Connect with us

DAKSHINA KANNADA

ಕೊರೊನಾ ಲಾಕ್ ಡೌನ್ ನಿಂದ ಸೈಬರ್ ಕಳ್ಳರಿಗೆ ಸುಗ್ಗಿಯೇ ಸುಗ್ಗಿ..! ಸ್ವಲ್ಪ ಯಾಮಾರಿದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ..!

Published

on

ಮಂಗಳೂರು :  ಸಿಮ್‌ ಕಾರ್ಡ್ ಅಪ್‌ಡೇಟ್, ಬ್ಯಾಂಕ್‌ ಖಾತೆ ಅಪ್‌ಡೇಟ್‌.. ಹೀಗೆ ಹಲವು ಉದ್ದೇಶವಿಟ್ಟುಕೊಂಡು ಬರುವ ಸಂದೇಶಗಳನ್ನು ನಂಬಬೇಡಿ.

ಪ್ರತಿಕ್ರಿಯಿಸಲೂ ಹೋಗ ಬೇಡಿ. ಸಿಮ್‌ ಕಾರ್ಡ್‌ ಅಪ್‌ಡೇಟ್ ಸಂದೇಶ ಬಂದರೆ, ಮೊಬೈಲ್ ಸೇವಾ ಕಂಪನಿಗಳ ಅಧಿಕೃತ ಪ್ರತಿನಿಧಿಗಳನ್ನು ಸಂಪರ್ಕಿಸಿ. ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡ್ಲೇ ಬೇಡಿ. ನಾವು ಸ್ವಲ್ಪ ಯಾಮಾರಿದರೆ ನಮ್ಮ ಬ್ಯಾಂಕ್ ಅಕೌಂಟ್ ಗೆ ಕ್ಷಣ ಮಾತ್ರದಲ್ಲಿ ಖಾಲಿ..

ಮಹಾಮಾರಿ ಕೊರೊನಾ ಜಾತಿ- ಧರ್ಮ, ಮೇಲು – ಕೀಳು, ಬಡವ- ಶ್ರೀಮಂತ ಎಂಬ ಭೇದಬಾವವಿಲ್ಲದೇ ಇಡಿ ವಿಶ್ವವನ್ನೇ ತಲ್ಲಣಗೊಳಿಸಿದೆ.. ಜಗತ್ತು ಈ ಹಿಂದೆಂದೂ ಕಾಣದ ಭೀಕರ ವೈರಸ್ ಸೂಕ್ಷ್ಮಾಣುವಿನ  ಹಿಡಿತಕ್ಕೆ ಮನು ಕುಲ  ನಲುಗಿ ಹೋಗಿದೆ.  ಜೀವ ಉಳಿದರೆ ಸಾಕು ಅಂತ  ಜನತೆ, ಸರ್ಕಾರಗಳು,  ವೈದ್ಯರು ಕೊರೊನಾದ ವಿರುದ್ದ ಹೋರಾಟ ಮಾಡುತ್ತಿದ್ದಾರೆ.  ಕೊರೊನಾದಿಂದ ಜನ ಹೆಚ್ಚಾಗಿ ಆನ್‌ಲೈನ್‌ ವ್ಯವಹಾರಗಳಿಗೆ ತೆರೆದುಕೊಳ್ಳಬೇಕಾದ ಅನಿವಾರ್ಯತೆಯ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಜನರನ್ನು ದೋಚುತಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಲಕ್ಷಾಂತರ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿರುವುದು ಸೈಬರ್‌ ಖದೀಮರಿಗೆ ಸುಗ್ಗಿಯಾಗಿಬಿಟ್ಟಿದೆ.

