Connect with us

LATEST NEWS

ಎಪ್ರಿಲ್ 1ರ ಹೊಸ ಹಣಕಾಸು ವರ್ಷ; ನೌಕರರ ಕೆಲಸದ ಸಮಯದಲ್ಲಿ ಹೆಚ್ಚಳ; ವೇತನ ಪರಿಷ್ಕರಣೆ..!

Published

on

ನವದೆಹಲಿ: ಎಪ್ರಿಲ್ ಒಂದರಿಂದ ಹೊಸ ಹಣಕಾಸು ಆರಂಭವಾಗುವುದರೊಂದಿಗೆ ಹಲವಾರು ಹೊಸ ಬದಲಾವಣೆಗಳೂ ಆಗಲಿವೆ. ಈ ಬದಲಾವಣೆಗಳಲ್ಲಿ ಮುಖ್ಯವಾಗಿ ಸರ್ಕಾರಿ ನೌಕರರ ಕೆಲಸದ ಸಮಯ ಮತ್ತು ವೇತನ ಪರಿಷ್ಕರಣೆಯಾಗಲಿದೆ.

ಪ್ರಸ್ತುತ ಇರುವ 9ಗಂಟೆಗಳ ಕೆಲಸದ ಮಿತಿ 12ಗಂಟೆಗೆ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಕೆಲಸದ ಸಮಯ ಹೆಚ್ಚಳದೊಂದಿಗೆ ಕೆಲಸದ ದಿನಗಳ ಸಂಖ್ಯೆ ವಾರದಲ್ಲಿ ನಾಲ್ಕು ದಿನವಾಗಲಿದೆ.

ಗ್ರ್ಯಾಚುವಿಟಿ ಮತ್ತು ಭವಿಷ್ಯ ನಿಧಿಯಲ್ಲಿ ಹೆಚ್ಚಳವಾಗಲಿದ್ದು, ಒಟ್ಟು ವೇತನದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. 2020ರಲ್ಲಿ ವೇತನ ಸಂಹಿತೆ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿರುವುದರಿಂದ ಇದು ಜಾರಿಗೆ ಬರುವ ಸಾಧ್ಯತೆಯಿದೆ.ಈ ಕಾನೂನು ಎಪ್ರಿಲ್  1 2021ರಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ.  ಇದರಿಂದ ನೌಕರರ ಒಟ್ಟು ವೇತನ ಕಡಿಮೆಯಾಗುವುದಲ್ಲದೆ. ಇದರ ಪರಿಣಾಮ ಉದ್ಯೋಗಿಗಳು ಹಾಗೂ ಉದ್ಯೋಗದಾತರ ಮೇಲಾಗಲಿದೆ.  ಖಾಸಗಿ ಕಂಪನಿಗಳ ಮೇಲೂ ಹೊಸ ನಿಯಮ ಪ್ರಭಾವ ಬೀರಲಿದೆ

ಹೊಸ ನಿಯಮದ ಪ್ರಕಾರ ಮೂಲ ವೇತನ ಶೇಕಡಾ 50 ಅಥವಾ ಅದಕ್ಕೂ ಮೀರಿರಬೇಕು ಆಗ ಮಾತ್ರ ನೌಕರರ ವೇತನದ ರಚನೆ ಬದಲಾಗಲಿದೆ. ಹೊಸ ಭತ್ಯೆಗಳು ಒಟ್ಟು ವೇತನದ ಶೇಕಡಾ 50ರಷ್ಟಾಗಲಿದೆ. ಮೂಲ ವೇತನದ ಹೆಚ್ಚಳದೊಂದಿಗೆ ಪಿಎಫ್ ಹೆಚ್ಚಾಗಲಿದೆ.

ಹೊಸ ನಿಯಮಗಳ ಪ್ರಕಾರ, ಯಾವುದೇ ಉದ್ಯೋಗಿಯಿಂದ 5 ಗಂಟೆಗಳಿಗಿಂತ ಹೆಚ್ಚು ನಿರಂತರ ಕೆಲಸವನ್ನು ನಿಷೇಧಿಸಲಾಗಿದೆ.
ಪ್ರತಿ 5 ಗಂಟೆಗಳ ನಂತರ 30 ನಿಮಿಷಗಳ ವಿಶ್ರಾಂತಿ ನೀಡುವಂತೆ ನೌಕರರಿಗೆ ಸೂಚನೆ ನೀಡಲಾಗಿದೆ.

