Connect with us

LATEST NEWS

ಯುವತಿಯ ಅಶ್ಲೀಲ ಫೋಟೊ,ವಿಡಿಯೋ ಮಾಡಿ ಹಣಕ್ಕೆ ಡಿಮ್ಯಾಂಡ್ : ಹನಿಟ್ರಾಫ್ ಕಪಲ್ಸ್ ಬೆನ್ನು ಬಿದ್ದ ಬೆಂಗಳೂರು ಪೊಲೀಸರು..!

Published

on

ಬೆಂಗಳೂರು : ಬೆಂಗಳೂರು ನಗರದಲ್ಲಿ ಅಮಾಯಕ ಯುವತಿಯರನ್ನು ಹನಿಟ್ರಾಫ್ ಮಾಡೊ ಖರ್ತನಾಕ್ ಕಪಲ್ಸ್ ಗಳ ಸಕ್ರೀಯಾ ಜಾಲವೊಂದು ಪತ್ತೆಯಾಗಿದೆ. ಈ ಜಾಲದಲ್ಲಿ ಸಿಕ್ಕಿ ನೊಂದ ಯುವತಿಯೊಬ್ಬಳು ದಂಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.

ಚಂದ್ರಾಲೇಔಟ್ ನ ಕಾವ್ಯ ಕೃಷ್ಣ ಎಂಬ ಕಪಲ್ಸ್ ನಿಂದ ಅಮಾಯಕ ಯುವತಿಯರನ್ನು ಟ್ರಾಫ್ ಮಾಡುತ್ತಿದ್ದಾರೆ.

ಹೆಂಡತಿ ಚೆಂದವಾದ ಯುವತಿಯರನ್ನ ಫೇಸ್ಬುಕ್ ನಲ್ಲಿ ಪರಿಚಯ ಮಾಡ್ಕೊಳ್ತಾಳೆ,ಹಬ್ಬಕ್ಕೆ ಮನೆಗೆ ಬನ್ನಿ ಅಂತ ಕರೆದು ಜ್ಯೂಸ್ ಕೊಡ್ತಾಳೆ,ನಂತರ ಗಂಡ ಮನೆಗೆ ಬಂದ ಯುವತಿಯರ ಅಶ್ಲೀಲ ಪೊಟೊಶೂಟ್ ಮಾಡ್ತಾನೆ,ಯುವತಿಯ ಖಾಸಗಿ ಅಶ್ಲೀಲ ಪೊಟೊ ವಿಡಿಯೋ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ.

ಫೇಸ್ಬುಕ್ ನಲ್ಲಿ ಪರಿಚಯವಾದ ಗೆಳೆಯರಿಂದಲೇ ಯುವತಿಯ ಅಶ್ಲೀಲ ಪೊಟೋಶೂಟ್,ಚಂದ್ರಲೇಔಟ್ ನ ಯುವತಿಗೆ ಎಫ್‌.ಬಿ ಯಲ್ಲಿ ಕಾವ್ಯ ಎಂಬಾಕೆಯ ಪರಿಚಯವಾಗಿತ್ತು,

ಹಬ್ಬಕ್ಕೆ ಮನೆಗೆ ಬಾ ಎಂದು ಸಂತ್ರಸ್ಥ ಯುವತಿಯನ್ನ ಮನೆಗೆ ಕರೆದಿರೋ ಕಾವ್ಯ,ಗೆಳತಿ ಕರೆದಳು ಎಂದು ಚಂದ್ರಾಲೇಔಟ್ ನ ಮನೆಗೆ ತೆರಳಿದ ಸಂತ್ರಸ್ಥ ಯುವತಿ.

