DAKSHINA KANNADA
ಮಸ್ಕತ್ ನಲ್ಲಿ ತುಳುನಾಡನ್ನು ಮರುಸೃಷ್ಠಿಸಿದ ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘ
ಮಂಗಳೂರು/ಮಸ್ಕತ್ : ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS)ನೆರಳಲ್ಲಿ “ಸಾಂಸ್ಕೃತಿಕ ಸಮ್ಮಿಲನ ” ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF) – ಗ್ರಾಮೀಣ ಕ್ರೀಡೋತ್ಸವ ಶುಕ್ರವಾರ(ಅ.25) ಮಸ್ಕತ್ ನ ಬರ್ಕ ಗುತ್ತಿನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು. ತುಳುನಾಡಿನ ಬಂಟರ ಸಂಸ್ಕೃತಿ, ನಂಬಿಕೆ,ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು “ತುಳುನಾಡಿನ ಪ್ರತಿಕೃತಿ ” ಸೃಷ್ಟಿಸಲಾಗಿತ್ತು.
ಮಸ್ಕತ್ ಹೊರವಲಯದಲ್ಲಿ ರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್ ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆ ಯಲ್ಲಿ “ಬರ್ಕ ಗುತ್ತು ಮನೆ “, ಸಾವಿರ ಮಂದಿ ಕುಳಿತು ಕೊಳ್ಳ ಬಹುದಾದ “ಬಂಟರ ಭವನ” ನಿರ್ಮಿಸಲಾಗಿತ್ತು.
ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಬಾವಿ, ಸಿರಿ ತುಪ್ಪೆ – ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ ಬಾರ ಕಲದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿಯ ಬಚ್ಚಲು ಮನೆ,ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು ಮಾಡಿದ ವಿಶಾಲವಾದ ಚಪ್ಪರ(ಶಾಮಿಯಾನದ ಬಳಕೆ ಮಾಡಲಿಲ್ಲ ), ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆಯ ಭೋಜನ ಶಾಲೆ, ಖರ್ಜೂರದ ಮರಕ್ಕೆ ಎಳನೀರು ಗೊಂಚಲುಗಳನ್ನು ಕಸಿಕಟ್ಟಿ ಅಳವಡಿಸಿದ ಶೇಂದಿ ಮೂರ್ತೆಯ ಮಡಿಕೆ, ಸಂತೆಯ ಗದ್ದೆಯಲ್ಲಿ ಎಲೆ ಮಡಲು ಕಟ್ಟಿ ನಿರ್ಮಿಸಿದ ಗೂಡಂಗಡಿಗಳನ್ನು ಸಮ್ಮಿಲನ ಕ್ಕಾಗಿ ಅಣಿಗೊಳಿಸ ಲಾಗಿತ್ತು.
ಕೊಡೆತ್ತೂರಿನಿಂದ ತರಿಸಿದ್ದ ಭತ್ತದ ತೆನೆಗಳನ್ನು ಗುತ್ತಿನ ಯಜಮಾನ ಶಶಿಧರ ಶೆಟ್ಟಿ ಮಲ್ಲಾರ್ ಅವರು ತುಳಸಿ ಕಟ್ಟೆಯ ಬಳಿಯಿಂದ ಹೊತ್ತುಕೊಂಡು ಪರಿವಾರದೊಂದಿಗೆ ಗುತ್ತಿನ ಚಾವಡಿ ಪ್ರವೇಶಿಸಿದರು. ದೀಪ ಬೆಳಗಿಸಿ, ಪ್ರಾರ್ಥನೆ ಮಾಡಿ ಕೊರಲ್ ಪರ್ಬ (ಕದಿರು ಹಬ್ಬ) ಆಚರಿಸಲಾಯಿತು.
