Connect with us

    FILM

    ಜೈಲಿನಿಂದಲೇ ದರ್ಶನ್‌ನಿಂದ ಅಭಿಮಾನಿಗಳಿಗೆ ವಿಶೇಷ ಮನವಿ

    Published

    on

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನು ದರ್ಶನ್‌ನನ್ನು ನೋಡಲು ಅವರ ಅಭಿಮಾನಿಗಳ ದಂಡು ಜೈಲಿನ ಬಳಿ ದೌಡಾಯಿಸುತ್ತಿದ್ದಾರೆ. ನಿತ್ಯವೂ ಜೈಲಿನ ಬಳಿ ಅಭಿಮಾನಿಗಳು ಬಂದು ದರ್ಶನ್‌ ಪರ ಘೋಷಣೆಗಳನ್ನು ಕೂಗುತ್ತಿದ್ದರು.

    ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷಚೇತನ ಯುವತಿ ದರ್ಶನ್‌ ಭೇಟಿಗಾಗಿ ಜೈಲಿನ ಬಳಿ ಬಂದಿದ್ದಳು. ದರ್ಶನ್ ನೀಡಿದ್ದ ರಿಕ್ಷಾದಲ್ಲಿ ಪೋಷಕರ ಜೊತೆ ದರ್ಶನ್‌ನನ್ನು ನೋಡಲು ಬಂದಿದ್ದರು. ಅನ್ನ, ನೀರು ಬಿಟ್ಟು ದರ್ಶನ್‌ನನ್ನು ನೋಡಲು ಹಠ ಮಾಡಿದ್ದಾಳೆ. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್‌ ಎಂಬ ವಿಶೇಷಚೇತನ ಯುವಕ ಗುಲ್ಬರ್ಗಾದಿಂದ ತ್ರಿ ವ್ಹೀಲರ್ ನಲ್ಲಿ ದರ್ಶನ್‌ನನ್ನು  ಭೇಟಿ ಮಾಡಲು ಬಂದಿದ್ದ ಎನ್ನಲಾಗಿದೆ.

    Read More..; ಬೆಂಗಳೂರಿನಲ್ಲಿ ದರ್ಶನ್ ಅಭಿಮಾನಿಯ ಬಂಧನ

    ಈ ಬಗ್ಗೆ ದರ್ಶನ್ ಬೇಸರಗೊಂಡಿದ್ದಾರೆ. ಜೈಲಿನಲ್ಲೇ ಕುಳಿತು ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನೆ ಮಾಡಿದ್ದಾರೆ. ‘ಯಾರೂ ಜೈಲಿನ ಬಳಿ ಬರಬೇಡಿ’ ಎಂದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಜೈಲಿನ ಬಳಿ ಬಂದು ನನ್ನ ಭೇಟಿಗಾಗಿ ಕಾಯುವುದು ಬೇಡ, ನಿಮ್ಮ ಸಮಯವನ್ನು ವ್ಯರ್ಥ ಮಾಡುವುದು ಬೇಡ ಎಂದು ದರ್ಶನ್ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.  ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ ಹೀಗಾಗಿ ಸುಮ್ಮನೆ ಬಂದು ಸಮಯ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    FILM

    ‘ಎಲ್ಲಾ ಹಣೆಬರಹ..ನಾವೇನು ಮಾಡೋಕ್ಕಾಗಲ್ಲ…’ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

    Published

    on

    ಬೆಂಗಳೂರು/ಮಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ವಿಚಾರಣಾಧೀನ ಖೈದಿಯಾಗಿ ಜೈಲು ಸೇರಿದ್ದಾರೆ. ದೇಶದೆಲ್ಲೆಡೆ ಈ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ರವರು ದರ್ಶನ್ ಕೊಲೆ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.

    ಎಲ್ಲಾ ಹಣೆಬರಹ ಏನೂ ಮಾಡೋಕಾಗಲ್ಲ. ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಫ್. ಒಳ್ಳೆಯದು ಕೆಟ್ಟದ್ದು ಎರಡೂ ನಡೆಯುತ್ತದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಎಲ್ಲರಿಗೂ ಒಂದು ನ್ಯಾಯ ಸಿಗಬೇಕು. ಎಲ್ಲಾ ಕುಟುಂಬಕ್ಕೂ ಒಳ್ಳೆದಾಗಬೇಕು’ ಎಂದು ಶಿವಣ್ಣ ಹೇಳಿದ್ದಾರೆ.

    ದರ್ಶನ್ ಬೆಂಬಲಕ್ಕೆ ನಿಂತ ಪರಭಾಷಾ ನಟ; ಏನಂದ್ರು ನಾಗಶೌರ್ಯ?

