DAKSHINA KANNADA
ಕ್ರಿಮಿನಲ್ಗಳೇ ಇನ್ಮುಂದೆ ಬಾಲ ಬಿಚ್ಚಿದ್ರೇ ಹುಶಾರ್ – ಕಮಿಷನರ್ ಖಡಕ್ ವಾರ್ನಿಂಗ್..!
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ನೇತೃತ್ವದಲ್ಲಿ ಇಂದು ಕ್ರಿಮಿನಲ್ಗಳ ಪರೇಡ್ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.
ಹಳೇ ರೌಡಿಶೀಟರ್ಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು, ಹತ್ತು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡವರನ್ನು ಕರೆಸಿ ಅವರ ಪೂರ್ವಾಪರಗಳನ್ನು ಪೊಲೀಸ್ ಕಮಿಷನರ್ ವಿಚಾರಿಸಿದರು. ಈ ಸಂದರ್ಭದಲ್ಲಿ ಕ್ರಿಮಿನಲ್ ಗಳಿಗೆ ಎಚ್ಚರಿಕೆ ನೀಡಿದ ಅವರು, ಇನ್ನು ಮುಂದೆ ಕಾನೂನು ಉಲ್ಲಂಘನೆ ಮಾಡಿದರೆ, ಅವರ ಬಾಂಡ್ ರದ್ದುಮಾಡಿ ಆಸ್ತಿ ಮತ್ತು ಹಣವನ್ನು ಮುಟ್ಟುಗೋಲು ಹಾಕುವುದಾಗಿ ಎಚ್ಚರಿಸಿದರು.
ಈಗಾಗಲೇ ಹಲವು ಕ್ರಿಮಿನಲ್ಗಳ ಬಗ್ಗೆ ಈ ರೀತಿ ಮಾಡಿದ್ದರೂ , ಇನ್ನು ಹಲವು ಮಂದಿ ಸರಿಯಾಗಿಲ್ಲ. ಅಂಥವರನ್ನು ಗಡೀಪಾರು ಮಾಡುತ್ತೇವೆ. ಕ್ರಿಮಿನಲ್ ಗಳು ತಮ್ಮ ಕೆಟ್ಟ ನಡತೆಯನ್ನು ಸರಿಪಡಿಸಿಕೊಳ್ಳಬೇಕು. ಈಗ ಸುಮಾರು 10 ಮಂದಿಯನ್ನು ಗಡೀಪಾರು ಮಾಡುವ ಸಿದ್ಧತೆ ನಡೆಯುತ್ತಿದೆ. ಅದರ ದಾಖಲೆ ಪತ್ರಗಳನ್ನು ಹಾಜರುಪಡಿಸಲು ಇನ್ಸ್ಪೆಕ್ಟರ್ಗಳಿಗೆ ಸೂಚಿಸಲಾಗಿದೆ. ಇದು ನಿಮಗೆಲ್ಲರಿಗೂ ಕೊಡುವ ಎಚ್ಚರಿಕೆ ಎಂದು ಕ್ರಿಮಿನಲ್ಗಳಿಗೆ ವಾರ್ನಿಂಗ್ ನೀಡಿದರು.
