Connect with us

    FILM

    ದರ್ಶನ್ ಅರೆಸ್ಟ್‌ ಬೆನ್ನಲ್ಲೇ ಪವಿತ್ರಾ ಗೌಡ ಪೊಲೀಸ್ ವಶ..!!

    Published

    on

    ಬೆಂಗಳೂರು: ಕೊಲೆ ಆರೋಪದಡಿ ನಟ ದರ್ಶನ್‌ನನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ದರ್ಶನ್‌ ರವರ ಸ್ನೇಹಿತೆ ಪವಿತ್ರಾಗೌಡಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ನನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಗೆಳತಿ ಪವಿತ್ರಾಗೌಡಳನ್ನು ಪೊಲೀಸರು ಸುಪರ್ದಿಗೆ ಪಡೆದಿದ್ದಾರೆ.  ಪವಿತ್ರಾ ಗೌಡಳನ್ನು ಕಾಮಾಕ್ಷಿ ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದು, ಇವರ ಜೊತೆ ಪವಿತ್ರಾ ಅಕ್ಕ ಕೂಡಾ ಹೋಗಿದ್ದಾರೆ ಎನ್ನಲಾಗಿದೆ.

    Read More..; ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

    ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್‌ನನ್ನು ಮೈಸೂರಿನ ಹೋಟೆಲ್‌ವೊಂದರಲ್ಲಿ ಅರೆಸ್ಟ್ ಮಾಡಲಾಗಿದೆ.  ​ ದರ್ಶನ್‌ ಸೇರಿದಂತೆ ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್​, ಕಿರಣ್, ಮಧು, ಲಕ್ಷ್ಮಣ್​, ಆನಂದ್​​, ರಾಘವೇಂದ್ರ ಸೇರಿ 10 ಜನರನ್ನು ವಿಜಯನಗರ ಎಸಿಪಿ ಚಂದನ್ ರವರ ತಂಡ ಬಂಧಿಸಿದೆ. ಮೈಸೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಗಿರೀಶ್, ಎಸಿಪಿ ಚಂದನ್‌ರಿಂದ ವಿಚಾರಣೆ ನಡೆಯುತ್ತಿದೆ.

    ಇನ್ನು ಕೊಲೆಯಾದ ರೇಣುಕಾಸ್ವಾಮಿ ದರ್ಶನ್‌ ರವರ ಅಪ್ಪಟ ಅಭಿಮಾನಿಯಾಗಿದ್ದ. ದರ್ಶನ್ ವಿಜಯಲಕ್ಷ್ಮೀ ದಾಂಪತ್ಯ ಜೀವನ ಚೆನ್ನಾಗಿರಬೇಕು ಎಂದು ಬಯಸಿದ ವ್ಯಕ್ತಿ. ಪವಿತ್ರಾಳಿಂದ ಇವರಿಬ್ಬರ ಸಂಸಾರದಲ್ಲಿ ತೊಂದರೆಯಾಗುತ್ತಿದ್ದು, ಇವರಿಬ್ಬರ ನಡುವೆ ಪವಿತ್ರಾ ಬರುತ್ತಾಳೆಂದು ತಿಳಿದು ಮೆಸೆಜ್ ಮಾಡಿದ್ದ. ಪವಿತ್ರಾ ಗೌಡಳಿಗೆ ಮೆಸೇಜ್ ಮಾಡಿದ ಬಳಿಕ ರೇಣುಕಾ ಕೊಲೆಯಾಗಿ ದೆ ಎಂದು ಹೇಳಲಾಗಿದೆ.

    FILM

    ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

    Published

    on

    ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪದಡಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18 ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಗುರುವಾರ(ಜು.4) ಆದೇಶ ಹೊರಡಿಸಿದೆ.


    ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು(ಜು.4) ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಜಡ್ಜ್​ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.

    ಇದನ್ನೂ ಓದಿ : WATCH : ಕೂದಲು ಕತ್ತರಿಸಿಕೊಂಡ ಹೀನಾ ಖಾನ್; ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದ ನಟಿ

    ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್​ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 18ರ ವರೆಗೆ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.

    Continue Reading

    FILM

    WATCH : ಕೂದಲು ಕತ್ತರಿಸಿಕೊಂಡ ಹೀನಾ ಖಾನ್; ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದ ನಟಿ

    Published

    on

    ಮಂಗಳೂರು/ಮುಂಬೈ : ‘ಕ್ಯಾನ್ಸರ್‌ ಈ ಮಹಾಮಾರಿಗೆ ಅನೇಕ ಮಂದಿ ಬ*ಲಿಯಾಗಿದ್ದಾರೆ. ಅದನ್ನು ಗೆದ್ದು ಬೀಗಿದವರೂ ಇದ್ದಾರೆ. ಸೆಲೆಬ್ರಿಟಿ ಎಂದ ಮಾತ್ರಕ್ಕೆ ಕ್ಯಾನ್ಸರ್ ಬಿಡುತ್ತಾ? ಇಲ್ಲ. ಸೆಲೆಬ್ರಿಟಿಗಳೂ ಕ್ಯಾನ್ಸರ್ ಗೆ ತುತ್ತಾದ ಅನೇಕ ಉದಾಹರಣೆಗಳಿವೆ.