ಈ ವೇಳೆ ಕಾವ್ಯ ಮನೆಯಲ್ಲಿದ್ದ ಆಕೆಯ ಗಂಡ ಕೃಷ್ಣ ಹಾಗೂ ಸಾಗರ್ ಎಂಬ ಯುವಕ,ಸಂತ್ರಸ್ಥ ಯುವತಿಗೆ ಮೊದಲಿಗೆ ಕುಡಿಯಲಿಕ್ಕೆ ಜ್ಯೂಸ್ ಕೊಟ್ಟಿರುವ ಕಾವ್ಯ,ಜ್ಯೂಸ್ ಕುಡಿದ ನಂತರ ನಿದ್ರಾಣ ಸ್ಥಿತಿಗೆ ತೆರಳಿದ್ದ ಸಂತ್ರಸ್ಥೆ,ನಂತರ ಸಂತ್ರಸ್ಥ ಯುವತಿಯನ್ನ ವಿವಸ್ತ್ರಗೊಳಿಸಿ ಯುವತಿಯ ಜೊತೆ ಪೊಟೊಸ್ ಗೆ ಫೊಸ್ ಕೊಟ್ಟಿರೋ ಕಾವ್ಯಾಳ ಗಂಡ ಕೃಷ್ಣ,ಸಂತ್ರಸ್ಥ ಯುವತಿ ಹಾಗೂ ಆರೋಪಿ ಕೃಷ್ಣ ಇಬ್ಬರ ಪೊಟೊಗಳನ್ನ ಮೊಬೈಲ್ ನಲ್ಲಿ ಸೆರೆಹಿಡಿದಿರೋ ಮತ್ತೊಬ್ಬ ಯುವಕ ಸಾಗರ್,ಕೃತ್ಯದ ನಂತರ ಫೇಸ್ಬುಕ್ ನಲ್ಲಿ ಪರಿಚಿತಳಾದ ಕಾವ್ಯ ಹಾಗೂ ಆಕೆಯ ಗೆಳೆಯರಾದ ಸಾಗರ್, ಕೃಷ್ಣ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

ಯುವತಿ ಬಳಿಯಿದ್ದ ಚಿನ್ನದ ಉಂಗುರ ಚಿನ್ನದ ಚೈನ್ ಎಟಿಎಂ ಕಾರ್ಡ್ ಆರೋಪಿಗಳು ಕಸಿದಿದ್ದಾರೆ.

ಖಾಸಗಿ ಪೊಟೊ ವಿಡಿಯೋ ಪೊಷಕರಿಗೆ ಕಳಿಸ್ತೀವಿ ಅಂತ ಕಳೆದ ಆರು ತಿಂಗಳಿಂದ 4 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ.

ಕಳೆದ ಜನವರಿಯಲ್ಲಿ ಕಾವ್ಯಳ ಚಂದ್ರಾಲೇಔಟ್ ನಿವಾಸಕ್ಕೆ ತೆರಳಿದ್ದ ಯುವತಿಯ ಆಗ ಮೊದಲ ಬಾರಿ ಯುವತಿ ಜೊತೆ ಅಶ್ಲೀಲ ಪೊಟೊ ಶೂಟ್ ಮಾಡಿದ್ದಾರೆ.

ನಂತರ ಕಳೆದ ಮೇ ತಿಂಗಳಲ್ಲಿ ಯುವತಿಯ ಹಳೆ ವಿಡಿಯೋ ತೋರಿಸಿ ಯುವತಿ ಮೇಲೆ ಎರಡನೇ ಬಾರಿಗೆ ಕೃಷ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ.

ಕೇಳಿದಷ್ಟು ಹಣ ಕೊಟ್ಟರೇ ಸರಿ ಇಲ್ಲ ವಿಡಿಯೋ ಪೊಟೊಸ್ ವೈರಲ್ ಮಾಡೊದಾಗಿ ಸಂತ್ರಸ್ಥ ಯುವತಿಗೆ ಮೆಸೇಜ್ ಮಾಡಿ ಟಾರ್ಚರ್ ಮಾಡಿದ್ದಾರೆ.

ನೊಂದ ಯುವತಿಯು ಆರೋಪಿಗಳ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.ಪೊಲೀಸರು ಕೇಸು ದಾಖಲಿಸಿಕೊಂಡು ಹನಿಟ್ರಾಪ್ ದಂಪತಿಯ ಬೆನ್ನು ಬಿದ್ದಿದ್ದಾರೆ.

FILM

ಪ್ರತಿಷ್ಟಿತ ಮೆಟ್ ಗಾಲ ಸಮಾರಂಭದಲ್ಲಿ ಮಿಂಚಿದ ಆಲಿಯಾ ಭಟ್; ಆಲಿಯಾ ವಿಶಿಷ್ಟ ಉಡುಗೆಗೆ ಬೆರಗಾದ್ರು ಫ್ಯಾನ್ಸ್

Published

on

ಜಗತ್ತಿನ ವಿವಿಧ ಮನರಂಜನಾ ಕ್ಷೇತ್ರಗಳಲ್ಲಿ ತೊಡಗಿರುವ ಗಣ್ಯರು ಭಾಗಿಯಾಗುವ ಪ್ರತಿಷ್ಠಿತ ಮೆಟ್ ಗಾಲ ಸಮಾರಂಭದಲ್ಲಿ ಈ ಬಾರಿ ಆಲಿಯಾ ಭಟ್ ತನ್ನ ವಿಶಿಷ್ಟ ಉಡುಗೆಯ ಮೂಲಕ ಗಮನ ಸೆಳೆದಿದ್ದಾರೆ. ಅವರು ಸಬ್ಯಸಾಚಿ ಮುಖರ್ಜಿ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅವರ ಲುಕ್‌ಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ. ಅವರ ಸೊಗಸಾದ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.


ದೇಸಿ ಉಡುಪಿಗೂ ಟ್ರೇನ್ ವಿನ್ಯಾಸ:

ತಿಳಿ ನೀಲಿ, ಬಿಳಿ ಮಿಶ್ರಿತ ಸುಂದರ ಸೀರೆಯಲ್ಲಿದ್ದ ಉದ್ದನೆಯ ಟ್ರೇನ್ ಸೆರಗು ಸೀರೆಗೆ ಮೆರುಗು ನೀಡಿತ್ತು. ಸಾಮಾನ್ಯವಾಗಿ ಗೌನ್ ಗೆ ಇಂತಹ ಟ್ರೇನ್ ವಿನ್ಯಾಸಗೊಳಿಸಲಾಗುತ್ತದೆ. ದೇಸಿ ಉಡುಪಿಗೂ ಟ್ರೇನ್ ವಿನ್ಯಾಸಗೊಳಿಸಿ ಕಂಟೆಂಪರರಿ ಸ್ಪರ್ಶ ನೀಡಬಹುದು ಎಂದು ಆಲಿಯಾ ಭಟ್ ತೋರಿಸಿದ್ದಾರೆ.


‘ಗಾರ್ಡನ್ ಆಫ್ ಟೈಮ್’ ಡ್ರೆಸ್ ಕೋಡ್ ಗೆ ಅನುಗುಣವಾಗಿ ತಿಳಿ ಗುಲಾಬಿ ಎಂಬ್ರಾಯ್ಡರಿ ಹೂವು, ತಿಳಿ ಹಸಿರು ಎಲೆ, ಬಳಿಗಳ್ಳ ವಿನ್ಯಾಸವಿದೆ. ಸೀರೆಗೊಪ್ಪುವ ಹರಳು ಖಚಿತ ಬ್ಲೌಸ್, ಕಿವಿಗೆ ದೊಡ್ಡ ಇಯರಿಂಗ್ಸ್, ಬೈತಲೆಗೆ ಹರಳಿನ ಆಭರಣ ಧರಿಸಿದ್ದು ಮತ್ತಷ್ಟು ಮೆರುಗು ನೀಡಿತ್ತು.

ಇದನ್ನೂ ಓದಿ : ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!

ಆಲಿಯಾ ಪಾವತಿಸಿದ್ದು ಎಷ್ಟು?


ಮೆಟ್ ಗಾಲಾ ಫ್ಯಾಶನ್ ಹೆಸರಲ್ಲಿ ಪ್ರತಿ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ನಿಧಿ ಸಂಗ್ರಹಣೆ ಕಾರ್ಯಕ್ರಮವಾಗಿದೆ. ಇಲ್ಲಿ ಭಾಗವಹಿಸುವವರು ಪ್ರತಿ ಟಿಕೆಟ್‌ಗೆ ಪ್ರತಿ ವ್ಯಕ್ತಿಗೆ USD 75,000 ವೆಚ್ಚವಾಗುತ್ತದೆ, ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಸುಮಾರು ರೂ. 63 ಲಕ್ಷ ರೂ.ಗಳಾಗುತ್ತವೆ. ಪ್ರತಿ ಸಂಪೂರ್ಣ ಟೇಬಲ್‌ನ ಬೆಲೆ ಸುಮಾರು USD 350,000, ಇದು ಸುಮಾರು ರೂ. 2 ಕೋಟಿ 92 ಲಕ್ಷವಾಗುತ್ತದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವುದೇ ಕಂಪನಿಯ ಮೂಲಕ ಹೋದರೆ, ಅವರ ವೆಚ್ಚವನ್ನು ಆ ಕಂಪನಿಗಳೇ ಭರಿಸುತ್ತವೆ.

ಆದರೆ, ವೈಯಕ್ತಿಕವಾಗಿ ಹೋದಾಗ ವ್ಯಕ್ತಿಯೇ ತಮ್ಮ ಟಿಕೆಟ್‌ಗಾಗಿ ಪಾವತಿಸುತ್ತಾರೆ. ಹೀಗಾಗಿ, ಆಲಿಯಾ ಭಟ್ ಕನಿಷ್ಠ 63 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗೆ ಈ ಪ್ರದರ್ಶನದಲ್ಲಿ ಭಾಗವಹಿಸಲು ಸ್ವತಃ ಪಾವತಿಸಿದ್ದಾರೆ. ಈ ಬಾರಿ ಆಲಿಯಾ ಎರಡನೇ ಬಾರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Continue Reading

LATEST NEWS

ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Published

on

ಬೆಂಗಳೂರು : ಸದ್ಯ ಪ್ರಜ್ವಲ್ ರೇವಣ್ಣ, ರೇವಣ್ಣ ಕೇಸ್ ಭಾರೀ ಸದ್ದು ಮಾಡುತ್ತಿದೆ. ಅತ್ತ ಲೈಂ*ಗಿಕ ದೌರ್ಜ*ನ್ಯ ನಡೆಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶದಿಂದ ಪ್ರಜ್ವಲ್ ರೇವಣ್ಣ ಎಸ್ಕೇಪ್ ಆಗಿದ್ದರೆ, ಇತ್ತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಬಂಧನವಾಗಿತ್ತು. ಬಂಧಿಸಿದ ಎಸ್ ಐಟಿ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೂ ಪಡೆದಿದ್ದರು.

ಮೇ. 8 ರ ವರೆಗೆ ಎಸ್ ಐ ಟಿ ವಶಕ್ಕೆ ಕೋರ್ಟ್ ನೀಡಿತ್ತು. ಇಂದು ರೇವಣ್ಣ ಎಸ್ ಐ ಟಿ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ  : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ

ವಿಚಾರಣೆ ನಡೆಸಿದ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

Continue Reading

LATEST NEWS

ನಾವು ಬಳಸುವ ಮಸಾಲೆ ಪದಾರ್ಥಗಳು ಅಸಲಿಯೋ..ನಕಲಿಯೋ..ತಿಳಿಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

Published

on

ಮಂಗಳೂರು : ನಾವು ಅಡುಗೆಮನೆಯಲ್ಲಿ ಹಲವಾರು ರೀತಿಯ ಮಸಾಲೆಗಳನ್ನು ಬಳಸುತ್ತೇವೆ. ಆದರೆ ಅವುಗಳನ್ನು ಮಾರುಕಟ್ಟೆಯಿಂದ ತರುವಾಗ, ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವಲ್ಲಿ ನಾವು ಗೊಂದಲಕ್ಕೊಳಗಾಗುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬಹುದು ಅನ್ನೋ ಸಣ್ಣ ಟಿಪ್ಸ್ ಇಲ್ಲಿದೆ.


ಇತ್ತೀಚೆಗೆ ದೆಹಲಿಯಲ್ಲಿ ನಕಲಿ ಸಾಂಬಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಕೆಲವರನ್ನು ಬಂಧಿಸಲಾಗಿದೆ. ಈ ಜನರು ಕೊಳೆತ ಅಕ್ಕಿ, ತೆಂಗಿನಕಾಯಿ ಮತ್ತು ಆ್ಯಸಿಡ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಮಸಾಲೆ ತಯಾರಿಸುತ್ತಿದ್ದರು. ಇವರಿಂದ ಸುಮಾರು 15 ಟನ್ ನಕಲಿ ಸಾಂಬಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಪ್ರತಿಷ್ಠಿತ ಕಂಪೆನಿಗಳು ಕೂಡಾ ಈ ರೀತಿಯಾದ ನಕಲಿ ಸಾಂಬಾರು ಪುಡಿ ಮಾರಾಟ ಮಾಡುತ್ತಿದ್ದ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ.

ನೋಡಲು ಹಾಗೂ ಪರಿಮಳದಲ್ಲಿ ಅಸಲಿಯಂತೆ ಕಾಣುವ ಈ ನಕಲಿ ಮಸಾಲೆ ಪುಡಿಗಳನ್ನು ಗುರುತಿಸುವುದೇ ಕಷ್ಟ. ಆದ್ರೆ, ಕೆಲವೊಂದು ನಿತ್ಯ ಬಳಸುವ ಪದಾರ್ಥಗಳನ್ನು ಈ ರೀತಿಯಾಗಿ ಗುರುತಿಸಬಹುದಾಗಿದೆ.

ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವುದು ಹೇಗೆ?

ಕೆಂಪು ಮೆಣಸಿನಕಾಯಿ

ಅಡುಗೆಯಲ್ಲಿ ಕೆಂಪು ಮೆಣಸಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಣಸಿನಪುಡಿ ಚೆನ್ನಾಗಿಲ್ಲಾ ಅಂದ್ರೆ ಅದು ಪದಾರ್ಥದ ರುಚಿಯನ್ನೇ ಕೆಡಿಸಿ ಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾಕೇಟ್‌ಗಳಲ್ಲಿ ಬರೋ ಮೆಣಸಿನ ಪುಡಿ ಕೂಡಾ ನಕಲಿಯಾಗಿದೆ. ಕೆಂಪು ಇಟ್ಟಿಗೆಯ ಪುಡಿಗೆ ಬಟ್ಟೆಗೆ ಬಳಸುವ ಕೆಂಪು ಬಣ್ಣದ ಮಿಶ್ರಣ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೆಣಸಿನ ಪುಡಿಯನ್ನು ಪರೀಕ್ಷೆ ಮಾಡಲು ಸ್ವಲ್ಪ ನೀರಿನಲ್ಲಿ ಹಾಕಿ ನೋಡಬೇಕು. ಪುಡಿ ತೇಲುತ್ತಿದ್ದರೆ ಅದು ಅಸಲಿಯಾಗಿದ್ದು, ಪುಡಿ ನೀರಿನಲ್ಲಿ ಮುಳುಗಿದ್ರೆ ಅದು ನಕಲಿ ಅಥವಾ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.

ಕೊತ್ತಂಬರಿ ಪುಡಿ

ಯಾವುದೇ ಅಡುಗೆಯಲ್ಲಿ ಖಾದ್ಯದ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಬೇಕೇಬೇಕು. ಆದ್ರೆ, ಈ ಕೊತ್ತಂಬರಿ ಪುಡಿಯನ್ನು ಕೂಡಾ ನಕಲಿ ಮಾಡಲಾಗುತ್ತಿದೆ. ಪ್ರಾಣಿಗಳ ಮಲ, ಹುಳು ಮತ್ತು ಕಳೆಗಳನ್ನು ನುಣ್ಣಗೆ ರುಬ್ಬಿ ಅದಕ್ಕೆ ಕೊತ್ತಂಬರಿ ಪ್ಲೇವರ್ ಹಾಕುವ ಮೂಲಕ ಕೊತ್ತಂಬರಿ ಪುಡಿ ತಯಾರಿಸಲಾಗುತ್ತಿದೆ. ಇನ್ನು ಹಿಟ್ಟಿನ ಹುಡಿಗೆ ಹಸಿರು ಬಣ್ಣ ಸೇರಿಸಿ ಕೊತ್ತಂಬರಿ ಪುಡಿ ಎಂದು ಮಾರಾಟ ಮಾಡಲಾಗುತ್ತಿದೆ. ಇಡಿ ಕೊತ್ತಂಬರಿಯನ್ನು ಕೈಲಿಟ್ಟು ಸ್ವಲ್ಪ ಜೋರಾಗಿ ತಿಕ್ಕಿದಾಗ ಅದರಿಂದ ಸುವಾಸನೆ ಹೊರಡುತ್ತದೆ. ಮಾರುಕಟ್ಟೆಯಿಂದ ತಂದಿರೋ ಪುಡಿಯನ್ನು ಈ ಸುವಾಸನೆ ಜೊತೆ ಹೋಲಿಸಿ ನೋಡಿ. ಆ ಸುವಾಸನೆ ಬಾರದೆ ಯಾವುದೋ ಸಸ್ಯಗಳ ಪರಿಮಳ ಬಂದ್ರೆ ಅದು ಕಲಬೆರಕೆಯಾಗಿದೆ ಎಂದು ಅಂದಾಜಿಸಬಹುದಾಗಿದೆ.

