BIG BOSS
ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳೊಂದಿಗೆ ಪ್ರೀತಿಯ ಕಳ್ಳಾಟವಾಡುತ್ತಿರುವ ಧರ್ಮ!
ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾದಂತಿದೆ. ನಟಿ ಐಶ್ವರ್ಯ ಸಿಂಧೋಗಿ ಹಾಗೂ ನಟ ರಂಜಿತ್ ಮಧ್ಯೆ ಏನೋ ನಡೆಯುತ್ತಿದೆ ಎಂದ್ಕೊಂಡಿದ್ದ ವೀಕ್ಷಕರಿಗೆ ಐಶು, ರಂಜಿತ್ ಅಲ್ಲ ನಟ ಧರ್ಮಕೀರ್ತಿ ಬುಟ್ಟಿಗೆ ಬಿದ್ದಿದ್ದಾರೆ ಎನ್ನುವ ಅನುಮಾನ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಐಶ್ವರ್ಯ, ಧರ್ಮಕೀರ್ತಿ ಅವರನ್ನು ಹಾಡಿ ಹೊಗಳಿದ್ದಾರೆ. ತಾನು ಧರ್ಮಗೆ ಬೀಳಲು ಕಾರಣವೇನು ಎಂಬುದನ್ನು ಹೇಳಿದ್ದಾರೆ.
ನರಕದ ಕಡೆ ಹೋದ್ರೆ ಸ್ವರ್ಗದಲ್ಲಿರೋರು ಯಾರೋ ಕೋಪ ಮಾಡ್ಕೊಳ್ತಾರೆ ಅಂತ ಯಮುನಾ ಶ್ರೀನಿಧಿ, ಧರ್ಮ ಬಳಿ ಹೇಳ್ತಾರೆ. ನಂತ್ರ ತಾನೇಕೆ ಧರ್ಮ ಮೇಲೆ ಇಂಪ್ರೆಸ್ ಆದೆ ಎನ್ನುವುದನ್ನು ಐಶ್ವರ್ಯ ಹೇಳ್ತಾರೆ. ಧರ್ಮ ಸಾಫ್ಟ್ ಆಗಿ ಮಾತನಾಡೋದು, ಮುದ್ದಾಗಿ ಹಣ್ಣು ಕಟ್ ಮಾಡೋದು ಎಲ್ಲ ಐಶ್ವರ್ಯಗೆ ಇಷ್ಟವಂತೆ. ಅಷ್ಟೇ ಅಲ್ಲ ಯಾವಾಗ ಫುಲ್ ಬಿದ್ದೋದೆ ಗೊತ್ತಾ ಎನ್ನುತ್ತಾ ಮಾತು ಮುಂದುವರೆಸ್ತಾರೆ ಐಶ್ವರ್ಯ. ನರಕದಲ್ಲಿರೋ ಅನುಷಾ ಬಂದ್ರೆ ಈಗ ಏನ್ ಮಾಡ್ತೀರಿ ಅಂತ ಯಮುನಾ ಕೇಳುವ ಪ್ರಶ್ನೆಗೆ ಜೊತೆಯಾಗಿ ಚೆನ್ನಾಗಿರೋಣ ಎನ್ನುತ್ತಾರೆ ಧರ್ಮ.