ರಾಜ್ಯಲ್ಲಿ ಪ್ರತಿದಿನ  ಸೈಬರ್ ಕ್ರೈಮ್ ನ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ವಿವಿಧ ರೂಪಗಳಲ್ಲಿ ಬರುವ ಈ ಸೈಬರ್ ಕಳ್ಳರು  ಜನತೆಯ ಬ್ಯಾಂಕ್ ಅಕೌಂಟ್ ಗಳಿಗೆ ಕನ್ನ ಹಾಕಿ ಕೋಟ್ಯಾಂತರ ರೂಪಾಯಿಗಳನ್ನು ದೋಚುತ್ತಿದ್ದಾರೆ. ಮನೆಯಿಂದ ಮೊಬೈಲ್‌, ಕಂಪ್ಯೂಟರ್‌ ಮೂಲಕ  ಕೆಲಸ ಮಾಡುತ್ತಿರುವ  ಬಹುತೇಕರಿಗೆ  ಸೈಬರ್‌ ಭದ್ರತೆಯ ಅರಿವು ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.   ಇದನ್ನೇ ಬಂಡವಾಳ ಮಾಡಿಕೊಂಡು ಹ್ಯಾಕರ್‌ಗಳು ವಂಚನೆಯ ಜಾಲ ಬೀಸಿ ಜನಸಾಮನ್ಯರಿಂದ ಹಿಡಿದು ಶ್ರೀಮಂತರ ವರೆಗೂ ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿಗಳನ್ನು ಹಾಡು ಹಗಲೇ ಸದ್ದಿಲ್ಲದೇ ದೋಚುತ್ತಿದ್ದಾರೆ.  ಕಾರು ಬಹುಮಾನ ಬಂದಿದೆ,ಪಿಎಂ ಕೊರೊನಾ ರಿಲೀಫ್‌ ಫಂಡ್‌ ಇದೆ,  ಪಿಎಂ ಕೇರ್ಸ್  ಫಂಡ್‌ಗೆ ನೆರವು ನೀಡಿ, ಲಾಕ್‌ಡೌನ್‌ನಿಂದ ತೀರಾ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿ ಅನ್ನವಂತಹ ಪ್ರಕಟಣೆಗಳು.. ಹೀಗೇ ಅಮಾಯಕ ಜನರನ್ನು ವಂಚಿಸಲು ಹ್ಯಾಕರ್‌ಗಳು ಹತ್ತಾರು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ತಮ್ಮ ಮೊಬೈಲಿಗೆ ಬಂದ ಸಂದೇಶದ ಲಿಂಕನ್ನು ಅಮಾಯಕರು ಏನೋ ಆಸೆಯಿಂದ ತೆರೆದಾಗ ತಮಗೆ ಗೊತ್ತಿಲ್ಲದೇ ಸೈಬರ್ ಖದೀಮರ ಖೆಡ್ಡಕ್ಕೆ ಬಿದ್ದು ವಂಚನೆ ಗೊಳಗಾಗಿ ಕ್ಷಣಾರ್ಧದಲ್ಲಿ  ಎಲ್ಲವನ್ನು ಕಳಕೊಳ್ಳುತ್ತಿದ್ದಾರೆ.

