Connect with us

    LATEST NEWS

    ಕೊರಿಯರ್ ಏಜೆಂಟ್ ವೇಷದಲ್ಲಿ ಬಂದು ದರೋಡೆಗೆ ಯತ್ನಿಸಿದ ಮಹಿಳೆ..! ಅಸಲಿಗೆ ಈಕೆ ಯಾರು ಗೊತ್ತಾ?

    Published

    on

    ಬೆಂಗಳೂರು: ಮಹಿಳೆಯೊಬ್ಬರು ಕೊರಿಯರ್ ಏಜೆಂಟ್‌ನಂತೆ ವೇಷ ಧರಿಸಿ ದರೋಡೆ ಮಾಡುತ್ತಿದ್ದು ಆಕೆಯನ್ನು ಪೊಲೀಸರು ಬಂಧಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಕೊರಿಯರ್‌ ಏಜೆಂಟ್‌ ವೇಷ ಧರಿಸಿ ಮನೆಗಳಿಗೆ ನುಗ್ಗಿ ಬೆದರಿಸಿ, ಹಲ್ಲೆಗೈದು ದರೋಡೆ ಮಾಡುತ್ತಿದ್ದ ಈಕೆಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈಕೆ ದೆಹಲಿಯ ದ್ವಾರಕಾ ಅಕ್ಕ-ಪಕ್ಕ ಪ್ರದೇಶಗಳಲ್ಲಿ ದರೋಡೆಗಳನ್ನು ಮಾಡುತ್ತಿದ್ದಳು ಎನ್ನಲಾಗಿದೆ.

    ನಾಗರಿಕ ರಕ್ಷಣಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈಕೆ ಈಗ ಕೆಲಸ ಕಳೆದುಕೊಂಡಿದ್ದಾಳೆ. ಈಕೆಯ ಬಳಿಯಿದ್ದ ಕೊರಿಯರ್ ಬ್ಯಾಗ್, ಟಾಯ್‌ಗನ್, ಹ್ಯಾಂಡ್‌ಗ್ಲೌಸ್, ಎರಡು ಹಗ್ಗಗಳು, ಒಂದು ಬ್ಯಾಗ್ ಹೆಲ್ಮೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಡೆದ ಘಟನೆ ಏನು..?

    ಮೇ.23ರಂದು ಪೊಲೀಸರಿಗೆ ಬಂದ ದರೋಡೆ ಕುರಿತ ದೂರಿನ ಪ್ರಕಾರ ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಕೊರಿಯರ್‌ ವೇಷದಲ್ಲಿ ಬಂದ ಮಹಿಳೆ ‘ನಿಮಗೊಂದು ಕೊರಿಯರ್ ಬಂದಿದೆ ಸಹಿ ಹಾಕಿ ಪಡೆಯಿರಿ’ ಎಂದಿದ್ದಾರೆ. ಇನ್ನು ನನ್ನಲ್ಲಿ ಸಹಿ ಹಾಕಲು ಪೆನ್ ಇಲ್ಲ ನೀವೇ ಪೆನ್ನು ತರುತ್ತೀರಾ..? ಎಂದು ಕೇಳಿಕೊಂಡಿದ್ದಾಳೆ. ಮಹಿಳೆ ಮನೆಯೊಳಗಡೆ ಪೆನ್ನು ತರಲು ಹೋಗುತ್ತಿದ್ದಾಗ ಹಿಂದಿನಿಂದ ಹಿಂಬಾಳಿಸಿಕೊಂಡು ಏಕಾಏಕಿ ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಟಾಯ್‌ ಗನ್‌ನಿಂದ ಹೊಡೆದಿದ್ದಾಳೆ. ಹೊಡೆತದ ರಭಸಕ್ಕೆ ಮಹಿಳೆಯ ಮುಖದಲ್ಲಿ ರಕ್ತ ಸೋರಿದೆ. ಮಹಿಳೆ ಜೋರಾಗಿ ಬೊಬ್ಬೆ ಹೊಡೆದು ಅಕ್ಕ-ಪಕ್ಕದ ಮನೆಯವರನ್ನು ಕರೆಯುತ್ತಾಳೆ. ಕೂಡಲೇ ಸ್ಥಳೀಯರು ಮಹಿಳೆ ಮನೆಗೆ ಧಾವಿಸಿ ಬರುತ್ತಾರೆ. ಇದನ್ನು ಅರಿತ ಕೊರಿಯರ್ ವೇಷ ಧರಿಸಿದ್ದ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಈಕೆ ಕೈಗೆ ಗ್ಲೌಸ್‌, ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರಿಂದ ಮುಖ ಚಹರೆ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಎಂದು ಗಾಯಗೊಂಡಿದ್ದ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

    ಅಷ್ಟಕ್ಕೂ ಈ ಮಹಿಳೆ ಯಾರು ಗೊತ್ತಾ..?