    ನ್ಯಾಯ ಏನಿದೆಯೋ ಅದು ಆಗುತ್ತದೆ. ಇದೆಲ್ಲ ಹಣೆಬರಹ ನಾವೇನು ಮಾಡೋಕಾಗಲ್ಲ. ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡಬೇಕು. ಈ ಘಟನೆಯಿಂದ ರೇಣುಕಾಸ್ವಾಮಿ ಫ್ಯಾಮಿಲಿಗೆ ಆಗಲಿ, ದರ್ಶನ್ ಅವರ‌ ಫ್ಯಾಮಿಲಿಗೆ ಆಗಲಿ ನೋವಾಗಿರುತ್ತೆ. ನ್ಯಾಯ ಏನಿದೆಯೋ ನೋಡೋಣ. ಈಗ ಮಾತಾಡಿ ಪ್ರಯೋಜನ ಇಲ್ಲ’ ಎಂದು ಹೇಳಿದ್ದಾರೆ.

    Continue Reading

    FILM

    ಸಾಲಗಾರರಿಂದ ಕಿರುಕುಳ; ಸಿಸಿಬಿ ಪೊಲೀಸರಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ದೂರು

    Published

    on

    ಬೆಂಗಳೂರು : ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಲಗಾರರು ತಮಗೆ ಕಿರುಕುಳ ಕೊಡುತ್ತಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಸಿಸಿಬಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಸಾಲ ನೀಡಿರುವ ಕೆಲವರು ಮನೆ ಬಳಿ ಗೂಂಡಾಗಳನ್ನು ಕಳಿಸಿ ಗಲಾಟೆ ಮಾಡಿಸಿದ್ದಾರೆ ಎಂದು ಪುಷ್ಕರ್ ಆರೋಪ ಮಾಡಿದ್ದಾರೆ. ಅವರುಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


    ‘ಅವನೇ ಶ್ರೀಮನ್ನಾರಾಯಣ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವತಾರ ಪುರುಷ’ ಸೇರಿದಂತೆ ಅನೇಕ ಸಿನಿಮಾಗಳಿಗೆ ಪುಷ್ಕರ್ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ. ಸಿನಿಮಾಗಳಿಂದ ನಷ್ಟ ಉಂಟಾಗಿ ಪುಷ್ಕರ್ ಮಲ್ಲಿಕಾರ್ಜುನ, ಸಿನಿಮಾ ಮಾಡಿದ್ದ ಸಾಲ ಮರುಪಾವತಿ ಸರಿಯಾಗಿ ಮಾಡಲಾಗಿಲ್ಲವಾದ್ದರಿಂದ ಸಾಲ ನೀಡಿರುವವರು ಪುಷ್ಕರ್​ಗೆ ಸಮಸ್ಯೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ದೂರಿನಲ್ಲಿ ಏನಿದೆ?

    ತಮ್ಮ ಸಂಬಂಧಿ ಆದರ್ಶ್ ಎಂಬವರ ಬಳಿ ಪುಷ್ಕರ್ ಮಲ್ಲಿಕಾರ್ಜುನ ಕಾಲಾಂತರದಲ್ಲಿ ಐದು ಕೋಟಿ ರೂಪಾಯಿ ಸಾಲ ಪಡೆದಿದ್ದರಂತೆ. ಅದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು 5% ಬಡ್ಡಿ ಪಾವತಿ ಮಾಡುತ್ತಿದ್ದರಂತೆ. ಐದು ಕೋಟಿ ಸಾಲಕ್ಕೆ ಪ್ರತಿಯಾಗಿ ಹತ್ತು ಚೆಕ್ಕುಗಳನ್ನು ಸಹ ನೀಡಿದ್ದರಂತೆ. ಪುಷ್ಕರ್ ಹೇಳಿರುವಂತೆ ಅವರು ಐದು ಕೋಟಿ ಸಾಲಕ್ಕೆ ಬಡ್ಡಿ ಎಲ್ಲ ಸೇರಿಸಿ ಈಗಾಗಲೇ 11 ಕೋಟಿ ಹಣ ನೀಡಿದ್ದಾರಂತೆ. ಆದರೆ ಸಾಲ ಕೊಟ್ಟಿರುವ ಆದರ್ಶ್, ಪುಷ್ಕರ್ ಕೊಟ್ಟಿರುವ ಹಣವನ್ನು ಚಕ್ರಬಡ್ಡಿ, ಬಡ್ಡಿಗೆ ಲೆಕ್ಕ ಹಾಕಿ ಈಗ ಇನ್ನೂ 13 ಕೋಟಿ ನೀಡುವಂತೆ ಕೇಳಿದ್ದಾರಂತೆ.

    ವಾದ ವಿವಾದಗಳು ನಡೆದಾಗ ಸಾಲ ನೀಡಿರುವ ಆದರ್ಶ್, ಹರ್ಷ ಸಿ, ಹರ್ಷ ಡಿ.ಬಿ. ಹಾಗೂ ಅವರ ಕೆಲವು ಸಹಚರರು ತಮ್ಮ ವಾಸದ ಮನೆ, ಕಚೇರಿಗಳಿಗೆ ಹುಡುಗರನ್ನು ಕಳುಹಿಸಿ ಗಲಾಟೆ ಮಾಡಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಪುಷ್ಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ :ರಿಲೀಸ್‌ಗೂ ಮುನ್ನವೇ ರಾಧಿಕಾ ನಟನೆಯ ಸಿನೆಮಾ ನಿರ್ದೇಶಕನಿಗೆ ಕಾರು ಉಡುಗೊರೆ..!!