1 Comment

1 Comment

  1. ಕೆ ಪ್ರಕಾಶ್

    22/08/2022 at 10:21 PM

    ಯೆಲ್ಲಿದೆ ನೌಕರರ ನೀತಿ ಸಂಹಿತೆ ?.ಯಾವ ಕಾರಣ ಕ್ಕಾಗಿ ನಾವು ಸ್ಥಳೀಯ ರು ವೇತನ ತಾರತಮ್ಯ ನೀತಿ, ಸೇವಾ ಹಿರಿತನ ಕಡೆ ಗಣನೆ, ಮುಂಬಡ್ತಿ ನೀಡದೇ ಮಾನಸಿಕ ಕ್ರೌರ್ಯವನ್ನು ಯಾರು ಸರಿಪಡಿಸುವರು .
    ಗಳಿಕೆ ರಜವನ್ನು 180 ರಿಂದ 120 ಕ್ಕೆ ನಂತರ 24 ಕ್ಕೆ ಇಳಿಸಿ ಕಂಪನಿ ಗೆ ಕೂತು ಲಾಭ ಮಾಡಿ ಕೊಡುತ್ತಾರೆ. 20/80 ಸೂತ್ರದ ಪ್ರಕಾರ ಕಂಪನಿಯು 20% ನವ ರಿಂದ ಮಾತ್ರ ನಡೆಯುತ್ತದೆ 80% ನವರು ಇವರಿಗೆ ದುಡಿದು ದುಡಿದು ಮುಪ್ಪಾಗುವುದು.
    ಈ ಸಂಹಿತೆ ಗಳು ಜಾರಿ ಯಾವಾಗ?5 ವರ್ಷ ದಿಂದ ಜಾರಿ ಮಾಡುತ್ತಲೇ ಜಾರಿ ಹೋಗಿದ್ದಾರೆ.

Leave a Reply

Your email address will not be published. Required fields are marked *

LATEST NEWS

ಬಿಗ್‌ಬಾಸ್ ಸ್ಪರ್ಧಿಗಳ ಜೊತೆ ನಮ್ರತಾ ಗೌಡ ಹುಟ್ಟು ಹಬ್ಬ…!

Published

on

ಬೆಂಗಳೂರು: ನಾಗಿಣಿ, ಬಿಗ್ ಬಾಸ್ ಕನ್ನಡ 10 ಶೋಗಳ ಮೂಲಕ ಮನೆ ಮಾತಾದ ನಟಿ ನಮ್ರತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತರಿಗೆ ನಟಿ ಬರ್ತ್‌ಡೇ ಪಾರ್ಟಿ ಕೊಟ್ಟಿದ್ದಾರೆ. ನಮ್ರತಾ ಹುಟ್ಟುಹಬ್ಬದ ಸೆಲೆಬ್ರೇಶನ್‌ನಲ್ಲಿ ಬಿಗ್ ಬಾಸ್ ಮನೆ ಮಂದಿ ಭಾಗಿಯಾಗುವ ಮೂಲಕ ಸಂಭ್ರಮ ಡಬಲ್ ಮಾಡಿದ್ದಾರೆ.

ಈ ಬಾರಿ ಅವರ ಜೊತೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿಗಳು ಇದ್ದಿದ್ದು ವಿಶೇಷವಾಗಿತ್ತು. ನಮ್ರತಾ ಅವರ ಮನೆಯನ್ನು ಬಿಳಿ, ಬ್ಲ್ಯಾಕ್ ಥೀಮ್‌ನಲ್ಲಿ ಡೆಕೋರೇಟ್ ಮಾಡಲಾಗಿತ್ತು. ಎರಡು ಬಾರಿ ಡ್ರೆಸ್‌ ಚೇಂಜ್ ಮಾಡಿಕೊಂಡಿದ್ದ ನಮ್ರತಾ ಗೌಡ ಅವರು ಸ್ಪೆಷಲ್ ಗೆಟಪ್‌ನಲ್ಲಿ ಮಿಂಚಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ಬರ್ತ್‌ಡೇ ಸೆಲೆಬ್ರೇಶನ್‌ನಲ್ಲಿ ವಿನಯ್ ಗೌಡ, ಕಾರ್ತಿಕ್ ಮಹೇಶ್, ಅಕ್ಷತಾ ವಿನಯ್, ಮೈಕಲ್ ಅಜಯ್, ಇಶಾನಿ, ತನಿಷಾ ಕುಪ್ಪಂಡ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ಕಿಶನ್ ಬಿಳಗಲಿ, ಕವಿತಾ ಗೌಡ, ಅನುಪಮಾ ಗೌಡ, ನೇಹಾ ಗೌಡ ಭಾಗಿಯಾಗಿ ನಮ್ರತಾಗೆ ಶುಭಕೋರಿದ್ದಾರೆ.
ಅಂದಹಾಗೆ, ನಮ್ರತಾ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ಬೆನ್ನಲ್ಲೇ MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ನಟಿ ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ನಮ್ರತಾ ಗೌಡ ಅವರು ‘ಬಿಗ್ ಬಾಸ್’ ಶೋ ನಂತರದಲ್ಲಿ ಏನು ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಅವರು ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.

