MANGALORE
ಸ್ವಾತಂತ್ರೋತ್ಸ ಅಮೃತ ಮಹೋತ್ಸವದ ಅಂಗವಾಗಿ NSS ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ ಹಾಗೂ ರೋಟರಿ ಕ್ಲಬ್ ಮಂಗಳೂರು ಜಂಟಿ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರಿನ ಹೃದಯ ಭಾಗದಲ್ಲಿರುವ ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಸ್ವಚ್ಛತಾ ಅಭಿಯಾನ ಜರುಗಿತು.
ಸುತ್ತ ಮುತ್ತ ಅಂಗಡಿಗಳ ಮಾಲೀಕರಿಗೆ ತಮ್ಮ ಸುತ್ತ ಮುತ್ತ ಪ್ಲಾಸ್ಟಿಕ್ ಎಸೆಯದಂತೆ ಮನವರಿಕೆ ಮಾಡಲಾಯಿತು. ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ., ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ರಘುವೀರ್ ಸೂಟರ್ ಪೇಟೆ,
ರೋಟರಿ ಕ್ಲಬ್ ನ ಡಾ. ರಂಜನ್ ಹಾಗೂ ಕಾನ್ಯೂಟ್ ಪಿಂಟೋ ಸ್ವಚ್ಛತಾ ಅಭಿಯಾನದಲ್ಲಿ ಉಪಸ್ಥಿತರಿದ್ದರು. ವಿಶ್ವ ವಿದ್ಯಾನಿಲಯ ಕಾಲೇಜಿನ ಹಾಗೂ ರಥ ಬೀದಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ, ಸೇವಕಿಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
DAKSHINA KANNADA
ದೈವದ ಕಾರ್ಯಕ್ಕೆ ಮುಸ್ಲೀಮರಿಗೆ ಆಹ್ವಾನ…!
ಮಂಗಳೂರು : ಕರಾವಳಿಯಲ್ಲಿ ಅದೆಷ್ಟೇ ಹಿಂದೂ ಮುಸ್ಲಿಂ ಅನ್ನೋ ಸಂಘರ್ಷಗಳು ನಡೆದರೂ ಬಹುತೇಕ ಕಡೆಗಳಲ್ಲಿ ಎರಡೂ ಧರ್ಮದವರು ಸಾಮರಸ್ಯದಿಂದಲೇ ಇದ್ದಾರೆ. ಇಂತಹ ಒಂದು ಸಾಮರಸ್ಯಕ್ಕೆ ಸಾಕ್ಷಿಯಾಗಿ ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮ ಸುದ್ದಿಯಾಗಿದೆ. ಇಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆಯುವ ದೈವಗಳ ಕಾರ್ಯಕ್ರಮಕ್ಕೆ ಪದರಂಗಿ ಮಸೀದಿಯವರಿಗೆ ಆಹ್ವಾನ ನೀಡಿದ್ದಾರೆ.
ತೆಂಕ ಎಡಪದವಿನ ಕೊಂದೋಡಿ ಗಡುಸ್ಥಳ ವ್ಯಾಘ್ರ ಚಾಮುಂಡಿ ಮೈಸಂದಾಯ ದೈವಗಳ ಗರ್ಭಕುಂಡ ಹಾಗೂ ಮಹಮ್ಮಾಯಿ ಅಮ್ಮನವರ ಶಿಲಾಮಯ ಕಟ್ಟಯ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವಕ್ಕೆ ಈ ಆಹ್ವಾನ ನೀಡಲಾಗಿದೆ. ರಂಝಾನ್ ಪ್ರಯುಕ್ತ ನಮಾಜ್ ನಡೆಸುತ್ತಿದ್ದ ಮುಸ್ಲಿಂ ಬಾಂದವರ ನಮಾಜ್ ಮುಗಿಯುವರೆಗೂ ಕಾದೂ ಆಹ್ವನಾ ಪತ್ರ ನೀಡಿ ಸಾಮರಸ್ಯ ಮೆರೆಯಲಾಗಿದೆ. ಇವತ್ತಿನ ದಿನಗಳಲ್ಲಿ ಹಿಂದೂ-ಮುಸ್ಲಿಮರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೋಮು ಸೌಹಾರ್ದತೆ ಹದಗೆಡುತ್ತಿರುವ ದಿನಗಳಲ್ಲಿ ಇವರ ಸಾಮರಸ್ಯದ ನಡೆ ಇತರರಿಗೆ ಮಾದರಿಯಾಗಿದೆ. ಸಮಿತಿಯ ಪದಾಧಿಕಾರಿಗಳಾದ ಸುದರ್ಶನ್ ಪ್ರಭು.ಕೆ, ಇವರ ಮುಂದಾಳತ್ವದಲ್ಲಿ ಪದರಂಗಿಯ ಮುಸ್ಲಿಂ ಬಾಂದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಗ್ರಾಮದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
DAKSHINA KANNADA
MANGALORE : ಬಿಜೆಪಿಯನ್ನು ಲೇವಡಿ ಮಾಡಿದ ಪ್ರಕಾಶ್ ರಾಜ್; ಮೋದಿ ಪರಿವಾರದ ಬಗ್ಗೆ ಕಿಡಿ
ಮಂಗಳೂರು : 400 ಸೀಟು ಗೆಲ್ಲುತ್ತೇವೆ ಅಂದಿರುವ ಬಿಜೆಪಿಯ ಹೇಳಿಕೆಗೆ ನಟ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದು, 420 ಗಳಷ್ಟೇ ಹೀಗೆ ಹೇಳ್ತಾರೆ ಎಂದು ಲೇವಡಿ ಮಾಡಿದ್ದಾರೆ. ಇದು ಅಹಂಕಾರದ ಹೇಳಿಕೆಯಾಗಿದ್ದು, ಇಲ್ಲಿ ಜನರು ಎಲ್ಲವನ್ನೂ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ಹಲವು ರಾಜ್ಯಗಳ ಚುನಾವಣೆಯಲ್ಲಿ ಇಂತಹ ಹೇಳಿಕೆ ನೀಡಿದ್ರೂ ಅಲ್ಲಿ ಏನಾಗಿದೆ ಅನ್ನೋದು ಜನರು ನೋಡಿದ್ದಾರೆ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದಿರುವ ಪ್ರಕಾಶ್ ರಾಜ್ ಸಾವಿರಾರು ಕೋಟಿ ಹಣ ಇದೆ ಅನ್ನೋ ಧೈರ್ಯದಲ್ಲಿ ಹೀಗೆ ಮಾತನಾಡ್ತೀರಾ? ಅಂತ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.
ಇನ್ನು ಇದೇ ವೇಳೆ ಮೋದಿ ಪರಿವಾರದ ಬಗ್ಗೆ ಹೇಳಿಕೆ ನೀಡಿರುವ ಪ್ರಕಾಶ್ ರಾಜ್ ಇವರ ಪರಿವಾರ ಲಾಟ್ರಿ ಮಾರ್ಟಿನ್, ಫಾರ್ಮಾ ಕಂಪೆನಿ, ಅದಾನಿ ಹಾಗೂ ರೇಪ್ ಮಾಡಿದ ಬ್ರಿಜ್ ಭೂಷಣ್ ಇವರ ಪರಿವಾರ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿಯನ್ನು ಮಹಾಪ್ರಭುಗಳು ಎಂದು ಸಂಭೋದಿಸಿ ಚುನಾವಣಾ ಬಾಂಡ್ ಬಗ್ಗೆ ಮನ್ಕಿ ಬಾತ್ ನಲ್ಲಿ ಮಾತಾಡಿ ಎಂದು ಆಗ್ರಹಿಸಿದ್ದಾರೆ.
