LATEST NEWS
‘ಇವನೇ ಅಮ್ಮನನ್ನು ಕೊಂದ ಪಾಪಿ’ ಎಂದು ಅಪ್ಪನನ್ನು ತೋರಿಸಿದ ಮಗಳು
ಚಾಮರಾಜನಗರ: ನ್ಯಾಯಾಲಯದ ಕಟಕಟೆಯಲ್ಲಿ ಸಾಕ್ಷಿ ಹೇಳಲು ನಿಂತಿದ್ದ ಬಾಲಕಿ ಹೇಳಿದ್ದು ಹೀಗೆ, “ನನ್ನ ಕಣ್ಣೆದುರೇ ಅಮ್ಮನನ್ನು ಕೊಂದ ಪಾಪಿ ಇವನೇ” ಎಂದು ಸಾಕ್ಷಿ ನುಡಿದಿದ್ದಾರೆ.
ಇದನ್ನು ಪರಿಗಣಿಸಿರುವ ಕೋರ್ಟ್ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ತೊಳಚನಾಯಕನೇ ಶಿಕ್ಷೆಗೊಳಗಾದ ಆರೋಪಿ
ಘಟನೆ ವಿವರ
ಪುಷ್ಪಾಬಾಯಿ ಮತ್ತು ತೊಳಚನಾಯಕನ ಮದುವೆಯ ಸಮಯದಲ್ಲಿ ಪುಷ್ಪಾ ತವರು ಮನೆಯವರು 20 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ನೀಡಿದ್ದರು.
ಇದನ್ನು ಆಕೆಯ ಪತಿ ಅಡವು ಇಟ್ಟಿದ್ದ. ಇದಕ್ಕೆ ಕಾರಣ, ಆತನ ತಮ್ಮ ಅಪಘಾತ ಪ್ರಕರಣವೊಂದರಲ್ಲಿ ಆಟೋ ಚಾಲಕನಿಗೆ ಹಣ ನೀಡಬೇಕಿತ್ತು. ಆ ದಂಡದ ಹಣ ನೀಡಲು ಇದನ್ನು ಅಡವು ಇಟ್ಟು ದುಡ್ಡು ತಂದಿದ್ದ.
ಅದನ್ನು ವಾಪಸ್ ತರುವಂತೆ ಪುಷ್ಪಾ ಗಂಡನಿಗೆ ಹೇಳುತ್ತಿದ್ದರು. ಇದರಿಂದ ಆತ ಪತ್ನಿಗೆ ಕಿರುಕುಳ ಕೊಡಲು ಶುರು ಮಾಡಿದ.
ಇದರಿಂದಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. 2017ರಂದು ಈ ಜಗಳ ತಾರರಕ್ಕೇರಿ ಮಗಳ ಎದುರೇ ಪತ್ನಿಯನ್ನು ಕೊಲೆ ಮಾಡಿದ್ದ.
ಇದಕ್ಕೆ ಪ್ರಮುಖ ಸಾಕ್ಷಿಯಾಗಿದ್ದವಳು ಎಂಟು ವರ್ಷದ ಮಗಳು. ಬಾಲಕಿಯ ಸಾಕ್ಷಿ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಸೆಷನ್ಸ್ ಕೋರ್ಟ್ ತೊಳಚನಾಯಕನಿಗೆ ಜೀವಾವಧಿ ಶಿಕ್ಷೆ ನೀಡಿದೆ.
