LATEST NEWS
ಉಡುಪಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಘೋಷಿಸಿದ ಸಹಕಾರ ಸಚಿವ
ಮಂಗಳೂರು: ಉಡುಪಿ ಜಿಲ್ಲೆಗೆ ಪ್ರತ್ಯೇಕ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್ ಮಾಡುತ್ತೇವೆ ಎಂದು ಸಹಕಾರಿ ಸಚಿವ ಎಸ್ಟಿ ಸೋಮಶೇಖರ್ ಘೋಷಿಸಿದ್ದಾರೆ.
ನಗರ ಹೊರವಲಯದ ಅಡ್ಯಾರ್ ಗಾರ್ಡನ್ನಲ್ಲಿ ನಡೆದ ಬಿಜೆಪಿ ಜನ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಡಿಸಿಸಿ ಬ್ಯಾಂಕ್ ಪ್ರತ್ಯೇಕಕ್ಕೆ ಸಹಕಾರ ಇಲಾಖೆಯಲ್ಲಿರುವವರ ಒತ್ತಾಸೆ ಇದೆ. ಮಂಗಳೂರಿನ ಶಾಸಕರು,
ಲೋಕಸಭಾ ಸದಸ್ಯರು ಮತ್ತು ಅನೇಕರು ಈ ಬಗ್ಗೆ ಹೇಳಿದ್ದಾರೆ. ಮಂಗಳೂರು ಡಿಸಿಸಿ ಬ್ಯಾಂಕ್ ನವೋದಯ ಎಂದು ಸ್ವಸಹಾಯ ಸಂಘ ಮಾಡಿದೆ. ಈ ಬಗ್ಗೆ ನಾನೇನೂ ಆಬ್ಜೆಕ್ಷನ್ ಮಾಡುವುದಿಲ್ಲ, ನಾನು ಅದರ ಮ್ಯಾನೇಜ್ಮೆಂಟ್ನ ಟ್ರಸ್ಟಿಯಾಗಿದ್ದರೂ,
ಡಿಸಿಸಿ ಬ್ಯಾಂಕ್ನಲ್ಲಿ ನವೋದಯ ಸಂಘಕ್ಕೆ ಅವಕಾಶ ನೀಡುವುದು ಕಾನೂನು ಬಾಹಿರ ಎಂದು ವಾಗ್ದಾಳಿ ನಡೆಸಿದರು.
ಡಿಸಿಸಿ ಬ್ಯಾಂಕ್ ನವೋದಯ ಟ್ರಸ್ಟ್ ಪ್ರತೀ ತಿಂಗಳು 19 ಲಕ್ಷ ವರ್ಗಾವಣೆ ಮಾಡುತ್ತಾರಲ್ವ ಅದು ಕಾನೂನು ಬಾಹಿರ. ಯಾವುದೇ ಅಧಿಕಾರಿ ಇದಕ್ಕೆ ಬೆಂಬಲ ನೀಡುತ್ತಾರೋ ಅವರನ್ನು ನಾನು ಸಹಕಾರ ಮಂತ್ರಿಯಾಗಿ ಯಾರನ್ನೂ ನಾನು ಟಾಲರೇಟ್ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯಾರೇ ದೊಡ್ಡವರಿರಲಿ,
ಯಾರದ್ದೇ ಹೆಸರು ಹೇಳಿದರೂ, ಯಾರನ್ನೂ ಎಷ್ಟೇ ವರ್ಷ ಸಹಕಾರ ಇಲಾಖೆಯಲ್ಲಿದ್ದವರನ್ನು ಬಿಡುವುದಿಲ್ಲ. ಅವರು ಅಧ್ಯಕ್ಷರಿರಲಿ, ರಾಜಕೀಯ ಬೆಂಬಲ ಇರಲಿ. ಅವರನ್ನು ಮಟ್ಟ ಹಾಕುವ ಅಧಿಕಾರಿಗಳು ಈ ಮಂಗಳೂರಿನಲ್ಲಿ ಇರಬೇಕಾಗುತ್ತದೆ.