    ನಟಿ ಹಿನಾ ಖಾನ್ ಕೂಡ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹಾಗಂತ ಮುದುಡಿ ಕುಳಿತ್ತಿಲ್ಲ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ತನ್ನ ಚಿಕಿತ್ಸೆಯ ಅಪ್‌ಡೇಟ್ ನೀಡುತ್ತಿರುತ್ತಾರೆ. ಮೂರನೇ ಹಂತದಲ್ಲಿರುವ ಸ್ತನ ಕ್ಯಾನ್ಸರ್‌ಗೆ ಕೀಮೋ ಥೆರಫಿ ಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು.

    ಇದೀಗ ಕಿಮೋ ಬಳಿಕ ಕೂದಲು ಉದುರಲು ಆರಂಭವಾಗಿದ್ದು, ಅದಕ್ಕಾಗಿ ತನ್ನ ಕೂದಲನ್ನು ಕತ್ತರಿಸಿಕೊಂಡ ವಿಡಿಯೋ ಶೇರ್ ಮಾಡಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

    ದಿಟ್ಟ ನಿರ್ಧಾರ ಎಂದ ನಟಿ :

    ತನಗೆ ಕ್ಯಾನ್ಸರ್ ಎಂದು ಗೊತ್ತಾದಾಗ ನೋವಿನಿಂದ ಖಿನ್ನರಾಗುವವರು ಅನೇಕರಿದ್ದಾರೆ. ಆದರೆ, ಹಿನಾ ಇದಕ್ಕಿಂತ ಭಿನ್ನ. ಹಾಗಂತ ಹೆತ್ತವರ ಪರಿಸ್ಥಿತಿ ಹೇಗಿರಬೇಡ…ಮಗಳಿಗೆ ಕ್ಯಾನ್ಸರ್ ಎಂಬ ಕಾಯಿಲೆ ಭಾದಿಸಿದೆ ಎಂದರೆ ಮರುಗದಿರಬಲ್ಲರೇ? ಈ ವೀಡಿಯೋದಲ್ಲಿ ಡ್ರೆಸ್ಸಿಂಗ್ ಟೇಬಲ್ ಮುಂದೆ ಕುಳಿತು ಅಳುತ್ತಿರುವ ಹಿನಾ ತಾಯಿಯನ್ನು ಕಾಣಬಹುದು. ತಾಯಿಯನ್ನು ಸಮಾಧಾನ ಪಡಿಸುತ್ತಾ ಹಿನಾ ಖಾನ್‌ ತನ್ನ ತಲೆಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು ಸುದೀರ್ಘ ಸಂದೇಶವೊಂದನ್ನು ನೀಡಿದ್ದಾರೆ.


    “ನನ್ನ ತಾಯಿ ಯಾವುದನ್ನು ನೋಡಲು ಬಯಸುತ್ತಿಲ್ಲವೋ ಅದಕ್ಕಾಗಿ ನಾನು ಅವರನ್ನು ಸಿದ್ಧಪಡಿಸುತ್ತಿದ್ದೇನೆ. ಇದು ಬಹಳ ಕಷ್ಟಕರವಾದ ಘಳಿಗೆಯಾಗಿದ್ದು ತಮ್ಮ ತಲೆಯ ಕಿರೀಟದಂತಿರುವ ಕೂದಲನ್ನು ಯಾರೂ ತೆಗೆಯಲು ಬಯಸುವುದಿಲ್ಲ. ಆದ್ರೆ, ಅನಿವಾರ್ಯವಾದ ಪರಿಸ್ಥಿತಿಯನ್ನು ಎದುರಿಸುವಾಗ ಇಂತಹ ನಿರ್ಧಾರ ಮಾಡಲೇಬೇಕಾಗಿದೆ. ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳ

    ಲೇ ಬೇಕು” ಎಂದು ಕ್ಯಾನ್ಸರ್ ವಿರುದ್ಧ ಹೋರಾಟಕ್ಕಾಗಿ ಈ ದಿಟ್ಟ ನಿರ್ಧಾರ ಎಂದು ತಿಳಿಸಿದ್ದಾರೆ.

