Connect with us

    DAKSHINA KANNADA

    ಸಿಎಂ ವಿರುದ್ಧ ವೃಥಾ ಆರೋಪ – ಶಾಸಕ ಪೂಂಜಾ ವಿರುದ್ದ ಪಶ್ಚಿಮ ವಲಯ ಡಿಐಜಿಪಿಗೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ದೂರು..!

    Published

    on

    ಮುಖ್ಯಮಂತ್ರಿ ವಿರುದ್ಧ ವೃಥಾ ಆರೋಪ ಮಾಡಿದ ಶಾಸಕ ಪೂಂಜಾ ವಿರುದ್ದ ಪಶ್ಚಿಮ ವಲಯ ಡಿಐಜಿಪಿಗೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಮಂಗಳೂರು : ಮುಖ್ಯಮಂತ್ರಿ ವಿರುದ್ಧ ವೃಥಾ ಆರೋಪ ಮಾಡಿದ ಶಾಸಕ ಪೂಂಜಾ ವಿರುದ್ದ ಪಶ್ಚಿಮ ವಲಯ ಡಿಐಜಿಪಿಗೆ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.   

    ಮುಖ್ಯಮಂತ್ರಿ ಸಿದ್ಧರಾಮಯ್ಯನವರಯ 24 ಹಿಂದು ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಆರೋಪ ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಕಾರ್ಪೋರೇಟರ್‌ , ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ನೇತೃತ್ವದಲ್ಲಿ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಅವರಿಗೆ ಮನವಿ ಸಲ್ಲಿಸಲಾಯಿತು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಳಾಯಿ ಈ ಹಿಂದೆ ಪೂಂಜಾ ಅವರು ಮಹಿಳೆಗೆ ಮೊಟ್ಟೆಯನ್ನು ಎಸೆದು ಅವಮಾನ ಮಾಡಿದ್ದರು. ಇವರು ಇನ್ನಷ್ಟು ಇಂತಹ ಹೇಳಿಕೆಗಳನ್ನು ಕೊಟ್ಟರೆ ನಾವು ಸುಮ್ಮನಿರುವುದು ಇಲ್ಲ.

    ಪೂಂಜ ಎನ್ನುವ ಶಾಸಕರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಗ ಇರುವುದು ಶೇಕಡಾ 40 ಸರಕಾರ ಅಲ್ಲ ಎನ್ನುವುದನ್ನು ಗಮನಿಸಬೇಕು.

    ಮುಸಲ್ಮಾನರನ್ನು ದ್ವೇಷಿಸಿ ಎನ್ನುವ ಇವರ ಗ್ಯಾಸ್ ಏಜನ್ಸಿಯನ್ನು ಮುಸಲ್ಮಾನರಿಗೆ ಮಾರಾಟ ಮಾಡಿದ್ದು ಯಾಕೆ..?

    ಅದೆಷ್ಟೊ ಮಸೀದಿಗಳಿಗೆ ಅನುದಾನ ನೀಡಿ ಅವರ ಮನೆಗೆ ಹೋಗಿ ಊಟ ಮಾಡುತ್ತಾರೆ. ಇಂತಹ ಶಾಸಕರದ್ದು ಯಾವ ಹಿಂದುತ್ವ ಎಂದು ನಾನು ಪ್ರಶ್ನೆ ಮಾಡುತ್ತೇನೆ ಎಂದಿದ್ದಾರೆ.

    BELTHANGADY

    ಬೈಕ್‌ಗೆ ಗುದ್ದಿ ಎಸ್ಕೇಪ್ ಆದ ಬೊಲೆರೋ..! ಮಗು ಸಾ*ವು..!

    Published

    on

    ಬೆಳ್ತಂಗಡಿ : ಬೊಲೆರೋ ವಾಹನವೊಂದು ಬೈಕ್‌ಗೆ ಡಿ*ಕ್ಕಿ ಹೊಡೆದು ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ನಡೆದಿದೆ. ಮುಂಡಾಜೆಯ ಸೀಟು ಬಳಿ ಈ ಅಪಘಾ*ತ ನಡೆದಿದ್ದು ಬೈಕ್ ಸವಾರ ಕಲ್ಮಂಜ ಕುಡೆಂಚಿಯ ಗುರುಪ್ರಸಾದ್ ಗೋಖಲೆ ಹಾಗೂ ಅವರ ಮಗು ಅನರ್ಘ್ಯ ಗಂಭೀ*ರ ಗಾಯಗೊಂಡಿದ್ದಾರೆ. ಗುರುಪ್ರಸಾದ್ ಗೋಕಲೆಯವರು ಕಾಲು ಮುರಿದಿದ್ದು, ಮಗುವಿನ ತಲೆಗೆ ತೀವ್ರ ಸ್ವರೂಪದ ಗಾ*ಯವಾಗಿದೆ. ಮಗುವಿನ ತಲೆಯ ಮೇಲೆ ಬೊಲೆರೋ ಟಯರ್ ಹರಿದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃ*ತಪಟ್ಟಿದೆ.

    ಅಪಘಾ*ತ ನಡೆಸಿದ ಬೊಲೇರೋ ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಸ್ಥಳೀಯರು ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ನೆರಿಯಾ ಗ್ರಾಮದ ನಾಲ್ವರು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದು ಅವರನ್ನು ಸಾರ್ವಜನಿಕರು ಹಿಡಿದಿದ್ದಾರೆ.
    ಮಗು ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಬೊಲೆರೋ ಡಿಕ್ಕಿಯ ರಭಸಕ್ಕೆ ಚಕ್ರದ ಅಡಿಗೆ ತಲೆ ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ.

