BIG BOSS
BBK 11: ಶಿಶಿರ್ ಹಸ್ತರೇಖೆ ನೋಡಿ 38ರಲ್ಲಿ ಮದುವೆ ಎಂದ ಚೈತ್ರಾ
ಬಿಗ್ಬಾಸ್ ಮನೆಯಲ್ಲಿರುವ ನಟ ಶಿಶಿರ್ ಶಾಸ್ತ್ರಿಗೆ ಚೈತ್ರಾ ಕುಂದಾಪುರ ಹಸ್ತರೇಖೆ ನೋಡಿ ಭವಿಷ್ಯ ಹೇಳಿದ್ದಾರೆ.
ಶಿಶಿರ್ ಅಂಗೈ ನೋಡಿ ಮಾತನಾಡಿದ ಚೈತ್ರಾ, ನಿಮ್ಮ ಕೈಯಲ್ಲಿ ದುಡ್ಡೇ ಇಲ್ಲ ಅನ್ನುವ ಪರಿಸ್ಥಿತಿ ಬರುವುದೇ ಇಲ್ಲ. ನೀವು 75 ವರ್ಷದ ತನಕ ಬದುಕುತ್ತೀರಿ. ಹಣದ ಸಮಸ್ಯೆ ಅಂತೂ ಬರುವುದೇ ಇಲ್ಲ. ಹಾಗಂತ ನೂರಾರು ಕೋಟಿ ಖಂಡಿತಾ ಮಾಡುವುದಿಲ್ಲ. ನಿಮ್ಮ ಜೀವನಕ್ಕೆ ಎಷ್ಟು ಬೇಕು ಅಷ್ಟು ಸಿಗುತ್ತೆ.
ಜೀವನದಲ್ಲಿ ನಂಬಿದವರಿಂದ ತುಂಬಾ ಕಳೆದುಕೊಂಡಿದ್ದೀರಾ. ಆದರೆ ಮತ್ತೆ ಅದನ್ನು ಕಟ್ಟಿಕೊಳ್ಳುತ್ತೀರಿ. ಸೀರಿಯಸ್ ಆಗಿ ನಿಮಗೆ 3 ರಿಲೇಶನ್ ಶಿಪ್ ಇತ್ತಾ? ಅದು ಯಾವತ್ತು ವಾಪಸ್ಸು ಬರಲ್ಲಾ. ನಿರೀಕ್ಷೆ ಕೂಡ ಯಾವತ್ತು ಮಾಡಬೇಡಿ ಎಂದು ಹೇಳಿದಾಗ, ಶಿಶಿರ್ ಬರೋದು ಬೇಡ ಬೇಡ್ವೇ ಬೇಡ ಎಂದಿದ್ದಾರೆ.
ಒಂದು ವೇಳೆ ಬರುತ್ತೆ ವಾಪಸ್ಸು ಅಂದ್ರೂನೂ ನೀವು ನಿರಾಕರಿಸಿ ಏಕೆಂಧರೆ ನಿಮ್ಮ ಜೀವನಕ್ಕೆ ಇದು ಬಹಳ ಅಡ್ಡ . ನೀವು ರಿಲೇಶನ್ ಶಿಪ್ ನಿಂದ ಜೀವನದಲ್ಲಿ ತುಂಬಾ ಕಳೆದುಕೊಂಡದ್ದೀರಿ. ಮದುವೆ ನಿಮ್ಮ ಜೀವನದಲ್ಲಿ ಲೇಟ್ ಆಗೋದು 38 ಆಗಬಹುದು ಎಂದಾಗ ಶಿಶಿರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
BIG BOSS
ನಾಮಿನೇಶನ್ನಿಂದ ಪಾರಾಗಲು ಟಾಸ್ಕ್ ಕೊಟ್ಟ ಬಿಗ್ ಬಾಸ್! ಕಿತ್ತಾಡಿಕೊಂಡ ಜಗದೀಶ್-ಧನ್ರಾಜ್
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶುರುವಾಗಿ 4 ದಿನ ಕಳೆದಿದೆ. ಜೊತೆಗೆ ಮೊದಲ ವಾರದ ಅಂತ್ಯಕ್ಕೂ ಮುನ್ನವೇ ಬಿಗ್ ಬಾಸ್ನಲ್ಲಿ ನಾಮಿನೇಶನ್ ಬಿಸಿ ಜೋರಾಗಿದೆ. ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ಜಗಳಗಳು ನಡೆಯುತ್ತಿವೆ.
ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್ ಆಗಿದ್ದಾರೆ. ಆದರೆ ನಾಮಿನೇಟ್ ಆದ ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.