    “ಕೀಮೋ ಥೆರಫಿಯಿಂದ ನನ್ನ ಕೂದಲುಗಳು ಉದುರಿ ಹೋಗಲಿದೆ. ಅದಕ್ಕೂ ಮೊದಲು ನನ್ನ ಸುಂದರ ಕೂದಲನ್ನು ನಾನೇ ತೆಗೆಸಿಕೊಂಡಿದ್ದೇನೆ. ಕೂದಲು ಹಾಗೂ ಹುಬ್ಬು ಮುಂದೆ ಬೆಳೆಯಬಹುದು. ಈಗಿನ ನೋವು ಕೂಡಾ ಮಾಸಬಹುದು. ಆದ್ರೆ, ಆತ್ಮ ಸ್ಥೈರ್ಯ ಉಳಿಯಬೇಕಾಗಿದೆ. ಇದಕ್ಕಾಗಿ ನನ್ನ ಶಕ್ತಿಯೇ ಮುಂದೆ ನನ್ನ ತಲೆಯ ಕಿರೀಟವಾಗಿ ಇರಲಿದೆ. ತೆಗೆದಿರುವ ಕೂದಲಿನಿಂದ ಮುಂದೆ ಒಂದು ವಿಗ್ ಮಾಡಿಸಿಕೊಳ್ಳುತ್ತೇನೆ. ಕ್ಯಾನ್ಸರ್ ಜೊತೆಗಿನ ನನ್ನ ಪ್ರಯಾಣವನ್ನು ರೆಕಾರ್ಡ್‌ ಮಾಡುತ್ತಿದ್ದೇನೆ. ನನ್ನನ್ನು ಪ್ರೀತಿಸುವ ಜನರಿಗಾಗಿ ನಾನು ಇದನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
    ಕೊನೆಯದಾಗಿ, ದೇವರು ನಮ್ಮ ನೋವು ಕಡಿಮೆ ಮಾಡಲು ದಯವಿಟ್ಟು ಪ್ರಾರ್ಥಿಸಿ ಎಂದು ಹೃದಯ ಸ್ಪರ್ಶಿಯಾಗಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ಬಾಡಿಗೆ ಗೆಳತಿ ಜೊತೆ ಡೇಟಿಂಗ್..! ದುಬಾರಿ ಬಿಲ್‌ ನೋಡಿ ಯುವಕ ಶಾ*ಕ್‌..!

    ಇನ್ನು, ಈ ವೀಡಿಯೋಗೆ 9 ಲಕ್ಷಕ್ಕೂ ಅಧಿಕ ವ್ಯೂಸ್ ಬಂದಿದ್ದು, ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಧೈರ್ಯವಂತ ಮಹಿಳೆ, ದೇವರು ಒಳಿತು ಮಾಡಲಿ, ಹೀಗಿ ಧೈರ್ಯವಾಗಿರಿ ಎಂದು ಪ್ರತಿಕ್ರಿಯಿಸುವ ಮೂಲಕ ಹುರಿದುಂಬಿಸಿದ್ದಾರೆ.

    ಹಿನಾ ಖಾನ್ ಹಿಂದಿ ಕಿರುತೆರೆ, ಹಿರಿತೆರೆಯಲ್ಲಿ ತನ್ನದೇ ಆದ ಛಾಪು ಹಬ್ಬಿರುವ ನಟಿ. ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯೂ ಆಗಿದ್ದರು.

    Continue Reading

    FILM

    ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ರಕ್ಷಿತ್ ಶೆಟ್ಟಿ ಭೇಟಿ

    Published

    on

    ಉಡುಪಿ: ಖ್ಯಾತ ನಟ ರಕ್ಷಿತ್‌ ಶೆಟ್ಟಿ ಕುಟುಂಬ ಸಮೇತರಾಗಿ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ನೆರವೇರಿಸಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಮಾರಿಯಮ್ಮನ ಸನ್ನಿಧಾನದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.

    Udupi: ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಕಾಪು ಮಾರಿಗುಡಿ ಸನ್ನಿಧಾನಕ್ಕೆ ಭೇಟಿ

    ದೇವಳದ ಜೀರ್ಣೋದ್ಧಾರದ ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಮುಖ್ಯ ಸಂಚಾಲಕಿ ಬೀನಾ ವಿ. ಶೆಟ್ಟಿ ಅಭಿವೃದ್ಧಿ ಕಾರ್ಯಗಳ ಬಗ್ಗೆ  ಮಾಹಿತಿಯನ್ನು ನೀಡಿದರು. ನಟ ರಕ್ಷಿತ್ ಶೆಟ್ಟಿ ಕುಟುಂಬಸ್ಥರೊಂದಿಗೆ ದೇವಳದ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭ ರಶ್ಮಿತ್ ನಿಖಿಲ್ ಶೆಟ್ಟಿ ಇವರು ಕಾಪುವಿನ ಅಮ್ಮನ ಸ್ವರ್ಣ ಗದ್ದುಗೆಗೆ 9 ಗ್ರಾಂ ಸ್ವರ್ಣ ಸಮರ್ಪಿಸಿದರು. ರಕ್ಷಿತ್ ಶೆಟ್ಟಿ ಅವರ ತಾಯಿ ರಂಜನಾ ಶ್ರೀಧರ್ ಶೆಟ್ಟಿ ಮತ್ತು ಸಹೋದರ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.

    Continue Reading

    LATEST NEWS

    Trending