Connect with us

    DAKSHINA KANNADA

    ರೋಮ್ಯಾನ್ಸ್‌ ಸೀನ್‌ನಲ್ಲಿ ಕಂಟ್ರೋಲ್ ತಪ್ಪಿದವರು..!

    Published

    on

    ಮಂಗಳೂರು ( ಬಾಲಿವುಡ್ ನ್ಯೂಸ್ ) : ಸಿನೆಮಾ ನಟ ನಟಿಯರು ತೆರೆಯ ಮೇಲೆ ರೋಮ್ಯಾನ್ಸ್ ಮಾಡೋ ಸೀನ್ ಕೆಲವೊಂದು ಬಾರಿ ಫ್ಯಾಮಿಲಿ ಸಮೇತ ಸಿನೇಮಾ ನೋಡೋ ಪ್ರೇಕ್ಷಕರಿಗೇ ಮುಜುಗರ ತಂದು ಬಿಡುತ್ತದೆ. ಹಾಗಿರೋವಾಗ ಅಂತಹ ಸೀನ್‌ಗಳನ್ನ ನಟ ನಟಿಯರು ಯಾವ ರೀತಿ ನಿರ್ವಹಿಸಿರಬಹುದು ಅನ್ನೋದು ಊಹಿಸೋದು ಅಸಾದ್ಯ. ಆದ್ರೆ ಅಂತಹ ಸೀನ್ ನಲ್ಲಿ ನಟಿಸುವಾಗ ಸಾಕಷ್ಟು ಜನ ತಮ್ಮ ಕಂಟ್ರೋಲ್ ಕಳೆದುಕೊಂಡಿದ್ದಾರೆ ಅನ್ನೋದು ವಿಶೇಷ.

    ಕೇವಲ ರೊಮ್ಯಾಂಟಿಕ್ ಸೀನ್ ಮಾತ್ರವಲ್ಲದೆ ಕೋಪದ ಹಾಗೂ ದುಃಖದ ಸೀನ್‌ನಲ್ಲೂ ನಟ ನಟಿಯರು ತಾವೊಂದು ಪಾತ್ರದಾರಿಗಳು ಅನ್ನೋದನ್ನೇ ಮರೆತು ಬಿಡ್ತಾರೆ. ಅಳುವ ಸೀನ್‌ನಲ್ಲಿ ಗ್ಲೀಸರಿನ್ ಇಲ್ಲದೇ ನಿಜವಾಗಿಯೂ ಕಣ್ಣೀರು ಹಾಕಿದ ಎಷ್ಟೋ ನಟ ನಟಿಯರು ಇದ್ದಾರೆ. ಹಾಗೇ ಕೋಪದ ಸೀನ್‌ನಲ್ಲಿ ನಿಜವಾಗಿ ತಮ್ಮ ಕಂಟ್ರೋಲ್ ಕಳೆದುಕೊಂಡು ನಿಜ ಕೋಪ ಪ್ರದರ್ಶನ ಮಾಡಿದವರೂ ಇದ್ದಾರೆ. ಆದ್ರೆ ಎಲ್ಲದಕ್ಕಿಂತ ಮಿಗಿಲಾಗಿ ಬಾಲಿವುಡ್‌ನಲ್ಲಿ ರೋಮ್ಯಾಂಟಿಕ್ ಸೀನ್‌ ಮಾಡುವಾಗ ಕಳೆದುಹೋದವರೇ ಜಾಸ್ತಿ ಇದ್ದಾರೆ.