ಬೆಳಗ್ಗಿನ ಉಪಹಾರಕ್ಕೆ ತುಳುನಾಡಿನ ಸಾಂಪ್ರದಾಯಿಕ ಪದೆಂಗಿ , ಸಜ್ಜಿಗೆ ಬಜಿಲ್, ಮೂಡೆ ಚಟ್ನಿ, ಶೀರ. ಮತ್ತು ಗೂಡoಗಡಿಗಳಲ್ಲಿ ನಿರಂತರವಾಗಿ ಎಳನೀರು, ಬಚ್ಚಗಾoಯಿ, ಕಬ್ಬಿನ ರಸ, ಮಜ್ಜಿಗೆ, ಪಾನಕ, ಚರುoಬುರಿ, ಬಾಳೆ ಹಣ್ಣು,ಐಸ್ ಕ್ಯಾಂಡಿ, ಸಬಿ ತಿಂಡಿ ಗಳ ವಿತರಣೆ ಮಾಡಲಾಗಿತ್ತು. ಸಂಜೆ ಮೊಟ್ಟೆ ಆಮ್ಲೆಟ್, ಪೋಡಿ, ಗೋಳಿಬಜೆಯ ವ್ಯವಸ್ಥೆ ಇತ್ತು. ಬಂಟ ಪರಿವಾರದವರೇ ಸಿದ್ದ ಪಡಿಸಿದ ಶುಚಿ ರುಚಿಯಾದ ತುಳುನಾಡಿನ ಕೋಳಿ ತಮ್ಮನ ದ ಊಟವನ್ನು ಬಾಳೆಎಲೆಯಲ್ಲಿ ಬಡಿಸಲಾಯಿತು.
ಮಸ್ಕತ್ ನ ಬರ್ಕಗುತ್ತು ಕಂಬಳ :
ಶಿಬಿರಗಳಲ್ಲಿ ಕೋಣ ಗಳನ್ನು ಸಜ್ಜು ಗೊಳಿಸಿ ಕೊಂಬು, ಡೋಲು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ದೊಂದಿಗೆ ಬರ್ಕ ಗುತ್ತಿನ ಅಂಗಳಕ್ಕೆ ಉತ್ಸಾಹ ದಿಂದ ಆಗಮಿಸುವ ನೊಗ ಕಟ್ಟಿದ ಓಟದ ಕೋಣಗಳ ಅಬ್ಬರ,ಯಜಮಾನ ಪರಿವಾರ ವನ್ನು ಬರ್ಕ ಗುತ್ತಿನ ಏಳು ಪ್ರಮುಖರು ಜೋಡು ಬೊಂಡ ಕೊಟ್ಟು ಸ್ವಾಗತ ನೀಡಿ ಬರಮಾಡಿ ಕೊಳ್ಳುವ, ಕೋಣಗಳು ಸಾಲಾಗಿ ಗದ್ದೆಗೆ ಇಳಿಯುವ, ಗಂತಿನಲ್ಲಿ ಪುoಡಾಟ ಮಾಡುವ, ಕೋಣಗಳನ್ನು ಓಡಿಸುವ ದೃಶ್ಯ ಗಳು ರಂಜನೀಯವಾಗಿತ್ತು.
ಕೋಣಗಳ ಪ್ರತಿಕೃತಿಗಳನ್ನು ರಚಿಸಿ, ಅದರೊಳಗೆ ಸೇರಿ ನಿಜ ಕೋಣಗಳ ಹಾವಭಾವಗಳನ್ನು ಪ್ರದರ್ಶನ ಮಾಡುವಾಗ ಸಾಂಪ್ರದಾಯಿಕ ಕಂಬಳದ ಉಡುಗೆ ಉಟ್ಟು, ಮುಂಡಾಸು ಕಟ್ಟಿ, ಬೆತ್ತ ಹಿಡಿದು ಅಣಕು ಕಂಬಳ ದೃಶ್ಯ ನಿರ್ಮಿಸಿ ಸಂಭ್ರಮಿಸುವ ಬಳಗದ ಸದಸ್ಯರ ಉತ್ಸಾಹವು ಮಸ್ಕತ್ ನಲ್ಲಿ ತುಳುನಾಡಿನ ಕಂಬಳದ ಮರು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು.
