Connect with us

    DAKSHINA KANNADA

    ” ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಜನವರಿ 29ರಂದು ಮಂಗಳೂರಿನಲ್ಲಿ ಬಿಲ್ಲವರ ಬೃಹತ್ ಸಮಾವೇಶ “

    Published

    on

    ಮಂಗಳೂರು :  ಬಿಲ್ಲವ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು 2023 ಜನವರಿ 29 ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ.  

    ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಈ ಬೃಹತ್ ಸಮಾವೇಶ ನಡೆಯಲಿದೆ ಎಂದು ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಹಾಗೂ ಸಮಾವೇಶ ಕುರಿತ ತಾತ್ಕಾಲಿಕ ಸಮಿತಿಯ ಸಂಚಾಲಕರಾದ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ,

    ಮಂಗಳೂರಿನಲ್ಲಿ ಮಂಗಳವಾರ ಸಮಾವೇಶ ಕುರಿತಾಗಿ ಕರೆದ ಪೂರ್ವಭಾವಿ ಸಭೆಯ ಬಳಿಕ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

    ಬ್ರಹ್ಮ ಶ್ರೀ ನಾರಯಣಗುರು ಅಭಿವೃದ್ಧಿ ನಿಗಮದ ವಿಚಾರವಾಗಿ ಸಭೆಯಲ್ಲಿ ಎರಡು ಜಿಲ್ಲೆಗಳ ಸರಿ ಸುಮಾರು 500 ರಿಂದ 600 ಪ್ರಮುಖರು , ಸಂಘಟನೆ,ಕ್ಷೇತ್ರಗಳು , ಗುರು ಮಂದಿರಗಳು, ಎಲ್ಲಾ ಗರಡಿಗಳ ಪ್ರಮುಖರು ಭಾಗವಹಿಸಿದ್ದರು. ಈಡಿಗ, ಬಿಲ್ಲವ, ನಾಮಧಾರಿ ಸೇರಿ 26 ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಗಳ ಸ್ಥಾಪನೆಯ ಬೇಡಿಕೆ ಬಿಲ್ಲವ ಸಮಾಜದಿಂದ ಸರ್ಕಾರದ ಮುಂದೆ ಮಂಡನೆಯಾಗಿದೆ .

    ಇದಕ್ಕೆ ಒತ್ತಡ ತರಲು ಉಭಯ ಜಿಲ್ಲೆಗಳನ್ನು ಸೇರಿಸಿ ಮಂಗಳೂರಿನಲ್ಲಿ ಜನವರಿ 29 ರಂದು ಬೃಹತ್ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದರು.

    ಅಂದು ಅಪರಾಹ್ನ ಮೂರು ಘಂಟೆಗೆ ಮೆರವಣಿಗೆ ಮತ್ತು ನಾಲ್ಕು ಘಂಟೆಗೆ ಸಭಾ ಕಾರ್ಯಕ್ರಮ ನಡೆಸಲು ರೂಪುರೇಷೆ ಸಿದ್ದಪಡಿಸಲಾಗಿದ್ದು, ಅತಿಥಿಗಳ ಬಗ್ಗೆ ಮುಂದೆ ತೀರ್ಮಾನ ಮಾಡಲಿದ್ದೇವೆ.

    ಈ ಬಗ್ಗೆ ಬಿಲ್ಲವರ ಶಕ್ತಿ ಕೇಂದ್ರಗಳಾದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ , ಕಟಪಾಡಿ ವಿಶ್ವನಾಥ ಕ್ಷೇತ್ರ , ಗೆಜ್ಜೆಗಿರಿ ಕ್ಷೇತ್ರ, ಕಂಕನಾಡಿಯ ಗರೋಡಿ ಕ್ಷೇತ್ರ, ಗಳ ಹಿರಿಯರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು,

    ಸಮಾಜ ಒಂದಾಗಿ ನಿಂತಾಗ ಮಂತ್ರಿಗಳು ಯಾವುದೇ ಪೋಸ್ಟ್ ನಲ್ಲಿ ಇದ್ದರೂ ಸಮಾಜದ ಬಳಿ ಬರಲೇ ಬೇಕು, ಲಿಂಗಾಯತ ಸಮಾಜದಿಂದ ಆಯ್ಕೆಯಾದ ಮಂತ್ರಿಗಳು, ಮುಖ್ಯ ಮಂತ್ರಿ ಆಗಲಿ ಗುರು ಪೀಠ ಬಳಿ ಓಡಿ ಹೋಗುತ್ತಾರೆ.

