kerala
ಮಗುವಿನ ಹ*ತ್ಯೆ ನಡೆಸಿ ತಾಯಿಯೂ ಆತ್ಮಹ*ತ್ಯೆ..!
ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಂ*ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪ ನಡೆದಿದೆ. ಇಡುಕ್ಕಿ ತೊಡುಪುಳ ನಿವಾಸಿ ಶರತ್ ಅವರ ಪತ್ನಿ ಬಿಂದು (28) ಆತ್ಮಹತ್ಯೆ ಮಾಡಿಕೊಂಡವರು. ಮಗು ಶ್ರೀನಂದಾಳನ್ನು ಕೊಂದು ಬಳಿಕ ತಾಯಿ ಸಾವಿಗೆ ಶರಣಾಗಿದ್ದಾಳೆ.
ಪತಿ ಶರತ್ ಇಸ್ರೇಲಿನಲ್ಲಿ ಉದ್ಯೋಗಿಯಾಗಿದ್ದಾರೆ. ಪತಿಯ ಮನೆಯಲ್ಲೇ ಇದ್ದ ಬಿಂದು, ಇಬ್ಬರು ಮಕ್ಕಳಾದ ಪುತ್ರಿ ಶ್ರೀನಂದಾ ಮತ್ತು ಪುತ್ರ ಶ್ರೀಹರಿಯೊಂದಿಗೆ ಕಳೆದ ಭಾನುವಾರ ಮುಳ್ಳೇರಿಯ ಬಳಿಯಲ್ಲಿರುವ ತಾಯಿ ಮನೆ ಕೋಪಾಳಕೊಚ್ಚಿ ಬಂದಿದ್ದರು. ಎ.5ರಂದು ಮಧ್ಯಾಹ್ನ ಬಿಂದು ಮನೆ ಪಕ್ಕದ ಮರದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದು, ಅವರ ಕೈಯ ನರ ಕತ್ತರಿಸಲ್ಪಟ್ಟು ರಕ್ತ ಸೋರುತ್ತಿತ್ತು. ಇದೇ ವೇಳೆ ಮಗು ಶ್ರೀನಂದ ಮನೆಯ ಮಲಗುವ ಕೊಠಡಿಯಲ್ಲಿ ಗಂಭೀರಾವಸ್ಥೆಯಲ್ಲಿ ಕಂಡು ಬಂದಿದ್ದು, ಅದನ್ನು ಕಂಡ ಮನೆಯವರು ಮಗುವನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ..; ಎದೆ ಹಾಲು ಕುಡಿದು ಉಸಿರು ನಿಲ್ಲಿಸಿದ ಮಗು…! ಮಗುವಿನ ಜೊತೆ ಇಹಲೋಕ ತ್ಯಜಿಸಿದ ತಾಯಿ..!
ವಿಷಯ ತಿಳಿದ ಕಾಸರಗೋಡು ತಹಶೀಲ್ದಾರ್ ಪಿ.ಎಂ.ಅಬೂಬಕ್ಕರ್ ಸಿದ್ದಿಕ್, ಕಾಸರಗೋಡು ಡಿವೈಎಸ್ಪಿ ಜಯನ್ ಡೊಮಿನಿಕ್ ಹಾಗೂ ಆದೂರು ಪೊಲೀಸ್ ಇನ್ಸ್ಪೆಕ್ಟರ್ ಸಂಜಯ್ ಕುಮಾರ್ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದು ಅವರ ನೇತೃತ್ವದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆಗೆ ಕಾರಣ ಗೊತ್ತಾಗಿಲ್ಲ.
