮಾತನಾಡಿದ್ದಾರೆ. ಹಲವು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

    ಬಿಗ್​ ಬಾಸ್​ ಮನೆಯಲ್ಲಿ ತುಂಬಾ ಡೇಂಜರಸ್​ ವ್ಯಕ್ತಿಯ ಬಗ್ಗೆಯೂ ನಟಿ ಯಮುನಾ ಹೇಳಿದ್ದಾರೆ. ಲಾಯರ್​ ಜಗದೀಶ್​ಗಿಂತ ಉಗ್ರಂ ಮಂಜು ತುಂಬಾ ಡೇಂಜರಸ್​ ಎಂದು ಹೇಳಿದ್ದಾರೆ. ಸಿಕ್ಕಪಟ್ಟೆ ಮ್ಯಾನಿಪುಲೇಟ್​, ಎಲ್ಲರನ್ನು ತಮ್ಮತ್ತ ಸೆಳೆಯುವವರು. ಏನು ಹೇಳದೆ ಏನು ಮಾಡದೆ ಟ್ರಿಕ್​ ಮಾಡುವವರು ಎಂದು ಹೇಳಿದ್ದಾರೆ.

    ಸದ್ಯ ಮೊದಲ ವಾರವೇ ನಟಿ ಹೊರಬಂದಿದ್ದು, ಬಿಗ್​ ಮನೆಯ ಆಟಗಾರರ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ. ಅದರಲ್ಲೂ ಆಟವನ್ನು ಇನ್ನೂ ಪ್ರಾರಂಭಿಸದವರು ಮತ್ತು ಪ್ರಾರಂಭಿಸಿದವರ ಬಗ್ಗೆಯೂ ಹೇಳಿದ್ದಾರೆ. ಲಾಯರ್​ ಜಗದೀಶ್​​ ಮೊದಲ ದಿನದಿಂದಲೇ ಆಟ ಶುರು ಮಾಡಿದ್ದಾರೆಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಿಚ್ಚ ನಿರೂಪಣೆಗೆ ಬಿಗ್​ ಬಾಸ್​ ಮನೆಯಲ್ಲಿ ಒಂದು ವಾರ ಕಳೆದ ಅನುಭವವನ್ನು ನಟಿ ಯಮುನಾ ಬಿಚ್ಚಿಟ್ಟಿದ್ದಾರೆ.

    Continue Reading

    BIG BOSS

    ಇದೇ ಕಾರಣಕ್ಕೆ ಮೊದಲ ವಾರವೇ ಯಮುನಾ ಶ್ರೀ ನಿಧಿ ಬಿಗ್‌ಬಾಸ್ ಮನೆಯಿಂದ ಔಟ್ ಆದದ್ದು..!

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡು ಒಂದು ವಾರ ಕಳೆದಿದೆ. ಪ್ರತಿ ಸೀಸನ್​ನಂತೆ ಈ ಬಾರಿಯೂ ಕೂಡ ಬಿಗ್​ಬಾಸ್​ ಮನೆಯಿಂದ ಓರ್ವ ಸ್ಪರ್ಧಿ ಆಚೆ ಬಂದಿದ್ದಾರೆ. ಕನ್ನಡದ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಒಂದೇ ವಾರಕ್ಕೆ ಕನ್ನಡದ ನಟಿ ಯಮುನಾ ಶ್ರೀನಿಧಿ ಆಚೆ ಬಂದಿದ್ದಾರೆ.

    ಈ ವಾರದಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 9 ಮಂದಿ ನಾಮಿನೇಟ್​ ಆಗಿದ್ದರು. ಲಾಯರ್​ ಜಗದೀಶ್​, ಗೌತಮಿ ಜಾಧವ್​, ಹಂಸ, ಭವ್ಯಾ ಗೌಡ, ಯಮುನಾ, ಶಿಶಿರ್​, ಮಾನಸಾ, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ನಾಮಿನೇಟ್​ ಆಗಿದ್ದಾರೆ. ಇವರ ಪೈಕಿ ಶನಿವಾರದ ಎಪಿಸೋಡ್​ನಲ್ಲಿ ಭವ್ಯಾ ಗೌಡ, ಗೌತಮಿ ಜಾಧವ್​ ಹಾಗೂ ಮಾನಸ ಅವರನ್ನು ಸೇಫ್​ ಮಾಡಲಾಗಿತ್ತು. ಇನ್ನೂ ಉಳಿದಂತೆ ಉಗ್ರಂ ಮಂಜು, ಐಶ್ವರ್ಯ, ಧರ್ಮ ಕೀರ್ತಿರಾಜ್​, ಧನರಾಜ್​, ಅನುಷಾ ರೈ, ರಂಜಿತ್​, ಗೋಲ್ಡ್​ ಸುರೇಶ್​, ತ್ರೀವಿಕ್ರಂ ಸೇಫ್​ ಆಗಿದ್ದರು.