FILM
ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಚಂದನ್ ಗೌಡ-ಕವಿತಾ ದಂಪತಿ
ಚಂದನ್ ಗೌಡ – ಕವಿತಾ ದಂಪತಿ ಯಾರಿಗೆ ತಾನೇ ಗೊತ್ತಿಲ್ಲ. ಈ ಜೋಡಿ ‘ಲಕ್ಷ್ಮೀ ಬಾರಮ್ಮಾ’ ಮೂಲಕಾನೇ ಫೇಮಸ್. ಈ ಧಾರಾವಾಹಿಯಲ್ಲಿ ಕೆಲವು ಸಮಯ ನಟಿಸಿದ್ದ ಚಂದನ್ ಹೊರಬಂದಿದ್ದರು. ಕವಿತಾ ಕೂಡಾ ಅಷ್ಟೇ ಈ ಧಾರಾವಾಹಿ ಖ್ಯಾತಿ ನೀಡಿದ್ದರೂ, ನಂತರ ದಿನಗಳಲ್ಲಿ ಹೊರನಡೆದಿದ್ದರು. ಆದ್ರೆ, ಈ ಜೋಡಿ ರಿಯಲ್ ನಲ್ಲಿ ಒಂದಾಗಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಇದೀಗ ಚಂದು – ಲಚ್ಚಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹಂಚಿಕೊಂಡ ದಂಪತಿ :
ನಟ ಚಂದನ್ ಕುಮಾರ್, ಕವಿತಾ ಗೌಡ ಅವರು ಬೇಬಿ ಸ್ಕ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಭ್ರಮ ಹಂಚಿಕೊಂಡಿದ್ದಾರೆ. ನಟಿ ಕವಿತಾ ಗೌಡ ಚಂದನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆಅಭಿಮಾನಿಗಳಿಂದ, ನಟ, ನಟಿಯರಿಂದ ಶುಭ ಹಾರೈಕೆ ಹರಿದು ಬರುತ್ತಿದೆ. ನೇಹಾ ಗೌಡ, ಗೀತಾ ಭಾರತೀ ಭಟ್, ಧನರಾಜ್, ವಿನಯ್ ಗೌಡ, ಪ್ರಿಯಾಂಕಾ ಚಿಂಚೋಳಿ ಮೊದಲಾದವರು ಶುಭಾಶಯ ತಿಳಿಸಿದ್ದಾರೆ. 2021 ಮೇ 14ರಂದು ಲಾಕ್ ಡೌನ್ ಸಂದರ್ಭದಲ್ಲಿ ಈ ಜೋಡಿ ಮದುವೆಯಾಗಿತ್ತು.
ಮುಂದೆ ಓದಿ..; ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್ಗೆ ಏನಾಗಿದೆ? ಎಂದು ಹೇಳಿದ್ಯಾಕೆ?
ಬ್ಯುಸಿ ಲೈಫ್ :
ಕೆಲ ತಿಂಗಳುಗಳಿಂದ ಕವಿತಾ ಗೌಡ ಅವರು ಉದ್ಯಮದ ಕಡೆಗೆ ಮುಖ ಮಾಡಿದ್ದರು. ಚಂದನ್ ಜೊತೆ ಸೇರಿ ಒಂದಾದ ಮೇಲೆ ಒಂದರಂತೆ ಹೋಟೆಲ್ ಬ್ರ್ಯಾಂಚ್ ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮೇಕಪ್ ಸ್ಟುಡಿಯೋವನ್ನು ಕೂಡ ಆರಂಭಿಸಿದ್ದಾರೆ.
FILM
ಬರ್ಬರ ಹತ್ಯೆಯಾದ ಬ್ಯೂಟಿ ಕ್ವೀನ್.!! ಮುಳುವಾಯಿತಾ ಇನ್ಸ್ಟಾಗ್ರಾಮ್ ಪೋಸ್ಟ್..! ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
ಬ್ಯೂಟಿ ಕ್ವೀನ್ ಎಂದು ಕಿರೀಟ ಮುಡಿಗೇರಿಸಿಕೊಂಡವಳು ಎರಡೇ ವರ್ಷಕ್ಕೆ ಹಂತಕರ ಗುಂಡೇಟಿಕೆ ಬಲಿಯಾಗಿದ್ದಾಳೆ. ರೆಸ್ಟೋರೆಂಟ್ನಲ್ಲಿ ಆರಾಮವಾಗಿ ವಿರಾಮಿಸಿ ಬಗೆ ಬಗೆಯ ಸೀಫುಡ್ ಆರ್ಡರ್ ಮಾಡಿದ್ರು. ಇನ್ನೇನು ಫುಡ್ಅನ್ನು ಆಹ್ಲಾದಿಸಬೇಕು ಅನ್ನೋವಷ್ಟರಲ್ಲಿ ದುರಂತ ಅಂದ್ರೆ ಹಂತಕರ ಗುಂಡೇಟಿಗೆ ಈ ಸುಂದರಿ ಬಲಿಯಾಗಿದ್ದಾರೆ.