- ಕಾಪು ಮಲ್ಲಾರ್ ಸಹೋದರರ ಮಾಲಕತ್ವದ, ಕಿನ್ನಿಗೋಳಿ ಮುಕ್ಕಮನೆಯ ಚೆನ್ನೆ ಮತ್ತು ಪಾಂಡು ಕೋಣಗಳು.
- ಗೋಬ್ರ ಗುತ್ತು ಸುರೇಂದ್ರ ಶೆಟ್ಟಿ ಮತ್ತು ರುವಿ ಗುತ್ತು ಜಯರಾಜ್ ಶೆಟ್ಟಿ ಯವರ ಚಾಂಪಿಯನ್ ದೋಣಿ ಮತ್ತು ರಾಕೆಟ್ ಬೊಲ್ಲೇ ಕೋಣಗಳು.
- ಸೋಹರ್ ಗುತ್ತಿನವರ ಬರ್ಗಿ ಮತ್ತು ಲಕ್ಕಿ ಕೋಣಗಳು.
- ಮಸ್ಕತ್ ಗುತ್ತು ಕಿಶನ್ ಶೆಟ್ಟಿ ಕಿನ್ನಿಗೋಳಿಯವರ ಕಾಲೆ ಮತ್ತು ದೂಜೆ ಕೋಣಗಳು
- ಅಭಿಮನ್ಯು ಗೆಳೆಯರ ಬಳಗ ಮಸ್ಕತ್ ರವರ ಕರಿಯೆ ಮತ್ತು ತಾಟೆ ಕೋಣಗಳು
ಒಟ್ಟು ಐದು ಜೊತೆ ಕೋಣಗಳು ಭಾಗವಹಿಸಿದ್ದವು. ಗದ್ದೆ ಹುಣಿಯಲ್ಲಿ ಐಸಿರದ ಜೋಕುಲು (ಚಿಯರ್ ಗರ್ಲ್ಸ್ ) ಹುಲ್ಲು ಸೂಡಿ ಹಿಡಿದು ನಲಿದು ಹುರಿದುಂಬಿಸಿದರು.
ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೋತ್ಸವ :
ಬಂಗಾರದ ನರ್ತೆ ಹೆಕ್ಕುವ ನಿಧಿ ಶೋಧ, ಹಗ್ಗ ಜಗ್ಗಾಟ, ಕೈಚೆಂಡು, ಮೊಸರು ಕುಡಿಕೆ ಗೋಪುರ ರಚನೆ, ಬೊಂಡ ಗುಂಡು ಎಸೆತ, ಕೆಸರು ಗದ್ದೆ ಓಟ, ಮಕ್ಕಳಾಟದಲ್ಲಿ ನೂರಾರು ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಪಾಲ್ಗೊಂಡು ಸಂಭ್ರಮಿಸಿದರು. ಬಾಳ್ ಕಟ್ಟದೆ, ಜೂಜು ಇಲ್ಲದ ಕೋಳಿ ಅಂಕದಲ್ಲಿ ಹತ್ತಾರು ಕಟ್ಟದ ಹುಂಜಗಳ ಕೋಳಿ ಕಾಳಗ ನಡೆಸಲಾಯಿತು.
ಕೆಸರು ಗದ್ದೆಯಲ್ಲಿ ಜಾನಪದ ಕುಣಿತ, ಗುತ್ತಿನ ಅಂಗಳದಲ್ಲಿ ಕಂಗಿಲು ಕುಣಿತ, ನೃತ್ಯ ಭಜನೆ ನಡೆಯಿತು. ಗೂಡು ದೀಪ ಸ್ಪರ್ಧೆ ಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಗಳು ಇದ್ದವು. ರಂಗೋಲಿ, ಮಡಲು ಹೆಣೆಯುವ, ಭತ್ತ ಕುಟ್ಟುವ ಸ್ಪರ್ಧೆಗಳು ನಡೆದವು.
