Connect with us

FILM

ಕೆರಿಯರ್‌ನಲ್ಲಿ ಉಳಿಯಬೇಕಾದ್ರೆ ಇದನ್ನೆಲ್ಲಾ ಮಾಡಬೇಕು – ತಮನ್ನಾ ಭಾಟಿಯಾ..!

Published

on

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರು ತೆಲುಗು- ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಹೊಸ ನಟಿಯರ ನಡುವೆ ತಮನ್ನಾ ಕೂಡ ಎಲ್ಲೂ ಡಲ್ ಆಗದಂತೆ ಶೈನ್ ಆಗ್ತಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರು ತೆಲುಗು- ಬಾಲಿವುಡ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಹೊಸ ನಟಿಯರ ನಡುವೆ ತಮನ್ನಾ ಕೂಡ ಎಲ್ಲೂ ಡಲ್ ಆಗದಂತೆ ಶೈನ್ ಆಗ್ತಿದ್ದಾರೆ.

ಇದೀಗ ಸಂದರ್ಶನವೊಂದರಲ್ಲಿ ತಾವ್ಯಾಕೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು? ತಾವು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂದು ನಟಿ ಬಾಯ್ಬಿಟ್ಟಿದ್ದಾರೆ.

ತಮನ್ನಾ ಭಾಟಿಯಾ ಅವರು ಕಳೆದ ವರ್ಷ 18 ವರ್ಷಗಳಿಂದ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ. ನೋ ಲಿಪ್ ಲಾಕ್ ಎಂಬ ತಮ್ಮ ರೂಲ್ಸ್‌ ಬ್ರೇಕ್ ಮಾಡಿ ಸಖತ್ ಹಾಟ್ ಆಗಿ ತಮನ್ನಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅದಕ್ಕೆ ತಾಜಾ ಉದಾಹರಣೆ ಎಂದರೆ, ಲಸ್ಟ್ ಸ್ಟೋರಿಸ್ 2, ಜೀ ಕರ್ದಾ(Jee Kardha) ಪ್ರಾಜೆಕ್ಟ್. ಈ ಎರಡರಲ್ಲೂ ತಮನ್ನಾ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

ಸಂದರ್ಶನವೊಂದರಲ್ಲಿ ತಮನ್ನಾ ಮಾತನಾಡಿ ನಾವು ಬದಲಾಗದಿದ್ದರೆ ಎಲ್ಲಿ ಆರಂಭಿಸಿದ್ದೆವೋ ಅಲ್ಲೇ ನಿಂತುಬಿಡುತ್ತೇವೆ.

ಆ ರೀತಿ ನಿಂತು ಬಿಡಬೇಕು ಎಂದು ಯಾರು ಅಂದುಕೊಳ್ಳುವುದಿಲ್ಲ. ಎಲ್ಲರೂ ಕೆರಿಯರ್‌ನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲಿ ಪ್ರಮೋಷನ್ ಇದ್ದಂತೆ ನಮ್ಮ ಕೆಲಸದಲ್ಲೂ ಇದೆ.

ಪ್ರಮೋಷನ್‌ಗಾಗಿ ಸ್ವಲ್ಪ ಬ್ರಾಡ್ ಆಗಿ ಆಲೋಚಿಸಬೇಕು. ಹೊಸ ಹೊಸ ಪ್ರಯತ್ನ ಮಾಡಬೇಕು. ಆಗ ಮಾತ್ರ ಜರ್ನಿ ಮತ್ತಷ್ಟು ಸುದೀರ್ಘವಾಗಿ ಚೆನ್ನಾಗಿ ಇರುತ್ತದೆ ಎಂದು ತಮನ್ನಾ ಹೇಳಿದ್ದಾರೆ.

ನವ ನಟಿಯರ ನಡುವೆ ತಮನ್ನಾ ಎಲ್ಲೂ ಡಿಮ್ಯಾಂಡ್ ಕಮ್ಮಿಯಾಗದಂತೆ ಅವಕಾಶ ಎಂಬ ರೇಸ್‌ನಲ್ಲಿ ತಮನ್ನಾ ಮುಂಚೂಣಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಮೃಣಾಲ್ ಠಾಕೂರ್ ಎಂಬ ಈ ಬೇಡಿಕೆಯ ನಟಿಯರ ಮಧ್ಯೆ ‘ಕಾವಾಲಾ’ (Kavaala) ಬ್ಯೂಟಿ ಗಮನ ಸೆಳೆಯುತ್ತಿದ್ದಾರೆ.