    ಸಮಾಜ ಒಗ್ಗಟಾದ ಮೇಲೆ ಸಚಿವರು ನಮ್ಮ‌ ಜೊತೆ ಬಂದೇ ಬರ್ತಾರೆ, ಮಂತ್ರಿಗಳಿಗಿಂತ ಸಮಾಜ ಸುಪ್ರೀಂ ಆಗಿದೆ. ಸಾಮಾಜಿಕ ನಾಯಕರು ಸುಪ್ರೀಂ ಹೊರತು ರಾಜಕೀಯ ನಾಯಕರು ಅಲ್ಲವೆಂದ ಸತ್ಯಜೀತ್ ಅದನ್ನು ಈ ಸಮಾಜ ಮಾಡಿ ತೋರಿಸುತ್ತದೆ ಎಂದರು.

    26 ಪಂಗಡ ಒಳಗೊಂಡ ಸಮಾಜ ಬೇಡಿಕೆ: ನಾರಾಯಣ ಗುರು ನಿಗಮ ಬೇಕು :
    ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಮೊನ್ನೆ ಆದೇಶ ಬರುತ್ತೆ ನಾರಾಯಣ ಗುರು ಕೋಶ ಸ್ಥಾಪಿಸಿದ್ದೇವೆ ಅಂತಾ..ನಿಗಮ-ಕೋಶಕ್ಕೆ ಇರುವ ವ್ಯತ್ಯಾಸ ಜನ ಸಮಾಜದ ಮುಂದೆ ಇಡುವ ಸೌಜನ್ಯ ಯಾಕಾಗಿ ಜನರನ್ನು ತಪ್ಪು ದಾರಿ ಕೊಂಡೊಯ್ಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.

    ಕೋಶ ಎಂದರೆ ನಿರ್ದೇಶನಾಲಯದ ಚಿಕ್ಕ ಅಂಗ.ನಿಗಮ ಎಂದರೆ ಸ್ವಾಯತ್ತೆತೆ ಇರುವ ಸಂಸ್ಥೆ ಅದರದ್ಏ ಬೈಲ ಬರುತ್ತೆ, ಚೇರ್ ಮೇನ್ , ಹನ್ನೆರಡು ಜನ ಡೈರೆಕ್ಟರ್ ಇರುತ್ತಾರೆ, ಪರಿಹಾರ ಕೊಂಡು ಕೊಳ್ಳುವ, ಸಹಾಯ ಮಾಡುವಂತ ಒಂದು ಶಕ್ತಿ ನಿಗಮಕ್ಕೆ ಇರುತ್ತೆ ನಿಮಗೆ ಇಚ್ಚಾ ಶಕ್ತಿ ಇದ್ದಲ್ಲಿ ನಾರಾಯಣ ಗುರು ನಿಗಮ ಜೊತೆ ಐನೂರು ಕೋಟಿ ಇರಿಸಿ ಎಂದು ಸರ್ಕಾಕ್ಕೆ ಸವಾಲ್ ಹಾಕಿದರು.