ಇದಕ್ಕೆ ಬೆಂಬಲ ನೀಡುವವರನ್ನು ಸಸ್ಪೆಂಡ್ ಮಾಡಬೇಕಾಗುತ್ತದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಾನು ಹೇಳಿದ್ದೇ ಕಾನೂನು, ನಾನು ಹೇಳಿದವರಿಗೆ ಲೋನ್,
ನಾನು ಹೇಳಿದ ಸ್ತ್ರೀ ಶಕ್ತಿಗೆ ಲೋನ್ ಕೊಡುತ್ತೇವೆ ಎಂಬ ಮದದಿಂದ ಅಧ್ಯಕ್ಷಗಿರಿ ನಡೆಸುತ್ತಾರೋ ಅದಕ್ಕೆಲ್ಲಾ ಕಡಿವಾಣ ಹಾಕುವ ಕಾನೂನು ತರುತ್ತೇವೆ ಎಂದು ಎಚ್ಚರಿಸಿದರು.
FILM
ನಟಿ ಸುಕೃತಾ ನಾಗ್ ಸಿಲ್ಕ್ ಸೀರೆಯಲ್ಲಿ ಮಿಂಚಿಂಗ್… ಬಿಗ್ ಬಾಸ್ ಗೆ ಸ್ವಾಗತ ಅಂತಿದ್ದಾರೆ ಜನ!
ಬೆಂಗಳೂರು: ಕಿರುತೆರೆ ನಟಿ ಸುಕೃತಾ ನಾಗ್ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಎನ್ನುವ ಸುದ್ದಿ ಹರದಾಡುತ್ತಿರುವ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ ನಟಿ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ಧಾರ್ಥನ ತಂಗಿಯಾಗಿ ನಟಿಸಿ ಜನಪ್ರಿಯತೆ ಗಳಿಸಿದ ನಟಿ ಸುಕೃತಾ ನಾಗ್ ಇದೀಗ ಬಿಗ್ ಬಾಸ್ ಸೀಸನ್ 11 ನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಸ್ಪರ್ಧಿಗಳ ಲಿಸ್ಟ್ ನಲ್ಲಿ ಸುಕೃತಾ ಹೆಸರು ಕಂಡು ಬರುತ್ತಿದೆ.
ಅಷ್ಟಕ್ಕೂ ಸುಕೃತಾ ನಾಗ್ ಬಿಗ್ ಬಾಸ್ ಗೆ ತೆರಳಲಿದ್ದಾರ ಇಲ್ವಾ ಅನ್ನೋದು ಇನ್ನೂ ಕನ್ ಫರ್ಮ್ ಆಗಿಲ್ಲ. ಇವತ್ತು ರಾಜಾ ರಾಣಿ ಶೋ ನಲ್ಲಿ ಹೆಸರುಗಳು ರಿವೀಲ್ ಆಗಲಿದೆ. ಆವಾಗ್ಲೇ ಗೊತ್ತಾಗೋದು ಸುಕೃತಾ ನಿಜವಾಗಿಯೂ ಬಿಗ್ ಬಾಸ್ ಗೆ ಬರ್ತಿದ್ದಾರಾ ಇಲ್ವಾ ಅನ್ನೋದು. ಬಿಗ್ ಬಾಸ್ ಸುದ್ದಿಯ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸುಕೃತಾ ಮೈಸೂರು ಸಿಲ್ಕ್ ಸೀರೆಯುಟ್ಟು ಮುದ್ದಾಗಿ ಫೋಟೊ ಶೂಟ್ ಮಾಡಿಸಿದ್ದು, ಸಾಂಪ್ರದಾಯಿಕ ಅವತಾರದಲ್ಲಿ ದೇವತೆಯಂತೆ ಕಾಣ್ತಿದ್ದಾರೆ ಅನ್ನೋದು ಸುಳ್ಳಲ್ಲ.
