LATEST NEWS
ಮರದ ಹುಡಿಯ ಗೋಡೌನ್ಗೆ ಬೆಂಕಿ..! ಅಗ್ನಿಶಾಮಕ ಸಿಬಂದಿಗಳ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ
ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾದೂರಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮರದ ಹುಡಿಯನ್ನು ಸಂಗ್ರಹಿಸಿಟ್ಟಿದ್ದ ಗೋಡೌನ್ಗೆ ಬೆಂಕಿ ತಗುಲಿದ್ದು, ಹೊಗೆ ಮತ್ತು ಬೆಂಕಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಯಿತು.
ಇದನ್ನೂ ಓದಿ..; ಚಿಕಿತ್ಸೆಗೆಂದು ಬಂದ ಯುವತಿ ಮೇಲೆ ಅತ್ಯಾ*ಚಾರ..! ಕಾಸರಗೋಡು ಮೂಲದ ಯುವಕನ ಬಂಧನ
ಬಳಿಕ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಉಡುಪಿಯಿಂದ ತೆರಳಿದ ಅಗ್ನಿಶಾಮಕ ದಳ ಸಿಬಂಧಿ ತಕ್ಷಣ ಕಾರ್ಯ ಪ್ರವೃತ್ತಿಗೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮರದ ಹುಡಿ ಬೆಂಕಿಯ ತೀವ್ರತೆಯನ್ನು ಬೇಗನೆ ಆವರಿಸುವುದರಿಂದ ಸಂಭವಿಸುವ ಭಾರೀ ಅನಾಹುತ ತಪ್ಪಿದೆ.
LATEST NEWS
ರಾಜ್ಯದಲ್ಲಿ ಡೆಂಗ್ಯೂ ಆತಂಕದ ನಡುವೆ ಇಲಿ ಜ್ವರ ಪತ್ತೆ
ಮಂಗಳೂರು/ಹಾವೇರಿ : ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಈ ಭೀತಿಯ ನಡುವೆ ಇಲಿ ಜ್ವರದ ಆತಂಕವೂ ಎದುರಾಗಿದೆ. ಹೌದು, ಹಾವೇರಿಯಲ್ಲಿ ಇಲಿ ಜ್ವರ ಪತ್ತೆಯಾಗಿದ್ದು, 12 ವರ್ಷದ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕಳೆದ 15 ದಿನದಿಂದ ಜ್ವರದಿಂದ ಬಳಲುತ್ತಿದ್ದ 12 ವರ್ಷದ ಬಾಲಕನಿಗೆ ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಬಾಲಕನಿಗೆ ಜಾಂಡೀಸ್ ಇದೆ ಎಂದು ರಕ್ತ ತಪಾಸಣೆ ಮಾಡಲಾಗಿದ್ದು, ವರದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ. ಇಲಿ ಜ್ವರ ದೃಢ ಪಡುತ್ತಿದ್ದಂತೆ ಆರೋಗ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಮನೆ ಬಾಲ್ಕನಿಯನ್ನೇ ಬಾಡಿಗೆ ನೀಡಿದ ವ್ಯಕ್ತಿ..! ಬಾಡಿಗೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ
ಇಲಿ ಜ್ವರದ ಲಕ್ಷಣಗಳು :
ಸಾಮಾನ್ಯವಾಗಿ ಇಲಿ ಜ್ವರ ಸೋಂಕಿನ ವ್ಯಕ್ತಿಯು ಸೋಂಕಿಗೆ ಒಳಗಾಗಿರುವ ಕಚ್ಚಿದ ಇಲಿ ಪ್ರಕಾರವನ್ನು ಅವಲಂಬಿಸಿ ಪ್ರತಿ ವ್ಯಕ್ತಿಗೆ ರೋಗಲಕ್ಷಣಗಳು ವಿಭಿನ್ನವಾಗಿರುತ್ತವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗಬಹುದು.