ಹಬ್ಬದ ದಿನಗಳು ಬರುತ್ತಿದ್ದು, ಈ ಸಂದರ್ಭದಲ್ಲಿ ಯಾರೂ ಕೂಡಾ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಬಾರದು. ನ್ಯಾಯಾಲಯಕ್ಕೆ ಹಾಜರಾಗದೇ ಇರುವ ಹಲವು ಕ್ರಿಮಿನಲ್ಗಳು ಇದ್ದಾರೆ. ಅವರು ತಪ್ಪದೇ ಹಾಜರಾಗಬೇಕು. ನ್ಯಾಯಾಲಯದ ಕಲಾಪಗಳನ್ನು ನಾವು ಪರಿಶೀಲನೆ ಮಾಡುತ್ತೇವೆ ಎಂದರು. ಇದು ನಾನು ನಡೆಸುವ ಮೊದಲ ಪರೇಡ್ ಆಗಿದ್ದು, ನಿರಂತರವಾಗಿ ಇಂತಹ ಪರೇಡ್ ನಡೆಸಲಾಗುವುದು ಎಂದರು. ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
BANTWAL
ಉಳಾಯಿಬೆಟ್ಟು ದರೋಡೆ ಪ್ರಕರಣ : 10 ಜನರ ಬಂಧನ
ಜೂನ್ 21 ರಂದು ಉಳಾಯಿಬೆಟ್ಟಿನ ಪೆರ್ಮಂಕಿಯ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣದ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 7.45 ರ ಸುಮಾರಿಗೆ ಮುಸುಕುಧಾರಿ ವ್ಯಕ್ತಿಗಳು ಪದ್ಮನಾಭ ಕೋಟ್ಯಾನ್ ಅವರಿಗೆ ಚೂರಿಯಿಂದ ಹಲ್ಲೆ ಮಾಡಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.
ಗುತ್ತಿಗೆದಾರ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆಗೆ ನುಗ್ಗಿದ್ದ ದರೋಡೆಕೋರರು ಇಲ್ಲಿ ಅಪಾರ ಪ್ರಮಾಣದ ಹಣ ಹಾಗೂ ನಗದು ಅಡಗಿಸಿ ಇಡಲಾಗಿದೆ ಎಂಬ ಹಿನ್ನೆಲೆಯಲ್ಲಿ ದರೋಡೆ ನಡೆಸಿದ್ದಾರೆ. ದರೋಡೆ ನಡೆದ ಬಳಿಕ ಮನೆಯ ಸಿಸಿ ಟಿವಿ ಪರಿಶೀಲಿಸಿದ ಪೊಲೀಸರಿಗೆ ಇದು ಉದ್ಯಮಿಯ ಪರಿಚಯದವರದೇ ಕೃತ್ಯ ಎಂಬುವುದು ಕೂಡಾ ಅರ್ಥವಾಗಿದೆ. ಹೀಗಾಗಿ ಮೊದಲಿಗೆ ಉದ್ಯಮಿಯ ಜೊತೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನೀರುಮಾರ್ಗದ ವಸಂತ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ. ಅರೋಪಿ ವಸಂತ ಜೊತೆಯಲ್ಲಿ ನೀರುಮಾರ್ಗದ ಇನ್ನೋರ್ವ ಆರೋಪಿ ರಮೇಶ್ ಪೂಜಾರಿ ಹಾಗೂ ಅಡ್ಯನಡ್ಕದ ರೇಮಂಡ್ ಡಿಸೋಜಾ ಎಂಬವರು ಮಾಹಿತಿದಾರರಾಗಿ ಕೆಲಸ ಮಾಡಿದ್ದಾರೆ. ಇವರ ಜೊತೆ ಕಾಸರಗೋಡು ಜಿಲ್ಲೆಯ ಉಪ್ಪಳದ ಬಾಲಕೃಷ್ಣ ಶೆಟ್ಟಿ ಕೂಡಾ ಕೈ ಜೋಡಿಸಿ ಕೇರಳದ ದರೋಡೆ ತಂಡಕ್ಕೆ ಮಾಹಿತಿ ರವಾನಿಸಿದ್ದಾನೆ.
ಈ ನಾಲ್ಕು ಆರೋಪಿಗಳು ನೀಡಿದ ಮಾಹಿತಿ ಪ್ರಕಾರ, ಕೇರಳದ ಬಿಜು ಹಾಗೂ ಸತೀಶ್ ಬಾಬು ಎಂಬ ಕ್ರಿಮಿನಲ್ ಗಳು ತಮ್ಮ ಎರಡು ತಂಡದ ಸದಸ್ಯರನ್ನು ದರೋಡೆ ನಡೆಸಲು ಮಂಗಳೂರಿಗೆ ಕಳುಹಿಸಿದ್ದಾರೆ. ಈ ದರೋಡೆಯ ಸಂಚಿನಲ್ಲಿ ಒಟ್ಟು ಹದಿನೈದು ಜನರು ಭಾಗಿಯಾಗಿದ್ದು, ಸದ್ಯ ಹತ್ತು ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಜಾಕಿರ್, ವಿನೋಜ್ ಪಿಕೆ, ಸಜೀಶ್, ಶಿಜೋ ದೇವಸ್ಸಿ, ಸತೀಶ್ ಬಾಬು, ಬಿಜು ಕೇರಳದವರಾಗಿದ್ದರೆ, ಉಳಿದ ನಾಲ್ವರೂ ಕರ್ನಾಟಕದವರಾಗಿದ್ದಾರೆ.