23ವರ್ಷಕ್ಕೆ ಬ್ಯೂಟಿ ಕ್ವೀನ್ ಆದ ಲ್ಯಾಂಡಿ
ಲ್ಯಾಂಡಿ ಪರ್ರಾಗಾ ಗೊಯ್ಬುರೊ ತನ್ನ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡವಳು. 2022ರ ಮಿಸ್ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಬಿಕಿನಿ ಕ್ವೀನ್ ಎಂದೆನಿಸಿಕೊಂಡ ಈಕೆ ಇನ್ಸ್ಟಾಗ್ರಾಮ್ನಲ್ಲಿ ಲಕ್ಷಾಂತರ ಫಾಲೋವರ್ಸ್ಗಳನ್ನು ಹೊಂದಿದ್ದಾಳೆ. ಹಲವು ಉದ್ಯಮಗಳನ್ನು ಕೂಡ ಈಕೆ ನಡೆಸುತ್ತಿದ್ದಳು. ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್ಗೆ ಏನಾಗಿದೆ? ಎಂದು ಹೇಳಿದ್ಯಾಕೆ?
ಸಾವಿಗೆ ಕಾರಣವಾದ ಇನ್ಸ್ಟಾಗ್ರಾಮ್ ಪೋಸ್ಟ್:
ಎ.28ರಂದು ಕ್ವೆವೆಡೊ ನಗರದ ರೆಸ್ಟೋರೆಂಟ್ವೊಂದಕ್ಕೆ ಲ್ಯಾಂಡಿ ತೆರಳಿದ್ದರು. ಈ ವೇಳೆ ವೆರೈಟಿ ಸೀ ಫುಡ್ಗಳನ್ನು ಆರ್ಡರ್ ಮಾಡಿದ್ದಾರೆ. ಫುಡ್ಗಳು ಟೇಬಲ್ ಮೇಲೆ ಬಂದ ಕೂಡಲೇ ಫೊಟೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೊಟೋ ಲ್ಯಾಂಡಿಯ ಪ್ರಾಣಕ್ಕೆ ಕುತ್ತು ತಂದಿತ್ತು. ಹಂತಕರು ಪೋಸ್ಟ್ ಮಾಡಿದ್ದ ಫೊಟೋದ ಜಾಲವನ್ನು ಹಿಡಿದು ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ರೆಸ್ಟೋರೆಂಟ್ಗೆ ಬಂದ ದುಷ್ಕರ್ಮಿಗಳು ಲ್ಯಾಂಡಿ ಮೇಲೆ ಗನ್ನಿಂದ ಶೂಟ್ ಮಾಡಿ ಪರಾರಿಯಾಗಿದ್ದಾರೆ. ಈಕ್ವೆಡಾರ್ನ ಸುಂದರಿ ದುಷ್ಕರ್ಮಿಗಳ ಗುಂಡೇಟಿಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹಂತಕರು ಈಕೆಯ ಇನ್ಸ್ಟಾಗ್ರಾಮ್ನ್ನು ಫಾಲೋ ಮಾಡಿ ಹತ್ಯೆ ಮಾಡಿದ್ದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೀಡಿಯೋ ರೆಸ್ಟೋರೆಂಟ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು ವಿಶೇಷ ತಂಡ ರಚನೆ ಮಾಡಿದ್ದಾರೆ. 2023ರಲ್ಲಿ ಅಟಾರ್ನಿ ಜನರಲ್ ಕಚೇರಿಯಲ್ಲಿ ನಡೆದ ಸಂಘಟಿತ ಅಪರಾಧ ಪ್ರಕರಣದಲ್ಲಿ, ಡ್ರಗ್ ಕಳ್ಳ ಸಾಗಾಣಿಕೆಯಲ್ಲಿ ಲ್ಯಾಂಡಿ ಹೆಸರು ಕೇಳಿಬಂದಿತ್ತು. ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದ ತನ್ನ ಬಾಯ್ಫ್ರೆಂಡ್ನಿಂದ ದೂರಾಗಿದ್ದ ಲ್ಯಾಂಡ್ರಿಯ ಈ ನಿಗೂಢ ಬರ್ಬರ ಹತ್ಯೆಗೆ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.