    ಇವರ ಪೈಕಿ ಮೊದಲ ವಾರವೇ ಬಿಗ್​ಬಾಸ್​ ಮನೆಯಿಂದ ಯಮುನ ಶ್ರೀ ನಿಧಿ ಔಟ್ ಆಗಿದ್ದಾರೆ. ಇವರು ಸರಿಯಾಗಿ ಟಾಸ್ಕ್‌ ಗಳನ್ನು ಆಡದ ಕಾರಣ ಹಾಗೂ ಇವರ ಅಭಿಮಾನಿಗಳು ಸರಿಯಾಗಿ ಓಟ್ ಹಾಕದ ಕಾರಣ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನುವ ಸಂಶಯ ಅಭಿಮಾನಿಗಳಲ್ಲಿ ಮೂಡಿದೆ. ಒಟ್ಟು 17 ಸ್ಪರ್ಧಿಗಳಿದ್ದ ದೊಡ್ಮನೆಯಲ್ಲಿ ಈಗ ಓರ್ವ ಸ್ಪರ್ಧಿಯನ್ನು ಆಚೆ ಕಳುಹಿಸಲಾಗಿದೆ. ಹೀಗೆ ಪ್ರತಿ ವಾರವು ಬಿಗ್​ಬಾಸ್​ ಮನೆಯಿಂದ ಒಬ್ಬರಾದ ಮೇಲೆ ಒಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಆಚೆ ಬರಲಿದ್ದಾರೆ.​

    Continue Reading

    BIG BOSS

    ಬರಿಗಾಲಲ್ಲೇ ಶೋ ನಡೆಸಿದ ಕಿಚ್ಚ.. ಕಾರಣ ಏನು ಗೊತ್ತಾ..?

    Published

    on

    ಬಿಗ್​​ಬಾಸ್​​ ಸೀಸನ್ 11 ಶುರುವಾಗಿ ಮೊದಲ ವಾರದ ಕಿಚ್ಚನ ಪಂಚಾಯ್ತಿನೂ ನಡೆದಿದೆ. ಸ್ವರ್ಗ, ನರಕ ಅನ್ನೋ ಹೊಸ ಕಾನ್ಸೆಪ್ಟ್​​ ಕೂಡ ಜನರಿಗೆ ಇಷ್ಟವಾಗ್ತಿದೆ. ಆದರೆ, ಈ ಸಲದ ಬಿಗ್​​​ಬಾಸ್​​ನ ಮೊದಲ ಕಿಚ್ಚನ ಪಂಚಾಯ್ತಿ ಫುಲ್ ಡಿಫರೆಂಟಾಗಿದೆ. ಎಷ್ಟೋ ಅಭಿಮಾನಿಗಳ ತಲೆಗೆ ಹುಳವನ್ನೂ ಬಿಟ್ಟಿದೆ. ಅಚ್ಚರಿಯೂ ಎದುರಾಗಿದೆ. ಕಾರಣ ಸ್ಟೈಲ್​​ಗೆ ಹೆಚ್ಚು ಪ್ರಾಮುಖ್ಯತೆ ಕೊಡೋ ಸುದೀಪ್ ಕಾಶಿ ಫ್ರಮ್ ವಿಲೇಜ್ ಸಿನಿಮಾ ಪಾತ್ರಧಾರಿಯಂತೆ ಹೋಮ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಿಂತಲೂ ಅಚ್ಚರಿ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದು.

    ಬೂದು ಬಣ್ಣದ ಡ್ರೆಸ್​​ಗೂ ಬರಿಗಾಲಿಗೂ ದಸರಾಗೂ ನಂಟಿದೆಯೇ?