ಉದ್ಯಮಿ ಮನೆಯಲ್ಲಿ ಕೋಟ್ಯಂತರ ರೂಪಾಯಿಯ ಚಿನ್ನ ಹಾಗೂ ನಗದು ಇದೆ ಎಂದು ಈ ದರೋಡೆಗೆ ಸಂಚು ರೂಪಿಸಲಾಗಿತ್ತು. ದರೋಡೆ ನಡೆಸಿದ ಆರೋಪಿಗಳು ಬಚ್ಚಿಟ್ಟ ಚಿನ್ನಾಭರಣ ನೀಡುವಂತೆ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರಿಗೆ ಚಾಕುವಿನಿಂದ ಹಲ್ಲೆ ಕೂಡಾ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಹಾಗೂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು
DAKSHINA KANNADA
ಈ ಗಿಡ ನಿಮ್ಮ ಮನೆಯಲ್ಲಿದ್ದರೆ, ಜೇಬು ಫುಲ್ ಖಾಲಿ ಖಾಲಿ..!
ಕಳ್ಳಿ ಗಿಡ ಮುಳ್ಳುಗಳಿಂದ ಕೂಡಿದ್ದರೂ, ಬಹಳ ಆಕರ್ಷಕ ಮತ್ತು ಸುಂದರವಾಗಿರುತ್ತದೆ. ಹಾಗಾಗಿ ಜನರು ಮನೆಯಲ್ಲಿ ಕಳ್ಳಿ ಗಿಡ ಇಡಲು ಬಯಸುತ್ತಾರೆ. ಆದರೆ ಮನೆಯಲ್ಲಿ ಕಳ್ಳಿ ಗಿಡ ನೆಡುವುದು ಶುಭವಲ್ಲ. ಈ ಸಸ್ಯವನ್ನು ಎಂದಿಗೂ ಮಲಗುವ ಕೋಣೆ ಅಥವಾ ಪೂಜಾ ಕೋಣೆಯಲ್ಲಿ ಇಡಬಾರದು. ಮನೆಯಲ್ಲಿ ಕಳ್ಳಿ ಗಿಡಗಳನ್ನು ಹೆಚ್ಚು ನೆಡಬೇಡಿ. ಒಣಗಿದ ಕಳ್ಳಿ ಗಿಡವನ್ನು ಸಹ ಮನೆಯಲ್ಲಿ ಇಡಬಾರದು. ಕಳ್ಳಿ ಗಿಡವನ್ನು ಮನೆಯಲ್ಲಿ ಏಕೆ ನೆಡಬಾರದು ಎಂಬುದನ್ನು ತಿಳಿಯೋಣ.