- ಕಣ್ಣಿನ ಉರಿಯೂತ
- ಚರ್ಮದ ಸೋಂಕು
- ಶೀತ, ಜ್ವರ, ವಾಂತಿ
- ತಲೆನೋವು ಮತ್ತು ಸ್ನಾಯು ನೋವುಗಳು
- ಕೀಲುಗಳು ನೋವಿನಿಂದ ಊದಿಕೊಳ್ಳಬಹುದು
- ಕೈಕಾಲುಗಳ ಮೇಲೆ ಹುಣ್ಣುಗಳಾಗಬಹುದು
LATEST NEWS
ಮನೆ ಬಾಲ್ಕನಿಯನ್ನೇ ಬಾಡಿಗೆ ನೀಡಿದ ವ್ಯಕ್ತಿ..! ಬಾಡಿಗೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ
ಸಿಡ್ನಿ/ಮಂಗಳೂರು: ಇಲ್ಲೊಬ್ಬ ವ್ಯಕ್ತಿ ಮನೆ ಬಾಡಿಗೆ ನೀಡಲು ಕಷ್ಟವಾಗುವುದಕ್ಕೆ ತನ್ನ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡುವುದರ ಮೂಲಕ ಸುದ್ದಿಯಲ್ಲಿದ್ದಾನೆ. ಅಲ್ಲದೇ ಆತ ಕೇಳಿದ ಮನೆ ಬಾಡಿಗೆ ಕೇಳಿದರೆ ಶಾಕ್ ಆಗ್ತೀರಾ.. ಹೌದು, ಅಷ್ಟಕ್ಕೂ ಆತ ಬಾಡಿಗೆಗೆ ನೀಡಿದ್ದು, ಮನೆಯ ಕೋಣೆಯಲ್ಲ ಹೊರತಾಗಿ ಮನೆ ಮೇಲೆ ಇರುವ ಬಾಲ್ಕನಿಯನ್ನು ಬಾಡಿಗೆ ನೀಡುವುದಾಗಿ ಜಾಹಿರಾತು ನೀಡಿದ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಈ ಘಟನೆ ನಡೆದಿದೆ.
ಬಾಡಿಗೆ ಕೊಡಲು ಕಷ್ಟವಾಗುವುದಕ್ಕೆ ವ್ಯಕ್ತಿಯೊಬ್ಬ ತನ್ನ 2BHK ಮನೆಯ ಬಾಲ್ಕನಿಯಲ್ಲಿ ಹಾಸಿಗೆಯನ್ನು ಇರಿಸಿ ಬಾಡಿಗೆಗೆ ನೀಡುವುದಾಗಿ ಜಾಹೀರಾತು ನೀಡಿದ್ದಾನೆ. ಸದ್ಯ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಲ್ಲದೇ ಇದರ ಬಾಡಿಗೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಈ ಬಾಲ್ಕನಿಯನ್ನು ಫೇಸ್ಬುಕ್ ಮಾರ್ಕೆಟ್ಪ್ಲೇಸ್ ಪಟ್ಟಿಯಲ್ಲಿ ಬಾಡಿಗೆಗೆ ನೀಡುವುದಾಗಿ ಬರೆಯಲಾಗಿದೆ. ಅಲ್ಲದೇ ಈ ಬಾಲ್ಕನಿಯನ್ನು ಸೂರ್ಯನ ಬೆಳಕಿನ ಕೋಣೆ ಎಂದು ವಿವರಿಸಲಾಗಿದೆ. ವಾಸ್ತವವಾಗಿ, ಬಾಲ್ಕನಿಯಲ್ಲಿ ಒಂದೇ ಒಂದು ಹಾಸಿಗೆಯನ್ನು ಹಾಕಿದ್ದು, ಇದರ ಬೆಲೆಯನ್ನು ಹಾಕಲಾಗಿದೆ. ಈ ಪುಟ್ಟ ಬಾಲ್ಕನಿಯ ತಿಂಗಳ ಬಾಡಿಗೆ ಬರೋಬ್ಬರಿ 969 ಡಾಲರ್ ಅಂದರೆ ತಿಂಗಳಿಗೆ ಸುಮಾರು 80,889 ರೂ. ಈ ಕೊಠಡಿಯು ಒಬ್ಬ ವ್ಯಕ್ತಿ ವಾಸಿಸುವಷ್ಟು ದೊಡ್ಡದಾಗಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.
ಕುಡಿದ ಅಮಲಿನಲ್ಲಿ ತೇಲಾಡಿದ ಉರ್ಫಿ ಜಾವೇದ್..!
ಮುಚ್ಚಿದ ಕೋಣೆಯಂತೆ ಕಾಣುವ ಬಾಲ್ಕನಿಯಲ್ಲಿ ಕನ್ನಡಿ ಮತ್ತು ಪರದೆಯನ್ನು ಸಹ ಅಳವಡಿಸಿದ್ದಾರೆ. ಅಷ್ಟೇ ಅಲ್ಲ ಬಾಲ್ಕನಿಯಲ್ಲಿ ವಾಸ ಮಾಡುವವರ ಸಂಚಾರಕ್ಕೆ ಸ್ಲೈಡಿಂಗ್ ಗ್ಲಾಸ್ ಡೋರ್ ಅಳವಡಿಸಲಾಗಿದ್ದು, ಮಳೆ ಬಂದರೂ ನೀರು ಒಳಗೆ ಬರದಂತೆ ಬಾಲ್ಕನಿ ಸುತ್ತಲೂ ಗಾಜಿನ ಗೋಡೆ ಹಾಕಲಾಗಿದೆ.
