Connect with us

    FILM

    ‘ಕಾಂತಾರ’ ಚಿತ್ರದ ಪ್ರತಿ ಹಂತವು ವಿಶೇಷವಾಗಿತ್ತು – ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ

    Published

    on

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು  ದೆಹಲಿಯಲ್ಲಿ ‘ಕಾಂತಾರ’ ಚಿತ್ರದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೀಗ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕನ್ನಡದ ಚಿತ್ರರಂಗದ ಕೀರ್ತಿಯ ಕ್ಷಣ. ‘ಕಾಂತಾರ’ ಸಿನಿಮಾಗಾಗಿ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಖುಷಿಯಿದೆ. ‘ಕಾಂತಾರ’ ಚಿತ್ರದ ಈ ಪ್ರಯಾಣದ ಪ್ರತಿಯೊಂದು ಹಂತವು ಸ್ಪೆಷಲ್‌ ಆಗಿತ್ತು. ಇನ್ನೂ ನಮ್ಮ ಕೆಲಸವನ್ನು ಗುರುತಿಸಿದ ತೀರ್ಪುಗಾರರಿಗೆ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

    ಇನ್ನೂ ‘ಕಾಂತಾರ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಅವಾರ್ಡ್ ಸ್ವೀಕರಿಸಿದ್ದಾರೆ ರಿಷಬ್. ಈ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಸಿನಿಮಾ ವಿಭಾಗದಲ್ಲಿಯೂ ಪ್ರಶಸ್ತಿ ಸಿಕ್ಕಿದೆ.

    Click to comment

    Leave a Reply

    Your email address will not be published. Required fields are marked *

    FILM

    ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ಲವ್ಲಿ ವಿಶ್

    Published

    on

    ಕಾಟೇರ, ರಾಬರ್ಟ್ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

    ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್‌ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಅದಕ್ಕೆ ತರುಣ್‌ ಕೂಡ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಲವ್‌ ಎಂದಿದ್ದಾರೆ.

    ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ನಟಿ ಭೇಟಿ ನೀಡಿದ್ದಾರೆ. ಅಂದಹಾಗೆ, ಆಗಸ್ಟ್‌ 11ರಂದು ತರುಣ್‌ ಮತ್ತು ಸೋನಲ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    Continue Reading

    BIG BOSS

    ಬಿಗ್‌ಬಾಸ್ ಮನೆಯ ಉಸ್ತುವಾರಿ ಸರಿಯಿಲ್ವಂತೆ!

    Published

    on

    ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಟಾಸ್ಕ್​ ನೀಡಿದ್ದರು. ಗೊಬ್ಬರದ ಅಬ್ಬರ ಎಂಬ ಹೆಸರಿನಲ್ಲಿ ಸ್ಪರ್ಧೆ ಎರ್ಪಡಿಸಿದ್ದರು. ಆದರೆ ಈ ಟಾಸ್ಕ್​ ವೇಳೆ ಮನೆಯ ಕ್ಯಾಪ್ಟನ್​ ನಿರ್ಣಯ ಸ್ಪರ್ಧಿಗಳಿಗೆ ಬೇಸರ ತರಿಸಿದೆ. ಈ ಕುರಿತಾಗಿ ಇತ್ತಂಡಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಹಂಸಾ ಮನೆಯ ಕ್ಯಾಪ್ಟನ್​ ಆಗಿದ್ದು, ಟಾಸ್ಕ್​ ವೇಳೆ ನಿಯಮ ಉಲ್ಲಂಘನೆ ಬಗ್ಗೆ ಕ್ಯಾಪ್ಟನ್​ ಸರಿಯಾದ ನಿರ್ಣಯ ಕೈಗೊಂಡಿರಲಿಲ್ಲ. ಟಾಸ್ಕ್​ ವೇಳೆ ಚೆಂಡನ್ನು ತಳ್ಳಿಕೊಂಡು ಹೋಗುವ ಬದಲು ಕೈಯಲ್ಲಿ ಹಿಡಿದಿದ್ದಾರೆ. ಇನ್ನು ಕೆಲವರು ಜಂಪ್​ ಮಾಡುತ್ತಾ ಟಾಸ್ಕ್​ ಪೂರ್ತಿ ಮಾಡಿದ್ದಾರೆ. ಆದರೆ ಹಂಸಾ ಈ ಕುರಿತಾಗಿ ಸರಿಯಾಗಿ ಟಾಸ್ಕ್​ ನಡೆಸಿಕೊಟ್ಟಿಲ್ಲ ಎಂದು ನರಕ ಮತ್ತು ಸ್ವರ್ಗದ ನಿವಾಸಿಗಳು ಪಟ್ಟಾಂಗ ಹಾಕುತ್ತಿದ್ದಾರೆ. ಉಸ್ತುವಾರಿ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ.

    ನರಕದಲ್ಲಿ ಶಿಶಿರ್​, ಜಗದೀಶ್​​, ಮಾನಸಾ ಉಸ್ತುವಾರಿ ಬಗ್ಗೆ ಮಾತನಾಡಿದರೆ, ಅತ್ತ ಸ್ವರ್ಗದಲ್ಲಿ ಉಗ್ರಂ ಮಂಜು, ತಿವಿಕ್ರಮ ಈ ಇದೇ ವಿಚಾರವಾಗಿ ಚರ್ಚಿಸಿದ್ದಾರೆ. ಆದರೀಗ ಹಂಸಾರವರು ಕ್ಯಾಪ್ಟನ್ಸಿ ವಿಚಾರವಾಗಿ ಮನೆಯ ಉಸ್ತುವಾರಿಯನ್ನು ಕಳೆದುಕೊಳ್ಳುತ್ತಾರಾ ಎಂಬ ಕುತೂಹಲತೆಯು ಅಭಿಮಾನಿಗಳನ್ನು ಕಾಡುತ್ತಿದೆ.