ಕಲರ್ಸ್ ಕನ್ನಡ, ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಅತ್ಲಾಗೆ ಅನುಷಾ, ಇತ್ಲಾಗೆ ಐಶ್ವರ್ಯಾ, ನಡುವೆ ಪ್ರೀತಿಯ ಧರ್ಮ ಅಂತ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ನೋಡಿದ ವೀಕ್ಷಕರು, ಅಂತೂ ಬಿಗ್ ಬಾಸ್ ಮನೆಯಲ್ಲಿ ಲವ್ ಶುರುವಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಜೋಡಿಯಾಗಿಯೇ ಬಂದವರು ನಟಿ ಅನುಷಾ ಹಾಗೂ ಧರ್ಮಕೀರ್ತಿ. ಅನುಷಾಗೆ ವಿಶ್ ಮಾಡಲು ಧರ್ಮಕೀರ್ತಿ ಕುಟುಂಬ ಸಮೇತ ಬಂದಿದ್ದಾರೆ ಎಂದಿದ್ದ ಕಿಚ್ಚ ಸುದೀಪ್, ಇಬ್ಬರಿಗೂ ವೇದಿಕೆ ಮೇಲೆಯೇ ಹಿರಿಯರಿಂದ ಆಶೀರ್ವಾದ ಮಾಡಿಸಿದ್ದರು. ಧರ್ಮ ಹಾಗೂ ಅನುಷಾ ಒಟ್ಟಿಗೆ ಸಿನಿಮಾದಲ್ಲಿ ಕೂಡ ನಟಿಸಿದ್ದು, ಇಬ್ಬರೂ ಆಪ್ತ ಸ್ನೇಹಿತರು. ಸುದೀಪ್ ಮಾತಿನ ನಂತ್ರ ಇಬ್ಬರ ಮಧ್ಯೆ ಸ್ನೇಹಕ್ಕಿಂತ ಮಿಗಿಲಾಗಿದ್ದು ಏನೋ ಇದೆ ಎಂದು ಭಾವಿಸಿರುವ ಫ್ಯಾನ್ಸ್, ಬಿಗ್ ಬಾಸ್ ಮನೆಯಲ್ಲಿ ಈ ಜೋಡಿಯನ್ನು ಕಣ್ತುಂಬಿಕೊಳ್ಬಹುದು ಅಂದ್ಕೊಂಡಿದ್ದರು. ಆದ್ರೀಗ ಐಶ್, ಧರ್ಮ ಹಿಂದೆ ಬಿದ್ದಿದ್ದು, ಜೋಡಿ ಚೇಂಜ್ ಆಗುತ್ತಾ ಕಾದುನೋಡ್ಬೇಕಿದೆ.
BIG BOSS
ಬಿಗ್ ಬಾಸ್ ಮನೆಯೊಳಗಿರುವ ಲಾಯರ್ ಜಗದೀಶನ ವಕೀಲಿಕೆ ಲೈಸೆನ್ಸ್ ಕ್ಯಾನ್ಸಲ್!
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಹೋಗಿರುವ ಹಾಗೂ ನಾನು ಸಿಂಹ ಎಂದೇ ಹೇಳಿಕೊಳ್ಳುತ್ತಿರುವ ವಕೀಲ ಜಗದೀಶ್ ಅವರು ಪಡೆದಿದ್ದ ಲಾಯರ್ ಲೈಸೆನ್ಸ್ ಅನ್ನು ದೆಹಲಿ ಬಾರ್ ಕೌನ್ಸಿಲ್ ರದ್ದುಗೊಳಿಸಿದೆ. ಇವರು ಫೇಕ್ ಮಾರ್ಕ್ಸ್ ಕಾರ್ಡ್ ಕೊಟ್ಟು ಪದವಿ ಹಾಗೂ ಎಲ್ಎಲ್ಬಿ ಪದವಿ ಮಾಡಿ ಬಾರ್ ಕೌನ್ಸಿಲ್ ಅನುಮತಿ ಪಡೆದಿದ್ದರು. ಇದೀಗ ನಕಲಿ ಮಾರ್ಕ್ಸ್ ಕಾರ್ಡ್ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಕೀಲಿಕೆ ಸನ್ನದು (ಅಡ್ವೋಕೇಟ್ ಬಾರ್ ಕೌನ್ಸಿಲ್ ನೀಡಿದ್ದ ಲೈಸೆನ್ಸ್) ಅನ್ನು ರದ್ದುಗೊಳಿಸಿ ದೆಹಲಿ ಬಾರ್ ಕೌನ್ಸಿಲ್ ಆದೇಶ ಹೊರಡಿಸಿದೆ.