FILM

“ಮಮ್ಮುಟ್ಟಿ” ಸಿನೆಮಾದಲ್ಲಿ “ರಾಜ್‌ ಬಿ ಶೆಟ್ಟಿ” ಖದರ್ ! ‘ಟರ್ಬೊ’ ಟ್ರೈಲರ್‌ಗೆ ಫಿದಾ ಆದ ಸಿನಿಪ್ರಿಯರು

Published

on

ಮಂಗಳೂರು: ಕನ್ನಡ ಸಿನೆಮಾ ನಟ ಮಂಗಳೂರಿನ ಪ್ರತಿಭೆ ರಾಜ್ ಬಿ ಶೆಟ್ಟಿ. ಈಗಾಗಲೇ ತನ್ನ ಅದ್ಭುತ ನಟನೆಯ ಮೂಲಕ, ನಿರ್ದೇಶನ, ಚಿತ್ರಕಥೆಯ ಮೂಲಕ ಜನರ ಮನ ಗೆದ್ದಿದ್ದಾರೆ. ಹಾಸ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶೆಟ್ರು.. ಬಳಿಕ ಮಾಸ್ ಸಿನೆಮಾದಲ್ಲಿ ಮಿಂಚಿದ್ದರು. ಒಂದು ಮೊಟ್ಟೆಯ ಕಥೆ ಸಿನೆಮಾದಲ್ಲಿ ತುಂಬಾನೇ ಸೈಲಂಟ್‌ ಆದ ನಟನೆ ಇದ್ರೆ, ಇನ್ನು ಗರುಡ ಗಮನ ವೃಷಭ ವಾಹನದಲ್ಲಿ ಕಂಪ್ಲೀಟ್ ಒಪೋಸಿಟ್ ಕ್ಯಾರೆಕ್ಟರ್. ಶಿವನ ಪಾತ್ರದಲ್ಲಿ ಮೈ ಜುಮ್ಮೆನ್ನಿಸುವ ನಟನೆ ಶೆಟ್ರದ್ದು. ಹೀಗಾಗಿ ಶೆಟ್ರು ಎಲ್ಲಾ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಶೆಟ್ಟು ಮಳಯಾಲಂ ನ ಸೂಪರ್‌ ಸ್ಟಾರ್ ಮಮ್ಮುಟಿ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಯವರು ರಾಜ್‌ ಬಿ ಶೆಟ್ಟಿ ಯವರ ಅಭಿನಯಕ್ಕೆ ಫಿದಾ ಆಗಿದ್ದರು. ಅವರ ‘ಟರ್ಬೊ’ ಸಿನೆಮಾದಲ್ಲಿ ಮಮ್ಮುಟ್ಟಿಗೆ ಸರಿಸಮಾನದ ಪಾತ್ರವನ್ನು ಅಭಿನಯಿಸುವ ಅವಕಾಶ ಇವರದಾಗಿದೆ. ಈಗಾಗಲೇ ಸಿನೆಮಾ ಪ್ರೋಮೋ ಕೂಡಾ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಬಿಗ್‌ಬಾಸ್ ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

ಆ್ಯಕ್ಷನ್ ಪ್ಯಾಕ್ಡ್‌ ಸಿನೆಮಾ ‘ಟರ್ಬೊ’:

ಇನ್ನು ಟರ್ಬೊ ಸಿನಿಮಾ ಕಂಪ್ಲೀಟ್ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ. ಸಿನೆಮಾ ಟ್ರೈಲರ್ ನೋಡಿದ್ರೇನೆ ಸಿನೆಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚುತ್ತೆ. ಈ ಸಿನೆಮಾದಲ್ಲಿ ಶೆಟ್ರು ಕಪ್ಪು ಶರ್ಟ್, ಕಪ್ಪು ಪಂಚೆ ಧರಿಸಿದ್ದಾರೆ. ಇನ್ನು ಮಮ್ಮುಟ್ಟಿ ಡಿಫೆರೆಂಟ್ ಲುಕ್‌ನಲ್ಲಿ ಕಾಣಿಸುತ್ತಿದ್ದು, ಬ್ಲ್ಯಾಕ್ ಶರ್ಟ್‌ ಹಾಗೂ ವೈಟ್ ಪಂಚೆ ಧರಿಸಿದ್ದಾರೆ. ಇನ್ನು ಇವರಿಬ್ಬರ ಪಾತ್ರ ಒಬ್ಬರಿಗೊಬ್ಬರು ಠಕ್ಕರ್ ಕೊಡುವಂತಿದೆ.