ಧನ್ರಾಜ್ ಆಚಾರ್ ಟಾಸ್ಕ್ ರೆಫ್ರಿಯಾಗಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್ ಮತ್ತು ಯಮುನಾ ಟಾಸ್ಕ್ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್ ರೆಫ್ರಿ ಮತ್ತು ಜಗದೀಶ್ ನಡುವೆ ಜಗಳ ಶುರುವಾಗಿದೆ.
ಧನ್ರಾಜ್ ಮತ್ತು ಜಗದೀಶ್ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್ರಾಜ್ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್ರಾಜ್ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇಂದಿನ ಎಪಿಸೋಡ್ ಮಜವಾಗಿದ್ದು, ನಾಮಿನೇಶನ್ನಿಂದ ಪಾರಾಗಲು ಟಾಸ್ಕ್ನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ವೀಕ್ಷಕರನ್ನು ಕೆರಳಿಸಿದೆ. ಜೊತೆಗೆ ಮಾತು, ಜಗಳ, ಆಟ, ಬಿಗ್ ಬಾಸ್ ಮನೆಯಲ್ಲಿ ಏನೇನಾಯ್ತು ಎಂಬುದನ್ನು ಕಾಣುವ ತವಕ ಎಲ್ಲರಲ್ಲೂ ಹೆಚ್ಚಾಗಿದೆ.
BIG BOSS
BBK 11: ಐಶ್ವರ್ಯಾ, ರಂಜಿತ್ ನಡುವೆ ಸಮ್ಥಿಂಗ್ ಸಮ್ಥಿಂಗ್- ‘ಬಿಗ್’ ಮನೆಯಲ್ಲಿ ಹೊಸ ಪ್ರೇಮ ಪುರಾಣ
ಪ್ರತಿ ಸೀಸನಲ್ಲೂ ಒಂದಲ್ಲಾ ಒಂದು ಲವ್ ಸ್ಟೋರಿ ಇದ್ದೇ ಇರುತ್ತದೆ. ಈ ಬಾರಿ ಬಿಗ್ ಬಾಸ್ ಶೋ ಶುರುವಾದ್ಮೇಲೆ ಕೇಳಬೇಕಾ? ಇದೀಗ ದೊಡ್ಮನೆಯಲ್ಲಿ ಹೊಸ ಪ್ರೇಮ ಪುರಾಣ ಶುರುವಾಗಿದೆ. ಐಶೂ ಕಣ್ನೋಟಕ್ಕೆ ರಂಜಿತ್ ಕಳೆದುಹೋಗಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದ್ರೆ? ನೀನೇ ಬೇಕು ಅಂತ ಸ್ಪರ್ಧಿ ಐಶ್ವರ್ಯಾ ಸಿಂದೋಗಿಗೆ ಪ್ರೇಮ ನಿವೇದನೆ ಮಾಡಿದ್ದಾರೆ ರಂಜಿತ್.
ಈ ಬಾರಿ ಐಶ್ವರ್ಯಾ ಮತ್ತು ರಂಜಿತ್ ಇಬ್ಬರೂ ಮುಂದಿನ ದಿನಗಳಲ್ಲಿ ಜಂಟಿಯಾಗೋ ಲಕ್ಷಣ ಕಾಣುತ್ತಿದೆ. ಐಶ್ವರ್ಯಾರನ್ನು ನೋಡಿ ರಂಜಿತ್ ಫುಲ್ ಫ್ಲ್ಯಾಟ್ ಆಗಿದ್ದಾರೆ. ರಂಜಿತ್ ನಾಚಿಕೊಳ್ಳುತ್ತಿರೋ ಪರಿ ನೋಡಿ ಅಣ್ಣಂಗೆ ಲವ್ ಆಗಿದೆ ಅಂತ ಮನೆ ಮಂದಿ ಹಾಡು ಹೇಳಲು ಶುರು ಹಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಅಂತೀರಾ. ಇಲ್ಲಿದೆ ಬಿಗ್ ಬಾಸ್ ಮನೆಯಲ್ಲಿನ ಲವ್ ಸ್ಟೋರಿ.