    ಬಿಲ್ಲವ ಮಹಾ ಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್, ಕಟಪಾಡಿ, ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಶೇಖರ್ ಪೂಜಾರಿ,ಬೆಳ್ತಂಗಡಿ ಬಿಲ್ಲವ ಸಂಘದ ಮುಖಂಡರಾದ ಸದಾನಂದ, ಸುರತ್ಕಲ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಹಾಗೂ ಸದಸ್ಯರಾದ ಲೀಲಾಕ್ಷ ಬಿ.ಕರ್ಕೇರಾ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್, ಉಡುಪಿ ಬಿಲ್ಲವ ಮುಖಂಡ ಅಚ್ಚುತಾ ಕಡಪಾಡಿ, ಜಗನಾಥ ಕೋಟ್ಯಾನ್,ಮುಖಂಡರುಗಳಾದೀಪಕ್, ನಿತೀಶ್ , ಅನಿಲ್ ಕುಮಾರ್, ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಪಡೀಲ್‌ ಕಣ್ಣೂರು ಬಳಿ ಭೀಕರ ವಾಹನ ಅಪಘಾ*ತ; ಕೇಬಲ್ ಟೆಕ್ನಿಷಿಯನ್ ವಿಧಿವ*ಶ

    Published

    on

    ಮಂಗಳೂರು : ಪಡೀಲ್‌ ಕಣ್ಣೂರು ಬಳಿ ನಡೆದ ರಸ್ತೆ ಅಪಘಾ*ತದಲ್ಲಿ ನಮ್ಮ ಕುಡ್ಲ ವಾಹಿನಿಯ ಸಹಸಂಸ್ಥೆ ವಿಝಾರ್ಡ್‌ ಕೇಬಲ್‌ ನೆಟ್ ವರ್ಕ್‌ನ ಸಿಬಂದಿ ಹರೀಶ್ (45) ವಿಧಿವ*ಶರಾಗಿದ್ದಾರೆ. ಕರ್ತವ್ಯ ನಿಮಿತ್ತ ಫರಂಗಿಪೇಟೆಗೆ ತೆರಳಿದ್ದ ಹರೀಶ್ ಪಡೀಲ್‌ ಕಣ್ಣೂರು ಬಳಿ ಬೈಕ್ ನಿಲ್ಲಿಸಿದ್ದ ವೇಳೆ ವೇಗವಾಗಿ ಬಂದ ಡಸ್ಟರ್‌ ಕಾರೊಂದು ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.


    ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿದ್ದು, ಬೈಕ್‌ಗೆ ಡಿ*ಕ್ಕಿ ಹೊಡೆದ ಬಳಿಕ ಅಲ್ಪ ದೂರ ಚಲಿಸಿದ ಕಾರಣ ಬೈಕ್ ಸಹಿತ ಹರೀಶ್ ಕಾರಿನ ಅಡಿಗೆ ಸಿಲುಕಿಕೊಂಡಿದ್ದರು. ಈ ಭೀಕರ ಅಪಘಾ*ತದಲ್ಲಿ ಗಂಭೀರ ಗಾಯಗೊಂಡಿದ್ದ ಹರೀಶ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

    ಹರೀಶ್ ಕಲ್ಲಾಪು ಅವರು ಹಲವಾರು ವರ್ಷಗಳಿಂದ ವಿಝಾರ್ಡ್‌ ಕೆಬಲ್ ನೆಟ್‌ವರ್ಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ಕಾರ್ಕಳ : ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿ*ಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾ*ವು

    ಅಗಲಿದ ಸಿಬ್ಬಂದಿಗೆ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರು ಹಾಗೂ ಸಿಬಂದಿ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃ*ತ ಹರೀಶ್‌ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

    Continue Reading

    DAKSHINA KANNADA

    ಕದ್ದ ಫೋನ್ ಸ್ವಿಚ್ ಆಫ್ ಆಗಿದ್ರೂ ಸುಲಭದಲ್ಲಿ ಕಂಡುಹಿಡಿಯಬಹುದು.. ಹೇಗೆ ಗೊತ್ತಾ?