ಮಮ್ಮುಟಿಗೆ ಠಕ್ಕರ್ ನೀಡಲಿದ್ದಾರಾ ಶೆಟ್ರು..!

ಸಿನೆಮಾ ಟ್ರೈಲರ್‌ ನಲ್ಲಿ ರಾಜ್‌ ಬಿ ಶೆಟ್ಟಿಗೆ ಹೆಚ್ಚು ಸ್ಪೇಸ್ ನೀಡಿದ್ದಾರೆ. ನಾಲ್ಕೈದು ಕಡೆಗಳಲ್ಲಿ ರಾಜ್ ಬಿ ಶೆಟ್ಟಿಯನ್ನು ತೋರಿಸಿದ್ದಾರೆ. ಹೆಲಿಕಾಫ್ಟರ್‌ನಿಂದ ಇಳಿದು ಬರುವ ದೃಶ್ಯ ಮೊದಲು ಕಂಡುಬರುತ್ತದೆ. ಮಮ್ಮುಟ್ಟಿಗಿಂತ ರಾಜ್‌ ಅವರನ್ನೇ ಈ ಸಿನೆಮಾ ಟ್ರೈಲರ್‌ನಲ್ಲಿ  ಹೈಲಟ್ ಮಾಡಿದ್ದಾರೆ ಅನ್ನೋದು ಸತ್ಯ. ಒಂದು ರೀತಿ ಶ್ರೀಮಂತ ವಿಲನ್ ರೀತಿಯಲ್ಲಿಯೇ ರಾಜ್ ಬಿ ಶೆಟ್ಟಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ಮಮ್ಮುಟ್ಟಿಗೂ ಕಣ್ಣಲ್ಲಿ ಕಣ್ಣಿಟ್ಟು ಡೈಲಾಗ್ ಕೂಡ ಹೊಡೆಯುತ್ತಾರೆ.

‘ಪುಲಿ ಮುರುಗನ್’ ಖ್ಯಾತಿಯ ವೈಶಾಖ್ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದು, ಮಿಧುನ್ ಮ್ಯಾನ್ಯಯೆಲ್ ಥಾಮಸ್ ಕಥೆ ಬರೆದಿದ್ದಾರೆ. ಈ ಸಿನೆಮಾದಲ್ಲಿ ತೆಲುಗು ನಟ ಸುನಿಲ್, ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಇನ್ನು ಸಿನೆಮಾ ಮೇ।23 ರಂದು ತೆರೆ ಕಾಣಲಿದ್ದು ಸಿನಿಪ್ರಿಯರು ಕಾತುರದಿಂದ ಕಾಯ್ತಾ ಇದ್ದಾರೆ.

 

Continue Reading

FILM

ಬಿಗ್‌ಬಾಸ್ ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

Published

on

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ಬಾಸ್​​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಬಿಗ್​ ಮನೆಯಿಂದ ಆಚೆ ಬಂದ ಬಳಿಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಸದ್ಯ ಚಾರ್ಲಿ ನಟಿ ಸಂಗೀತಾ ಶೃಂಗೇರಿ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ಭಾಗಿಯಾಗಿದ್ದಾರೆ. ಸಂಗೀತಾ ಶೃಂಗೇರಿ ಅವರ ಕುಟುಂಬ್ಥರು ಸಖತ್​ ಬ್ಯುಟಿಫುಲ್​ ಆಗಿರೋ ಸ್ಥಳದಲ್ಲಿ ಕೇಕ್​ ಕಟ್​ ಮಾಡಿಸಿದ್ದಾರೆ. ಇನ್ನು, ಚಾರ್ಲಿ ನಟಿಯ ಹುಟ್ಟು ಹಬ್ಬಕ್ಕೆ ಈ ಬಾರಿಯ ಬಿಗ್​ಬಾಸ್​ ಸ್ಫರ್ಧಿಗಳಾದ ವಿನಯ್ ಗೌಡ, ನಮ್ರತಾ ಗೌಡ, ನೀತು ವನಜಾಕ್ಷಿ ಭಾಗಿಯಾಗಿದ್ದರು. ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬರ್ತ್​ಡೇ ಸೆಲೆಬ್ರೇಷನ್ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ಫೋಟೋದಲ್ಲಿ ನಟಿ ನೀಲಿ ಬಣ್ಣ ಡೇಸ್​ನಲ್ಲಿ ಸಖತ್​ ಕ್ಯೂಟ್​ ಆಗಿ ಮಿಂಚಿದ್ದಾರೆ.