    ಸಿಸಿಬಿಯ ಕಿಶೋರ್ ಕುಮಾರ್ ಅವರಿಗೆ ಪುಷ್ಕರ್ ದೂರು ನೀಡಿದ್ದು, ಕರ್ನಾಟಕ ಮನಿ ಲೆಂಡರ್ಸ್ ಕಾಯಿದೆ, ಕರ್ನಾಟಕ ಪ್ರಹಿಬಿಷನ್ ಆಫ್ ಚಾರ್ಜಿಂಗ್ ಎಕ್ಸಾರ್ಬಿಟೇಶನ್ ಇಂಟರೆಸ್ಟ್ ಆ್ಯಕ್ಟ್, ವಂಚನೆ, ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

    Continue Reading

    FILM

    ರಿಲೀಸ್‌ಗೂ ಮುನ್ನವೇ ರಾಧಿಕಾ ನಟನೆಯ ಸಿನೆಮಾ ನಿರ್ದೇಶಕನಿಗೆ ಕಾರು ಉಡುಗೊರೆ..!!

    Published

    on

    ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ನಟನೆಯ ಅಜಾಗ್ರತಾ ಸಿನೆಮಾ ನಿರ್ದೇಶಕರಿಗೆ ಸಿನೆಮಾ ಬಿಡುಗಡೆ ಮುನ್ನವೇ ಬಂಪರ್ ಬಹುಮಾನ ನೀಡಲಾಗಿದೆ. ರಾಧಿಕಾ ಕುಮಾರಸ್ವಾಮಿ ಸಹೋದರ ನಿರ್ಮಾಪಕ ರವಿರಾಜ್ ರವರು ಈ ಉಡುಗೊರೆಯನ್ನು ನೀಡಿದ್ದಾರೆ.

    ಈ ಹಿಂದೆ ತಮಿಳಿನ ಜೈಲರ್ ಸಿನೆಮಾ ಹಿಟ್ ಅದ ಬಳಿಕ ಸಿನೆಮಾ ನಾಯಕನಟ ರಜನಿಕಾಂತ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ರವರಿಗೆ  ನಿರ್ಮಾಪಕ ಕಲಾನಿಧಿಮಾರನ್ ಐಶರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಕಾಟೇರಾ ಸಿನೆಮಾ ಹಿಟ್ ಆದಾಗಲೂ ಸಿನೆಮಾ ಕಥೆಗಾರರಿಗೆ ಕಾರನ್ನು ಗಿಫ್ಟ್ ಮಾಡಲಾಗಿತ್ತು. ಇದೀಗ ರಾಧಿಕಾ ನಟನೆಯ ಅಜಾಗ್ರತ ಸಿನೆಮಾ ಶೂಟಿಂಗ್ ಮುಗಿದು ಸಿನೆಮಾದ ಮೊದಲ ಪ್ರತಿ ಬಿಡುಗಡೆಯಾದ ಬೆನ್ನಲ್ಲೇ ಸಿನೆಮಾ ನಿರ್ದೇಶಕ ಶಶಿಧರ್‌ ಅವರಿಗೆ ನಿರ್ಮಾಪಕ ರವಿರಾಜ್ ಟೊಯೋಟಾ ಫಾರ್ಚ್ಯುನಾರ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇನ್ನು ನಿರ್ಮಾಪಕರು ಹೇಗೆ ಹೇಳಿದ್ದರೋ ಅದಕ್ಕಿಂತಲೂ ತುಂಬಾ ಚೆನ್ನಾಗಿ ಸಿನೆಮಾ ಮೂಡಿ ಬಂದಿದೆ. ನನಗೆ ಸಿನೆಮಾ ಬಹಳ ಇಷ್ಟವಾಗಿದೆ. ಶ್ರಮಪಟ್ಟು ಸಿನೆಮಾವನ್ನು ಅತ್ಯತ್ತಮವಾಗಿ ಕಟ್ಟಿಕೊಟ್ಟ ನಿರ್ದೇಶಕರಿಗೆ ಫಾರ್ಚ್ಯೂನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ನಿರ್ಮಾಪಕ ರವಿರಾಜ್ ಹೇಳಿದ್ದಾರೆ.

    ದರ್ಶನ್ ಬೆಂಬಲಕ್ಕೆ ನಿಂತ ಪರಭಾಷಾ ನಟ; ಏನಂದ್ರು ನಾಗಶೌರ್ಯ?

    ಇನ್ನು ಈ ಸಿನೆಮಾದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ನಾಯಕರಾಗಿ ನಟಿಸಿದ್ದು, ಚಿತ್ರದ ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ನಟ ಬಾಬಿ ಸಿಂಹ , ಸುನೀಲ್, ರಾಘವೇಂದ್ರ ಶ್ರವಣ್, ಆದಿತ್ಯ ಮೆನನ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್, ರಾವ್ ರಮೇಶ್‌ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ.

    Continue Reading

    LATEST NEWS

    Trending