ಬಿಳಿ ಸೀರೆಯುಟ್ಟು ಗೊಂಬೆ ಹಾಗೆ ನಿಂತ ಐಶ್ವರ್ಯಾರನ್ನು ರಂಜಿತ್ ಫುಲ್ ಫಿದಾ ಆಗಿದ್ದಾರೆ. ತಿಂಡಿ ಬೇಕಾ ಅಂತ ಐಶ್ವರ್ಯಾ ಕೇಳಿದ್ದಕ್ಕೆ, ಏನು ಬೇಡ ನೀವೇ ಬೇಕು ಅಂತ ಐಶ್ವರ್ಯಾಗೆ ರಂಜಿತ್ ಕಾಳು ಹಾಕಲು ಶುರು ಮಾಡಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದ್ರೆ, ನೀವೇ ಬೇಕು ಅಂತ ನಟಿಗೆ ಐಸ್ ಇಡ್ತಿದ್ದಾನೆ ರಂಜಿತ್. ಇದನ್ನೆಲ್ಲಾ ನೋಡಿ ಮನೆ ಮಂದಿ ಇಬ್ಬರ ನಡುವೆ ಸಮ್ಥಿಂಗ್ ಸಮ್ಥಿಂಗ್ ಶುರುವಾಗಿದೆ ಅಂತಲೇ ಇಬ್ಬರನ್ನೂ ಆಡಿಕೊಳ್ಳಲು ಶುರು ಮಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಶುರು ಆಗೋ ಪ್ರೇಮ ಕತೆಗಳು ಪರ್ಮನೆಂಟ್ ಆಗಿರೋಲ್ಲ. ಎಲ್ಲರೂ ಅರವಿಂದ್ ಮತ್ತು ದಿವ್ಯಾ ಉರುಡುಗ ಜೋಡಿ ಆಗೋಕೆ ಆಗೋದಿಲ್ಲ ಅಲ್ವಾ? ಅದೇನೇ ಆಗಿರಲಿ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಶೋಗೆ ಅಷ್ಟೇ ಈ ಪ್ರೀತಿ, ಪ್ರೇಮ ಸೀಮಿತ ಆಗಿರುತ್ತಾ? ಆಟ ಮುಗಿದ್ಮೇಲೂ ಪ್ರೀತಿ ಪಯಣ ಮುಂದುವರೆಯುತ್ತಾ? ಅಂತ ಕಾದುನೋಡಬೇಕಿದೆ.
BIG BOSS
BBK11: ಬಿಗ್ಬಾಸ್ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್ ಸುರೇಶ್ ಬಳಿ ಇರುವುದೇನು?
ಬೆಂಗಳೂರು: ಮೊದಲ ದಿನದಂದಲೇ ಬಿಗ್ ಬಾಸ್ ಕಾರ್ಯಕ್ರಮ ರಂಗೇರಿದೆ. ಸ್ವರ್ಗ ಹಾಗೂ ನರಕದ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ವಾಗ್ವಾದ ಶುರುವಾಗಿದೆ. ಮನೆಯೊಂದು ಬಾಗಿಲು ಎರಡು ಎಂಬಂತೆ ಸ್ವರ್ಗ–ನರಕದ ನಿವಾಸಿಗಳ ನಡುವೆ ಕಿತ್ತಾಟ ಶುರುವಾಗಿದೆ.
ಕಳೆದ ಸೀಸನ್ನಲ್ಲಿ ಹುಲಿ ಉಗುರು ಪ್ರಕರಣದಿಂದ ಸದ್ದಾಗಿದ್ದ ಬಿಗ್ ಬಾಸ್ ಮನೆ ಈ ಬಾರಿಯೂ ಹುಲಿ ಉಗುರಿನ ವಿಚಾರದಿಂದ ಸುದ್ದಿ ಆಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಉತ್ತರ ಕರ್ನಾಟಕ ಮೂಲದಿಂದ ಬಂದು ಬಿಗ್ ಬಾಸ್ ಮನೆಯೊಳಗೆ ಹೋಗಿರುವ ʼಗೋಲ್ಡ್ ಸುರೇಶ್ʼ.
ಬಿಗ್ ಬಾಸ್ ಈ ಬಾರಿ ಪ್ರಿಮಿಯರ್ ಆಗುವ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಿತ್ತು. ಅದರಲ್ಲಿ ʼಗೋಲ್ಡ್ ಸುರೇಶ್ʼ ಕೂಡ ಇದ್ದರು. ಬೆಳಗಾವಿ ಮೂಲದವರಾದ ಗೋಲ್ಡ್ ಸುರೇಶ್ ಮೈತುಂಬಾ ಚಿನ್ನಾಭರಣ ತೊಟ್ಟುಕೊಂಡೇ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಅವರನ್ನು ನೋಡಿ ಇವರು ವರ್ತೂರು ಸಂತೋಷ್ 2.0 ಎಂದು ಕಮೆಂಟ್ ಮಾಡಿದ್ದಾರೆ. ಕಳೆದ ಸೀಸನ್ನಲ್ಲಿ ವರ್ತೂರು ಸಂತೋಷ್ ಕೂಡ ಇದೇ ರೀತಿ ಚಿನ್ನವನ್ನು ಧರಿಸಿಕೊಂಡು ದೊಡ್ಮನೆಯೊಳಗೆ ಹೋಗಿದ್ದರು.