ಇದನ್ನೂ ಓದಿ : ಪುಡಿ ರಾಜಕಾರಣಿ ಎಂದಿದ್ದ ಹರಿಪ್ರಸಾದ್ ಗೆ ತಿರುಗೇಟು ನೀಡಿದ ಪೇಜಾವರ ಶ್ರೀ
ಕದ್ರಿ ನವನೀತ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿ, ನಿರಂತರ 16 ಗಂಟೆಗಳ ಕಾಲ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸರೋಜ ಶಶಿಧರ ಶೆಟ್ಟಿ ಮಲ್ಲಾರ್, ಸುಧೀರಾ ದಿವಾಕರ್ ಶೆಟ್ಟಿ ಮಲ್ಲಾರ್, ಶೈನಾ ಗಣೇಶ್ ಶೆಟ್ಟಿ, ವಾಣಿಶ್ರೀ ನಾಗೇಶ್ ಶೆಟ್ಟಿ,ಶ್ರೇಯ ಮನೋಜ್ ಜಯರಾಮ್ ಶೆಟ್ಟಿ, ಅನುಷಾ ಶಿಶಿರ್ ರೈ, ಸುರಕ್ಷಾ ಹರ್ಷಿತ್ ರೈ ದಂಪತಿ ತಂಡವು ಸಾವಿರಾರು ಬಂಟರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಈ ಚಾರಿತ್ರಿಕ ಸಮ್ಮೇಳನ ನಡೆಯಿತು.
DAKSHINA KANNADA
ಮಂಗಳೂರು: ಪೊಲೀಸ್ ಅಧಿಕಾರಿ ಹೆಸರಲ್ಲಿ ಕರೆ; 50 ಲ.ರೂ. ವಂಚನೆ
ಮಂಗಳೂರು: ಪೊಲೀಸ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ ನಂಬಿಸಿ, ವmಚಿಸಿ ವ್ಯಕ್ತಿಯೋರ್ವನಿಂದ 50 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಮಂಗಳುರಿನಲ್ಲಿ ನಡೆದಿದೆ.
ಅ.11ರಂದು ಅಪರಾಹ್ನ ಮಂಗಳುರು ಮೂಲದ ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಅತನನ್ನು ಮಂಗಳುರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿನಯ ಕುಮಾರ ಎಂದು ಪರಿಚಯಿಸಿಕೊಂಡಿದ್ದ. ‘ಕಿರುಕುಳದ ಬಗ್ಗೆ ನಿಮ್ಮ ಮೇಲೆ ದೂರು ದಾಖಲಾಗಿದ್ದು ಠಾಣೆಗೆ ಬರಬೇಕು’ ಎಂದು ತಿಳಿಸಿದಾಗ, ‘ತಾನು ಸಿಬಿಐನಿಂದ ಕರೆ ಮಾಡುತ್ತಿರುವ ಆಕಾಶ ಕಲ್ಲುಹಾರಿ’ ಎಂದು ಆರೋಪಿ ಪರಿಚಯಿಸಿಕೊಂಡ.
‘ನರೇಶ್ ಗೋಯೆಲ್ ಎಂಬವರ ಮನೆಯನ್ನು ಜಪ್ತಿ ಮಾಡುವಾಗ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ. ಅದರಲ್ಲಿ 20 ಜನರು ಒಟ್ಟು 2 ಕೋ.ರೂ.ಗಳನ್ನು ನಿಮ್ಮ ಮುಂಬಯಿಯ ಖಾತೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆ ಬಗ್ಗೆ ಮನಿ ಲ್ಯಾಂಡರಿಂಗ್ ಪ್ರಕರಣ ಕೂಡ ನಿಮ್ಮ ಮೇಲೆ ದಾಖಲಾಗಿದೆ. ಹಾಗಾಗಿ ಸಿಬಿಐನವರು ಬಂಧಿಸುತ್ತಾರೆ. ನಿಮ್ಮ ದಾಖಲಾತಿಗಳನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಬೇಕು. ನಿಮಗೆ ಬರಲು ಅಸಾಧ್ಯವಾದರೆ ನಾನೇ ಆನ್ಲೈನ್ ಮೂಲಕ ತನಿಖೆ ಮಾಡುತ್ತೇನೆ’ ಎಂದು ದೂರುದಾರರಿಗೆ ಹೇಳಿದ.