kerala
ಇದು ಅವಳಿ ಮಕ್ಕಳ ಗ್ರಾಮ.. ಇಲ್ಲಿದ್ದಾರೆ 450ಕ್ಕೂ ಹೆಚ್ಚು ಅವಳಿ-ಜವಳಿ ಮಕ್ಕಳು
ದೇಶದ ನಾನಾ ಭಾಗಗಳು ಒಂದಲ್ಲಾ ಒಂದು ರೀತಿಯ ವಿಶೇಷತೆಯನ್ನು ಹೊಂದಿರುತ್ತದೆ. ಅದೇ ರೀತಿ ಭಾರತದಲ್ಲೂ ಒಂದು ಗ್ರಾಮವಿದೆ. ಸಾಮಾನ್ಯವಾಗಿ ಒಂದು ಊರಿನಲ್ಲಿ ಎರಡೂ ಅಥವಾ ನಾಲ್ಕು ಅವಳಿ ಮಕ್ಕಳು ಇರುತ್ತಾರೆ. ಆದರೆ ಈ ಗ್ರಾಮದಲ್ಲಿ 450ಕ್ಕೂ ಹೆಚ್ಚು ಮಂದಿ ಅವಳಿಗಳಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಹಳ್ಳಿಯಾದ ಕೊಡಿನ್ಹಿ ಇಂತಹ ಒಂದು ಅದ್ಭುತಕ್ಕೆ ಹೆಸರುವಾಸಿಯಾಗಿದೆ. ಈ ಗ್ರಾಮಕ್ಕೆ ಟ್ವಿನ್ ಟೌನ್ ಗ್ರಾಮ ಎಂದು ಕರೆಯುತ್ತಾರೆ. ಕೊಚ್ಚಿಯಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 2 ಸಾವಿರ ಕುಟುಂಬಗಳು ವಾಸವಾಗಿದೆ.
ಅವಳಿ ಜನನದ ಕುರಿತಾಗಿ ಲಂಡನ್, ಜರ್ಮನಿ, ಹೈದರಾಬಾದ್ ಮತ್ತು ಕೇರಳ ವಿಶ್ವವಿದ್ಯಾನಿಲಯಗಳು ಲಾಲಾರಸ ಮತ್ತು ಕೂದಲಿನ ಮಾದರಿಯನ್ನು ಸಂಗ್ರಹಿಸಿ ಕೊಡಿನಿ ಗ್ರಾಮದ ಕುರಿತು ಸಂಶೋಧನೆ ನಡೆಸಿದ್ದಾರೆ. ಆದರೆ ಸಂಶೋಧನೆಯಿಂದ ನಿಖರವಾದ ಉತ್ತರ ದೊರೆತಿಲ್ಲ.
ಮೂಲವಾಗಿ ಕೊಡಿನಿ ಗ್ರಾಮದಲ್ಲಿ ಹರಿಯುವ ಸ್ಥಳೀಯ ನೀರು ಮತ್ತು ವಾತಾವರಣದಿಂದಾಗಿ ಅವಳಿ ಮಕ್ಕಳ ಜನನಕ್ಕೆ ಕಾರಣವಾಗಿದೆ ಎಂದು ವಿಜ್ಞಾನಿಗಳ ಅನಿಸಿಕೆ. ಎಲ್ಲಾ ತಾಯಂದಿರು ಅವಳಿ ಮಕ್ಕಳಿಗೆ ಜನನ ನೀಡಿದ್ದರೂ ಕೂಡ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ : ದುಬೈನಲ್ಲಿ ಕೈಬೀಸಿ ಕರೆಯುತ್ತಿದೆ ಕಡಲ ಮೇಲೆ ತೇಲಾಡುವ ‘ಕ್ವೀನ್ ಎಲಿಜಬೆತ್ 2’ ಅರಮನೆ; ಹೇಗಿದೆ ವೈಭವ?
ಇಲ್ಲಿನ ತರಗತಿಯಲ್ಲಿ ಕನಿಷ್ಠ ಎರಡು ಅಥವಾ ಮೂರು ಅವಳಿ ಜೋಡಿಗಳು ಇರುತ್ತಾರಂತೆ. ಇಬ್ಬರೂ ಒಂದೇ ತರಹ ಇರುವ ಕಾರಣ ಯಾರು ಯಾರೆಂದು ತಿಳಿಯುವುದು ಕಷ್ಟ.