    Continue Reading

    DAKSHINA KANNADA

    ಗುರುಪುರ : ನೂಯಿಯ ಕುಸಿದ ಮನೆಗೆ ಡಾ. ಭರತ್ ಶೆಟ್ಟಿ ಭೇಟಿ; ಸರ್ಕಾರದಿಂದ ಪರಿಹಾರ ಭರವಸೆ

    Published

    on

    ಗುರುಪುರ : ಅಡ್ಡೂರು ಗ್ರಾಮದ ನೂಯಿಯ ಇಂದಿರಾನಗರದಲ್ಲಿ ಜು. 25ರಂದು ಸಂಜೆ ಕುಸಿದು ಬಿದ್ದು ಹಾನಿಗೀಡಾದ ಮನೆಗೆ ಶನಿವಾರ(ಜು.27) ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.


    ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ ಆರ್ಥಿಕವಾಗಿ ಹಿಂದುಳಿದ ಧನಲಕ್ಷ್ಮಿ ಅವರಿಗೆ ಸರ್ಕಾರದಿಂದ ಲಭ್ಯವಿರುವ ಮಳೆಹಾನಿ ನಿಧಿಯಿಂದ ಪರಿಹಾರ ಮಂಜೂರಾತಿಗೆ ಬೇಕಾದ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ದಾನಿಗಳ ನೆರವು ಪಡೆದು ಹಾಗೂ ಹಾಗೂ ವೈಯಕ್ತಿಕ ನೆಲೆಯಲ್ಲಿ ಅವರ ಪುತ್ರನ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲು ಸಹಕರಿಸುವೆ ಎಂದು ಮನೆ ಮಂದಿಗೆ ಭರವಸೆ ನೀಡಿದರು.

    ಇದನ್ನೂ ಓದಿ : ಬೈಂದೂರು: ಪೇಂಟ್ ಮಾಡುವ ಯಂತ್ರದಲ್ಲಿ ವಿದ್ಯುತ್ ಪ್ರವಹಿಸಿ ಪೈಂಟರ್ ಮೃ*ತ್ಯು
    ಶಾಸಕರೊಂದಿಗೆ ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ಚಂದ್ರಾವತಿ, ಬಿಜೆಪಿ ಪ್ರಮುಖ ಚಿದಾನಂದ ನಂದ್ಯ ಮತ್ತಿತರರು ಇದ್ದರು.

    Continue Reading

    DAKSHINA KANNADA

    ಸುನೀಲ ನಾಯಕಗೆ ಪಿಎಚ್‌ಡಿ ಪದವಿ ಪ್ರದಾನ

    Published

    on

    ಮಂಗಳೂರು/ ವಿಜಯಪುರ : ವಿಜಯಪುರ ಜಿಲ್ಲೆಯ ಅಲಿಯಾಬಾದ ಗ್ರಾಮದ ನಾಥು ನಾಯಕರ ಪುತ್ರ ಸುನೀಲ ನಾಯಕ ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಾಯಿತು.

    ಮಂಗಳೂರು ಮೆರೈನ ಕಾಲೇಜು ಮತ್ತು ಟೆಕ್ನೋಲಾಜಿ, ಮಂಗಳೂರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಸುನೀಲ ನಾಯಕ ಅವರ “ಟ್ರೈಬಲಾಜಿಕಲ ಬಿಹೇವಿಯರ್ ಆ್ಯಂಡ್ ಮೆಕಾನಿಕಲ್ ಪ್ರಾಪರ್ಟೀಸ್ ಆಫ್ ರೈನ್ಫೋರ್ಸಾಡ್ ಪಾಲಿಮರ್ ಕಾಂಪೋಸಿಟ್ ಫೋರ್ ಪ್ರೊಪೆಲ್ಲರ್ ಬ್ಲೇಡ್ ಯೂಸಿಂಗ್ ಫೌಲ್ ರಿಲೀಸ್ ಕೋಟಿಂಗ್”ಎಂಬ ಶೀರ್ಷಿಕೆಯ ಪ್ರಬಂಧವು ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದ ವರ್ಧನೆಗೆ ಕೊಡುಗೆ ನೀಡುವ ವ್ಯಾಪಕ ಪ್ರಸ್ತುತತೆಯಿಂದ ಮನ್ನಣೆಯನ್ನು ಗಳಿಸಿತು.

    ಇದನ್ನೂ ಓದಿ : ಸತ್ತ ವ್ಯಕ್ತಿಗಳು ನಿಮ್ಮ ಕನಸಿನಲ್ಲಿ ಬಂದರೆ ಶುಭವೋ… ಅಶುಭವೋ.?
    ಡಾ.ಎಂ.ಪ್ರಸನ್ನಕುಮಾರ, ಕಾರ್ಯಕ್ರಮ ಸಂಯೋಜಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು ಅವರ ಮಾರ್ಗದರ್ಶನದಲ್ಲಿ ಸುನಿಲ ನಾಯಕ ಅವರು ಸಂಶೋಧನೆಯನ್ನು ಕೈಗೊಂಡಿದ್ದರು. ತಮ್ಮ ತಂದೆ ತಾಯಿ ಶ್ರೀ. ನಾಥು ನಾಯಕ ಮತ್ತು ಸರಿತಾ ನಾಯಕ ಸೇರಿದಂತೆ ಅವರ ಕುಟುಂಬದ ಅಚಲ ಬೆಂಬಲವು ಅವರ ಯಶಸ್ಸಿಗೆ ಕಾರಣವಾಗಿದೆ.

    Continue Reading

    LATEST NEWS

    Trending