ಇಡಿ ರೇಡ್ ಆದ ಕಂಪನಿ ಮಾರನೇ ದಿನವೇ 200 ಕೋಟಿ ಇಲೆಕ್ಟೋರಲ್ ಬಾಂಡ್ ತಕೊಂಡ್ರೆ ಓಕೇನಾ ? ನಿಮ್ಮಲ್ಲಿ ಯಾಕೆ ಇಡಿ ರೇಡ್ ಆಗಲ್ಲ, ನೀವು ದುಡ್ಡು ತಗೋತಿಲ್ವಾ ಅದನ್ನು ಕೇಳಬಾರದಾ? ನಿಮ್ಮ ಮನ್ ಕಿ ಬಾತ್ ನಲ್ಲಿ ಅದನ್ನೆಲ್ಲ ಹೇಳುತ್ತೀರಾ? ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸೋಲ್ಲ :
ಚುನಾವಣೆಯಲ್ಲಿ ದೇಶ ಗೆಲ್ಲಬೇಕು, ದೇಶ ಗೆದ್ದರೆ ದೇಶದ ಜನ ಗೆದ್ದ ಹಾಗೆ ಎಂದು ಹೇಳಿರುವ ಪ್ರಕಾಶ್ ರಾಜ್ ಒಳ್ಳೆಯ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ. ನಾನು ಜನರ ಪಕ್ಷವಾಗಿದ್ದು ನಾನು ಚುನಾವಣೆಗೆ ಸ್ಪರ್ಧಿಸೋದಿಲ್ಲ ಯಾರ ಪರವೂ ಪ್ರಚಾರ ಮಾಡೋದಿಲ್ಲ, ದುಡ್ಡಿನಿಂದ ಪ್ರಕಾಶ್ ರಾಜ್ನನ್ನು ಕೊಂಡು ಕೊಳ್ಳಲು ಆಗೋದಿಲ್ಲ. ಅಂತಹ ದುಡ್ಡು ನಾನು ಪಡೆಯೋದಿಲ್ಲ ಎಂದು ಚುನಾವಣಾ ಪ್ರಚಾರಕ್ಕೆ ಹೋಗದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಜನರ ನಡುವೆ ನಿಂತು ಜನರ ಪರವಾಗಿ ಜನರಿಗೋಸ್ಕರ ಪ್ರಶ್ನೆ ಮಾಡ್ತೇನೆ ಎಂದು ಹೇಳಿದ್ದಾರೆ.
ನನಗೆ ಎಲ್ಲಾ ಪಕ್ಷದವರೂ ಒಂದೇ ಆಗಿದ್ದಾರೆ. ರಾಜಕಾರಣಿಗಳಲ್ಲಿ ಒಬ್ಬನಿಗೆ ಬಿಲ್ಡಿಂಗ್ ಇದ್ರೆ ಮತ್ತೊಬ್ಬ ಅಲ್ಲಿ ಬಾರ್ ನಡೆಸ್ತಾನೆ. ಎಲ್ಲಾ ಪಕ್ಷದ ನಾಯಕರದ್ದೂ ಹೊಂದಾಣಿಕೆಯ ರಾಜಕೀಯ ಎಂದು ರಾಜಕೀಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಣಿಪುರ ಹೆಣ್ಣುಮಕ್ಕಳ ಬಗ್ಗೆ ಮಾತನಾಡದವರು ಮಹಿಳಾ ದಿನಾಚರಣೆಗೆ ಗ್ಯಾಸ್ ಬೆಲೆ ಕಡಿಮೆ ಮಾಡ್ತಾರೆ. ಎಲೆಕ್ಟ್ರೋರಲ್ ಬಾಂಡ್ ಮೂಲಕ ಹಣ ಲೂಟಿ ಮಾಡ್ತಾರೆ. ಬಾಂಡ್ ಕೊಟ್ಟವರಿಗೆ ಕಾಂಟ್ರಾಕ್ಟ್ ಕೊಡ್ತಾರೆ. ಆದ್ರೆ ಅಭಿವೃದ್ದಿ ಮಾಡಿದ್ದಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಆರೊಪಿಸಿದ್ದಾರೆ.