    ranbeer kapoor

    ಬಾಲಿವುಡ್‌ನ ಪ್ಲೇ ಬಾಯ್ ಅಂತಾನೆ ಕುಖ್ಯಾತಿ ಪಡೆದುಕೊಂಡಿರುವ ರಣಬೀರ್ ಕಪೂರ್ ‘ಯೇ ಜವಾನಿ ಹೇ ದಿವಾನಿ’ ಸಿನೆಮಾದಲ್ಲಿ ಎವಲಿನ್ ಶರ್ಮಾ ಜೊತೆಗೆ ಇಂತಹ ಒಂದು ಪರಿಸ್ಥಿತಿ ಎದುರಿಸಿದ್ದಾರೆ. ಎವಲಿನ್ ಶರ್ಮಾ ಜೊತೆಗೆ ರೊಮ್ಯಾನ್ಸ್‌ ಸೀನ್‌ ಒಂದರಲ್ಲಿ ತಲ್ಲೀನರಾಗಿದ್ದ ರಣಬೀರ್ ಕಪೂರ್‌ ಡೈರೆಕ್ಟರ್‌ ಕಟ್‌ ಅನ್ನೋದೇ ಕೇಳಿಸಿಲ್ಲವಂತೆ. ಆ ರೋಮ್ಯಾನ್ಸ್‌ ಸೀನ್‌ನಲ್ಲಿ ರಣಬೀರ್ ಕಪೂರ್ ಎಲವಿನ್ ಅವರ ಕಾಲು ಸವರುತ್ತಾ ಇರೋ ದೃಶ್ಯ ಶೂಟ್ ಮಾಡಲಾಗುತ್ತಿತ್ತು. ಅವರು ಪಾತ್ರದಲ್ಲಿ ಅದೆಷ್ಟು ಮುಳುಗಿ ಹೋಗಿದ್ದರು ಅಂದ್ರೆ ಅಲ್ಲಿ ನಿಜವಾಗಿಯೂ ಎವಲಿನ್ ಶರ್ಮಾ ಜೊತೆ ರೊಮ್ಯಾನ್ಸ್‌ ಮೂಡ್‌ಗೆ ಜಾರಿದ್ದರು.

    ಇದನ್ನೂ ಓದಿ ಬಾಲಿವುಡ್ ನಟಿ ಸಾರಾ ಅಲಿಖಾನ್ ವಿಡಿಯೋ ವೈರಲ್‌.. !

    tiger shroff

    ಇನ್ನೊಂದು ಸಿನೆಮಾದಲ್ಲಿ ಟೈಗರ್ ಶ್ರಾಫ್ ಹಾಗೂ ಜಾಕ್ವೆಲಿನ್‌ ಫೆರ್ನಾಂಡಿಸ್‌ ಅವರ ಲಿಪ್‌ ಲಾಕ್ ಸೀನ್ ಶೂಟ್ ಆಗುತ್ತಿತ್ತು. ‘ಎ ಫ್ಲೈಯಿಂಗ್ ಜಟ್’ ಸಿನೆಮಾ ಅದಾಗಿದ್ದು ತೆರೆಕಂಡ ಸಿನೆಮಾದಲ್ಲಿ ಆ ಸೀನ್ ಪಡ್ಡೆ ಹುಡುಗರ ನಿದ್ದೆ ಹಾರಿಸಿ ಬಿಟ್ಟಿತ್ತು. ಹೀಗಿರುವಾಗ ರಿಯಲ್ ಆಗಿ ಈ ಲಿಪ್ ಲಾಕ್ ಸೀನ್‌ ನೋಡಿದವರ ಪರಿಸ್ಥಿತಿ ಹೇಗಿರಬಹುದು ಅಲ್ವಾ ? ಸಿನೆಮಾ ಶೂಟಿಂಗ್‌ನಲ್ಲಿ ಇಬ್ಬರ ಈ ಸೀನ್ ನೋಡುತ್ತಿದ್ದ ನಿರ್ದೇಶಕರಿಗೂ ಕೂಡಾ ಅದೇ ಆಗಿತ್ತು . ಹಲವಾರು ಸಿನೆಮಾ ನಿರ್ದೇಶನ ಮಾಡಿದ್ದರೂ ಈ ಸಿನೆಮಾ ಶೂಟಿಂಗ್ ವೇಳೆ ಅವರು ಕಟ್ ಹೇಳೋದೆ ಮರೆತು ಬಿಟ್ಟಿದ್ದರು.