FILM
ರಜನಿಕಾಂತ್-ಐಶ್ವರ್ಯ ರೈ ಸಂಬಂಧಪಟ್ಟ ವೀಡಿಯೋ ಈಗ ವೈರಲ್ ..!! ಅಮಿತಾಬಚನ್, ಅಭಿಷೇಕ್ಗೆ ಏನಾಗಿದೆ? ಎಂದು ಹೇಳಿದ್ಯಾಕೆ?
ಮುಂಬೈ/ಮಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಲೋಕದಲ್ಲಿ ತಮ್ಮದೇ ಆದ ಸ್ಟಾಂಡ್ ಕ್ರಿಯೇಟ್ ಮಾಡಿದ್ದಾರೆ. ಕೇವಲ ತಮಿಳು ಭಾಷೆ ಅಲ್ಲದೇ ಎಲ್ಲಾ ಭಾಷೆಗಳಲ್ಲಿಯೂ ರಜನಿಗೆ ಫ್ಯಾನ್ಸ್ ಇದ್ದಾರೆ. ಇನ್ನು ಅವರ ಚಾರ್ಮ್ ಅಬ್ಬಾ…! ವಯಸ್ಸಲ್ಲಿ 73 ಆದರೂ ಚಿರ ಯುವಕನಂತೆ ಕಾಣಿಸುವ ಎನರ್ಜಿ ಇವರದು. ಇನ್ನು ಇವರ ಸಿನೆಮಾ ರಿಲೀಸ್ ಆದ್ರೆ ಸಾಕು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತೆ. ಅದಕ್ಕೆ ಇತ್ತೀಚೆಗೆ ರಿಲೀಸ್ ಆದ ಜೈಲರ್ ಸಿನೆಮಾವೇ ಸಾಕ್ಷಿ. ಇದೀಗ ರಜನಿ ಹಾಗೂ ಐಶ್ವರ್ಯ ರೈ ಗೆ ಸಂಬಂಧಪಟ್ಟ ಹಳೆ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
14 ವರ್ಷಗಳ ಹಿಂದೆಯೇ ಕೆಲವರು ರಜನಿಕಾಂತ್ ಅವರನ್ನು ಹೀರೋ ಅಲ್ಲ ಎಂಬಂತೆ ವರ್ತಿಸಿದ್ದರಂತೆ. ಹೀಗಂತ ಖುದ್ದು ರಜನಿ ಅವರು ರೋಬೋ ಸಿನೆಮಾ ಪ್ರೆಸ್ಮೀಟ್ ನಲ್ಲಿ ಇಂಟ್ರಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದರು. ಇದೀಗ ಈ ವೀಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಐಶ್ವರ್ಯ ರೈ ಬಚ್ಚನ್ಗೆ, ಸೊಸೆಯ ‘ವಾಟ್ ದಿ ಹೆಲ್ ನವ್ಯಾ’ದಲ್ಲಿ ಡಿಮ್ಯಾಂಡ್…!