ನಕಲಿ ಮಾರ್ಕ್ಸ್ ಕಾರ್ಡ್ ಮೇಲೆ ಪದವಿ:
ಈಗಾಗಲೇ ಸುಮಾರು 40ಕ್ಕೂ ಅಧಿಕ ವರ್ಷ ವಯಸ್ಸಾಗಿದ್ದರೂ ಕೇವಲ 10 ವರ್ಷ ವಕೀಲಿಕೆ ಸೇವೆ ಮಾಡಿದ್ದಾಗಿ ಹೇಳಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಸ್ವಲ್ಪ ಅನುಮಾನ ವ್ಯಕ್ತವಾಗಿತ್ತು. ಆದರೆ, ಇದೀಗ ಅವರು ಪಿಯುಸಿಯನ್ನೇ ಓದದೇ ನಕಲಿ ಮಾರ್ಕ್ಸ್ ಕಾರ್ಡ್ ಸೃಷ್ಟಿಸಿ, ಅದನ್ನು ಪದವಿ ಕಾಲೇಜಿಗೆ ಕೊಟ್ಟು ಡಿಗ್ರಿ ಮಾಡಿದ್ದಾರೆ. ನಂತರ, ಪದವಿ ಮೇಲೆ ಎಲ್ಎಲ್ಬಿ ಮಾಡಿದ್ದಾರೆ. ಬೆಂಗಳೂರಿನ ಬದಲು ದೆಹಲಿಗೆ ಹೋಗಿ ದೆಹಲಿ ಬಾರ್ ಕೌನ್ಸಿಲ್ನಲ್ಲಿ ಎಲ್ಎಲ್ಬಿ ಮೇಲೆ ಬಾರ್ ಕೌನ್ಸಿಲ್ನಿಂದ ವಕೀಲಿಕೆ ಸನ್ನದು ಪಡೆದಿದ್ದಾರೆ. ಇವರದ್ದು ನಕಲಿ ಸರ್ಟಿಫಿಕೇಟ್ ಎಂದು ಬಾರ್ ಕೌನ್ಸಿಲ್ ಲೈಸೆನ್ಸ್ ರದ್ದತಿಗೆ ಕೋರಿ ಹಿಮಾಂಶು ಭಾಟಿ ಎನ್ನುವವರು ಕೌನ್ಸಿಲ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದನ್ನು ಪರಿಗಣಿಸಿದ ದೆಹಲಿ ಬಾರ್ ಕೌನ್ಸಿಲ್ ಸಮಿಯು ವಕೀಲ ಜಗದೀಶ್ ಅವರಿಗೆ ನೀಡದಲಾಗಿದ್ದ ಅನುಮತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಎಲ್ಲ ದಾಖಲಾತಿಗಳನ್ನು ಪರಿಶೀಲನೆ ಮಾಡಿದೆ. ಇದಾದ ನಂತರ 2024ರ ಏಪ್ರಿಲ್ನಲ್ಲಿ ನಡೆದ ಬಾರ್ ಕೌನ್ಸಿಲ್ ಸಭೆಯಲ್ಲಿ ಕೆ.ಎನ್. ಜಗದೀಶ್ ಕುಮಾರ್ ಅವರು ಸಲ್ಲಿಕೆ ಮಾಡಿದ ಪಿಯುಸಿ ಅಂಕಪಟ್ಟಿ ನಕಲಿ ಆಗಿದ್ದು, ಇದರ ಆಧಾರದಲ್ಲಿ ಮಾಡಲಾದ ಪದವಿ ಹಾಗೂ ಎಲ್ಎಲ್ಬಿ ಸೇರಿ ಎಲ್ಲವೂ ಅಮಾನ್ಯವಾಗಿರುತ್ತವೆ. ಆದ್ದರಿಂದ ಕೆ.ಎನ್ ಜಗದೀಶ್ ಕುಮಾರ್ (ಡಿ/2091/2017) ಅವರ ವಕೀಲಿಕೆ ಸನ್ನದು ಅನ್ನು ರದ್ದುಗೊಳಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಿದೆ.