    ಇನ್ನು ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಕೊರಿಯರ್ ಏಜೆಂಟ್‌ ಪತ್ತೆಗಾಗಿ ಸೋಮೇಶ್ ವಿಹಾರ್‌ನಿಂದ ಚಾವ್ಲಾ ವರೆಗೆ ಸಿಸಿಟಿವಿ ಪರಿಶೀಲನೆ ಮಾಡುತ್ತಾರೆ. ಮೇ.24ರಂದು ಸೋಮೇಶ್ ವಿಹಾರ್‌ನಲ್ಲಿದ್ದ ಖಾಲಿ ಮನೆಯೊಂದರಲ್ಲಿ ಕೊರಿಯರ್ ವೇಷ ಧರಿಸಿದ್ದ ಮಹಿಳೆಯನ್ನು ಪತ್ತೆ ಮಾಡುತ್ತಾರೆ. ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಾರೆ. ಇನ್ನು ಈ ಕೃತ್ಯ ಎಸಗಿದ ಮಹಿಳೆಯನ್ನು ರೇಖಾ ಎಂದು ಹೇಳಲಾಗಿದೆ. ಈಕೆ ಸಿವಿಲ್ ಡಿಫೆನ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳಿಂದ ನನ್ನ ಕೆಲಸ ಹೋಗಿದೆ. ಮನೆಯ ಬಾಡಿಗೆ ಮತ್ತು ಮನೆಯ ಖರ್ಚನ್ನು ಸಂಭಾಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಹಣಕ್ಕೆ ಬೇಕಾಗಿ ಈ ಕೆಲಸ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾಳೆ.

    ಇದನ್ನೂ ಓದಿ..; ಹೈಕೋರ್ಟ್‌ ಮಹಿಳಾ ಸಿಬಂದಿಗಳಿಗೆ ಇನ್ಮುಂದೆ ‘ಮುಟ್ಟಿನ ರಜೆ’

    ಉದ್ಯಮಿ ಮನೆಗೂ ಕನ್ನ..!

    ಈ ಹಿಂದೆ ಉದ್ಯಮಿ ಚಂದ್ರಕಾಂತ್‌ ಮನೆಯಲ್ಲಿ ಕನ್ನ ಹಾಕಲು ಈ ಮಹಿಳೆ ಯತ್ನಿಸಿದ್ದಳು. ಮೇ.23 ರಂದು ರೇಖಾ ಕೊರಿಯರ್ ಏಜೆಂಟ್ ವೇಷ ಧರಿಸಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಚಂದ್ರಕಾಂತ್‌ ಮನೆಗೆ ಹೋಗಿದ್ದಾಳೆ. ನಿಮಗೊಂದು ಕೊರಿಯರ್ ಬಂದಿದೆ, ಸಹಿ ಹಾಕಿ ಪಡೆದುಕೊಳ್ಳಿ ಎಂದಿದ್ದಾಳೆ. ನನ್ನಲ್ಲಿ ಪೆನ್ನು ಇಲ್ಲ, ನೀವೆ ಪೆನ್ನು ತನ್ನಿ ಎಂದು ಹೇಳಿದ್ದಾಳೆ. ಇನ್ನು ಪೆನ್ನು ತರಲು ಮನೆಯ ಒಳಗಡೆ ಹೋದ ಚಂದ್ರಕಾಂತ್‌ ರವರನ್ನು ಹಿಂಬಾಲಿಸಿದ ರೇಖಾ ಆಟಿಕೆ ಪಿಸ್ತೂಲ್‌ನಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಚಂದ್ರಕಾಂತ್ ಜೋರಾಗಿ ಬೊಬ್ಬೆ ಹೊಡೆದಿದ್ದು ಭಯದಿಂದ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಉತ್ತರ ಪ್ರದೇಶದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತು*ಳಿತ; ಮಕ್ಕಳು ಸೇರಿ 27 ಜನ ಬ*ಲಿ

    Published

    on

    ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭೀ*ಕರ ಕಾಲ್ತು*ಳಿತ ಸಂಭವಿಸಿದ್ದು, 27ಕ್ಕೂ ಅಧಿಕ ಮಂದಿ ಸಾವ*ನ್ನಪ್ಪಿರುವುದಾಗಿ ವರದಿಯಾಗಿದೆ.

    ಮಂಗಳವಾರ ಭೋಲೆ ಬಾಬಾ ಎಂಬವರ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಲ್ತು*ಳಿತ ಉಂಟಾಗಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರು ಗಾಯಗೊಂಡಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಈವರೆಗೆ 27 ಮೃ*ತದೇಹಗಳು ಇಟಾಹ್ ಜಿಲ್ಲೆಯ ಆಸ್ಪತ್ರೆಗೆ ತಲುಪಿರುವುದಾಗಿ ವರದಿಯಾಗಿದೆ.

    ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳವು ಇಟಾಹ್- ಸಿಕಂದರ ರಾವ್ ಗಡಿಯಲ್ಲಿದ್ದು, ಮೃ*ತಪಟ್ಟವರಲ್ಲಿ ಹಲವಾರು ಮಹಿಳೆಯರು ಮತ್ತು ಒಂದು ಮಗು ಕೂಡ ಸೇರಿರುವುದಾಗಿ ವರದಿಯಾಗಿದೆ.

    ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಬಳಿಕ ಹಲವರು ಸಾವ*ನ್ನಪ್ಪಿದ್ದು, ಮಹಿಳೆಯರು ಹಾಗೂ ಮಕ್ಕಳ ಮೃ*ತದೇಹಗಳು ಅಲ್ಲಲ್ಲಿ ಬಿದ್ದಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗುತ್ತಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮೃ*ತದೇಹಗಳನ್ನು ಟೆಂಪೋಗಳಲ್ಲಿ ಸಾಗಿಸುತ್ತಿರುವ ವಿಡಿಯೋ ಕೂಡ ಹರಿದಾಡುತ್ತಿವೆ.

    Continue Reading

    FILM

    ಜೊತೆಯಾಗುತ್ತಿದ್ದಾರೆ ತ್ಯಾಗರಾಜರು…ಇದು ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’!

    Published

    on

    ತಮ್ಮ ನೆಚ್ಚಿನ ನಟರ ಸಿನಿಮಾಗಳು ಸೆಟ್ಟೇರುತ್ತವೆ ಅಂದಾಗ ಅಭಿಮಾಗಳಲ್ಲಿ ಸಂಭ್ರಮ ಮನೆ ಮಾಡುತ್ತೆ. ಅಂತಹುದರಲ್ಲಿ ಜನಪ್ರಿಯ ನಾಯಕರಿಬ್ಬರು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಂದ್ರೆ ಹೇಳ್ಬೇಕಾ ಡಬಲ್ ಸಂಭ್ರಮ. ಇದೀಗ ಇಂತಹ ಸಂಭ್ರಮ ಕೊಡ್ತಾ ಇರೋದು ಅಂದ್ರೆ ರಮೇಶ್ ಅರವಿಂದ್ ಹಾಗೂ ಗಣೇಶ್.


    ತ್ಯಾಗರಾಜರ ಸಮಾಗಮ :


    ಇಂದು(ಜು.2) ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬ. ಹೀಗಾಗಿ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅದರಲ್ಲಿ ಗಣೇಶ್ – ರಮೇಶ್ ಕಾಂಬಿನೇಷನ್ ಚಿತ್ರದ ಪೋಸ್ಟರ್ ಕೂಡ ಒಂದು. ಈ ಪೋಸ್ಟರ್ ನೋಡಿ ಇಬ್ಬರ ಅಭಿಮಾನಿಗಳಿಗೆ ಸಂತಸವಾಗಿರೋದು ಸುಳ್ಳಲ್ಲ.

    ಕನ್ನಡ ಚಿತ್ರರಂಗದಲ್ಲಿ ‘ತ್ಯಾಗರಾಜ’ ಎಂದೇ ರಮೇಶ್ ಅರವಿಂದ್ ಫೇಮಸ್. ಬ್ಯಾಕ್ ಟು ಬ್ಯಾಕ್ ಹಿಟ್‌ಗಳನ್ನು ಕೊಟ್ಟಿದ್ದ ರಮೇಶ್ ಅರವಿಂದ್ ಪ್ರತಿ ಸಿನಿಮಾದಲ್ಲೂ ನಾಯಕಿಯನ್ನು ಕಳೆದುಕೊಂಡಿದ್ದರು. ಹಾಗಾಗಿ ಅವರನ್ನು ಎಂದು ಕರೆಯಲಾಗುತ್ತಿತ್ತು. ಮುಂಗಾರು ಮಳೆ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ತ್ಯಾಗರಾಜ ಪಟ್ಟ ಸಿಕ್ಕಿತ್ತು. ಇದೀಗ ಇವರಿಬ್ಬರು ಒಂದಾಗುತ್ತಿರೋ ಅಭಿಮಾನಿಗೆ ವ್ಹಾವ್ ಎಂದೆನಿಸಿರೋದು ಸುಳ್ಳಲ್ಲ.

    ಆಸಕ್ತಿದಾಯಕವಾಗಿದೆ ಪೋಸ್ಟರ್ :


    ಇನ್ನು ರಿಲೀಸ್ ಆಗಿರೋ ಪೋಸ್ಟರ್ ಆಸಕ್ತಿ ಹುಟ್ಟು ಹಾಕಿದೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಅವರ ಯಂಗ್ ಇರುವ ಫೋಟೊಗಳನ್ನು ಬಳಸಲಾಗಿದೆ. ಒಂದು ಕಾಗದದ ಲಕೋಟೆ, ಅದರ ಮೇಲೊಂದು ಪೀಪಿ ಇಡಲಾಗಿದೆ. ವಿದೇಶದ ಸೀಲೊಂದು ಇದೆ. ಹಾಗಾಗಿ ಚಿತ್ರದಲ್ಲೇನೋ ವಿಶೇಷತೆ ಇದೆ ಅನ್ನಿಸುತ್ತೆ. ಆಗಸ್ಟ್ 16ಕ್ಕೆ ಫಸ್ಟ್ ಲುಕ್ ರಿಲೀಸ್ ಆಗುತ್ತೆ ಎಂದಿರುವ ಚಿತ್ರತಂಡ ‘ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ’ ಎಂದು ಬರೆದುಕೊಂಡು, ಪೋಸ್ಟರ್ ಹಂಚಿಕೊಂಡಿದೆ.

    ಇದನ್ನೂ ಓದಿ :ದರ್ಶನ್ ಅಭಿಮಾನಿಗಳ ಹುಚ್ಚುತನ; ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್  

    ಅಂದಹಾಗೆ, ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ನಿರ್ದೇಶಕನ ಟೋಪಿ ಹಾಕಿದ್ದಾರೆ.

    Continue Reading

    LATEST NEWS

    ಡೋರ್‌ ಲಾಕ್ ತುಂಡಾಗಿ ಬಸ್ಸಿನಿಂದ ಹೊರಬಿದ್ದ ಮಹಿಳೆ

    Published

    on

    ಚಿಕ್ಕಮಗಳೂರು: ಸರಕಾರಿ ಬಸ್ಸು ಹತ್ತುವ ವೇಳೆ ಡೋರ್ ಲಾಕ್ ತುಂಡಾದ ಪರಿಣಾಮ ಮಹಿಳೆ ಬಸ್ಸಿನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಐದಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.

    ಐದಳ್ಳಿ ಗ್ರಾಮದ ಶಕುಂತಲಮ್ಮ ಎಂಬ ಮಹಿಳೆಗೆ ಗಂಭೀರ ಗಾಯವಾಗಿದ್ದು ಅವರನ್ನು ಅಲ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಬಸ್ಸು ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದು ಶಕುಂತಳಮ್ಮ ಬಾಳೆಹೊನ್ನೂರಿಗೆ ತೆರಳಲು ಬಸ್ ಹತ್ತುವಾಗ ಬಸ್ಸಿನ ಬಾಗಿಲಿನ ಲಾಕ್ ತುಂಡಾಗಿದೆ. ಬಾಗಿಲು ಹಿಡಿದ್ದಿದ್ದ ಮಹಿಳೆ ಏಕಾಏಕಿ ಬಸ್ಸಿನಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ.

    ಬಸ್ಸಿನ ಸರಿಯಾದ ನಿರ್ವಹಣೆ ಇಲ್ಲದೆ ಈ ರೀತಿ ಆಗಿದೆ ಎಂದು ಪ್ರಯಾಣಿಕರು ಹೇಳಿಕೊಂಡಿದ್ದು ಘಟನೆ ಸಂಬಂಧ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    LATEST NEWS

    Trending