DAKSHINA KANNADA
ಬೇಸಿಗೆಯ ಬಿಸಿ ತಡೆಯಲಾರದೆ 14 ಲಕ್ಷ ವೆಚ್ಚದಲ್ಲಿ ಕೂಲ್ ಹೋಮ್ ನಿರ್ಮಾಣ ಮಾಡಿದ ಯುವ ಇಂಜಿನಿಯರ್
ಎಲ್ಲೆಲ್ಲೂ ಬಿಸಿ ಬಿಸಿ. ಬಿರು ಬೇಸಿಗೆಯಲ್ಲಿ ಇರಲಾರದೆ ಜನರು ತಂಪಿನ ತಾಣಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಂಪಿನ ವಾತಾವರಣ ಇರುವಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ನಾವು ಎಲ್ಲಿ ಹೋದರೂ ಕೊನೆಗೆ ನಮ್ಮ ಮನೆಯನ್ನು ಸೇರಲೇಬೇಕು. ಆದರೆ ಮನೆ ಕೂಡ ಬಿಸಿಯಾದರೆ ವಾಸ ಮಾಡಲು ಕಷ್ಟವೇ ಸರಿ. ಈ ಮನೆಯನ್ನು ತಂಪಿನ ತಾಣ ಮಾಡಿದರೆ ಹೇಗಿರುತ್ತದೆ. ಹೌದು, ಇದೇ ಕೆಲಸವನ್ನು ಕಣ್ಣೂರಿನ ಯುವ ಇಂಜಿನಿಯರ್ ಸನೀಶ್ ಮಾಡಿದ್ದಾರೆ.
950 ಸ್ಕ್ವೇರ್ ಫೀಟ್ ಸ್ಥಳದಲ್ಲಿ 14 ಲಕ್ಷ ವೆಚ್ಚದಲ್ಲಿ 2-BHK ಯ ಸುಂದರವಾದ ಪರಿಸರ ಸ್ನೇಹಿ ಮನೆಯನ್ನು ನಿರ್ಮಿಸಿದ್ದಾರೆ. ಇದು ಕೇರಳ ಶೈಲಿಯ ಸಾಂಪ್ರದಾಯಿಕ ರೀತಿಯ ಮನೆಯಾಗಿದ್ದು, ಬೇಸಿಗೆಯಲ್ಲಿ ಯಾವೂದೇ ಎಸಿಯ ಜಂಜಾಟವಿಲ್ಲವೇ ಈ ಮನೆಯಲ್ಲಿ ಇರಬಹುದು.
ಸ್ಥಳೀಯ ವಸ್ತುಗಳನ್ನು ಬಳಸಿ ಮನೆ ನಿರ್ಮಾಣ:
ಮನೆ ನಿರ್ಮಾಣಕ್ಕಾಗಿ ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳನ್ನು ಬಳಸಿಕೊಂಡಿದ್ದಾರೆ. ಲ್ಯಾಟರೈಟ್ ಕಲ್ಲುಗಳು, ಟೆರಾಕೋಟಾ ಟೈಲ್ಸ್ ಮತ್ತು ವಿಶೇಷವಾಗಿ ಆಯ್ಕೆ ಮಾಡಿದ ಮರ ಮತ್ತು ಸುತ್ತಮುತ್ತಲಿನ ಹಿತ್ತಲಿನಲ್ಲಿರುವ ಕೆಲವೊಂದು ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಮನೆ ನಿರ್ಮಿಸಲಾಗಿದೆ.