    Published

    on

    ಮಂಗಳೂರು: ನಿಮ್ಮ ಸ್ಮಾರ್ಟ್‌ಫೋನ್ ಕದ್ದರೆ ಮತ್ತು ಕಳ್ಳರು ಆ ಫೋನನ್ನು ಸ್ವಿಚ್ ಆಫ್ ಮಾಡಿದರೆ ಅದನ್ನು ಹುಡುಕುವುದು ದೊಡ್ಡ ಕಷ್ಟ. ಆದರೆ ಮುಂಬರುವ ಗೂಗಲ್‌ನ ನವೀಕರಣ, ಆಂಡ್ರಾಯ್ಡ್ ಬಳಕೆದಾರರ ಫೋನ್ ಸ್ವಿಚ್ ಆಫ್ ಆಗಿದ್ದರೂ ಅವರ ಸ್ಮಾರ್ಟ್‌ಫೋನ್ ನಿಖರವಾದ ಸ್ಥಳವನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ.

    ಗೂಗಲ್ ಶೀಘ್ರದಲ್ಲೇ ತನ್ನ ಆಂಡ್ರಾಯ್ಡ್ 15 ಅಪ್ಡೇಟ್ ಅನ್ನು ತರಲಿದೆ. ಇದನ್ನು ಇನ್​ಸ್ಟಾಲ್ ಮಾಡಿದ ನಂತರ ಆಂಡ್ರಾಯ್ಡ್ ಬಳಕೆದಾರರು ಸ್ವಿಚ್ ಆಫ್ ಮಾಡಿದ ನಂತರವೂ ತಮ್ಮ ಫೋನ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರಲಿಲ್ಲ.

    ಗೂಗಲ್ ಕಂಪನಿಯು ಆಂಡ್ರಾಯ್ಡ್ 15 ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಗೂಗಲ್‌ನ ಮುಂಬರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆಂಡ್ರಾಯ್ಡ್ 15 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಉತ್ತಮ ವೈಶಿಷ್ಟ್ಯವನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಫೋನ್ ಸ್ವಿಚ್ ಆಫ್ ಆಗಿದ್ದರೂ ಅದನ್ನು ಪತ್ತೆ ಮಾಡುವ ಆಯ್ಕೆ ಕೂಡ ಒಂದು.

    ಗೂಗಲ್​ನ ಮುಂಬರುವ OS ಆಂಡ್ರಾಯ್ಡ್ 15 ನಲ್ಲಿ ಪಾಸ್‌ವರ್ಡ್ ಮೂಲಕ ಹುಡುಕುವ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಹೊಸ ವ್ಯವಸ್ಥೆಯು ಪೂರ್ವ ಕಂಪ್ಯೂಟೆಡ್ ಬ್ಲೂಟೂತ್ ಬೀಕನ್ ಆಗಿರುತ್ತದೆ. ಇದು ಸಾಧನದ ಮೆಮೊರಿಯಿಂದ ನಿಯಂತ್ರಿಸಲ್ಪಡುತ್ತದಂತೆ. ಇದಕ್ಕಾಗಿ ಫೋನ್​ನ ಹಾರ್ಡ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

    ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಆಂಡ್ರಾಯ್ಡ್ ತಜ್ಞ ಮಿಶಾಲ್ ರೆಹಮಾನ್ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಜೊತೆಗೆ ಗೂಗಲ್‌ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಆಂಡ್ರಾಯ್ಡ್ 15 ಓಎಸ್ ಬಿಡುಗಡೆಗೆ ಯಾವುದೇ ನಿಖರವಾದ ದಿನಾಂಕವನ್ನು ಗೂಗಲ್ ಬಹಿರಂಗಪಡಿಸಿಲ್ಲ.

    Continue Reading

    DAKSHINA KANNADA

    ಮಾವಿನಹಣ್ಣು ತಿಂದ ನಂತರ ತಪ್ಪಿಯೂ ಈ ಆಹಾರಗಳನ್ನು ಸೇವಿಸಬಾರದು

    Published

    on

    ಮಂಗಳೂರುಈಗ ಮಾರುಕಟ್ಟೆಯಲ್ಲಿ ಹಣ್ಣಿನ ರಾಜ ಮಾವಿನ ಹಣ್ಣಿದ್ದೇ ಹವಾ. ಎಲ್ಲೆಲ್ಲಿ ನೋಡಿದರೂ ಮಾವಿನಹಣ್ಣುಗಳೇ ಕಾಣುತ್ತದೆ. ಸಖತ್ ಟೇಸ್ಟಿ ಆಗಿರುವ ಮಾವಿನಹಣ್ಣು ಎಲ್ಲರಿಗೂ ಫೇವರಿಟ್.