Continue Reading

LATEST NEWS

ಹೋಟೆಲ್ ನಲ್ಲಿ ಆತ ಹಣಕೊಟ್ಟು ತಿಂದೇ ಇಲ್ಲ…! ಫ್ರೀ ತಿಂಡಿ ತಿಂದಿದ್ದು ಹೇಗೆ ?

Published

on

ನ್ಯೂಯಾರ್ಕ್: ಜನರಿಗೆ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವೆರೈಟಿ ಫುಡ್ ತಿನ್ನೊದು ಎಂದ್ರೆ ತುಂಬಾ ಇಷ್ಟ. ಆದರೆ ಈಗ ಎಲ್ಲಾ ರೀತಿಯ ಆಹಾರಗಳ ಹಣ ಜಾಸ್ತಿ ಆಗಿದೆ. ರುಚಿಗೆ ತಕ್ಕಂತೆ ಹಣ ಕೂಡ ಕೊಡಬೇಕು. ಅಮೆರಿಕಾದ ನ್ಯೂಯಾರ್ಕ್‌ ವ್ಯಕ್ತಿಯೊಬ್ಬ ಹೆಚ್ಚು ಹಣ ಕೊಟ್ಟು ರೆಸ್ಟೋರೆಂಟ್ ಹೋಟೆಲ್‌ ಫುಡ್ ತಿನ್ನುವುದಕ್ಕೆ ಒಳ್ಳೆಯ ಉಪಾಯ ಮಾಡಿಕೊಂಡಿದ್ದಾನೆ. ಈತನ ಉಪಾಯದಿಂದ ನಯಾಪೈಸೆಯೂ ಹಣವಿಲ್ಲದೇ ದಿನವೂ ರುಚಿರುಚಿಯಾದ ಆಹಾರ ತಿನ್ನುವ ಜೊತೆಗೆ ಲಕ್ಷ ಲಕ್ಷ ಹಣ ಉಳಿಸಿದ್ದಾನೆ.

ಫ್ರೀ ಊಟ ತಿಂಡಿ ಮಾಡಲು ಐಡಿಯಾ!

ನ್ಯೂಯಾರ್ಕ್ ನ ಪಶ್ಚಿಮ ಭಾಗದ ನಿವಾಸಿಯಾಗಿರುವ ಹಾನಿ ಮಹಮೌದ್, ವೆರೈಟಿ ತಿನಿಸುಗಳನ್ನು ಹೊರಗಡೆ ಹೋಗಿ ತಿನ್ನುವುದಕ್ಕೆ ಇಷ್ಟಪಡುತ್ತಿದ್ದರು. 10 ಡಾಲರ್ ನಲ್ಲಿ ಒಳ್ಳೆಯ ಊಟವನ್ನು ಸವಿಯುವುದು ಹಾನಿ ಮಹಮೌದ್ ಗೆ ಕಷ್ಟಕರವಾಯಿತು. ಆಗ ಹೆಚ್ಚು ಹಣ ಖರ್ಚು ಮಾಡದೆ ಕಡಿಮೆ ಹಣದಲ್ಲಿ ರುಚಿಯಾದ ಆಹಾರ ಸೇವಿಸುವುದು ಹೇಗೆ ಎಂದು ಆಲೋಚಿಸಿದರು. ಆಗ ರೆಸ್ಟೋರೆಂಟ್ ಗಳಲ್ಲಿ ಉಳಿದ ಆಹಾರವನ್ನು ತಿನ್ನಲು ಮುಂದಾದನು. ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ತಿಂದು ಬಿಟ್ಟೋಗಿರುವ ವೆರೈಟಿ ಆಹಾರವನ್ನು ಹಣ ನೀಡದೆ ಹಾನಿ ಮಹಮೌದ್ ತಿನ್ನಲು ಪ್ರಾರಂಭಿಸಿದರು.

ಈತನಿಗೆ ಸಹಾಯ ಮಾಡಿದ್ದು ಆ್ಯಪ್!