ಕಳೆದ ಬಾರಿ ಅಂದ್ರೆ ಬಿಗ್ ಬಾಸ್ ಸೀಸನ್ 10ರ ಸಮಯದಲ್ಲೂ ಸುಕೃತಾ ಬಿಗ್ ಬಾಸ್ ಗೆ ಹೋಗೋದಾಗಿ ಸುದ್ದಿಯಾಗಿತ್ತು, ಆದರೆ ಕಳೆದ ವರ್ಷ ನಟಿ ಭಾಗವಹಿಸಿರಲಿಲ್ಲ. ಈ ಬಾರಿಯಾದ್ರೂ ಸುಕೃತಾ ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸಲಿದ್ದಾರೆ ಕಾದು ನೋಡಬೇಕು.
DAKSHINA KANNADA
ಮಂಗಳೂರು : ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು
ಮಂಗಳೂರು : ಮಂಗಳೂರಿನ ಹೊರವಲಯದ ಅಡ್ಯಾರ್ ಗಾರ್ಡನ್ ಬಳಿ ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿದೆ. ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು.
ಏಕಾಏಕಿ ಕಾರಿಗೆ ಬೆಂ*ಕಿ ಹೊತ್ತಿಕೊಂಡಿದ್ದು ಸ್ಥಳೀಯರು ಬೆಂ*ಕಿಯನ್ನು ನಂದಿಸಲು ಯತ್ನಿಸುವ ಮೊದಲೇ ಕಾರು ಸುಟ್ಟು ಸಂಪೂರ್ಣ ಕರಕಲಾಗಿತ್ತು. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು ಅಗ್ನಿಶಾಮಕ ದಳ ತಲುಪುವಷ್ಟರಲ್ಲಿ ಕಾರು ಸಂಪೂರ್ಣ ಭಸ್ಮವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
LATEST NEWS
ವೈದ್ಯನ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕ ಬ*ಲಿ – ಪ್ರಕರಣ ದಾಖಲು
ಚಿಕ್ಕಮಗಳೂರು: ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್ನಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕ ಮೃ*ತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ.
ಅಜ್ಜಂಪುರ ಸಮೀಪದ ಕೆಂಚಾಪುರ ಗ್ರಾಮದ ಅಶೋಕ್ ಅವರ 7 ವರ್ಷದ ಮಗ ಸೋನೇಶ್ ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ. ಪೋಷಕರು ಸೋನೇಶ್ ನನ್ನು ಅಜ್ಜಂಪುರ ಪಟ್ಟಣದ ಖಾಸಗಿ ಕ್ಲಿನಿಕ್ ವೈದ್ಯ ವರುಣ್ ಬಳಿ ಸೆಪ್ಟೆಂಬರ್ 24 ರಂದು ಚಿಕಿತ್ಸೆಗಾಗಿ ಕರೆದೊಯ್ದಿದ್ರು. ವೈದ್ಯ ವರುಣ್, ಬಾಲಕನ ಸೊಂಟಕ್ಕೆ ಇಂಜೆಕ್ಷನ್ ಮಾಡಿದ್ದು ಇದೆ ಇಂಜೆಕ್ಷನ್ ಓವರ್ ಡೋಸ್ ಆಗಿ ಬಾಲಕನ ಜೀವವನ್ನೇ ತೆಗೆದಿದೆ.
ವೈದ್ಯ ವರುಣ್ ನೀಡಿದ ಓವರ್ ಡೋಸ್ ಇಂಜೆಕ್ಷನ್ ನಿಂದ ಬಾಲಕನ ಸೊಂಟದ ಭಾಗದಲ್ಲಿ ಬೊಬ್ಬೆಗಳು ಕಾಣಿಸಿಕೊಂಡಿದ್ದವು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸೋನೇಶ್ ಮೃ*ತಪಟ್ಟಿದ್ದಾರೆ.
ಶ*ವ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ಬಾಲಕನ ಮೃ*ತದೇಹವನ್ನು ರವಾನೆ ಮಾಡಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಡಾ ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.