    ನವರಾತ್ರಿಯ ಮೂರನೇ ದಿನ ಅಂದ್ರೆ ಶನಿವಾರ ತಾಯಿ ದುರ್ಗೆಯನ್ನ ಚಂದ್ರಘಂಟಾ ಹೆಸರಿನಲ್ಲಿ ಪೂಜಿಸಲಾಗುತ್ತದೆ. ತದಿಗೆಯ ದಿನ ಬರುವ ಈ ತಾಯಿಗೆ ಬೂದು ಬಣ್ಣ ಅಂದ್ರೆ ಅಚ್ಚು ಮೆಚ್ಚು. ಅದೇ ರೀತಿ ಕಿಚ್ಚ ಸುದೀಪ್ ಸಹ ಬೂದು ಬಣ್ಣದ ಸಾಂಪ್ರದಾಯಿಕ ಡ್ರೆಸ್​​ನಲ್ಲಿ ಕಾಣಿಸಿಕೊಂಡ್ರು. ಇದಕ್ಕೆ ಪೂರಕ ಎನ್ನುವಂತೆ ಬರಿಗಾಲಿನಲ್ಲಿ ಬಿಗ್​​ಬಾಸ್​​ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ಹಾಗಾಗಿಯೇ ನವರಾತ್ರಿಯ ಸಂದರ್ಭದಲ್ಲಿ ಸುದೀಪ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಅದೇನಂದ್ರೆ ಸುದೀಪ್ ಕಠಿಣ ವ್ರತಾಚರಣೆಯಲ್ಲಿದ್ದಾರೆ ಎಂಬ ಮಹತ್ವದ ಖಚಿತ ಮಾಹಿತಿ ಲಭ್ಯವಾಗಿದೆ.

    ಸೂಪರ್​​ ಸಂಡೇ ಶೋನಲ್ಲೂ ಕೇಸರಿ ಬಣ್ಣದ ಡ್ರೆಸ್!

    ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ರೂಪದಲ್ಲಿ ತಾಯಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ಈ ತಾಯಿಯನ್ನು ಕೇಸರಿ/ಕಿತ್ತಳೆ ಬಣ್ಣದ ವಸ್ತು, ಪದಾರ್ಥಗಳಿಂದ ಪೂಜಿಸುತ್ತಾರೆ. ಕೂಷ್ಮಾಂಡ ದೇವಿಗೆ ಕೇಸರಿ ಬಣ್ಣ ಅಚ್ಚುಮೆಚ್ಚು. ಹಾಗಾಗಿಯೇ ಸುದೀಪ್ ಸೂಪರ್ ಸಂಡೇ ಶೋವನ್ನು ಕಿಚ್ಚ ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಿ ಮಾಡಿದ್ದಾರೆ. ಅಲ್ಲದೇ ಕಠಿಣ ವ್ರತವನ್ನು ಆಚರಿಸುತ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿದೆ.

    ಸುದೀಪ್ ವ್ರತ ಹೇಗಿರಲಿದೆ? ಕಿಚ್ಚ ಎಷ್ಟು ಕಟ್ಟುನಿಟ್ಟು ಇರ್ತಾರೆ ಗೊತ್ತಾ?

    ಕೋಪ ಮಾಡಿಕೊಳ್ಳುವಂತಿಲ್ಲ, ಜೋರಾಗಿ ಮಾತಾಡುವಂತಿಲ್ಲ!

    ಸುದೀಪ್ ಆರೋಗ್ಯದ ಗುಟ್ಟು ಏನು ಅನ್ನೋದನ್ನ ಅಭಿಮಾನಿಗಳು ಪದೇ ಪದೇ ಕೇಳೋ ಪ್ರಶ್ನೆ. ಅಸಲಿಗೆ ನವರಾತ್ರಿ ವ್ರತಾಚರಣೆ ಕೂಡ ಕಿಚ್ಚನ ಆರೋಗ್ಯದ ಗುಟ್ಟಿನ ಒಂದು ಭಾಗವೆಂದೇ ಹೇಳಲಾಗುತ್ತಿದೆ. ಯಾಕಂದ್ರೆ, ಕಳದೆ ನಾಲ್ಕು ವರ್ಷಗಳಿಂದಲೂ ಸುದೀಪ್ ನವರಾತ್ರಿಗಳಲ್ಲಿ ಕಟ್ಟುನಿಟ್ಟಿನ ವ್ರತವನ್ನು ಆಚರಿಸುತ್ತಾ ಬಂದಿದ್ದಾರೆ. ಈ ವಿಷಯಕ್ಕೆ ಬಂದರೆ ಸುದೀಪ್ ಬರಿಗಾಲಿನಲ್ಲಿ ಬಂದಿದ್ದೂ ಸಹ ವ್ರತಾಚಾರಣೆಯ ಒಂದು ಭಾಗವೇ ಆಗಿದೆ. ವಾರದ ಕಥೆ ಕಿಚ್ಚನ ಜೊತೆ ಶೋನಲ್ಲಿ ಸುದೀಪ್ ಅತ್ಯಂತ ಸಂಯಮದಿಂದ ನಗುಮುಖದಲ್ಲೇ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಸಹ ವ್ರತದ ಒಂದು ಬಹುಮುಖ್ಯ ನಿಯಮವಾಗಿದೆ. ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಕೋಪ ಮಾಡಿಕೊಳ್ಳುವಂತಿಲ್ಲ. ಜೋರಾಗಿ ಮಾತಾಡುವಂತಿಲ್ಲ. ಗಟ್ಟಿಯಾಗಿ, ಕೆಟ್ಟದಾಗಿ ಶಬ್ಧಗಳನ್ನು ಬಳಸುವಂತೆಯೂ ಇಲ್ಲ. ಇದೆಲ್ಲಾ ಅಂಶಗಳು ಕಿಚ್ಚಿನ ಪಂಚಾಯ್ತಿ ಹಾಗೂ ಸೂಪರ್​ ಸಂಡೇಯಲ್ಲಿ ಕಾಣಿಸಿತ್ತು.