BIG BOSS
BBK 11: ಆಚೆ ಕಡೆ ಹೋಗಿ ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಎಂದ ಜಗದೀಶ್
ಬಿಗ್ಬಾಸ್ ಕನ್ನಡ 11 ನ ಅತೀ ಕಿರಿಕ್ ಪಾರ್ಟಿ ಎಂದರೆ ಅದು ಲಾಯರ್ ಜಗದೀಶ್, ಈ ಬಾರಿ ವೀಕೆಂಡ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರಿಗೆ ಕ್ಲಾಸ್ ತೆಗೆದುಕೊಳ್ಳಬೇಕು. ಹೆಣ್ಣು ಮಕ್ಕಳ ಬಗ್ಗೆ ಪದ ಬಳಕೆ ಸರಿ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಲಾಗುತ್ತಿದೆ. ಮಾತ್ರವಲ್ಲ ಬಿಗ್ಬಾಸ್ ಶೋ ನಡೆಸಲು ನಾನು ಬಿಡುವುದಿಲ್ಲ ಎಂದು ಜಗದೀಶ್ ಚಾಲೆಂಜ್ ಹಾಕುತ್ತಿರುವುದು ಕಂಡುಬಂದಿದೆ.
ತಕ್ಕಡಿ ಭಾಗ್ಯ ಎಂಬ ಟಾಸ್ಕ್ ನಲ್ಲಿ ಉಗ್ರಂ ಮಂಜು ಟಾಸ್ಕ್ ಗೆದ್ದು ಸೇಫ್ ಆಗಿದ್ದಾರೆ. ಈ ಟಾಸ್ಕ್ ನೋಡಿಕೊಳ್ಳುವ ಉಸ್ತುವಾರಿಯನ್ನು ಧನ್ರಾಜ್ ಆಚಾರ್ಯ ಅವರಿಗೆ ನೀಡಲಾಗಿತ್ತು. ಈ ವೇಳೆ ಲಾಯರ್ ಜಗದೀಶ್ ಮತ್ತು ಧನ್ರಾಜ್ ಮಧ್ಯೆ ವಾಗ್ವಾದ ನಡೆಯಿತು. ಟಾಸ್ಕ್ ಮುಗಿದ ನಂತರ ಮನೆಯೊಳಗೆ ಬಂದ ಜಗದೀಶ್ ಮತ್ತೆ ಧನ್ರಾಜ್ ವಿಚಾರದಲ್ಲಿ ಅವನು ಇಷ್ಟುದ್ದ ಇದ್ದಾನೆ ಹೊಡಿಲಿಕ್ಕೆ ಬರ್ತಾನೆ ಎಂದು ನರಕವಾಸಿಗಳ ಬಳಿ ಹೇಳಲು ಜಗಳ ಮತ್ತಷ್ಟು ಜೋರಾಯಿತು.
ಇನ್ನು ಬಿಗ್ಬಾಸ್ ಕ್ಯಾಮಾರ ಮುಂದೆ ಬಂದು ಮಾತನಾಡಿದ ಹಂಸಾ ಜಗದೀಶ್ ಅವರು, ನಮ್ಮ ಟೀಂ ಅಲ್ಲಿ ಇದ್ದುಕೊಂಡು ನಮಗೆಲ್ಲ ಡಿಚ್ ಮಾಡೋದೆ ಕಂಡೆಂಟಾ? ಹೇಳಿ? ಗೇಮ್ ಆಡೋಕೆ ಶಕ್ತಿ ಇಲ್ಲದಂತಾಗಿದೆ ಎಂದು ಕಣ್ಣೀರಿಟ್ಟರು.