ದಾಲ್ಜಿನಿ

ತೊಗಟೆಯಾಗಿ ಮಾರುಕಟ್ಟೆಯಲ್ಲಿ ಸಿಗುವ ದಾಲ್ಚಿನಿ ಬಹುತೇಕ ನಕಲಿಯಾಗಿರುತ್ತದೆ. ಅಮರಕ ಎಂಬ ಮರದ ತೊಗಟೆಯನ್ನು ಕತ್ತರಿಸಿ ದಾಲ್ಚಿನಿ ಎಂದು ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಗುರುತಿಸುವುದು ಬಹಳ ಸುಲಭವಾಗಿದೆ. ದಾಲ್ಚಿನಿಯ ತೊಗಟೆಯನ್ನು ಕೈಲಿ ತೆಗೆದುಕೊಂಡು ನಿಮ್ಮ ಕೈಗಳಿಗೆ ಜೋರಾಗಿ ಉಜ್ಜಿಕೊಳ್ಳಿ. ಕೈನಲ್ಲಿ ಕೆಂಪು ಅಥವಾ ಕಂದು ಬಣ್ಣ ಮೂಡಿದ್ರೆ ಅದು ಅಸಲಿಯಾಗಿದ್ದು, ಬಣ್ಣ ಬಾರದೇ ಇದ್ರೆ ಅದು ನಕಲಿ ಎಂದು ಅರ್ಥ.

ಕರಿ ಮೆಣಸು

ಕರಿಮೆಣಸು ಇಲ್ಲದೆ ಮಾಂಸಾಹಾರಿ ಪದಾರ್ಥವೇ ಇಲ್ಲ ಅನ್ನಬಹುದು. ಇನ್ನು ತರಕಾರಿ ಅಡುಗೆಯಲ್ಲೂ ಇದನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ, ಪಪ್ಪಾಯಿ ಕಾಳುಗಳನ್ನು ಕರಿಮೆಣಸಿನ ಜೊತೆ ಸೇರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಪರೀಕ್ಷೆ ಮಾಡಲು ನೀರಿನಲ್ಲಿ ಹಾಕಬೇಕು. ಅಸಲಿ ಕರಿಮೆಣಸುಗಳು ನೀರಿನಲ್ಲಿ ಮುಳುಗಿದರೆ ಪಪ್ಪಾಯಿ ಬೀಜಗಳು ನೀರಿನಲ್ಲಿ ತೇಲುತ್ತದೆ.

ಇದನ್ನೂ ಓದಿ : KARKALA : ಸಿಡಿದ ಸುಡುಮದ್ದು ತಯಾರಿಕಾ ಘಟಕ; ಮಹಿಳೆಯರಿಗೆ ಗಂಭೀರ ಗಾಯ

ಜೀರಿಗೆ

ಜೀರಿಗೆ ಯಾವುದೇ ಭಕ್ಷ್ಯಕ್ಕೆ ಪರಿಮಳವನ್ನು ಸೇರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ನಿಜವೋ ಅಲ್ಲವೋ ಎಂದು ಗುರುತಿಸುವುದು ತುಂಬಾ ಸುಲಭ. ಇದಕ್ಕಾಗಿ ನೀವು ಎರಡು ಬೆರಳುಗಳ ನಡುವೆ ಜೀರಿಗೆಯನ್ನು ಉಜ್ಜಬೇಕು. ಜೀರಿಗೆಯಲ್ಲಿ ಕಲಬೆರಕೆ ಇದ್ದರೆ ನಿಮ್ಮ ಬೆರಳುಗಳು ಕಪ್ಪಾಗುತ್ತವೆ. ಅದು ನಿಜವಾಗಿದ್ದರೆ, ಅದು ನಿಮ್ಮ ಬೆರಳುಗಳನ್ನು ಕಪ್ಪಾಗಿಸುವುದಿಲ್ಲ.

ಕಲಬೆರಕೆ ಆಹಾರ ಸೇವನೆಯಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆದಷ್ಟು ಕಲಬೆರೆಕೆ ವಸ್ತುಗಳ ಬಗ್ಗೆ ಜನರು ಜಾಗೃತರಾಗಬೇಕಾಗಿದೆ. ಪ್ರತಿಯೊಂದು ವಸ್ತುವನ್ನು ಪರೀಕ್ಷೆ ಮಾಡಿ ತೆಗೆದುಕೊಳ್ಳುವುದು ಕಷ್ಟ. ಆದ್ರೆ, ಅದನ್ನು ಬಳಸುವ ಮೊದಲು ಈ ಸಿಂಪಲ್ ಟೆಸ್ಟ್‌ ಮಾಡಿದ್ರೆ ಆರೋಗ್ಯ ಕಾಪಾಡಿಕೊಳ್ಳಬಹುದು.

Continue Reading

LATEST NEWS

Trending