ಕಣ್ಣೂರಿನ ಪ್ರದೇಶದಲ್ಲಿ ಸುಲಭವಾಗಿ ಲಭ್ಯವಿರುವ ಈ ವಸ್ತುಗಳು ಮನೆಯ ಸೌಂದರ್ಯದ ಆಕರ್ಷಣೆಗೆ ಕೊಡುಗೆ ನೀಡುವುದಲ್ಲದೆ, ಅದರ ಉಷ್ಣ ದಕ್ಷತೆಯನ್ನು ಹೆಚ್ಚಿಸುತ್ತವೆ. ಉರಿಬಿಸಿಲಿನ ಸಮಯದಲ್ಲೂ ಮನೆಯನ್ನು ತಣ್ಣಗೆ ಇರಿಸುತ್ತದೆ. ಒಟ್ಟಾರೆಯಾಗಿ, ಒಂದು ಮನೆಗಾಗಿ ಲಕ್ಷ ಲಕ್ಷ ಹಣ ಸುರಿಯುವ ಈಗಿನ ಕಾಲದಲ್ಲಿ 14 ಲಕ್ಷ ವೆಚ್ಚದಲ್ಲಿ ಈ ಕೂಲ್ ಕೂಲ್ ಆಗಿರುವ ತನ್ನ ಕನಸಿನ ಮನೆಯನ್ನು ನಿರ್ಮಿಸಿದ್ದು ಎಲ್ಲೆಡೆ ಮಾದರಿಯಾಗಿದೆ.
DAKSHINA KANNADA
ಪಾಪಿ ಮಗನಿಂದಲೇ ತಂದೆಯ ದಾರುಣ ಹ*ತ್ಯೆ..!!
ಕಾಸರಗೋಡು: ಕಬ್ಬಿಣದ ರಾಡ್ನಿಂದ ಹೊಡೆದು ಮಗನೊಬ್ಬ ತಂದೆಯನ್ನು ಹ*ತ್ಯೆ ಮಾಡಿದ ಘಟನೆ ಸೋಮವಾರ(ಎ.1) ಕಾಸರಗೋಡಿನ ಪಳ್ಳಿಕೆರೆ ಎಂಬಲ್ಲಿ ನಡೆದಿದೆ.
ಪಳ್ಳಿಕೆರೆಯ ಅಪ್ಪು ಕುಂಞ(65) ಕೊಲೆಯಾದ ವ್ಯಕ್ತಿ. ಮಗನಾದ ಪ್ರಮೋದ್ (37)ನ್ನು ಬೇಕಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿ ದಿನವು ಮಗ ತಂದೆಗೆ ಮಾನಸಿಕ ಕಿರುಕುಳ, ಹಿಂಸೆ ಮಾಡುತ್ತಿದ್ದ. ಈ ಬಗ್ಗೆ ಅಪ್ಪು ಕುಂಞ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ತಿಳಿದ ಆತ ಸೋಮವಾರ ಸಂಜೆಯ ವೇಳೆ ಕಬ್ಬಿಣದ ರಾಡ್ನಿಂದ ಹೊಡೆದು ತಂದೆಯನ್ನು ಕೊಲೆಗೈದಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮೃತ*ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
- DAKSHINA KANNADA7 days ago
ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?
- BANTWAL7 days ago
ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು
- bangalore7 days ago
ಮಹಿಳೆಯ ಅತಿಯಾದ ಕಾಮದಾಹ…! ದಾಹಕ್ಕೆ ಅಂತ್ಯ ಹಾಡಿದ ಯುವಕ..!
- LATEST NEWS7 days ago
ಹನುಮಂತ ತನ್ನ ಹೆಂಡತಿಯೊಂದಿಗೆ ಕುಳಿತಿರುವ ವಿಶಿಷ್ಟ ದೇವಾಲಯ ಎಲ್ಲಿದೆ ಗೊತ್ತಾ!?
Pingback: ಕೇರಳದಲ್ಲಿ ಮತ್ತೊಂದು ಮನಕಲುಕುವ ಘಟನೆ...! ಎರಡು ಮಕ್ಕಳ ಜೊತೆ ತಾಯಿ ಜೀ*ವಾಂತ್ಯ...! - NAMMAKUDLA NEWS - ನಮ್ಮಕುಡ್ಲ ನ್ಯೂಸ್