ಮರುದಿನ ಮತ್ತೆ ಕರೆ ಮಾಡಿದ ಆಕಾಶ ಕುಲ್ಲಹಾರಿ ಬ್ಯಾಂಕ್ ಖಾತೆ ವಿವರಗಳನ್ನು ಕೇಳಿದ. ದೂರುದಾರರು ಎಲ್ಲ ವಿವರ ಒಪ್ಪಿಸಿದ್ದು, ‘ಖಾತೆಯಲ್ಲಿರುವ ಎಲ್ಲ ಹಣವನ್ನು ಆರ್ಬಿಐಗೆ ವರ್ಗಾಯಿಸಬೇಕಾಗಿದೆ. ಆದರೆ ಆ ರೀತಿ ವರ್ಗಾಯಿಸಿದರೆ ನಿಮ್ಮ ಮೇಲೆ ಸಂದೇಹ ಬರುತ್ತದೆ. ಹಾಗಾಗಿ ಶಿವಾನಿ ಎಂಟರ್ಪ್ರೈಸಸ್ನ ಖಾತೆಗೆ ವರ್ಗಾವಣೆ ಮಾಡಿ’ ಎಂದು ಬ್ಯಾಂಕ್ ಖಾತೆ ಸಂಖ್ಯೆ ನೀಡಿದ.
ದೂರುದಾರರು ಅ. 19ರಂದು ಅವರ ಖಾತೆಯಿಂದ 50 ಲಕ್ಷ ರೂ. ಹಣವನ್ನು ಆಕಾಶ ಕುಲ್ಲಹಾರಿ ನೀಡಿದ ಖಾತೆಗೆ ವಾಟ್ಸ್ಆ್ಯಪ್ಮೂಲಕವರ್ಗಾವಣೆ ಮಾಡಿದ್ದರು. ಮೂರು ದಿನಗಳ ಅನಂತರ ಮರುಪಾವತಿ ಮಾಡುತ್ತೇನೆಂದು ತಿಳಿಸಿದ.
ಅ. 23ರಂದು ದೂರುದಾರರು ಆಕಾಶ ಕುಲ್ಲಹಾರಿಗೆ ಕರೆ ಮಾಡಿ ಹಣದ ಬಗ್ಗೆ ವಿಚಾರಿಸಿದಾಗ ‘ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇನೆ. ಆದರೆ ನೀವು ಬೇರೊಂದು ಬ್ಯಾಂಕ್ ಖಾತೆಗೆ ಕೆಲವು ಮೊತ್ತವನ್ನು ವರ್ಗಾವಣೆ ಮಾಡಬೇಕು’ ಎಂದಿದ್ದಾನೆ. ಆ ಸಂದರ್ಭದಲ್ಲಿ ದೂರುದಾರರಿಗೆ ಸಂದೇಹ ಉಂಟಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಸತತ 2ನೆಯ ಬಾರಿಗೆ ಯಶಸ್ವಿ ಹೆಜ್ಜೆಯನ್ನು ಇಡುತ್ತಿದೆ ಆಶೀರ್ವಾದ ಸಂಸ್ಥೆ
ಮಂಗಳೂರು: ನಾವು ನೀಡುವ 1 ಸಾವಿರ ರೂ.ಗೆ ಕಡಿಮೆಯಾಗದಂತಹ ವಸ್ತುಗಳನ್ನು ನಮ್ಮ ಕೈಗಿಡುವ ಜವಾಬ್ದಾರಿಯನ್ನು ಆಶೀರ್ವಾದ ಬೆನಿಫಿಟ್ ಸ್ಕೀಂ ತಂಡ ವಹಿಸಿಕೊಂಡಿದೆ. ಇದೊಂದು ಸಾಮಾಜಿಕ ಸೇವೆಯ ಭಾಗ. ಇದರಲ್ಲಿ ನಾವು ಮನೆಯನ್ನು ಗಳಿಸಿಕೊಳ್ಳಬಹುದು ಅಥವಾ ಇನ್ನಾವುದೋ ಅವಶ್ಯಕ ವಸ್ತುಗಳನ್ನು ಗಿಫ್ಟ್ ಆಗಿ ಪಡೆದುಕೊಳ್ಳಬಹುದು.