    ಮಾವಿನಹಣ್ಣು ಕೇವಲ ರುಚಿ ಮಾತ್ರವಲ್ಲ. ಇದು ಹಲವು ಪೋಷಕಾಂಶಗಳ ಆಗರವಾಗಿದೆ. ಆದರೆ ಮಾವಿನಹಣ್ಣು ತಿಂದ ತಕ್ಷಣ ತಪ್ಪಿಯೂ ಈ ಆಹಾರಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯ ಕೆಡಬಹುದು. ಹಾಗಾದರೆ ಮಾವಿನಹಣ್ಣು ತಿಂದ ನಂತರ ಯಾವೆಲ್ಲಾ ಪದಾರ್ಥಗಳನ್ನು ತಿನ್ನಬಾರದು ಎಂಬುದನ್ನು ತಿಳಿಯೋಣ.

    ಮೊಸರು

    ಮಾವಿನಹಣ್ಣು ತಿಂದ ತಕ್ಷಣ ಮೊಸರು ತಿನ್ನಬಾರದು. ಮಾವಿನಹಣ್ಣು ಹೀಟ್. ಮೊಸರು ತಂಪು. ಹಾಗಾಗಿ ಈ ಎರಡನ್ನೂ ಒಂದೇ ಸಮಯಕ್ಕೆ ಅಥವಾ ಮಾವು ತಿಂದು ಮೊಸರು ತಿನ್ನುವುದು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.

    ಹಾಗಲಕಾಯಿ

    ಮಾವಿನಹಣ್ಣು ತಿಂದ ನಂತರ ಹಾಗಲಕಾಯಿ ತಿನ್ನಬಾರದು. ಮಾವಿನಕಾಯಿ ತಿಂದ ತಕ್ಷಣ ಹಾಗಲಕಾಯಿ ತಿನ್ನುವುದರಿಂದ ವಾಕರಿಕೆ, ವಾಂತಿಯಂತಹ ಸಮಸ್ಯೆ ಎದುರಾಗಬಹುದು.

    ಹಾಲು

    ಮಾವು ತಿಂದ ನಂತರ ತಪ್ಪಿಯೂ ಹಾಲು ಕುಡಿಯಬಾರದು.

    ಮಸಾಲೆಯುಕ್ತ ಪದಾರ್ಥ

    ಮಾವಿನಹಣ್ಣು ತಿಂದ ತಕ್ಷಣ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗಬಹುದು. ಇದು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    ಮಾಂಸಾಹಾರ ಸೇವನೆ

    ಮಾವಿನಹಣ್ಣು ತಿಂದ ನಂತರ ಮಾಂಸಾಹಾರ ತಿನ್ನಬಾರದು. ಮಾವು ತಿಂದು ಕೋಳಿ, ಮೀನು, ಮೊಟ್ಟೆ ಇಂತಹದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು.

    ಕೋಲ್ಡ್ ಡ್ರಿಂಕ್ಸ್

    ಮಾವಿನಹಣ್ಣು ತಿಂದ ನಂತರ ಕೋಲ್ಡ್ ಡ್ರಿಂಕ್ಸ್ ಕುಡಿಯಬಾರದು. ಜೊತೆಗೆ ಹೆ್ಚ್ಚು ಸಕ್ಕರೆ ಇರುವ ಪದಾರ್ಥಗಳನ್ನು ಕೂಡ ತಿನ್ನುವುದನ್ನು ತಪ್ಪಿಸಬೇಕು.

    Continue Reading

    LATEST NEWS

    Trending