ನಕಾರಾತ್ಮಕ ಶಕ್ತಿ
ಕಳ್ಳಿ ಗಿಡಗಳಲ್ಲಿನ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಮುಳ್ಳುಗಳನ್ನು ಅಡೆತಡೆ ಮತ್ತು ಸಂಘರ್ಷಗಳ ಪ್ರತೀಕವೆಂದು ಹೇಳಲಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಅಶಾಂತಿ ಮತ್ತು ಜಗಳ ಉಂಟಾಗುವ ಸಾಧ್ಯತೆಯಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು
ಮನೆಯಲ್ಲಿ ಕಳ್ಳಿ ಗಿಡಗಳನ್ನು ಇಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಳ್ಳಿ ಗಿಡದಲ್ಲಿನ ಮುಳ್ಳನ್ನು ಮುಟ್ಟುವುದರಿಂದ ಗಾಯವಾಗುವುದರ ಜೊತೆಗೆ ತಲೆನೋವು, ಆಯಾಸ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಸಂಬಂಧಗಳಲ್ಲಿ ಒತ್ತಡ
ಈ ಗಿಡದಿಂದ ಸಂಬಂಧಗಳಲ್ಲಿ ಒತ್ತಡ ಮತ್ತು ಮನಸ್ತಾಪ ಉಂಟಾಗಬಹುದು. ಮುಳ್ಳುಗಳನ್ನು ಕೋಪದ ಸಂಕೇತವೆಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಸದಸ್ಯರ ನಡುವೆ ಉದ್ವಿಗ್ನತೆ ಸೃಷ್ಟಿಯಾಗುತ್ತದೆ.
ಆರ್ಥಿಕ ಸಮಸ್ಯೆ
ಮನೆಯಲ್ಲಿ ಕಳ್ಳಿ ಗಿಡವನ್ನು ನೆಡುವುದರಿಂದ ಆರ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಮುಳ್ಳುಗಳನ್ನು ಅಡೆತಡೆಗಳ ಸಂಕೇತವೆಂದು ಹೇಳಲಾಗುತ್ತದೆ. ಇದರಿಂದಾಗಿ ನಿಮಗೆ ಧನ ಲಾಭವಾಗದೇ ಇರಬಹುದು. ಹಾಗಾಗಿ ನೀವು ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು.
DAKSHINA KANNADA
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಪ್ಪಿನಂಗಡಿ ಶಾಖೆ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಉಪ್ಪಿನಂಗಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ, ಜೆಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪಿನಂಗಡಿ, ಜೆಸಿಐ ಉಪ್ಪಿನಂಗಡಿ ಇವರ ಸಹಯೋಗದೊಂದಿಗೆ ಹಲಸು ಹಬ್ಬ – 2024 ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಜುಲೈ 7 ರಂದು ರವಿವಾರ ಬೆಳಗ್ಗೆ ಸಮಯ 9.30 ರಿಂದ ಅಪರಾಹ್ನ 2 ಗಂಟೆಯ ವರೆಗೆ ಉಪ್ಪಿನಂಗಡಿ ಎಚ್. ಎಮ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಈ ವೈದ್ಯಕೀಯ ಶಿಬಿರದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆ ನಾಟೆಕಲ್ ದೇರಳಕಟ್ಟೆ ಇವರ ನುರಿತ ವೈದರ ತಂಡದವರಿಂದ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ಮಧುಮೇಹ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ , ಕೀಲು ಮತ್ತು ಗಂಟು ನೋವು ತಪಾಸಣೆ, ಮೂಲವ್ಯಾಧಿ ತಪಾಸಣೆ, ಸ್ತ್ರೀ ಮತ್ತು ಪ್ರಸೂತಿ ತಪಾಸಣೆ, ಉಚಿತ ಔಷಧಿ ವಿತರಣೆ, ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ಹಾಗೂ ಇತರ ವೈದ್ಯಕೀಯ ಸೌಲಭ್ಯವಿರಲಿದೆ.
ಇದನ್ನೂ ಓದಿ : ಅತಿಯಾದ ಕೆಲಸದ ಒತ್ತಡ..! ರೋಬೋಟ್ ಸೂಸೈ*ಡ್..?
ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
- DAKSHINA KANNADA7 days ago
ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು
- FILM1 day ago
‘ಪೆಂಡ್ರೈವ್’ನಲ್ಲಿ ಬಿಗ್ಬಾಸ್ ತನಿಷಾ ಕುಪ್ಪಂಡ..!
- DAKSHINA KANNADA5 days ago
ಶಿರಾಡಿಘಾಟ್ ನಲ್ಲಿ ಸರಣಿ ಅಪಘಾ*ತ; ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿ*ಕ್ಕಿ
- DAKSHINA KANNADA5 days ago
ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!