ಈ ಹಿಂದೆ ಸೈಬರ್ ಕಳ್ಳರು  ಸಿವಿವಿ-ಒಟಿಪಿ ನಂಬರ್‌ಗಳಿಗಾಗಿ ಮಾತ್ರ ಕರೆ ಮಾಡಿ ಖಾತೆಗಳಿಗೆ ಕನ್ನ ಹಾಕುತ್ತಿದ್ದರು.  ಬಳಿಕ ಎಟಿಎಂ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಡಾಟಾ ಕದ್ದು ಹಣ ಲಪಟಾಯಿಸುತ್ತಿದ್ದರು. ಓಎಲ್ ಎಕ್ಸ್ ನಲ್ಲಿ ಯಾರದ್ದೋ ಕಾರು- ಬೈಕಿನ ಫೋಟೋ ಹಾಕಿ ಮಾರಾಟಕ್ಕಿದೆ ಎಂದು ಹೇಳಿ ಹಣ ಲಪಟಾಯಿಸುತ್ತಿದ್ದರು. ಭರ್ಜರಿ ಬಹುಮಾನ ಬಂದಿದೆ ಎಂದು ಹೇಳಿ ಟ್ಯಾಕ್ಸ್‌ ಕಟ್ಟಿದರೆ ಸಾಕು ಎಂದು ಹಣ  ಕಬಳಿಸುತ್ತಿದ್ದರು.. ಆದ್ರೆ ಇದೀಗ ಅವರು ತಮ್ಮ ವರಸೆ ಬದಲಾಯಿಸಿದ್ದಾರೆ. ಕೊರೊನಾದಿಂದ ಮನೆಯಲ್ಲೇ ಕೂತು ಬೋರಾಗಿರುವ ಮಂದಿಗೆ ಅಶ್ಲೀಲ, ಪೋರ್ನ್ ಸೈಟ್ ನ ಲಿಂಕ್ ಕಳಿಸಿ ಆ ಮೂಲk ಅಮೀಷ ತೋರಿಸಿ ಜನರನ್ನು ಕ್ಷಣ ಮಾತ್ರದಲ್ಲಿ ಲೂಟಿ ಮಾಡುತ್ತಿದ್ದಾರೆ.  ‘ನಿಮ್ಮ ಸಿಮ್‌ ಕಾರ್ಡ್  ಅವಧಿ ಮುಗಿದಿದ್ದು, 24 ಗಂಟೆಯಲ್ಲಿ ನಿಷ್ಕ್ರಿಯವಾಗಲಿದೆ. ಇದನ್ನು ತಪ್ಪಿಸಲು 10 ರೂಪಾಯಿ ರೀಚಾರ್ಜ್ ಮಾಡಿಸಿ’ ಎಂಬ ಸಂದೇಶ ಕಳುಹಿಸಿ ಲೂಟಿ ಮೂಡುತ್ತಿದ್ದಾರೆ. ಬಿಎಸ್‌ಎನ್‌ಲ್, ಏರ್‌ಟೆಲ್, ಜಿಯೊ ಸೇರಿದಂತೆ ವಿವಿಧ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲೇ ಇಂಥ ಸಂದೇಶಗಳು ಹಲವರ ಮೊಬೈಲ್‌ಗಳಿಗೆ ಬರುತ್ತಿವೆ.  ಇದು ನಿಜವಿರಬಹುದೆಂದು ನಂಬಿ ಹಲವರು ಹಣ ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್ ಸೇವಾ ಕಂಪನಿಗಳ ರೀತಿಯಲ್ಲೇ ಜನರಿಗೆ ಇಂಗ್ಲಿಷ್‌ನಲ್ಲಿ ಗುಂಪು ಸಂದೇಶ ಕಳುಹಿಸುತ್ತಿದ್ದಾರೆ. ಸಂದೇಶ ನಂಬಿ ಪ್ರತಿಕ್ರಿಯಿಸುವ ಜನರ ಮೊಬೈಲ್‌ನಲ್ಲಿ ‘ಟೀಮ್ ವ್ಹೀವರ್’ ಆ್ಯಪ್ ಇನ್‌ಸ್ಟಾಲ್ ಮಾಡಿಸುತ್ತಿದ್ದಾರೆ. ಅದರ ಮೂಲಕ ವೈಯಕ್ತಿಕ, ಬ್ಯಾಂಕ್ ಖಾತೆ ಹಾಗೂ ಡೆಬಿಟ್‌/ಕ್ರೆಡಿಟ್ ಕಾರ್ಡ್‌ಗಳ ಮಾಹಿತಿ ಪಡೆದು ವಂಚಿಸುತ್ತಿದ್ದಾರೆ’ ಈ ಬಗ್ಗೆ ಅತೀ ಜಾಗೃತೆ ಅವಶ್ಯಕ ಎನ್ನುತ್ತಾರೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು.

ಸಿಮ್‌ ಕಾರ್ಡ್ ಅಪ್‌ಡೇಟ್, ಬ್ಯಾಂಕ್‌ ಅಪ್‌ಡೇಟ್‌. ಹೀಗೆ ಹಲವು ಉದ್ದೇಶವಿಟ್ಟುಕೊಂಡು ಬರುವ ಸಂದೇಶಗಳನ್ನು ನಂಬಬೇಡಿ. ಪ್ರತಿಕ್ರಿಯಿಸಬೇಡಿ ,ಸಿಮ್‌ ಕಾರ್ಡ್‌ ಅಪ್‌ಡೇಟ್ ಸಂದೇಶ ಬಂದರೆ, ಮೊಬೈಲ್ ಸೇವಾ ಕಂಪನಿಗಳ ಅಧಿಕೃತ ಪ್ರತಿನಿಧಿಗಳನ್ನು ಸಂಪರ್ಕಿಸಿ. ಅಪರಿಚಿತರು ಯಾವುದಾದರೂ ಲಿಂಕ್ ಕಳುಹಿಸಿದರೆ ಕ್ಲಿಕ್ ಮಾಡಬೇಡಿ.  ಅಪರಿಚಿತರು ಹೇಳುವ ‘ಟೀಮ್‌ ವ್ಹೀವರ್’ ಹಾಗೂ ಯಾವುದೇ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಳ್ಳುವ ಮುನ್ನ ಯೋಚಿಸಿ  ಇಂಥ ಸಂದೇಶ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಮಂಗಳೂರು ಪೊಲೀಸರು ಸಾರ್ವಜನಿಕರಿಗೆ ಕಳಕಳಿಯ ಮನವಿ ಮಾಡಿದ್ದಾರೆ. ಸೋ ನಿಮ್ಮ ಹುಷಾರಲ್ಲಿ ನೀವಿದ್ರೆ ಸೇಫ್. ಇಲ್ಲಾ ಎಲ್ಲಾ ಕಳ್ಕೊಂಡು ಅಬ್ಬೆಪಾರಿಯಾಗೊದಂತೂ ಗ್ಯಾರಂಟಿ.