ಆದರೆ ಕೆಲ ಸಮಯದ ಬಳಿಕ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆಗೆ ಅಧಿಕಾರಿಗಳ ಅವರ ವಿರುದ್ಧ ದೂರು ದಾಖಲಿಸಿಕೊಂಡು, ಬಿಗ್ ಬಾಸ್ ಮನೆಯಿಂದಲೇ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ವಿಚಾರ ಎಲ್ಲೆಡೆ ಸುದ್ದಿ ಆಗಿತ್ತು. ವಿಚಾರಣೆ ಎದುರಿಸಿ ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು.
ಆದರೆ ಇದೀಗ ಬಿಗ್ ಬಾಸ್ ಕನ್ನಡ -11ನಲ್ಲಿ ಸ್ಪರ್ಧಿ ಆಗಿರುವ ʼಗೋಲ್ಡ್ ಸುರೇಶ್ʼ ಕೂಡ ಚಿನ್ನಾಭರಣಗಳ ಜತೆ ಹುಲಿ ಉಗುರಿನ ಪೆಂಡೆಂಟ್ ವೊಂದನ್ನು ಧರಿಸಿದ್ದಾರೆ. ಅವರ ವಿಟಿಯಲ್ಲಿ ಇದನ್ನು ತೋರಿಸಲಾಗಿದೆ. ಇದು ಅಸಲಿಯೂ ಅಥವಾ ನಕಲಿಯೂ ಅಥವಾ ಫೈಬರ್ ನದ್ದೂ ಎನ್ನುವ ಪ್ರಶ್ನೆ ಕಾಡಿದೆ.
ವಿಟಿಯಲ್ಲಿ ಹುಲಿ ಉಗುರಿನ ಪೆಂಡೆಂಟ್ ತೋರಿಸಲಾಗಿದ್ದು, ಇದನ್ನು ಅವರು ಬಿಗ್ ಬಾಸ್ ಮನೆಯೊಳಗೆ ತೆಗೆದುಕೊಂಡು ಹೋಗಿದ್ದಾರಾ ಅಥವಾ ತೆಗೆದಿಟ್ಟಿದ್ದಾರಾ ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳಲು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬಿಗ್ ಬಾಸ್ ಮನೆಯೊಳಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದು ಅಸಲಿ ಹುಲಿ ಉಗುರಿನ ಪೆಂಡೆಂಟ್ ವೋ ಅಥವಾ ಪೈಬರ್ ರೂಪದಲ್ಲಿರುವ ಪೆಂಡೆಂಟ್ ವೋ ಎನ್ನುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ. ವೈಲ್ಡ್ ಲೈಫ್ ಕಾನೂನು ಪ್ರಕಾರ ಹುಲಿ ಉಗುರು ಧರಿಸುವುದು ಅಪರಾಧವಾಗಿದೆ.
ಯಾರು ಈ ಗೋಲ್ಡ್ ಸುರೇಶ್?
ಇವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮೊದಲಿನಿಂದಲೂ ಚಿನ್ನಾಭರಣದ ಮೇಲೆ ವ್ಯಾಮೋಹ ಇಟ್ಟುಕೊಂಡಿರುವ ಅದನ್ನು ಸದಾ ಮೈಯಲ್ಲಿ ಧರಿಸಿರುತ್ತಾರೆ. ಆರ್ ಎಸ್ ಎಸ್ ಪೂರ್ಣವಧಿ ಕಾರ್ಯಕರ್ತನಾಗಿದ್ದ ಸುರೇಶ್, ಬಡತನದ ಹಿನ್ನೆಲೆಯಿಂದಲೇ ಬಂದವರು. ನಿರ್ಮಾಣ ಸಂಸ್ಥೆಯನ್ನು ಮುನ್ನಡಿಸಿ ದೊಡ್ಡಮಟ್ಟದ ಯಶಸ್ಸು ಕಂಡವರು. ವಿವಾಹಿತ ಆಗಿರುವ ಇವರು ಒಂದು ಮಗುವಿನ ತಂದೆ ಆಗಿದ್ದಾರೆ.
- LATEST NEWS7 days ago
ಲಕ್ಷ್ಮೀ ಹೆಬ್ಬಾಳ್ಕರ್ಗೆ 1 ಕೆಜಿ ಬಂಗಾರದ ಆಫರ್ ನೀಡಿದ ಮಾಜಿ ಸಚಿವ
- DAKSHINA KANNADA6 days ago
ಮಂಗಳೂರು : ಪಾನಿಪುರಿ ಸವಿಯುತ್ತಿದ್ದ ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿದ ಭೂಪ!
- DAKSHINA KANNADA5 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- DAKSHINA KANNADA6 days ago
ಮೂಡುಬಿದಿರೆ: ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾ*ವು