    ‘ಎ ಜಂಟ್ಲ್‌ಮೆನ್’ ಸಿನೆಮಾದಲ್ಲಿ ನಟಿಸಿದ್ದ ಜಾಕ್ವೆಲಿನ್ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೋಡಿ ಕೂಡಾ ಇಂತಹ ಒಂದು ಪ್ರಸಂಗ ಎದುರಿಸಿದೆ. ‘ಎ ಫ್ಲೈಯಿಂಗ್ ಜೆಟ್‌’ ನಲ್ಲಿ ಲಿಪ್ ಲಾಕ್ ಸೀನ್‌ಗೆ ನಿರ್ದೇಶಕ ಕಟ್ ಹೇಳಲು ಮರೆತು ಹೋಗಿದ್ರೆ ‘ಎ ಜಂಟ್ಲ್‌ಮೆನ್’ ಸಿನೆಮಾದಲ್ಲಿ ನಿರ್ದೇಶಕ ಕಟ್‌ ಹೇಳಿದ್ರೂ ಸಿದ್ದಾರ್ಥ್ ಹಾಗೂ ಜಾಕ್ವೆಲಿನ್ ಅವರು ಕಿಸ್‌ ಮಾಡೋದು ನಿಲ್ಲಿಸಿರಲಿಲ್ಲ.

    ಇದನ್ನೂ ಓದಿ ಚಿತ್ರರಂಗಕ್ಕೆ ಶಾಕ್; ಯಶ್ ‘ಕಿರಾತಕ’ ವಿಲನ್ ಡ್ಯಾನಿಯಲ್ ಬಾಲಾಜಿ ಇನ್ನಿಲ್ಲ  

    imran hashmi

    ಇದನ್ನೂ ಓದಿ..; ಕೊನೆಗೂ ಸಿಕ್ಕೇ ಬಿಡ್ತು “ಸಮಂತಾ-ನಾಗಚೈತನ್ಯ” ಡಿವೋರ್ಸ್ ಗುಟ್ಟು..!! ಇದೇ ಕಾರಣನಾ?

    ಇಮ್ರಾನ್​ ಹಷ್ಮಿ ಸೀರಿಯಲ್​ ಕಿಸ್ಸರ್​ ಎಂದೇ ಫೇಮಸ್​. ಅವರ ನಟನೆಯ ಪ್ರತಿ ಸಿನಿಮಾದಲ್ಲೂ ಕಿಸ್ಸಿಂಗ್​ ಸೀನ್​ಗೆ ಸಾಕಷ್ಟು ಮಹತ್ವ ಇರುತ್ತಿತ್ತು. ಇಮ್ರಾನ್​ ಹಾಗೂ ನರ್ಗೀಸ್​ ‘ಅಜರ್’​ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ‘ಬೋಲ್​ ದೋ ನಾ ಜರಾ..’ ಸಾಂಗ್​ನಲ್ಲಿ ಕಿಸ್ಸಿಂಗ್​ ದೃಶ್ಯವೊಂದು ಇದೆ. ನಿರ್ದೇಶಕರು ಕಟ್ ಎಂದರೂ ನರ್ಗಿಸ್ ಕಿಸ್ ಮಾಡೋದನ್ನು ನಿಲ್ಲಿಸಿರಲಿಲ್ಲ. ಹೀರೋ ಹೀರೋಯಿನ್‌ಗಳೇ ಶೂಟಿಂಗ್ ಸಮಯದಲ್ಲಿ ಈ ರೀತಿ ಮೈಮರೆತು ಹೋದ್ರೆ ಇನ್ನು ರೇಪ್‌ ಸೀನ್‌ನಲ್ಲಿ ನಟಿಸುವ ವಿಲನ್‌ಗಳದ್ದೂ ಕೂಡಾ ಕಥೆ ಬೇರೆನೇ ಇದೆ. ಆದ್ರೆ ಈ ಸಂದರ್ಭದಲ್ಲಿ ನಿರ್ದೇಶಕರಾಗಲಿ ನಟಿಯಾಗಲಿ ತುಂಬಾ ಅಲರ್ಟ್‌ ಆಗಿದ್ರೂ ಒಂದೆರಡು ಕಹಿ ಘಟನೆಗಳು ಅಲ್ಲೂ ಕೂಡಾ ನಡೆದಿದೆ.

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು

    Published

    on

    ಮಂಗಳೂರು: ಗುಜರಾತ್‌ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.

     

     

    ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್‌ ಗಾರ್ಡ್‌ ತಂಡ ಹೆಲಿಕಾಪ್ಟರ್‌ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್‌ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್‌ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.

    ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್‌ ಗಾರ್ಡ್‌ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!

    Published

    on

    ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.

    ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.

    ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

    ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.

    ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.

    Continue Reading

    LATEST NEWS

    Trending