Click to comment

Leave a Reply

Your email address will not be published. Required fields are marked *

DAKSHINA KANNADA

ಈ 7 ರೈಲು ನಿಲ್ದಾಣಗಳಲ್ಲಿ ಸಿಗುತ್ತೆ ಅತೀ ಕಡಿಮೆ ಬೆಲೆಗೆ ತಿಂಡಿ, ಊಟ

Published

on

ಮಂಗಳೂರು: ಭಾರತೀಯ ರೈಲ್ವೆ ಮಂಡಳಿಯು ಕರ್ನಾಟಕದ ಏಳು ನಿಲ್ದಾಣಗಳು ಸೇರಿದಂತೆ ದೇಶದ 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಕಂಪಾರ್ಟ್ಮೆಂಟ್ ಕೋಚ್‌ಗಳ ಬಳಿ ಕಡಿಮೆ ದರದಲ್ಲಿ ಉತ್ತಮ ಆಹಾರವನ್ನು ಒದಗಿಸುವ ಕೌಂಟರ್‌ಗಳನ್ನು ತೆರೆದಿದೆ.

ಕರ್ನಾಟಕದಲ್ಲಿ ದಕ್ಷಿಣ ರೈಲ್ವೆ ಅಡಿಯಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ವಿಭಾಗಗಳಲ್ಲಿ ಸಬ್ಸಿಡಿ ಆಹಾರ ಕೌಂಟರ್‌ಗಳನ್ನು ತೆರೆಯಲಾಗಿದೆ. ಹಾಗೆಯೇ ನೈರುತ್ಯ ರೈಲ್ವೆಯ ಅಡಿಯಲ್ಲಿ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಈ ಆಹಾರ ಕೌಂಟರ್‌ಗಳನ್ನು ತೆರೆಯಲಾಗಿದೆ.

ಈ ಯೋಜನೆಯು ಭಾರತೀಯ ರೈಲ್ವೆಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಮತ್ತು ಭಾರತೀಯ ರೈಲ್ವೆಯ ಜಂಟಿ ಉಪಕ್ರಮವಾಗಿದೆ. ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ ಜನತಾ ಊಟದ ಸೇವೆಯ ಅಡಿಯಲ್ಲಿ ರೈಲ್ವೆ ನಿಲ್ದಾಣದ ರೆಸ್ಟೋರೆಂಟ್‌ಗಳಲ್ಲಿ ಕಡಿಮೆ ದರದ ಆಹಾರ ಲಭ್ಯವಿತ್ತು. ಈಗ ಕೌಂಟರ್‌ಗಳು ನೇರವಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

ಪ್ರಸ್ತುತ 100 ರೈಲು ನಿಲ್ದಾಣಗಳಲ್ಲಿ 150 ಪ್ಲಾಟ್ಫಾರ್ಮ್ಗಳು ಈ ಸೌಲಭ್ಯವನ್ನು ನೀಡುತ್ತವೆ. ಬೆಳಗಿನ ಉಪಹಾರ 20 ರೂ., ಲಘು ಊಟ 50 ರೂ., 3 ರೂ.ಗೆ 200 ಎಂಎಲ್ ನೀರು ನೀಡಲಾಗುತ್ತದೆ. ಈ ಮಾಹಿತಿಯನ್ನು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಒಟ್ಟಾರೆ ಈ ಯೋಜನೆಯು ರೈಲು ಪ್ರಯಾಣಿಕರ ಆಹಾರ ಸಮಸ್ಯೆಯನ್ನು ಪರಿಹರಿಸಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

Continue Reading

DAKSHINA KANNADA

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಮೇ 19, 20ರಂದು ಆರೆಂಜ್ ಅಲರ್ಟ್‌

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18 ರಿಂದ 21 ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್ ಅಲರ್ಟ್‌ ಇರುವ ದಿನಗಳಲ್ಲಿ ಮಿಂಚು, ಗುಡುಗು, ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದೇ 18 ಮತ್ತು 21ರಂದು ಜಿಲ್ಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕೆಲವೆಡೆ 6.45 ಸೆಂ.ಮೀ ನಿಂದ 11.55 ಸೆಂ.ಮೀವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Continue Reading

DAKSHINA KANNADA

ಕಾರಿನಲ್ಲಿ ಮಗುವನ್ನು ಮರೆತು ಹೋದ ತಾಯಿ..! ಕಾರಿನಲ್ಲೇ ಮಗುವಿನ ಅಂತ್ಯ…!

Published

on

ಮಂಗಳೂರು ( ರಾಜಸ್ಥಾನ ) :  ಮಕ್ಕಳ ಬಗ್ಗೆ ಪೋಷಕರು ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಆದ್ರೆ, ತಂದೆ ಮತ್ತು ತಾಯಿಯ ನಿರ್ಲಕ್ಷಕ್ಕೆ ಮೂರು ವರ್ಷದ ಬಾಲಕಿ ಅಸುನೀಗಿದ್ದಾಳೆ. ಹೌದು, ಮಗು ಕಾರಿನಲ್ಲಿ ಉಸಿರುಗಟ್ಟಿ ಸಾ*ವನಪ್ಪಿದ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. ಮೃ*ತ ಮಗುವನ್ನು ಕೋಟಾದ ಇಂದ್ರ ಕಾಲೋನಿಯ ನಿವಾಸಿ ಪ್ರದೀಪ್ ಅವರ ಮಗಳು ಗರ್ವಿ (3) ಎಂದು ಗುರುತಿಸಲಾಗಿದೆ.

ಮದುವೆ ಸಂಭ್ರಮದಲ್ಲಿ ಕಳೆದುಹೋದ ದಂಪತಿ :

ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಲಕಿ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ತಾಯಿ ತನ್ನ ಇನ್ನೊಬ್ಬ ಮಗಳ ಜೊತೆ ಕಾರಿನಿಂದ ಇಳಿದಿದ್ದಾರೆ. ಆದರೆ, ಬಾಲಕಿ ಗರ್ವಿ ಮಾತ್ರ ಕಾರಿನಲ್ಲೇ ಇದ್ದಳು. ಇತ್ತ ತಂದೆ ಕಾರನ್ನು ಪಾರ್ಕ್ ಮಾಡಿ, ಮಗು ಗರ್ವಿ ಕೂಡ ಅವಳ ತಾಯಿಯ ಜೊತೆಗಿದ್ದಾಳೆ ಎಂದು ಭಾವಿಸಿ, ಕಾರನ್ನು ಲಾಕ್ ಮಾಡಿ ತೆರಳಿದ್ದರು.

ಮದುವೆ ಸಮಾರಂಭದಲ್ಲಿ ಗಂಡ ಹೆಂಡತಿ ಇಬ್ಬರು ಮೈಮರೆತಿದ್ದರು. ಬ್ಯುಸಿಯಲ್ಲಿ ಯಾರೂ ತಮ್ಮ ಇನ್ನೊಂದು ಮಗುವಿನ ಬಗ್ಗೆ ಆಲೋಚಿಸಲೇ ಇದೆ. ಸುಮಾರು ಎರಡು ಗಂಟೆಗಳ ಬಳಿಕ ಪೋಷಕರಿಗೆ ಮಗು ಇಲ್ಲದ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಇಡೀ ಮದುವೆ ಸಭಾಂಗಣ ಹುಡುಕಾಡಿದ್ದಾರೆ. ಬಳಿಕ ಕಾರಿನ ಬಳಿ ಬಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಗು ಅಷ್ಟರಲ್ಲೇ ಸಾ*ವನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ಸಂಭ್ರಮದಲ್ಲಿ ಮೈಮರೆತ ತಂದೆ – ತಾಯಿಯಿಂದಾಗಿ ಪುಟ್ಟ ಜೀವವೊಂದು ಬ*ಲಿಯಾಗಿದೆ.

Continue Reading

LATEST NEWS

Trending