ಇನ್ನು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಂಗೀತಾ ಶೃಂಗೇರಿ ಅವರ ಫೋಟೋವನ್ನು ಶೇರ್​ ಮಾಡಿಕೊಂಡು ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಕಮೆಂಟ್​ ಮಾಡುವ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತಿದ್ದಾರೆ. ನಟಿ ಸಂಗೀತಾ ಶೃಂಗೇರಿ ಅವರು ಶೇರ್​ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Continue Reading

FILM

ಕನ್ನಡ ಸಿನೆಮಾ ನಟನ ಮೇಲೆ ಮಾರಣಾಂತಿಕ ಹಲ್ಲೆ..! ‘ನ್ಯಾಯ ಬೇಕು’ ಎಂದು ವೀಡಿಯೋ ಮಾಡಿದ ನಟ

Published

on

ಬೆಂಗಳೂರು: ಕನ್ನಡದ ಹಲವು ಸಿನೆಮಾಗಳಲ್ಲಿ ನಟಿಸಿರುವ ಚೇತನ್ ರವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ.  ಬೆಂಗಳೂರಿನ ಕಗ್ಗಲಿಪುರದಲ್ಲಿ ಈ ಕೃತ್ಯ ನಡೆದಿದೆ.  ಸುಮಾರು 20 ಜನರ ತಂಡದಿಂದ ಚೇತನ್ ರವರ ಮೇಲೆ ಅಟ್ಯಾಕ್‌ ಆಗಿದ್ದು ರಕ್ತ ಸುರಿಯುವ ಹಾಗೆ ಹಲ್ಲೆ ನಡೆಸಿದ್ದಾರೆ. ತಾಯಂದಿರ ದಿನದಂದೆ ಈ ಘಟನೆ ನಡದಿದ್ದು ಚೇನತ ಬೇಸರ ವ್ಯಕ್ತಪಡಿಸಿದ್ದಾರೆ.

chethan halle

ನಿನ್ನೆ ತಾಯಂದಿರ ದಿನವಾಗಿದ್ದರಿಂದ ಚೇತನ್ ತಾಯಿ ಜೊತೆ ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಕಾರು ಅಡ್ಡ ಗಟ್ಟಿ ಸುಮಾರು 20 ಜನರ ಕಿಡಿಗೇಡಿಗಳ ತಂಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ‘ನನ್ನ ಕಾರಿಗೂ ಹಾನಿ ಮಾಡಿದ್ದಾರೆ. ಕಿಡಿಗೇಡಿಗಳು ಮದ್ಯ ಸೇವನೆ ಮಾಡಿದ್ದರು. ಇದು ನನ್ನ ಜೀವನದಲ್ಲಿ ನಡೆದಿರುವ ಅತೀ ಕೆಟ್ಟ ಘಟನೆ. ನನಗೆ ನ್ಯಾಯ ಸಿಗಬೇಕು ಎಂದು ನಟ ಚೇತನ್ ಹೇಳಿದ್ದಾರೆ.  ಸುಮಾರು 20 ಜನ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅದರ ವಿಡಿಯೋ ಇದೆ. ಮೂಗು ಮುರಿದು ಹಾಕಿದ್ದಾರೆ. ಕಗ್ಗಲಿಪುರ ಪೊಲೀಸ್​ ಠಾಣೆ ಪಕ್ಕದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಈಗ ಮತ್ತೆ ಬಂದು ಕಾರು ಒಡೆದು ಹಾಕಿದ್ದಾರೆ. ಅವರು ತುಂಬ ಕೆಟ್ಟ ಜನ ಎಂದು ಚೇತನ್​ ಚಂದ್ರ ಹೇಳಿದ್ದಾರೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಇನ್ನು ಹಲ್ಲೆಗೊಳಗಾದ ಚೇತನ್ ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದು ಅಲ್ಲಿchetan_chanddrra ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ವೀಡಿಯೋ ಮಾಡಿ ತಮ್ಮ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ತಿಳಿಸಿದ್ದಾರೆ.

Continue Reading

LATEST NEWS

Trending