ಪ್ರೆಸ್ಮೀಟ್ನಲ್ಲಿ ಮಾತು ಆರಂಭಿಸಿದ ರಜನಿ ‘ನನ್ನ ಜೊತೆ ಹೀರೋಯಿನ್ ಆಗಿ ನಟಿಸಿರುವುದಕ್ಕೆ ಐಶ್ವರ್ಯಾಗೆ ಧನ್ಯವಾದಗಳು. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿರುವ ನನ್ನ ಸಹೋದರನ ಮನೆಗೆ ಹೋಗಿದ್ದೆ. ಪಕ್ಕದ ಮನೆ ರಾಜಸ್ಥಾನ ಕುಟುಂಬದವರು ನನ್ನನ್ನು ನೋಡಲು ಬಂದರು. ಅದರಲ್ಲಿ ನಂದುಲಾಲ್ ಎಂಬವರು ನನ್ನನ್ನು ಮಾತನಾಡಿಸಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸರ್ ನಿಮ್ಮ ತಲೆ ಕೂದಲಿಗೆ ಏನಾಗಿದೆ ಎಂದು ಕೇಳಿದರು. ಬಿಡಿ ಎಲ್ಲಾ ಉದುರಿ ಹೋಗಿದೆ ಎಂದು ಹೇಳಿದೆ. ನಿಮ್ಮ ನಿವೃತ್ತಿ ಜೀವನ ಹೇಗಿದೆ. ಲೈಫ್ ಎಂಜಾಯ್ ಮಾಡ್ತಿದ್ದೀರಾ ಎಂದು ಕೇಳಿದರು. ಇಲ್ಲಾ ನಾನೊಂದು ಸಿನೆಮಾ ಮಾಡ್ತಾ ಇದ್ದೇನೆ. ಐಶ್ವರ್ಯ ರೈ ಹೀರೋಯಿನ್ ಅಂದೆ. ‘ಹೀರೋ ಯಾರು ಸರ್’ ಎಂದು ಮರು ಪ್ರಶ್ನಿಸಿದರು. ಅವರ ಜೊತೆ ಇದ್ದವರು ಡ್ಯಾಡಿ ಇವರೇ ಹೀರೋ ಎಂದು ಮೆಲುಧ್ವನಿಯಲ್ಲಿ ಹೇಳ್ತಾರೆ. ನಂದುಲಾಲ್ ಮೌನವಾಗಿ ನನ್ನನ್ನೇ ದಿಟ್ಟಿಸಿ ನೋಡಿ ಏನೂ ಮಾತನಾಡದೆ ಹೊರಟು ಬಿಟ್ಟರು. ಅಷ್ಟರಾಗಲೇ ಮನೆ ಒಳಗಡೆಯಿಂದು ಒಂದು ಧ್ವನಿ ಬರುತ್ತೆ. ಐಶ್ವರ್ಯ ರೈ ಗೆ ಏನಾಗಿದೆ..? ಅಲ್ಲಾ ಅಭಿಷೇಕ್ ಹೇಗೆ ಒಪ್ಪಿದ್ರು..? ಅಮಿತಾಬಚನ್ಗಾದ್ರು ಎನಾಗಿದೆ.. ಐಶ್ವರ್ಯಾಳನ್ನು ಇವರ ಜೊತೆ ಹೀರೋಯಿನ್ ಮಾಡಲು ಒಪ್ಪಿದ್ದಾರಲ್ಲ ಎಂಬ ಮಾತು ಕೇಳಿ ಬಂತು ಎಂದು ರಜನಿಕಾಂತ್ ಸಿನೆಮಾ ಪ್ರೆಸ್ ಮೀಟ್ನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದರು.
- DAKSHINA KANNADA3 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- FILM5 days ago
ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!
- dehali4 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY4 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು