Connect with us

    LATEST NEWS

    ಬಾವನಿಂದಲೇ ಬಾಮೈದನ ಹ*ತ್ಯೆ..! ಮಗನ ಅಗಲಿಕೆ ನೋವಿನಿಂದ ತಾಯಿ ಆತ್ಮಹ*ತ್ಯೆ..!!

    Published

    on

    ಮೈಸೂರು/ಮಂಗಳೂರು: ಜಗಳ ಬಿಡಿಸಲು ಹೋದ ಭಾವಮೈದ ಭಾವನಿಂದಲೇ ಹತ್ಯೆಗೀಡಾದ ಘಟನೆ  ಮೈಸೂರಿನಲ್ಲಿ ನಡೆದಿದೆ. ಮುದ್ದಾಗಿ ಸಾಕಿದ್ದ ಮಗಳನ್ನು ರವಿಚಂದ್ರನ್ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದರು. ಆದರೆ ಆತ ದಿನನಿತ್ಯ ವರದಕ್ಷಿಣೆಗಾಗಿ ತಂಗಿಗೆ ಪೀಡಿಸುತ್ತಿದ್ದ ಎನ್ನಲಾಗಿದೆ.  ತಂಗಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಬಿಡಿಸಲು ಹೋದ ಅಭಿಷೇಕ್ ಮೇಲೆ ರವಿಚಂದ್ರನ್ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.

    ಮಗನ ಅಗಲಿಕೆಯಿಂದ ತಾಯಿಯೂ ಆತ್ಮಹ*ತ್ಯೆ..!

    ಮಂಗಳೂರು ಸಬ್ ಜೈಲಿನಲ್ಲಿ ಮಾರಾಮಾರಿ..! ಇಬ್ಬರು ಆಸ್ಪತ್ರೆಗೆ ದಾಖಲು

    ಜೂ.9ರಂದು ಕುವೆಂಪು ನಗರದಲ್ಲಿ ಈ ದುರ್ಘಟನೆ ನಡೆದಿತ್ತು. ಮಗನ ಅಗಲುವಿಕೆಯ ನೋವಿನಿಂದ ಬೇಸತ್ತ ತಾಯಿ ಭಾಗ್ಯಮ್ಮ ಖಿನ್ನತೆಗೆ ಜಾರಿದ್ದರು. ಆದರೆ ಮಗನ ಅಗಲಿಕೆಯ ನೋವು ತಾಳಲಾರದೆ ಜು.1ರಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

    LATEST NEWS

    ಬಾಡಿಗೆ ಗೆಳತಿ ಜೊತೆ ಡೇಟಿಂಗ್..! ದುಬಾರಿ ಬಿಲ್‌ ನೋಡಿ ಯುವಕ ಶಾ*ಕ್‌..!

    Published

    on

    ಮಂಗಳೂರು : ಡೇಟಿಂಗ್ ಅನ್ನೋದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗ್ತಾ ಇದ್ದು, ಒಂದು ರೀತಿಯ ಟ್ರೆಂಡಿಂಗ್ ಕೂಡಾ ಆಗಿದೆ. ಹಾಗಂತ ಡೇಟಿಂಗ್ ಮಾಡಲು ಜೊತೆ ಇಲ್ಲಾ ಅಂದ್ರೆ, ಬಾಡಿಗೆ ಜೊತೆಗಾರ ಅಥವಾ ಜೊತೆಗಾತಿಯನ್ನು ನೀಡುವ ಅ್ಯಪ್‌ಗಳೂ ಕೂಡಾ ಬಂದಿವೆ. ಇದರ ಮೂಲಕ ತಮಗೆ ಇಷ್ಟವಾದವರ ಜೊತೆ ಡೇಟಿಂಗ್ ನಡೆಸೋದು ಕೂಡಾ ಈಗ ಜೋರಾಗಿ ನಡಿತಾ ಇದೆ. ಹೀಗೆ ಅ್ಯಪ್ ಮೂಲಕ ಜೊತೆಗಾತಿಯನ್ನು ಸಂಪಾದಿಸಿದ ಯುವಕ ಆಕೆಯ ಜೊತೆ ಡೇಟಿಂಗ್ ಮಾಡಿ ಪೇಚಿಗೆ ಸಿಲುಕಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಶಾ*ಕ್ ಕೊಟ್ಟ ಬಿಲ್ :

    ಟಿಂಡರ್ ಅ್ಯಪ್‌ ಅನ್ನೋ ಆನ್‌ಲೈನ್ ಜಾಲದ ಮೂಲಕ ಬಾಡಿಗೆ ಗೆಳತಿಯನ್ನು ಸಂಪಾದಿಸಿಕೊಂಡ ಯುವಕ ಆಕೆಯ ಜೊತೆ ಡೇಟಿಂಗ್ ಹೋಗಿದ್ದಾನೆ. ಹೊಟೇಲ್ ಒಂದರಲ್ಲಿ ಫುಡ್ ಆರ್ಡರ್ ಮಾಡಿ ತಿಂದ ಮೇಲೆ ಬಿಲ್ ನೋಡಿದ ಯುವಕ ಶಾ*ಕ್‌ ಆಗಿದ್ದಾನೆ. ಇಬ್ಬರು ತಿಂದ ಫುಡ್ ಹಾಗೂ ಡ್ರಿಂಕ್ಸ್ ಬಿಲ್ ರೂ 44000.00 ಆಗಿದ್ದೇ ಯುವಕ ಶಾ*ಕ್ ಆಗಲು ಕಾರಣ.