ಆಶೀರ್ವಾದ ಬೆನಿಫಿಟ್ ಸ್ಕೀಂ. ಸಂಸ್ಥೆಯ ಧ್ಯೇಯೋದ್ದೇಶಗಳೇನು :
ಆಧುನಿಕ ಜೀವನದ ಭರಾಟೆಯಲ್ಲಿ ನಮಗೆ ತೀರಾ ಅವಶ್ಯಕ ಎನಿಸುವ ವಸ್ತುಗಳನ್ನೇ ಖರೀದಿಸಲು ಅಥವಾ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಎಲ್ಲರೂ ಕಂಡುಕೊಂಡ ಸತ್ಯ. ಸಾಧಾರಣ ಶ್ರೀಮಂತರೆನಿಸಿಕೊಂಡವರೇ ಇಷ್ಟು ಕಷ್ಟ ಪಡುತ್ತಿರುವಾಗ ಇನ್ನು ಜನಸಾಮಾನ್ಯರ ಪರದಾಟ ಕೇಳುವುದೇ ಬೇಡ. ತೀರಾ ಅವಶ್ಯಕ ಎನಿಸುವ ಮೂಲಸೌಕರ್ಯಗಳನ್ನು ಸಂಪಾದಿಸಿಕೊಳ್ಳುವುದು ಯಾವಾಗಾ? ತೀರಾ ಬೇಕೇ ಬೇಕೆನಿಸುವ ಸಂದರ್ಭದಲ್ಲಿ ಯಾರ ಬಳಿಯಾದರೂ ಕೇಳಿಯಾದರೂ ಪಡೆದುಕೊಳ್ಳಬಹುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಹುಟ್ಟಿಕೊಂಡದ್ದೇ ಆಶೀರ್ವಾದ್ ಲಕ್ಕಿ ಸ್ಕೀಂ.
ಜೀವನದ ಎಲ್ಲಾ ಜಂಜಾಟಗಳ ನಡುವೆಯೂ, ಭವಿಷ್ಯದ ಬಗ್ಗೆ ಸ್ವಲ್ಪ ಹೊತ್ತು ಆಲೋಚಿಸುವುದು ತೀರಾ ಅವಶ್ಯಕ. ತಿಂಗಳ ದುಡಿಮೆಯಲ್ಲಿ ನಾಳೆಗೆಂದು ನಾವೆಷ್ಟು ಉಳಿಕೆ ಮಾಡುತ್ತಿದ್ದೇವೆ ಎಂದು ಕೇಳಿದರೆ – ಅಡ್ಡಡ್ಡ ತಲೆಯಾಡಿಸುವವರೇ ಹೆಚ್ಚು. ಕನಿಷ್ಠ ತಿಂಗಳಲ್ಲಿ 1 ಸಾವಿರ ರೂಪಾಯಿಯನ್ನು ಉಳಿಸುವುದು ಕಷ್ಟವಾಗಲಾರದು ಎನ್ನುವುದು ಸಾಮಾನ್ಯರ ಅನಿಸಿಕೆ.
ಈಗಾಗಲೇ ಒಂದು ಸ್ಕೀಂ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹೆಗ್ಗಳಿಕೆ ಪಾತ್ರವಾಗಿದ್ದು, ಇನ್ನೊಂದು ಸ್ಕೀಂ ಅನ್ನು ಪ್ರಾರಂಭಿಸಿದ್ದೇವೆ. ಇದು ಎರಡನೇ ಸ್ಕೀಂ. ಇಲ್ಲಿ ಹೂಡಿಕೆ ಮಾಡುವ ಎಲ್ಲರೂ ಅದೃಷ್ಟವಂತರೇ. ಆದರೆ ಕೆಲವರು ಮಾತ್ರ ಹೆಚ್ಚು ಅದೃಷ್ಟವಂತರು.