FILM
ಕುಡಿದ ಅಮಲಿನಲ್ಲಿ ತೇಲಾಡಿದ ಉರ್ಫಿ ಜಾವೇದ್..!
ಮುಂಬೈ/ಮಂಗಳೂರು: ಬಾಲಿವುಡ್ ಉರ್ಫಿ ಜಾವೇದ್ ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಫ್ಯಾಷನ್ ಐಕಾನ್ ಆಗಿರುವ ಈಕೆ ಹೆಚ್ಚಾಗಿ ತಾವು ಉಡುವ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಡಿಫೆರೆಂಟ್ ಲುಕ್ ಗೆ ಮಾರು ಹೋಗಿರುವ ಈಕೆ ವಿಭಿನ್ನ ರೀತಿಯಲ್ಲಿ ಜನರ ಮುಂದೆ ಕಾಣಿಸಿಕೊಳ್ಳುತ್ತಾರೆ.
ಇದೀಗ ಮತ್ತೊಮ್ಮೆ ಉರ್ಫಿ ಜಾವೇದ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಬಟ್ಟೆಯಿಂದಾಗಿ ಸುದ್ದಿಯಾಗಿಲ್ಲ. ಕುಡಿದ ಅಮಲಿನಲ್ಲಿ ತೇಲಾಡಿರುವ ವೀಡಿಯೋದಿಂದಾಗ ಹೋಟೆಲ್ ವೊಂದರಿಂದ ಹೊರ ಬರಲು ಸಾಧ್ಯವಾಗದೆ ಪೇಚಾಡುತ್ತಿರುವುದು ಕಂಡು ಬಂದಿದೆ. ಇದೀಗ ಈ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಲ್ಮಾನ್ ಖಾನ್ ಜೊತೆ ಹುಟ್ಟುಹಬ್ಬ ಆಚರಿಸಿದ ಧೋನಿ..! ಪತಿಯ ಆಶೀರ್ವಾದ ಪಡೆದ ಸಾಕ್ಷಿ ಧೋನಿ
ಬಾಂದ್ರಾದಲ್ಲಿರುವ ಐಷಾರಾಮಿ ಹೋಟೆಲ್ನಿಂದ ಪಿಂಕ್ ಮಿನಿ ಡ್ರೆಸ್ ಹಾಗೂ ಹೈ ಹೀಲ್ಸ್ ಹಾಕಿದ್ದ ಉರ್ಫಿ ನಡೆಯಲೂ ಸಾಧ್ಯವಾಗದೆ ಸ್ನೇಹಿತೆಯ ಸಹಾಯದಿಂದ ಕಾರಿನತ್ತ ತೆರಳುತ್ತಿದ್ದರು. ಇನ್ನೂ ಸ್ನೇಹಿತೆ ಉರ್ಫಿಯನ್ನು ಸಂಭಾಲಿಸಲು ಹರಸಾಹಸ ಪಟ್ಟಿದ್ದಾರೆ. ಸ್ವತಃ ಉರ್ಫಿ “ ನನ್ನ ಕಾರು ಎಲ್ಲಿದೆ..? ನಾನು ಕುಡಿದಿದ್ದೇನೆ” ಎಂದು ಹೇಳಿದ್ದಾರೆ. ಇದೀಗ ಈ ವೀಡಿಯೋಗೆ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.
- FILM4 days ago
‘ಪೆಂಡ್ರೈವ್’ನಲ್ಲಿ ಬಿಗ್ಬಾಸ್ ತನಿಷಾ ಕುಪ್ಪಂಡ..!
- DAKSHINA KANNADA5 days ago
ಉಳ್ಳಾಲ : ಟಿಪ್ಪರ್ – ಸ್ಕೂಟರ್ ಅಪಘಾ*ತ; ಚಿಕಿತ್ಸೆ ಫಲಕಾರಿಯಾಗದೆ ಸವಾರ ಸಾ*ವು
- DAKSHINA KANNADA6 days ago
ಮನೆಯೊಳಗೆ ಈ ಪ್ರಾಣಿ ಪಕ್ಷಿಗಳು ಬರಬಾರದಂತೆ, ಯಾವುದು? ಯಾಕೆ ಗೊತ್ತಾ?
- LATEST NEWS6 days ago
WATCH VIDEO : ಕಣ್ಣಿಗೆ ಬಿತ್ತು ಹಲಸಿನ ಮರ…ಗಜರಾಜ ಹಲಸಿನ ಹಣ್ಣನ್ನು ಹೇಗೆ ಕೊಯ್ದ ಗೊತ್ತಾ!?