32 ವರ್ಷದ ಹಾನಿ ಮಹಮೌದ್ ಸಾರ್ವಜನಿಕರಿಗೆ ಉಪಯೋಗವಾಗುವ ಟೂಗುಡ್ ಟು ಗೋ (TooGoodToGo) ಆ್ಯಪ್ ಅನ್ನು ಬಳಸಲು ಶುರು ಮಾಡಿಕೊಂಡರು. ಈ ಆ್ಯಪ್ ಡೆನ್ಮಾರ್ಕ್ ನದ್ದಾಗಿದ್ದು, ಇದು ವ್ಯರ್ಥವಾದ ಆಹಾರ ಇರುವ ಸ್ಥಳಗಳನ್ನು ಸೂಚಿಸುತ್ತದೆ. ಇದು ರೆಸ್ಟೋರೆಂಟ್, ಶಾಪ್ ಗಳಲ್ಲಿ ಉಳಿದಿರುವ ಆಹಾರದ ಬಗ್ಗೆ ಮಾಹಿತಿ ನೀಡುತ್ತದೆ. ಇದು ಆಹಾರ ಹಾಳಾಗದಂತೆ ಮತ್ತೊಬ್ಬರ ಹಸಿವು ನೀಗಿಸುವಲ್ಲಿ ಸಹಾಯ ಮಾಡುತ್ತದೆ.

1.41 ಲಕ್ಷ ಮೌಲ್ಯದ ಆಹಾರ ಫ್ರೀ!

ಹಾನಿ ಮಹಮೌದ್ ಈ ರೀತಿ ಬಿಟ್ಟೋದ ಆಹಾರವನ್ನು ಸೇವಿಸಿ ಎರಡು ವರ್ಷಗಳಲ್ಲಿ ಸುಮಾರು 1700 ಡಾಲರ್ ಅಂದರೆ 1,41,846 ರೂಪಾಯಿ ಉಳಿಸಿದ್ದಾರೆ. ಹಾನಿ ಮಹಮೌದ್ ಮಾಡಿರುವ ಈ ಉಪಾಯದಿಂದ ಹಣ ಉಳಿಸುವ ಜೊತೆಗೆ ವೆರೈಟಿ ವೆರೈಟಿ ಆಹಾರ ಸಹ ಸವಿಯುತ್ತಿದ್ದಾರೆ.

ನಗರದಲ್ಲಿ ಎಷ್ಟೇ ಹುಡುಕಿದರೂ ಕಡಿಮೆ ಬೆಲೆಯಲ್ಲಿ ಆಹಾರ ಸಿಗುವ ರೆಸ್ಟೋರೆಂಟ್ ಗಳು ಸಿಗುವುದಿಲ್ಲ. ಮಹಮೌದ್ ಈ ರೀತಿಯಾದ ಆಹಾರ ಸೇವನೆಯಿಂದ ಎರಡು ವರ್ಷಗಳಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿಯನ್ನು ಉಳಿತಾಯ ಮಾಡಿದ್ದಾರೆ. ಈ ಆ್ಯಪ್ ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವುದರ ಜೊತೆಗೆ ಹಣವಿಲ್ಲದೆ ಪರದಾಡುವ ಜನರಿಗೆ ಹೊಟ್ಟೆ ತುಂಬಿಸುತ್ತದೆ.

Continue Reading

DAKSHINA KANNADA

ದೇಶದಲ್ಲಿ ಮೊದಲ ಬಾರಿಗೆ QR ಕೋಡ್ ವೋಟರ್ ಸ್ಲಿಪ್

Published

on

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಮತದಾರರಿಗೆ ಕ್ಯೂ ಆರ್‌ ಕೋಡ್‌ ಹೊಂದಿರುವ ವೋಟರ್‌ ಸ್ಲಿಪ್‌ ನೀಡಲಾಗುವುದು.

ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತಗಟ್ಟೆ ಸುಲಭವಾಗಿ ಹುಡುಕಲು ಸಾಧ್ಯವಾಗದಂತೆ ಮನೆ ಮನೆಗೆ ನೀಡಲಾಗುವ ವೋಟರ್‌ ಸ್ಲಿಪ್‌ ಗಳಲ್ಲಿ ಮತಗಟ್ಟೆಯ ಕ್ಯೂ ಆರ್‌ ಕೋಡ್‌ ಮುದ್ರಿಸಲಾಗಿದೆ.

ನಗರದ ನಿವಾಸಿಗಳು ಕ್ಯೂ ಆರ್‌ ಕೋಡ್‌ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಮತದಾರರ ಮಾಹಿತಿ ಚೀಟಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನೋಂದಾಯಿತ ಎಲ್ಲಾ ಮತದಾರರಿಗೆ ಒದಗಿಸಲಾಗುವುದು.

Continue Reading

LATEST NEWS

Trending