DAKSHINA KANNADA
ಪಡುಬಿದ್ರಿ: ಹುಡುಗಿಗೆ ಮೆಸೇಜ್ ಮಾಡಿದ ಗುಮಾನಿ; ಮಾಜಿ ಗೆಳೆಯನ ಮೇಲೆ ಸ್ನೇಹಿತರಿಂದಲೇ ಹ*ಲ್ಲೆ
ಪಡುಬಿದ್ರಿ: ಸುರತ್ಕಲ್ನ ಹುಡುಗಿಗೆ ಮೆಸೇಜ್ ಮಾಡಿದ ಗುಮಾನಿಯೊಂದಿಗೆ ಹಳೆಯ ಸ್ನೇಹಿತರಾಗಿದ್ದು, ಒಂದೂವರೆ ವರ್ಷಗಳಿಂದ ಮಾತುಕತೆ ಇರದ ಗೆಳೆಯರೇ ಉಚ್ಚಿಲದ ಮಹಮ್ಮದ್ ವಾಸಿಮ್ (23) ಅವರಿಗೆ ಅ. 23ರಂದು ಉಚ್ಚಿಲ ಪೇಟೆಯಲ್ಲಿ ಅವರ ಕೆನ್ನೆಗೆ, ಎದೆಗೆ ಕೈಯಿಂದ ಹೊಡೆದು ಗಾಯಗೊಳಿಸಿದ ಪ್ರಕರಣ ಅ. 24ರಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೊದಲಿಗೆ ಆರೋಪಿ ಪವನ್ ಮಸೇಜ್ ಮಾಡಿದ ಕುರಿತಾಗಿ ಮಹಮ್ಮದ್ ವಾಸೀಮ್ ಹಾಗೂ ಅವರ ತಮ್ಮ ತಾಹೀಬ್ಗ ಮೊಬೈಲ್ ಮೂಲಕ ಅವಾಚ್ಯವಾಗಿ ಬೈದಿದ್ದ. ಬಳಿಕ ಇನ್ನೋರ್ವ ಆರೋಪಿ ಇಸ್ಮಾಯಿಲ್, ವಾಸೀಮ್ ಅವರನ್ನು ಉಚ್ಚಿಲ ಬಸ್ ನಿಲ್ದಾಣದ ಬಳಿ ಬಾ. ಸರಿ ಮಾಡೋಣ ಎಂದು ಹೇಳಿದ್ದ. ಬಳಿಕ ಆರೋಪಿಗಳಾದ ಗಗನ್, ಇಸ್ಮಾಯಿಲ್, ಪವನ್, ರಜಾನ್, ಸಫ್ರಾಜ್, ಮಹೇಶ್ ಹಾಗೂ ಅರ್ವಾಜ್ ಅವರು ಮೂರು ಕಾರುಗಳಲ್ಲಿ ಅ. 23ರ ರಾತ್ರಿ ಉಚ್ಚಿಲಕ್ಕೆ ಬಂದಿದ್ದು, ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮಹಮ್ಮದ್ ವಾಸೀಮ್ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
- FILM6 days ago
ಇರಲು ಮನೆ ಇರಲಿಲ್ಲ; ಮೆಜೆಸ್ಟಿಕ್ನಲ್ಲೇ ಸುತ್ತಾಡಿದ್ದ ಸಿಹಿ ಕುಟುಂಬ; ಕಷ್ಟಗಳ ನೆನೆದು ಪುಟಾಣಿ ಕಣ್ಣೀರು
- LATEST NEWS6 days ago
ನಿಜವಾದ ಸಾಧನೆ: ಎಂ.ಬಿ.ಬಿ.ಎಸ್ ಸೀಟ್ ಪಡೆದು ಭವಿಷ್ಯದ ವೈದ್ಯರಾಗಲು ಹೊರಟ 4 ಸಹೋದರಿಯರು
- FILM6 days ago
ಅ*ಶ್ಲೀಲ ವೀಡಿಯೋ ವೈರಲ್; ಈ ಕೆಲಸ ಮಾಡಿದ್ದು ಅವನು ಎಂದ ಓವಿಯಾ
- DAKSHINA KANNADA5 days ago
ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಸಮುದ್ರಪಾಲು