    ಇದನ್ನೂ ಓದಿ : ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ಸಾವು

    ಯುವತಿಯ ಜೊತೆ ಡೇಟಿಂಗ್ ಹೋಗಿದ್ದ ಯುವಕ 30 ಎಮ್‌ಎಲ್‌ನ 18 ಜಾಗರ್ ಬಾಂಬ್‌ ಅನ್ನೋ ಡ್ರಿಂಕ್ಸ್ ಹಾಗೂ ಎರಡು ರೆಡ್‌ ಬುಲ್, ಫ್ರೆಂಚ್ ಫ್ರೈಸ್‌ ಹಾಗೂ ಉಪ್ಪು ಸಹಿತ ಕಡಲೆಕಾಯಿ, ನಾಲ್ಕು ಚಾಕೋಲೇಟ್ ಟ್ರಫಲ್‌ ಕೇಕ್‌ ಆರ್ಡರ್‌ ಮಾಡಿದ್ದ. ಇದಿಷ್ಟಕ್ಕೇ ಹೊಟೇಲ್‌ನವರು ರೂ.44829.00 ಬಿಲ್‌ ನೀಡಿದ್ದಾರೆ.

    Continue Reading

    DAKSHINA KANNADA

    ದ.ಕ.ಜಿಲ್ಲೆಯ ನೂತನ ಎಸ್ ಪಿಯಾಗಿ ಯತೀಶ್. ಎನ್ ಅಧಿಕಾರ ಸ್ವೀಕಾರ‌‌

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್‌ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಎಸ್‌ಪಿ ಯತೀಶ್ ಎನ್‌ ಅವರಿಗೆ ಗೌರವ ರಕ್ಷೆ ನೀಡುವ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಕಛೇರಿಯಲ್ಲಿ ನಿರ್ಗಮಿತ ಎಸ್‌ಪಿ ರಿಶ್ಯಂತ್ ಅವರಿಂದ ಯತೀಶ್ ಎನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

    ರಿಶ್ಯಂತ್ ಅವರಿಗೆ ಬೆಂಗಳೂರು ವೈರ್‌ಲೆಸ್‌ ವಿಭಾಗದ ಎಸ್‌ಪಿಯಾಗಿ ವರ್ಗಾವಣೆಯಾಗಿದ್ದು, ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯತೀಶ್ ಎನ್‌ ಅವರನ್ನು ದಕ್ಷಿಣ ಕನ್ನಡ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

    Continue Reading

    DAKSHINA KANNADA

    ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ಸಾವು

    Published

    on

    ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದ್ದು, ವಿದ್ಯುತ್ ಸ್ಪರ್ಶಿಸಿ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    55 ವರ್ಷದ ಶೈದಾ ಅವರು ಫ್ರಿಡ್ಜ್​​​ನಲ್ಲಿಟ್ಟಿದ್ದ ಮಾವಿನ ಹಣ್ಣು ಹೊರತೆಗೆಯಲು ಹೋಗಿದ್ದರು. ಆಗ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ಗಮನಿಸಿದ ಮಗಳು ಅಮ್ಮನ ರಕ್ಷಣೆಗೆ ಓಡಿ ಬಂದಿದ್ದಾಳೆ. ಈ ವೇಳೆ ಆಕೆಯೂ ವಿದ್ಯುತ್ ಶಾಕ್ ಹೊಡೆದಿದ್ದು, ಮಗಳು ಅಫ್ಸನಾ ಕಾತೂನ್ ಕೂಡ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

    ಮೃತ ವ್ಯಕ್ತಿಯ ಮನೆಯಲ್ಲಿ ಮದುವೆ ಸಮಾರಂಭ ಇತ್ತು. ತಂಗಿಯ ಮದುವೆಯಲ್ಲಿ ಭಾಗಿಯಾಗಲು ತಾಯಿ ಮನೆಗೆ ಅಫ್ಸನಾ ಬಂದಿದ್ದಳು. ಬುಧವಾರ ನಡೆದ ಘಟನೆಯಲ್ಲಿ ತಾಯಿ ಮಗಳು ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದು ಪೊಲೀಸರು ಮನೆಗೆ ಭೇಟಿ ನೀಡಿದ್ದರು. ಆದರೆ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸರು ಪಂಚನಾಮೆ ನಡೆಸಿ ತಾಯಿ ಹಾಗೂ ಮಗಳ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

    Continue Reading

    LATEST NEWS

    Trending