ಇನ್ನು ಇವತ್ತಿನ ಪ್ರೋಮದಲ್ಲಿ ಇದೇ ಗಲಾಟೆ ಮುಂದುವರೆದಂತೆ ಕಾಣುತ್ತಿದೆ. ಮೀಸೆ ಎತ್ತಿಹಿಡಿದವನು ಯಾವನೇ ಆಗಿರಬಹುದು. ಇದುವರೆಗೂ ಬಿಟ್ಟಿಲ್ಲ. ಎಂದು ಬಿಗ್ಬಾಸ್ ಗೆ ಜಗದೀಶ್ ಚಾಲೆಂಜ್ ಮಾಡಿದಂತಿದೆ. ಜಗದೀಶ್ ಮೇಲೆ ಕೋಪಗೊಂಡಿರುವ ರಂಜಿತ್ ಕೊಡೋ ಮರ್ಯಾದೆ ಈಗ ತೆಗೆದುಕೊಳ್ಳಿಲ್ಲ ಅಂದರೆ ಇದಕ್ಕೆ ಸಮ ಎಂದು ಕಾಲಿನ ಚಪ್ಪಲಿಗೆ ಹೊಡೆಯುವುದು ಕಾಣುತ್ತಿದೆ. ಇದಕ್ಕೆ ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗಿದೆ. ನನಗೆ ನಾನೇ ಬಿಗ್ಬಾಸ್ , ನನ್ನನ್ನು ಹೊರಗೆ ಕಳಿಸಿದರೆ ಉತ್ತಮ ಎಂದು ಗಾಭೀರ್ಯದಿಂದ ಕುಳಿತು ಜಗದೀಶ್ ಹೇಳುತ್ತಿದ್ದಾರೆ. ಮಾತ್ರವಲ್ಲ ಹೊರಗೆ ಹೋದ ಮೇಲೆ ನಾನು ಬಿಗ್ ಬಾಸ್ ಮುಖವಾಡವನ್ನು ಬಯಲು ಮಾಡ್ತೇನೆ ಬಿಗ್ಬಾಸ್ ಶೋ ಚೆನ್ನಾಗಿ ನಡೆಸಲು ನಾನು ಬಿಡುವುದಿಲ್ಲ ಎಂದು ಚಾಲೆಂಜ್ ಮಾಡಿದ್ದಾರೆ ಜಗದೀಶ್!
BIG BOSS
ನಾಮಿನೇಶನ್ನಿಂದ ಪಾರಾಗಲು ಟಾಸ್ಕ್ ಕೊಟ್ಟ ಬಿಗ್ ಬಾಸ್! ಕಿತ್ತಾಡಿಕೊಂಡ ಜಗದೀಶ್-ಧನ್ರಾಜ್
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶುರುವಾಗಿ 4 ದಿನ ಕಳೆದಿದೆ. ಜೊತೆಗೆ ಮೊದಲ ವಾರದ ಅಂತ್ಯಕ್ಕೂ ಮುನ್ನವೇ ಬಿಗ್ ಬಾಸ್ನಲ್ಲಿ ನಾಮಿನೇಶನ್ ಬಿಸಿ ಜೋರಾಗಿದೆ. ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ಜಗಳಗಳು ನಡೆಯುತ್ತಿವೆ.
ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್ ಆಗಿದ್ದಾರೆ. ಆದರೆ ನಾಮಿನೇಟ್ ಆದ ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.
ಧನ್ರಾಜ್ ಆಚಾರ್ ಟಾಸ್ಕ್ ರೆಫ್ರಿಯಾಗಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್ ಮತ್ತು ಯಮುನಾ ಟಾಸ್ಕ್ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್ ರೆಫ್ರಿ ಮತ್ತು ಜಗದೀಶ್ ನಡುವೆ ಜಗಳ ಶುರುವಾಗಿದೆ.
ಧನ್ರಾಜ್ ಮತ್ತು ಜಗದೀಶ್ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್ರಾಜ್ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್ರಾಜ್ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇಂದಿನ ಎಪಿಸೋಡ್ ಮಜವಾಗಿದ್ದು, ನಾಮಿನೇಶನ್ನಿಂದ ಪಾರಾಗಲು ಟಾಸ್ಕ್ನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ವೀಕ್ಷಕರನ್ನು ಕೆರಳಿಸಿದೆ. ಜೊತೆಗೆ ಮಾತು, ಜಗಳ, ಆಟ, ಬಿಗ್ ಬಾಸ್ ಮನೆಯಲ್ಲಿ ಏನೇನಾಯ್ತು ಎಂಬುದನ್ನು ಕಾಣುವ ತವಕ ಎಲ್ಲರಲ್ಲೂ ಹೆಚ್ಚಾಗಿದೆ.
- DAKSHINA KANNADA6 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- BIG BOSS3 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS3 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
- LATEST NEWS6 days ago
ಪುತ್ತೂರು: ಸಾಲ ವಸೂಲಿಗೆಂದು ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ತಂದೆ ಮಗ