    ವ್ರತಾಚರಣೆಯ 9 ದಿನಗಳ ಕಾಲ ಚಾಪೆಯ ಮೇಲಷ್ಟೇ ನಿದ್ರೆ!

    ನವರಾತ್ರಿ ವ್ರತಾಚರಣೆಯ ಬಹುಮುಖ್ಯ ನಿಯಮವಿದು. ಸಾಧ್ಯವಾದಷ್ಟು ನೆಲದ ಮೇಲೆ ಮಲಗಬೇಕು ಅನ್ನೋ ವಿಧಿ ಇದೆ. ಆದರೆ ವಯಸ್ಸು ಹಾಗೂ ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ನೆಲದ ಬದಲಿಗೆ ಚಾಪೆಯ ಮೇಲೆ ಮಲಗಬಹುದು. ಹಾಗಾಗಿಯೇ ಕಿಚ್ಚ ನವರಾತ್ರಿ ವ್ರತಾಚರಣೆಯ ಸಂದರ್ಭ ಒಂಬತ್ತು ದಿನಗಳ ಕಾಲ ಚಾಪೆಯ ಮೇಲೆಯೇ ನಿದ್ದೆ ಮಾಡಲಿದ್ದಾರೆ.

    ಈ ಸಲದ ಬಿಗ್​​ಬಾಸ್​​ನ ಮೊದಲ ವಾರದ ಕಥೆ ಕಿಚ್ಚನ ಜೊತೆ ಶೋನಲ್ಲೂ ಸುದೀಪ್ ಪಾನೀಯವನ್ನು ಸೇವಿಸಿದ್ದು ಕಾಣಬಹುದು. ಆದರೇ, ಸುದೀಪ್ ಎಷ್ಟರಮಟ್ಟಿಗೆ ಕಟ್ಟುನಿಟ್ಟಿನ ವ್ರತ ಆಚರಿಸುತ್ತಿದ್ದಾರೆ ಅನ್ನೋದಕ್ಕೆ ಬರೀಗಾಲಿನ ನಡಿಗೆ, ಬೂದು, ಕೇಸರಿ ಬಣ್ಣದ ಉಡುಗೆ ತೊಡುಗೆ, ಮಾತು, ರೀತಿ, ನೀತಿ, ಸೇವಿಸಿದ ಪಾನೀಯ ಎಲ್ಲವೂ ಸಹ ಸಾಕ್ಷಿ ನುಡಿಯುತ್ತಿವೆ. ಅಸಲಿಗೆ ಕಿಚ್ಚ ನವ ಶಕ್ತಿ ವ್ರತವನ್ನು ಆಚರಿಸುತ್ತಿರೋದೇಕೆ ಗೊತ್ತಾ? ಈ ವ್ರತಾಚರಣೆಯ ಹಿಂದಿನ ಹೆಬ್ಬಯಕೆ ಇದೀಗ ಅಭಿಮಾನಿಗಳಲ್ಲಿ ಹೊಸದೊಂದು ಕೌತುಕವನ್ನೇ ಹುಟ್ಟು ಹಾಕಿದೆ.

     

    Continue Reading

    LATEST NEWS

    Trending