    Continue Reading

    BIG BOSS

    ಬಿಗ್‌ಬಾಸ್ ಮನೆಯಲ್ಲಿ ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್​​ ಸುರೇಶ್​!

    Published

    on

    ಬಿಗ್​ ಬಾಸ್​ ಕನ್ನಡ ಸೀಸನ್​ 11 ಸ್ಪರ್ಧಿ ಗೋಲ್ಡ್​ ಸುರೇಶ್ ಕೋಪಗೊಂಡಿದ್ದಾರೆ. ಕ್ಯಾಮೆರಾದ ಮುಂದೆ ಬಂದು ಬಿಗ್​ ಬಾಸ್​ ನಾವಿನ್ನು ಯಾವ ಆಟ ಆಡಲ್ಲ. ಮೋಸ, ಅನ್ಯಾಯವೆಂದು ಹೇಳಿದ್ದಾರೆ. ಅಷ್ಟಕ್ಕೂ ಇವರ ಕೋಪಕ್ಕೆ ಕಾರಣ ಯಾರು ಗೊತ್ತಾ? ಈ ಸ್ಟೋರಿ ಓದಿ.

    ಬಿಗ್​ ಬಾಸ್​​ ಮನೆಯ ಕ್ಯಾಪ್ಟನ್​ ಹಂಸಾ ಅವರಿಗೆ ಟಾಸ್ಕ್​ವೊಂದನ್ನು ನೀಡಿದ್ದರು. ‘ಗೊಬ್ಬರದ ಅಬ್ಬರ’ ಎಂಬ ಟಾಸ್ಕ್​ ಮೂಲಕ ಮನೆ ಮಂದಿಯನ್ನು ಆಟವಾಡಿಸಲು ಹೇಳಿದ್ದರು. ಆದರೆ ಈ ಆಟದಲ್ಲಿ ಪ್ರತಿಸ್ಪರ್ಧಿಗಳು ಕ್ಯಾಪ್ಟನ್​ ಹಂಸಾ ಅವರ ನಡೆಯನ್ನು ಕಂಡು ಮೋಸ ಎಂದು ಹೇಳಿದ್ದಾರೆ.

    ಬಿಗ್​ ಬಾಸ್​ ಕೊಟ್ಟ ಗೊಬ್ಬರದ ಅಬ್ಬರ ಟಾಸ್ಕ್​ನಲ್ಲಿ ಸ್ಪರ್ಧಿಗಳ ಕೈ -ಕಾಲಿಗೆ ಬಿಗಿಯಾಗಿ ಕಟ್ಟಲಾಗಿರುತ್ತದೆ. ಸ್ಪರ್ಧಿಗಳು ಬಣ್ಣದ ಚೆಂಡನ್ನು ತಳ್ಳಿಕೊಂಡು ಮೀಸಲಿಡುವ ಸ್ಟ್ಯಾಂಡ್​ನಲ್ಲಿ ಇಡಬೇಕು. ಆದರೆ ಟಾಸ್ಕ್​ ವೇಳೆ ಕೆಲವರು ಕೈಯಲ್ಲಿ ಚೆಂಡನ್ನು ಎತ್ತಿಕೊಂಡು ಹೋದರೆ, ಇನ್ನು ಕೆಲವರು ಜಂಪ್​ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಕಣ್ಣಾರೆ ಕಂಡರೂ ಸುಮ್ಮನಿದ್ದ ಕ್ಯಾಪ್ಟನ್​ ವಿರುದ್ಧ ಪ್ರತಿಸ್ಪರ್ಧಿಗಳು ಕಿಡಿಕಾರಿದ್ದಾರೆ. ಪಂದ್ಯದ ರೂಲ್ಸ್​ ವಿಚಾರವಾಗಿ ಮಾತಿನ ಚಕಮಕಿ ಕೂಡ ನಡೆದಿದೆ. ಗೋಲ್ಡ್​ ಸುರೇಶ್​ ಹಂಸಾ ನಡೆಯನ್ನು ವಿರೋಧಿಸಿದ್ದಾರೆ.

    ಹಂಸಾ ರೂಲ್ಸ್​ ವಿಚಾರವಾಗಿ ಮಾತನಾಡಿದ ಗೋಲ್ಡ್​​ ಸುರೇಶ್, ಬಿಗ್​ ಬಾಸ್​ ನಾವಿನ್ನು ಯಾವ ಆಟ ಕೂಡ ಆಡಲ್ಲ. ಮೋಸ, ಅನ್ಯಾಯ ಎಂದು ಹೇಳಿದ್ದಾರೆ. ಅತ್ತ ಚೈತ್ರಾ ಕುಂದಾಪುರ ಯಾವ ಸೀಮೆ ಕ್ಯಾಪ್ಟನ್​ ನೀವು? ಎಂದು ಕಿಡಿಕಾರಿದ್ದಾರೆ.

    ಜಗದೀಶ್​ ಕೂಡ ಹಂಸಾ ವಿರುದ್ಧ ತಿರುಗಿ ಬಿದ್ದಿದ್ದು, ಅವರ ಜೊತೆಗೆ ಊಟ ಮಾಡುವುದಾದರೆ ಮನೆಗೆ ಹೋಗಿ ಋಣ ತೀರಿಸಿ ಆಟದಲ್ಲಲ್ಲ ಎಂದು ಹೇಳಿದ್ದಾರೆ. ಇವರ ಮಾತು ಕೇಳಿ ಹಂಸಾ ಚಿಂತಾಕ್ರಾಂತರಾಗಿದ್ದಾರೆ.

    Continue Reading

    LATEST NEWS

    Trending