DAKSHINA KANNADA
ಮಂಗಳೂರಿನಲ್ಲಿ ಮಾರ್ಚ್ 20 ರಿಂದ 6 ದಿನಗಳ ರಂಗೋತ್ಸವ ‘ನೇಹದ ನೇಯ್ಗೆ’
ಮಂಗಳೂರು : ಮೈಸೂರಿನ ನಿರ್ದಿಗಂತ ರಂಗ ತಂಡದಿಂದ ಮಂಗಳೂರಿನಲ್ಲಿ ಆರು ದಿನಗಳ ರಂಗೋತ್ಸವವನ್ನು ಹಮ್ಮಿಕೊಂಡಿದೆ. “ನೇಹದ ನೇಯ್ಗೆ” ಎಂಬ ಹೆಸರಿನಲ್ಲಿ ಈ ನಿರ್ದಿಗಂತ ರಂಗೋತ್ಸವ ನಡೆಯಲಿದ್ದು, ಸಂಗೀತ, ಸಿನೆಮಾ, ಸಾಹಿತ್ಯ, ಕ್ಷೇತ್ರಗಳ ಸಾಧಕರು, ಕಲಾ ಕ್ಷೇತ್ರದ ಅನೇಕ ದಿಗ್ಗಜರು ಆಗಮಿಸಲಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಸಂತ ಅಲೋಷಿಯಸ್ ವಿಶ್ವವಿದ್ಯಾನಿಲಯದ ಎಲ್ಸಿಆರ್ ಐ ಸಭಾಂಗಣದಲ್ಲಿ ಈ ರಂಗೋತ್ಸವಕ್ಕೆ ಮಾರ್ಚ್ 20 ರಂದು ಚಾಲನೆ ನೀಡಲಾಗುತ್ತದೆ. ಖ್ಯಾತ ನಟ ನಿರ್ದೇಶಕ ರಂಗಭೂಮಿ ಕಲಾವಿದ ನಾನಾ ಪಾಟೇಕರ್ ರಂಗೋತ್ವಕ್ಕೆ ಚಾಲನೆ ನೀಡಲಿದ್ದಾರೆ. ನೇಹ ಅನ್ನವುದು ಸಂವಿಧಾನದಲ್ಲಿ ಮೈತ್ರಿ ಎಂದಾಗಿದ್ದು, ನೇಯ್ಗೆ ಎನ್ನುವುದು ರಂಗ ಕಾರ್ಯದ ಕಟ್ಟುವಿಕೆ ಎಂಬ ಅರ್ಥ ಹೊಂದಿದ್ದು “ನೇಹದ ನೇಯ್ಗೆ” ರಂಗೋತ್ಸವ ಎಂದು ಹೆಸರು ಇಡಲಾಗಿದೆ.
ರಂಗೋತ್ಸವದಲ್ಲಿ ಜನಪದ ಹಾಡುಗಳ ಜೊತೆ ಪ್ರತಿಭಟನೆಯ ಹಾಡುಗಳೂ ಸೇರಿಕೊಳ್ಳಲಿದೆ. ಪ್ರೊಸೀನಿಯಂ ನಾಟಕಗಳ ಜೊತೆ ಬೀದಿನಾಟಕಗಳೂ, ಸಂಗೀತ ಪ್ರಯೋಗಗಳೂ, ಪಪೆಟ್ ಗಳೂ ಎಲ್ಲವೂ ಸೇರಿಕೊಂಡು ಪ್ರಯೋಗ ಗೊಳ್ಳಲಿದೆ. ಒಟ್ಟಾಗಿ ಈ ರಂಗೋತ್ಸವ ಒಟ್ಟು 6 ದಿನಗಳಲ್ಲಿ, 4 ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಈ ಪೈಕಿ 8 ನಾಟಕ ಪ್ರದರ್ಶನಗೊಳ್ಳಲಿದೆ. 6 ಸಂಗೀತ ಪ್ರದರ್ಶನಗಳು ಒಂದು ಚಲನಚಿತ್ರ, ಒಂದು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
5 ಪ್ರದರ್ಶನ ಗೊಂಡ ನಾಟಕಗಳ ಕುರಿತು ಸಂವಾದಗಳು, 4 ರಂಗ ಕರ್ಮಿಗಳು, ಕಲಾವಿದರೊಂದಿಗೆ ಸಂವಹನ, ಒಂದು ಮೆಗಾ ಸೆಮಿನಾರ್ ನಡೆಯಲಿದೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
- FILM7 days ago
ಡೀಪ್ಫೇಕ್ ಮೂಲಕ ಮತ್ತೊಮ್ಮೆ ಸುದ್ದಿಯಾದ ರಶ್ಮಿಕಾ ಮಂದಣ್ಣ…!
- LATEST NEWS7 days ago
ಜೆ.ಪಿ.ಹೆಗ್ಡೆಗೆ ಉಡುಪಿ-ಚಿಕ್ಕಮಗಳೂರು “ಕೈ” ಟಿಕೇಟ್.!!!
- LATEST NEWS3 days ago
ಡಿವಿಜಿ ಸಾಲು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ!
- DAKSHINA KANNADA6 days ago
Vitla ; 1400 ಕೋಟಿ ಅನುದಾನ ತಂದಿರುವ ಬಗ್ಗೆ ನಾನು ಲೆಕ್ಕ ಕೊಡ್ತೇನೆ ಬನ್ನಿ : ಪುತ್ತೂರು ಶಾಸಕ ರೈ ಸವಾಲು